<p>ಕುಮಟಾ: ಮಂಗಳವಾರ ಇಲ್ಲಿ ಭಾರಿ ಮಳೆ ಸುರಿದದ್ದರಿಂದ ವಾಹನ ಹಾಗೂ ಜನರ ಓಡಾಟಕ್ಕೆ ತೊಂದರೆ ಉಂಟಾಯಿತು.<br /> <br /> ವರ್ಷದ ಅಧಿಕೃತ ಮಳೆ ಜೂನ್ 7 ರಿಂದ ಆರಂಭವಾಗುತ್ತದೆ ಎನ್ನುವುದು ಜನರ ನಂಬಿಕೆಯಾಗಿತ್ತು. ಆದರೆ ಇನ್ನೆರಡು ದಿನದಲ್ಲಿ ಮಳೆಯಾಗುತ್ತದೆ ಎನ್ನುವ ಹವಾಮಾನ ಇಲಾಖೆ ವರದಿಯನ್ನೂ ಮೀರಿ ಎರಡು ದಿನ ಮೊದಲೇ ಆರಂಭವಾದ ಮಳೆಯಲ್ಲಿ ಕೊಡೆ ಇಲ್ಲದವರು ಮಂಗಳವಾರ ಒದ್ದೆಯಾಗಬೇಕಾಯಿತು.<br /> <br /> ಬೆಳಿಗ್ಗೆ ಶಾಲೆ- ಕಾಲೇಜು, ಕಚೇರಿಗೆ ಹೋಗುವವರು ಮಳೆಯಲ್ಲಿ ನೆನೆಯುತ್ತಾ ಸಾಗಿದರು. ಪಟ್ಟಣದ ಗಟಾರವೆಲ್ಲ ತುಂಬಿ ಒಳಗಿದ್ದ ಕಸ, ಪ್ಲಾಸ್ಟಿಕ್ ಚೀಲಗಳು ರಸ್ತೆಯ ಮೇಲೆ ರಾಶಿ-ರಾಶಿಯಾಗಿ ಬಿದ್ದು ಓಡಾಟಕ್ಕೆ ತೊಂದರೆಯಾಯಿತು.<br /> <br /> <strong>ಔಷಧ ಸಿಂಪರಣೆಗೆ ಅಡ್ಡಿ</strong><br /> ಕಳೆದ ವರ್ಷದಿಂದ ಮಳೆ ಬೀಳುವ ಮೊದಲು ಅಡಿಕೆ ಗೊನೆಗಳಿಗೆ `ಬಯೋಫೈಟ್~ ಎಂಬ ಕೊಳೆನಾಶಕ ಔಷಧಿ ಹೊಡೆಯುತ್ತಿದ್ದವರಿಗೆ ಮಂಗಳವಾರ ಸುರಿದ ಮಳೆ ಅಡ್ಡಿಯಾಯಿತು. <br /> <br /> ಮಳೆ ಬಿದ್ದ ನಂತರ ಹೊಡೆಯುವ ಮೈಲು ತುತ್ತೆ ಔಷಧಿ ಸಿಂಪರಣೆಗಿಂತ `ಬಯೋಫೈಟ್~ ಎಂಬ ಹೊಸ ಔಷಧಿ ಅಡಿಕೆ ಕೊಳೆ ರೋಗ ನಿವಾರಣೆಗೆ ಹೆಚ್ಚು ಪರಿಣಾಮಕಾರಿ ಎಂದು ನಂಬಿರುವ ರೈತರು ಮೇ ಮೊದಲ ವಾರದಿಂದಲೇ ಅದರ ಸಿಂಪರಣೆ ಆರಂಭಿಸಿದ್ದರು. <br /> <br /> ಮಳೆಗೆ ಮೊದಲು `ಬಯೋ ಫೈಟ್~, ಮಳೆಯೇನಾದರೂ ಜಾಸ್ತಿಯಾದರೆ ಮೈಲು ತುತ್ತೆ ಮದ್ದು ಸಿಂಪರಣೆಗೆ ರೈತರು ಸಿದ್ಧರಾಗಿದ್ದಾರೆ. ಮಳೆಯ ಜಾರಿಕೆಯಲ್ಲಿ ಅಡಿಕೆ ಮರ ಹತ್ತಿ ಕೊಳೆ ಮದ್ದು ಹೊಡೆಯುವುದಕ್ಕಿಂತ ಮಳೆಗೆ ಮೊದಲೇ `ಬಯೋಫೈಟ್~ ಸಿಂಪರಣೆ ಕೆಲಸ ಕೂಲಿಗಳಿಗೂ ಹೆಚ್ಚು ಅನುಕೂಲ. ಮಳೆಗಾಲದ ಉರುವಲಿಗೆ ಕಟ್ಟಿಗೆ ಸಂಗ್ರಹ, ಮನೆ, ಕೊಟ್ಟಿಗೆಗಳ ಮಾಡು ದುರಸ್ತಿ ಕೆಲಸ ಇನ್ನು ಬಾಕಿ ಇರುವಾಗಲೇ ಮಳೆ ಬಂದದ್ದು ಹೆಚ್ಚಿನವರಿಗೆ ತೊಂದರೆಯಾಗಿದೆ. ಪಟ್ಟಣದಲ್ಲಿ ಮಂಗಳವಾರ 5.5 ಮಿಲಿ ಮೀಟರ್ ಮಳೆ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುಮಟಾ: ಮಂಗಳವಾರ ಇಲ್ಲಿ ಭಾರಿ ಮಳೆ ಸುರಿದದ್ದರಿಂದ ವಾಹನ ಹಾಗೂ ಜನರ ಓಡಾಟಕ್ಕೆ ತೊಂದರೆ ಉಂಟಾಯಿತು.<br /> <br /> ವರ್ಷದ ಅಧಿಕೃತ ಮಳೆ ಜೂನ್ 7 ರಿಂದ ಆರಂಭವಾಗುತ್ತದೆ ಎನ್ನುವುದು ಜನರ ನಂಬಿಕೆಯಾಗಿತ್ತು. ಆದರೆ ಇನ್ನೆರಡು ದಿನದಲ್ಲಿ ಮಳೆಯಾಗುತ್ತದೆ ಎನ್ನುವ ಹವಾಮಾನ ಇಲಾಖೆ ವರದಿಯನ್ನೂ ಮೀರಿ ಎರಡು ದಿನ ಮೊದಲೇ ಆರಂಭವಾದ ಮಳೆಯಲ್ಲಿ ಕೊಡೆ ಇಲ್ಲದವರು ಮಂಗಳವಾರ ಒದ್ದೆಯಾಗಬೇಕಾಯಿತು.<br /> <br /> ಬೆಳಿಗ್ಗೆ ಶಾಲೆ- ಕಾಲೇಜು, ಕಚೇರಿಗೆ ಹೋಗುವವರು ಮಳೆಯಲ್ಲಿ ನೆನೆಯುತ್ತಾ ಸಾಗಿದರು. ಪಟ್ಟಣದ ಗಟಾರವೆಲ್ಲ ತುಂಬಿ ಒಳಗಿದ್ದ ಕಸ, ಪ್ಲಾಸ್ಟಿಕ್ ಚೀಲಗಳು ರಸ್ತೆಯ ಮೇಲೆ ರಾಶಿ-ರಾಶಿಯಾಗಿ ಬಿದ್ದು ಓಡಾಟಕ್ಕೆ ತೊಂದರೆಯಾಯಿತು.<br /> <br /> <strong>ಔಷಧ ಸಿಂಪರಣೆಗೆ ಅಡ್ಡಿ</strong><br /> ಕಳೆದ ವರ್ಷದಿಂದ ಮಳೆ ಬೀಳುವ ಮೊದಲು ಅಡಿಕೆ ಗೊನೆಗಳಿಗೆ `ಬಯೋಫೈಟ್~ ಎಂಬ ಕೊಳೆನಾಶಕ ಔಷಧಿ ಹೊಡೆಯುತ್ತಿದ್ದವರಿಗೆ ಮಂಗಳವಾರ ಸುರಿದ ಮಳೆ ಅಡ್ಡಿಯಾಯಿತು. <br /> <br /> ಮಳೆ ಬಿದ್ದ ನಂತರ ಹೊಡೆಯುವ ಮೈಲು ತುತ್ತೆ ಔಷಧಿ ಸಿಂಪರಣೆಗಿಂತ `ಬಯೋಫೈಟ್~ ಎಂಬ ಹೊಸ ಔಷಧಿ ಅಡಿಕೆ ಕೊಳೆ ರೋಗ ನಿವಾರಣೆಗೆ ಹೆಚ್ಚು ಪರಿಣಾಮಕಾರಿ ಎಂದು ನಂಬಿರುವ ರೈತರು ಮೇ ಮೊದಲ ವಾರದಿಂದಲೇ ಅದರ ಸಿಂಪರಣೆ ಆರಂಭಿಸಿದ್ದರು. <br /> <br /> ಮಳೆಗೆ ಮೊದಲು `ಬಯೋ ಫೈಟ್~, ಮಳೆಯೇನಾದರೂ ಜಾಸ್ತಿಯಾದರೆ ಮೈಲು ತುತ್ತೆ ಮದ್ದು ಸಿಂಪರಣೆಗೆ ರೈತರು ಸಿದ್ಧರಾಗಿದ್ದಾರೆ. ಮಳೆಯ ಜಾರಿಕೆಯಲ್ಲಿ ಅಡಿಕೆ ಮರ ಹತ್ತಿ ಕೊಳೆ ಮದ್ದು ಹೊಡೆಯುವುದಕ್ಕಿಂತ ಮಳೆಗೆ ಮೊದಲೇ `ಬಯೋಫೈಟ್~ ಸಿಂಪರಣೆ ಕೆಲಸ ಕೂಲಿಗಳಿಗೂ ಹೆಚ್ಚು ಅನುಕೂಲ. ಮಳೆಗಾಲದ ಉರುವಲಿಗೆ ಕಟ್ಟಿಗೆ ಸಂಗ್ರಹ, ಮನೆ, ಕೊಟ್ಟಿಗೆಗಳ ಮಾಡು ದುರಸ್ತಿ ಕೆಲಸ ಇನ್ನು ಬಾಕಿ ಇರುವಾಗಲೇ ಮಳೆ ಬಂದದ್ದು ಹೆಚ್ಚಿನವರಿಗೆ ತೊಂದರೆಯಾಗಿದೆ. ಪಟ್ಟಣದಲ್ಲಿ ಮಂಗಳವಾರ 5.5 ಮಿಲಿ ಮೀಟರ್ ಮಳೆ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>