<p>ಗಾಯನ ಸಮಾಜದಲ್ಲಿ ಮಯೂರ ಸಂಗೀತ ಶಾಲೆಯು ಇತ್ತೀಚೆಗೆ ತನ್ನ 6ನೇ ವಾರ್ಷಿಕೋತ್ಸವವನ್ನು ಆಯೋಜಿಸಿತ್ತು.<br /> ವಾರ್ಷಿಕೋತ್ಸವದಲ್ಲಿ ಸನ್ಮಾನ, ಗಾಯನ, ನೃತ್ಯ ಕಾರ್ಯಕ್ರಮ ಮುಖ್ಯವಾಗಿತ್ತು.<br /> <br /> ಗಾಯಕಿ ಬಿ.ಕೆ. ಸುಮಿತ್ರಾ, ಕವಿ ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ, ಹಿರಿಯ ಸಂಗೀತ ನಿರ್ದೇಶಕ ರಾಜನ್ ಮತ್ತು ನಟ ವಿಜಯ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.<br /> <br /> ಮಕ್ಕಳ ಗಾಯನ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ಚಪ್ಪಾಳೆಯ ಪ್ರೋತ್ಸಾಹ. ಕಿಶೋರ್, ಮಯೂರ್ ಅವರು ಬಿ.ಆರ್. ಲಕ್ಷ್ಮಣರಾವ್ ಅವರ ‘ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು’ ಗೀತೆಯನ್ನು ಹಾಡಿ ರಂಜಿಸಿದರು. ಜ್ಯೋತಿ ರಾಧಾಕೃಷ್ಣ ಮತ್ತು ನಂದಿನಿ ಪ್ರಕಾಶ್ ತಂಡ ಪ್ರಸ್ತುತಪಡಿಸಿದ ನೃತ್ಯ ಮನಮೋಹಕವಾಗಿತ್ತು.<br /> <br /> ಯಶ್ ಮ್ಯೂಸಿಕ್ ತಂಡದ ಎಂ.ಡಿ. ಪಲ್ಲವಿ, ಅರ್ಚನಾ ಉಡುಪ, ಉಷಾ ಉಮೇಶ್, ಶ್ರೀದೇವಿ ಕುಳೇನೂರ್, ಮೋಹನ್, ಉದಯ್ ಅಂಕೋಲ ಅವರು ರಾಜನ್ ನಾಗೇಂದ್ರ ಮತ್ತು ಇಳಯರಾಜ ಸಂಗೀತ ನಿರ್ದೇಶನ ಸುಮಧುರ ಗೀತೆಗಳನ್ನು ಹಾಡಿದರು.<br /> <br /> ಸಂಗೀತ ಶಾಲೆ ಸಂಸ್ಥಾಪಕ ವಿ.ಉಮೇಶ್, ಪ್ರಾಂಶುಪಾಲರಾದ ಗಾಯತ್ರಿ, ಗಾಯಕ ದತ್ತಾತ್ರೇಯ ವೇಲಣಕರ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಾಯನ ಸಮಾಜದಲ್ಲಿ ಮಯೂರ ಸಂಗೀತ ಶಾಲೆಯು ಇತ್ತೀಚೆಗೆ ತನ್ನ 6ನೇ ವಾರ್ಷಿಕೋತ್ಸವವನ್ನು ಆಯೋಜಿಸಿತ್ತು.<br /> ವಾರ್ಷಿಕೋತ್ಸವದಲ್ಲಿ ಸನ್ಮಾನ, ಗಾಯನ, ನೃತ್ಯ ಕಾರ್ಯಕ್ರಮ ಮುಖ್ಯವಾಗಿತ್ತು.<br /> <br /> ಗಾಯಕಿ ಬಿ.ಕೆ. ಸುಮಿತ್ರಾ, ಕವಿ ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ, ಹಿರಿಯ ಸಂಗೀತ ನಿರ್ದೇಶಕ ರಾಜನ್ ಮತ್ತು ನಟ ವಿಜಯ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.<br /> <br /> ಮಕ್ಕಳ ಗಾಯನ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ಚಪ್ಪಾಳೆಯ ಪ್ರೋತ್ಸಾಹ. ಕಿಶೋರ್, ಮಯೂರ್ ಅವರು ಬಿ.ಆರ್. ಲಕ್ಷ್ಮಣರಾವ್ ಅವರ ‘ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು’ ಗೀತೆಯನ್ನು ಹಾಡಿ ರಂಜಿಸಿದರು. ಜ್ಯೋತಿ ರಾಧಾಕೃಷ್ಣ ಮತ್ತು ನಂದಿನಿ ಪ್ರಕಾಶ್ ತಂಡ ಪ್ರಸ್ತುತಪಡಿಸಿದ ನೃತ್ಯ ಮನಮೋಹಕವಾಗಿತ್ತು.<br /> <br /> ಯಶ್ ಮ್ಯೂಸಿಕ್ ತಂಡದ ಎಂ.ಡಿ. ಪಲ್ಲವಿ, ಅರ್ಚನಾ ಉಡುಪ, ಉಷಾ ಉಮೇಶ್, ಶ್ರೀದೇವಿ ಕುಳೇನೂರ್, ಮೋಹನ್, ಉದಯ್ ಅಂಕೋಲ ಅವರು ರಾಜನ್ ನಾಗೇಂದ್ರ ಮತ್ತು ಇಳಯರಾಜ ಸಂಗೀತ ನಿರ್ದೇಶನ ಸುಮಧುರ ಗೀತೆಗಳನ್ನು ಹಾಡಿದರು.<br /> <br /> ಸಂಗೀತ ಶಾಲೆ ಸಂಸ್ಥಾಪಕ ವಿ.ಉಮೇಶ್, ಪ್ರಾಂಶುಪಾಲರಾದ ಗಾಯತ್ರಿ, ಗಾಯಕ ದತ್ತಾತ್ರೇಯ ವೇಲಣಕರ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>