<p><strong>ಮಂಡ್ಯ:</strong> ವಿವಾಹಿತನೊಬ್ಬ ಮರು ಮದುವೆಗೆ ಮುಂದಾಗಿದ್ದು ಕೊನೆಗಳಿಗೆಯಲ್ಲಿ ಗ್ರಾಮಸ್ಥರಿಗೆ ಸಿಕ್ಕಿಬಿದ್ದ ಘಟನೆ ತಾಲ್ಲೂಕಿನ ದುದ್ದ ಹೋಬಳಿಯ ಕನ್ನಹಟ್ಟಿಯಲ್ಲಿ ನಡೆದಿದೆ. ವ್ಯಕ್ತಿಯನ್ನು ಮಹೇಶ್ ಎಂದು ಗುರುತಿಸಿದ್ದು, ಮದುವೆ ನಾಲ್ಕು ದಿನ ಇರುವಂತೆ ವಂಚನೆ ಯತ್ನ ಬಯಲಾಗಿದೆ.<br /> <br /> ಶಿವಳ್ಳಿ ಠಾಣೆ ಪೊಲೀಸರು ಗ್ರಾಮಕ್ಕೆ ಧಾವಿಸಿ ಯುವಕನನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾದರು. ಆದರೆ, ಮದುವೆಗಾಗಿ ವರನಿಗೆ ನೀಡಿರುವ ಹಣವನ್ನು ಮರಳಿ ಕೊಡಿಸಬೇಕು, ಈ ಮೂಲಕ ಅನ್ಯಾಯ ಸರಿಪಡಿಸಬೇಕು ವಧು, ಆಕೆಯ ಕುಟುಂಬ ಪಟ್ಟು ಹಿಡಿದಿದ್ದು, ರಾತ್ರಿಯವರೆಗೂ ರಾಜಿ ಮುಂದುವರಿದಿತ್ತು.<br /> <br /> ಗ್ರಾಮಸ್ಥರ ಪ್ರಕಾರ, ಮಂಡ್ಯದ ಗುತ್ತಲು ನಿವಾಸಿಯಾದ ವ್ಯಕ್ತಿಯೂ ವರದಕ್ಷಿಣೆಯೂ ಇಲ್ಲದೇ ಮದುವೆಯಾಗುತ್ತೇನೆ ಎಂದು ನಂಬಿಸಿದ್ದ. ಆದರೂ ಈತನಿಗೆ ವರದಕ್ಷಿಣೆ ನೀಡಿದ್ದು, ಭಾನುವಾರ ವಿವಾಹ ನಡೆಯಬೇಕಿತ್ತು.<br /> <br /> ಕೊನೆಗಳಿಗೆಯಲ್ಲಿ ಆತನಿಗೆ ಈಗಾಗಲೇ ಮದುವೆಯಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ವಧುವಿನ ಕುಟುಂಬ ಜಾಗೃತವಾಯಿತು. ಗ್ರಾಮಕ್ಕೆ ಕರೆಸಿಕೊಂಡು ದಿಗ್ಬಂಧನ ವಿಧಿಸಿದರು. <br /> <br /> ನನಗೆ ಅನ್ಯಾಯ ಆಗಿದ್ದು, ನ್ಯಾಯ ಒದಗಿಸಬೇಕು ಎಂದು ವಧು ಮುಖಂಡರಿಗೆ ಮನವಿ ಮಾಡಿದರು. ಗ್ರಾಮಸ್ಥರೂ ವಿಷಯ ಇತ್ಯರ್ಥ ಆಗುವವರೆಗೂ ವರನನ್ನು ಒಪ್ಪಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ರಾತ್ರಿ ಬಹುಹೊತ್ತಿನವರೆಗೂ ರಾಜಿ ಮುಂದುವರಿದಿತ್ತು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> <strong>ಮಹಿಳಾ ದಿನಾಚರಣೆ ನಾಳೆ</strong><br /> ಜಿಲ್ಲಾಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಾರ್ಚ್ 8ರಂದು ಬೆಳಿಗ್ಗೆ 10ಕ್ಕೆ ಗಂಟೆಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಲಿದೆ.<br /> <br /> ಉಸ್ತುವಾರಿ ಸಚಿವ ಆರ್. ಅಶೋಕ್ ಉದ್ಘಾಟಿಸಲಿದ್ದು, ಶಾಸಕ ಎಂ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿ ದ್ದಾರೆ. ವಿವಿಧ ಪಂಚಾಯಿತಿಗಳ ಮಹಿಳಾ ಪ್ರತಿನಿಧಿಗಳು ಸೇರಿ ಸುಮಾರು 500 ಮಂದಿ ಮಹಿಳೆಯರು ಭಾಗವಹಿಸುವ ನಿರೀಕ್ಷೆಯಿದೆ.<br /> <br /> ಅಲ್ಲದೆ, ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ, ಆಯುಷ್ಇಲಾಖೆಯಿಂದ ಮಹಿಳೆಯರಿಗೆ ಆರೋಗ್ಯದ ಉಚಿತ ತಪಾಸಣೆ, ಚಿಕಿತ್ಸಾ ಶಿಬಿರ, ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ತಯಾರಿಸಿದ ವಸ್ತುಗಳ ಪ್ರದರ್ಶನ ನಡೆಯಲಿದೆ ಎಂದು ಹೇಳಿಕೆ ತಿಳಿಸಿದೆ.<br /> <br /> <strong>ಆರೋಗ್ಯ ತಪಾಸಣೆ</strong><br /> ನಗರದ ಎಸ್.ಡಿ. ಜಯರಾಂ ಸಮಗ್ರ ಗ್ರಾಮೀಣಾ ಭಿವೃದ್ದಿ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ನಗರದ ಪಿಇಎಸ್ ಮತ್ತು ಕಲಾ ಕಾಲೇಜಿನಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಶೋಕ ಜಯರಾಂ, ವೈ.ಡಿ.ಲೀಲಾ, ಕಾರಸವಾಡಿ ಮಹದೇವು, ಗುರುಸಿದ್ದಯ್ಯ, ವೀರೇಶ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ವಿವಾಹಿತನೊಬ್ಬ ಮರು ಮದುವೆಗೆ ಮುಂದಾಗಿದ್ದು ಕೊನೆಗಳಿಗೆಯಲ್ಲಿ ಗ್ರಾಮಸ್ಥರಿಗೆ ಸಿಕ್ಕಿಬಿದ್ದ ಘಟನೆ ತಾಲ್ಲೂಕಿನ ದುದ್ದ ಹೋಬಳಿಯ ಕನ್ನಹಟ್ಟಿಯಲ್ಲಿ ನಡೆದಿದೆ. ವ್ಯಕ್ತಿಯನ್ನು ಮಹೇಶ್ ಎಂದು ಗುರುತಿಸಿದ್ದು, ಮದುವೆ ನಾಲ್ಕು ದಿನ ಇರುವಂತೆ ವಂಚನೆ ಯತ್ನ ಬಯಲಾಗಿದೆ.<br /> <br /> ಶಿವಳ್ಳಿ ಠಾಣೆ ಪೊಲೀಸರು ಗ್ರಾಮಕ್ಕೆ ಧಾವಿಸಿ ಯುವಕನನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾದರು. ಆದರೆ, ಮದುವೆಗಾಗಿ ವರನಿಗೆ ನೀಡಿರುವ ಹಣವನ್ನು ಮರಳಿ ಕೊಡಿಸಬೇಕು, ಈ ಮೂಲಕ ಅನ್ಯಾಯ ಸರಿಪಡಿಸಬೇಕು ವಧು, ಆಕೆಯ ಕುಟುಂಬ ಪಟ್ಟು ಹಿಡಿದಿದ್ದು, ರಾತ್ರಿಯವರೆಗೂ ರಾಜಿ ಮುಂದುವರಿದಿತ್ತು.<br /> <br /> ಗ್ರಾಮಸ್ಥರ ಪ್ರಕಾರ, ಮಂಡ್ಯದ ಗುತ್ತಲು ನಿವಾಸಿಯಾದ ವ್ಯಕ್ತಿಯೂ ವರದಕ್ಷಿಣೆಯೂ ಇಲ್ಲದೇ ಮದುವೆಯಾಗುತ್ತೇನೆ ಎಂದು ನಂಬಿಸಿದ್ದ. ಆದರೂ ಈತನಿಗೆ ವರದಕ್ಷಿಣೆ ನೀಡಿದ್ದು, ಭಾನುವಾರ ವಿವಾಹ ನಡೆಯಬೇಕಿತ್ತು.<br /> <br /> ಕೊನೆಗಳಿಗೆಯಲ್ಲಿ ಆತನಿಗೆ ಈಗಾಗಲೇ ಮದುವೆಯಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ವಧುವಿನ ಕುಟುಂಬ ಜಾಗೃತವಾಯಿತು. ಗ್ರಾಮಕ್ಕೆ ಕರೆಸಿಕೊಂಡು ದಿಗ್ಬಂಧನ ವಿಧಿಸಿದರು. <br /> <br /> ನನಗೆ ಅನ್ಯಾಯ ಆಗಿದ್ದು, ನ್ಯಾಯ ಒದಗಿಸಬೇಕು ಎಂದು ವಧು ಮುಖಂಡರಿಗೆ ಮನವಿ ಮಾಡಿದರು. ಗ್ರಾಮಸ್ಥರೂ ವಿಷಯ ಇತ್ಯರ್ಥ ಆಗುವವರೆಗೂ ವರನನ್ನು ಒಪ್ಪಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ರಾತ್ರಿ ಬಹುಹೊತ್ತಿನವರೆಗೂ ರಾಜಿ ಮುಂದುವರಿದಿತ್ತು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> <strong>ಮಹಿಳಾ ದಿನಾಚರಣೆ ನಾಳೆ</strong><br /> ಜಿಲ್ಲಾಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಆಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಾರ್ಚ್ 8ರಂದು ಬೆಳಿಗ್ಗೆ 10ಕ್ಕೆ ಗಂಟೆಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಲಿದೆ.<br /> <br /> ಉಸ್ತುವಾರಿ ಸಚಿವ ಆರ್. ಅಶೋಕ್ ಉದ್ಘಾಟಿಸಲಿದ್ದು, ಶಾಸಕ ಎಂ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿ ದ್ದಾರೆ. ವಿವಿಧ ಪಂಚಾಯಿತಿಗಳ ಮಹಿಳಾ ಪ್ರತಿನಿಧಿಗಳು ಸೇರಿ ಸುಮಾರು 500 ಮಂದಿ ಮಹಿಳೆಯರು ಭಾಗವಹಿಸುವ ನಿರೀಕ್ಷೆಯಿದೆ.<br /> <br /> ಅಲ್ಲದೆ, ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ, ಆಯುಷ್ಇಲಾಖೆಯಿಂದ ಮಹಿಳೆಯರಿಗೆ ಆರೋಗ್ಯದ ಉಚಿತ ತಪಾಸಣೆ, ಚಿಕಿತ್ಸಾ ಶಿಬಿರ, ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ತಯಾರಿಸಿದ ವಸ್ತುಗಳ ಪ್ರದರ್ಶನ ನಡೆಯಲಿದೆ ಎಂದು ಹೇಳಿಕೆ ತಿಳಿಸಿದೆ.<br /> <br /> <strong>ಆರೋಗ್ಯ ತಪಾಸಣೆ</strong><br /> ನಗರದ ಎಸ್.ಡಿ. ಜಯರಾಂ ಸಮಗ್ರ ಗ್ರಾಮೀಣಾ ಭಿವೃದ್ದಿ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ನಗರದ ಪಿಇಎಸ್ ಮತ್ತು ಕಲಾ ಕಾಲೇಜಿನಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಶೋಕ ಜಯರಾಂ, ವೈ.ಡಿ.ಲೀಲಾ, ಕಾರಸವಾಡಿ ಮಹದೇವು, ಗುರುಸಿದ್ದಯ್ಯ, ವೀರೇಶ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>