<p><strong>ಹೊಸಪೇಟೆ</strong>: ನಗರದಲ್ಲಿ ಕಳ್ಳತನ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಐವರು ಕಳ್ಳರನ್ನು ಬಂಧಿಸಿರುವ ಚಿತ್ತವಾಡಗಿ ಠಾಣೆ ಪೊಲೀಸರು ಬಂಧಿತರಿಂದ 1.4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.<br /> <br /> ಮೇ 5 ರಂದು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯಲ್ಲಿ ಸಿಕ್ಕುಬಿದ್ದ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಮಣಿಕಂಠ, ಕೆ.ಮಂಜುನಾಥ, ಪರಶುರಾಮ, ಓಬಳೇಶ ಮತ್ತು ರವಿ ಎಂಬುವವರನ್ನು ಬಂಧಿಸಿ 4 ತೊಲೆ ಬಂಗಾರದ ನೆಕ್ ಚೈನ್ ಅಂದಾಜು ಮೌಲ್ಯ 1.4ಲಕ್ಷ, ನಗದು ಹಣ 1490 ರೂಪಾಯಿ ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ದುರ್ಗೇಶಿ ಮತ್ತು ಖಾಸೀಂ ಎಂಬುವರು ಪರಾರಿಯಾಗಿದ್ದು, ಪತ್ತೆಗೆ ಶೋಧಕಾರ್ಯ ನಡೆದಿದೆ.<br /> <br /> ಇನ್ಸ್ಪೆಕ್ಟರ್ ಪ್ರಭಾಕರ್ ಎಸ್. ಧರ್ಮಟ್ಟಿ ಗ್ರಾಮೀಣ ಠಾಣೆಯ ರಘುಕುಮಾರ, ಎಎಸ್ಐ ವಿ.ಡಿ.ಜೋಶಿ ಸೇರಿದಂತೆ ಸಿಬ್ಬಂದಿಗೆ ಮಾರ್ಗದರ್ಶನ ಮಾಡಿದ ಡಿಎಸ್ಪಿ ಮಡಿವಾಳರ್, ಜಿಲ್ಲಾ ಎಸ್ಪಿ ಡಾ.ಚಂದ್ರಗುಪ್ತಾ ಸೇರಿದಂತೆ ಎ ಎಸ್ಪಿ ಸಿ.ಎಸ್.ಕೆ.ಬಾಬಾ ಆರೋಪಿಗಳನ್ನು ಪತ್ತೆ ಹಚ್ಚಲು ಕಾರಣೀಭೂತರಾಗಿದ್ದು ಸಿಬ್ಬಂದಿಗೆ ಸೂಕ್ತಬಹುಮಾನ ಘೋಷಿಸಿ, ಅಭಿನಂದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ</strong>: ನಗರದಲ್ಲಿ ಕಳ್ಳತನ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಐವರು ಕಳ್ಳರನ್ನು ಬಂಧಿಸಿರುವ ಚಿತ್ತವಾಡಗಿ ಠಾಣೆ ಪೊಲೀಸರು ಬಂಧಿತರಿಂದ 1.4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.<br /> <br /> ಮೇ 5 ರಂದು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯಲ್ಲಿ ಸಿಕ್ಕುಬಿದ್ದ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಮಣಿಕಂಠ, ಕೆ.ಮಂಜುನಾಥ, ಪರಶುರಾಮ, ಓಬಳೇಶ ಮತ್ತು ರವಿ ಎಂಬುವವರನ್ನು ಬಂಧಿಸಿ 4 ತೊಲೆ ಬಂಗಾರದ ನೆಕ್ ಚೈನ್ ಅಂದಾಜು ಮೌಲ್ಯ 1.4ಲಕ್ಷ, ನಗದು ಹಣ 1490 ರೂಪಾಯಿ ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ದುರ್ಗೇಶಿ ಮತ್ತು ಖಾಸೀಂ ಎಂಬುವರು ಪರಾರಿಯಾಗಿದ್ದು, ಪತ್ತೆಗೆ ಶೋಧಕಾರ್ಯ ನಡೆದಿದೆ.<br /> <br /> ಇನ್ಸ್ಪೆಕ್ಟರ್ ಪ್ರಭಾಕರ್ ಎಸ್. ಧರ್ಮಟ್ಟಿ ಗ್ರಾಮೀಣ ಠಾಣೆಯ ರಘುಕುಮಾರ, ಎಎಸ್ಐ ವಿ.ಡಿ.ಜೋಶಿ ಸೇರಿದಂತೆ ಸಿಬ್ಬಂದಿಗೆ ಮಾರ್ಗದರ್ಶನ ಮಾಡಿದ ಡಿಎಸ್ಪಿ ಮಡಿವಾಳರ್, ಜಿಲ್ಲಾ ಎಸ್ಪಿ ಡಾ.ಚಂದ್ರಗುಪ್ತಾ ಸೇರಿದಂತೆ ಎ ಎಸ್ಪಿ ಸಿ.ಎಸ್.ಕೆ.ಬಾಬಾ ಆರೋಪಿಗಳನ್ನು ಪತ್ತೆ ಹಚ್ಚಲು ಕಾರಣೀಭೂತರಾಗಿದ್ದು ಸಿಬ್ಬಂದಿಗೆ ಸೂಕ್ತಬಹುಮಾನ ಘೋಷಿಸಿ, ಅಭಿನಂದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>