<p><strong>ಕೋಲ್ಕತ್ತ:</strong> ಹಿರಿಯ ಹಿನ್ನಲೆ ಗಾಯಕ ಮನ್ನಾ ಡೇ ಜೀವನ್ಮರಣದೊಂದಿಗೆ ಹೋರಾಡುತ್ತಿರುವಾಗ, ಅವರ ಇಲ್ಲಿನ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿಗಳು ನಾಪತ್ತೆಯಾಗಿರುವ ಪ್ರಕರಣ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗ ಅವರ ಕುಟುಂಬ ವಿವಾದದಲ್ಲಿ ಸಿಲುಕಿದೆ.<br /> <br /> ಬೆಂಗಳೂರಿನಲ್ಲಿರುವ ಈ ಖ್ಯಾತ ಗಾಯಕನ ಪುತ್ರಿ ಸುಮಿತಾ ಮತ್ತು ಪತಿ ಜ್ಞಾನರಂಜನ್ ದೇವ್ ಕೋಲ್ಕತ್ತ ಪೊಲೀಸರಿಗೆ ಪತ್ರ ಬರೆದು, ಮನ್ನಾ ಡೇ ಬ್ಯಾಂಕ್ ಖಾತೆಯಿಂದ ಅವರ ಸೋದರ ಸಂಬಂಧಿ ತಾರಿತ್ ಸುಮಾರು 30 ಲಕ್ಷ ರೂಪಾಯಿಗಳನ್ನು ಲಪಟಾಯಿಸಿರುವುದಾಗಿ ಆರೋಪಿಸಿದ್ದಾರೆ.<br /> <br /> ಅಲ್ಲದೆ, ಮನ್ನಾ ಡೇ ಪತ್ನಿ ಸುಲೋಚನಾ ಅವರಿಗೆ ಸೇರಿದ ಬೆಲೆಬಾಳುವ ಚಿನ್ನಾಭರಣಗಳನ್ನು ಸಹ ತಾರಿತ್ ಸ್ವಾಧೀನಪಡಿಸಿಕೊಂಡಿರುವುದಾಗಿ ಅವರು ಪತ್ರದಲ್ಲಿ ದೂರಿದ್ದಾರೆ. ಇದರೊಂದಿಗೆ ಈ ಬ್ಯಾಂಕ್ ಖಾತೆಯ ಲಾಕರ್ನಲ್ಲಿರಿಸಿದ್ದ ಹಲವು ಬೆಲೆಬಾಳುವ ಕೈಗಡಿಯಾರಗಳನ್ನು ಕೂಡಾ ತಾರಿತ್ ತೆಗೆದುಕೊಂಡಿರುವುದಾಗಿ ಅವರು ಆಪಾದಿಸಿದ್ದಾರೆ.<br /> <br /> ಇಲ್ಲಿರುವ ಮನ್ನಾ ಡೇ ಅವರ ಪಿತ್ರಾರ್ಜಿತ ಮನೆ ಬಳಿಯ ರಾಷ್ಟ್ರೀಕೃತ ಬ್ಯಾಂಕೊಂದರ ಶಾಖೆಯಲ್ಲಿ ಗಾಯಕನೊಂದಿಗೆ ತಾರಿತ್ ಜಂಟಿ ಖಾತೆ ಹೊಂದಿದ್ದಾರೆ. ಆದರೆ ಗಾಯಕ ಬೆಂಗಳೂರಿನಲ್ಲಿ ನೆಲೆಸಿದ ನಂತರ ವೃದ್ಧಾಪ್ಯದ ಕಾರಣ ಅವರ ಖಾತೆಯನ್ನು ತಾರಿತ್ ಅವರೇ ನೋಡಿಕೊಂಡಿದ್ದರು.<br /> <br /> ಮನ್ನಾ ಡೇ ಗೈರುಹಾಜರಿಯನ್ನು ದುರುಪಯೋಗ ಪಡಿಸಿಕೊಂಡಿರುವ ತಾರಿತ್, ಗಾಯಕ ಮತ್ತು ಅವರ ಪತ್ನಿಯ ಹಣ, ಚಿನ್ನಾಭರಣ ಮತ್ತಿತರ ವಸ್ತುಗಳನ್ನು ಕದ್ದಿರುವುದು ಮಾತ್ರವಲ್ಲದೆ, ಈ ಖಾತೆಯ ದಾಖಲೆ ಮತ್ತು ಲಾಕರ್ನ್ನು ತನ್ನ ಮತ್ತು ಪತ್ನಿ ಅರ್ಪಿತಾ ಅವರ ಬ್ಯಾಂಕ್ ಖಾತೆ ಇರುವ ಹತ್ತಿರದ ಇನ್ನೊಂದು ಶಾಖೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಸುಮಿತಾ ದೂರಿದ್ದಾರೆ.<br /> <br /> ಕಳೆದ ಕೆಲವು ತಿಂಗಳಿಂದ ಅಸ್ವಸ್ಥರಾಗಿರುವ ಡೇ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿ ಐಸಿಸಿಯುನಲ್ಲಿದ್ದರೂ, ತಾರಿತ್ ಹಣ ನೀಡದಿದ್ದಾಗ, ಗಾಯಕನ ಬ್ಯಾಂಕ್ ಖಾತೆ ಪರಿಶೀಲಿಸಲಾಗಿ ಹಣ ಮತ್ತಿತರ ವಸ್ತುಗಳು ಕಣ್ಮರೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ಹಿರಿಯ ಹಿನ್ನಲೆ ಗಾಯಕ ಮನ್ನಾ ಡೇ ಜೀವನ್ಮರಣದೊಂದಿಗೆ ಹೋರಾಡುತ್ತಿರುವಾಗ, ಅವರ ಇಲ್ಲಿನ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿಗಳು ನಾಪತ್ತೆಯಾಗಿರುವ ಪ್ರಕರಣ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗ ಅವರ ಕುಟುಂಬ ವಿವಾದದಲ್ಲಿ ಸಿಲುಕಿದೆ.<br /> <br /> ಬೆಂಗಳೂರಿನಲ್ಲಿರುವ ಈ ಖ್ಯಾತ ಗಾಯಕನ ಪುತ್ರಿ ಸುಮಿತಾ ಮತ್ತು ಪತಿ ಜ್ಞಾನರಂಜನ್ ದೇವ್ ಕೋಲ್ಕತ್ತ ಪೊಲೀಸರಿಗೆ ಪತ್ರ ಬರೆದು, ಮನ್ನಾ ಡೇ ಬ್ಯಾಂಕ್ ಖಾತೆಯಿಂದ ಅವರ ಸೋದರ ಸಂಬಂಧಿ ತಾರಿತ್ ಸುಮಾರು 30 ಲಕ್ಷ ರೂಪಾಯಿಗಳನ್ನು ಲಪಟಾಯಿಸಿರುವುದಾಗಿ ಆರೋಪಿಸಿದ್ದಾರೆ.<br /> <br /> ಅಲ್ಲದೆ, ಮನ್ನಾ ಡೇ ಪತ್ನಿ ಸುಲೋಚನಾ ಅವರಿಗೆ ಸೇರಿದ ಬೆಲೆಬಾಳುವ ಚಿನ್ನಾಭರಣಗಳನ್ನು ಸಹ ತಾರಿತ್ ಸ್ವಾಧೀನಪಡಿಸಿಕೊಂಡಿರುವುದಾಗಿ ಅವರು ಪತ್ರದಲ್ಲಿ ದೂರಿದ್ದಾರೆ. ಇದರೊಂದಿಗೆ ಈ ಬ್ಯಾಂಕ್ ಖಾತೆಯ ಲಾಕರ್ನಲ್ಲಿರಿಸಿದ್ದ ಹಲವು ಬೆಲೆಬಾಳುವ ಕೈಗಡಿಯಾರಗಳನ್ನು ಕೂಡಾ ತಾರಿತ್ ತೆಗೆದುಕೊಂಡಿರುವುದಾಗಿ ಅವರು ಆಪಾದಿಸಿದ್ದಾರೆ.<br /> <br /> ಇಲ್ಲಿರುವ ಮನ್ನಾ ಡೇ ಅವರ ಪಿತ್ರಾರ್ಜಿತ ಮನೆ ಬಳಿಯ ರಾಷ್ಟ್ರೀಕೃತ ಬ್ಯಾಂಕೊಂದರ ಶಾಖೆಯಲ್ಲಿ ಗಾಯಕನೊಂದಿಗೆ ತಾರಿತ್ ಜಂಟಿ ಖಾತೆ ಹೊಂದಿದ್ದಾರೆ. ಆದರೆ ಗಾಯಕ ಬೆಂಗಳೂರಿನಲ್ಲಿ ನೆಲೆಸಿದ ನಂತರ ವೃದ್ಧಾಪ್ಯದ ಕಾರಣ ಅವರ ಖಾತೆಯನ್ನು ತಾರಿತ್ ಅವರೇ ನೋಡಿಕೊಂಡಿದ್ದರು.<br /> <br /> ಮನ್ನಾ ಡೇ ಗೈರುಹಾಜರಿಯನ್ನು ದುರುಪಯೋಗ ಪಡಿಸಿಕೊಂಡಿರುವ ತಾರಿತ್, ಗಾಯಕ ಮತ್ತು ಅವರ ಪತ್ನಿಯ ಹಣ, ಚಿನ್ನಾಭರಣ ಮತ್ತಿತರ ವಸ್ತುಗಳನ್ನು ಕದ್ದಿರುವುದು ಮಾತ್ರವಲ್ಲದೆ, ಈ ಖಾತೆಯ ದಾಖಲೆ ಮತ್ತು ಲಾಕರ್ನ್ನು ತನ್ನ ಮತ್ತು ಪತ್ನಿ ಅರ್ಪಿತಾ ಅವರ ಬ್ಯಾಂಕ್ ಖಾತೆ ಇರುವ ಹತ್ತಿರದ ಇನ್ನೊಂದು ಶಾಖೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಸುಮಿತಾ ದೂರಿದ್ದಾರೆ.<br /> <br /> ಕಳೆದ ಕೆಲವು ತಿಂಗಳಿಂದ ಅಸ್ವಸ್ಥರಾಗಿರುವ ಡೇ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿ ಐಸಿಸಿಯುನಲ್ಲಿದ್ದರೂ, ತಾರಿತ್ ಹಣ ನೀಡದಿದ್ದಾಗ, ಗಾಯಕನ ಬ್ಯಾಂಕ್ ಖಾತೆ ಪರಿಶೀಲಿಸಲಾಗಿ ಹಣ ಮತ್ತಿತರ ವಸ್ತುಗಳು ಕಣ್ಮರೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>