<p><strong>ಟಬ್ರಿಜ್/ ಇರಾನ್ (ಪಿಟಿಐ):</strong> ಬ್ಯಾಂಕಿಂಗ್ ಮತ್ತು ತೆರಿಗೆಗೆ ಸಂಬಂಧಿಸಿದ ಮಾಹಿತಿ ವಿನಿಮಯಕ್ಕೆ `ಜಿ-20~ ದೇಶಗಳ ಹಣಕಾಸು ಸಚಿವರು ಬದ್ಧವಾಗಿರುವುದು ಮಹತ್ವದ ಸಾಧನೆಯಾಗಿದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.</p>.<p>ಭಾರತ ವ್ಯಕ್ತಪಡಿಸಿದ್ದ ಕಳವಳಕ್ಕೆ `ಜಿ-20~ ದೇಶಗಳ ಹಣಕಾಸು ಸಚಿವರು ಸ್ಪಂದಿಸಿರುವುದು ಕಂಡು ತಮಗೆ ಸಂತಸ ವಾಗಿದೆ. ಈ ವಿಷಯವು ನವೆಂಬರ್ 3ರಿಂದ ಕಾನ್ಸ್ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಮಂಡನೆಯಾಗಲಿದೆ ಎಂದೂ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.</p>.<p>ಭಾರತದ ದೃಷ್ಟಿಕೋನದಿಂದ ನೋಡಿದರೆ, ಬ್ಯಾಂಕಿಂಗ್ ವಹಿವಾಟು ಮತ್ತು ತೆರಿಗೆಗೆ ಸಂಬಂಧಿಸಿದ ಮಾಹಿತಿ ವಿನಿಮಯಕ್ಕೆ `ಜಿ-20~ ದೇಶಗಳು ಸಮ್ಮತಿಸಿರುವುದು ಮಹತ್ವದ ಸಾಧನೆಯಾಗಿದೆ ಎಂಬುದು ಪ್ರಣವ್ ಅವರ ಅಭಿಮತವಾಗಿದೆ. ಪ್ಯಾರಿಸ್ನಲ್ಲಿ ನಡೆದ `ಜಿ-20~ ದೇಶಗಳ ಹಣಕಾಸು ಸಚಿವರ ಮತ್ತು ಕೇಂದ್ರೀಯ ಬ್ಯಾಂಕ್ಗಳ ಗವರ್ನರ್ಗಳ ಎರಡು ದಿನಗಳ ಸಮಾವೇಶದಲ್ಲಿ ಪ್ರಣವ್ ಭಾಗವಹಿಸಿದ್ದರು.</p>.<p>ಬ್ಯಾಂಕಿಂಗ್ ಮತ್ತು ತೆರಿಗೆಗೆ ಸಂಬಂಧಿಸಿದಂತೆ ದೇಶ - ದೇಶಗಳ ಮಧ್ಯೆ ಸಮಗ್ರ ಮಾಹಿತಿ ವಿನಿಮಯ ನಡೆಯಬೇಕು. `ಜಿ-20~ ದೇಶಗಳು ಸ್ವಇಚ್ಛೆಯಿಂದ ಮಾಹಿತಿ ವಿನಿಮಯಕ್ಕೆ ಮುಂದಾಗಬೇಕು ಎಂದೂ ಪ್ರಣವ್ ಬಲವಾಗಿ ಪ್ರತಿಪಾದಿಸಿದ್ದರು.ಸರಕುಗಳ ಬೆಲೆ ಏರಿಳಿತ, ಕರೆನ್ಸಿ ಸಮರ ಮತ್ತು ತೆರಿಗೆ ಕುರಿತ ಚರ್ಚೆಯನ್ನು ಮೆಕ್ಸಿಕೊದಲ್ಲಿ ನಡೆಯಲಿರುವ ಸಚಿವರ ಸಭೆಗೆ ಶಿಫಾರಸು ಮಾಡದಿರುವ ಬಗ್ಗೆಯೂ ಪ್ರಣವ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಟಬ್ರಿಜ್/ ಇರಾನ್ (ಪಿಟಿಐ):</strong> ಬ್ಯಾಂಕಿಂಗ್ ಮತ್ತು ತೆರಿಗೆಗೆ ಸಂಬಂಧಿಸಿದ ಮಾಹಿತಿ ವಿನಿಮಯಕ್ಕೆ `ಜಿ-20~ ದೇಶಗಳ ಹಣಕಾಸು ಸಚಿವರು ಬದ್ಧವಾಗಿರುವುದು ಮಹತ್ವದ ಸಾಧನೆಯಾಗಿದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.</p>.<p>ಭಾರತ ವ್ಯಕ್ತಪಡಿಸಿದ್ದ ಕಳವಳಕ್ಕೆ `ಜಿ-20~ ದೇಶಗಳ ಹಣಕಾಸು ಸಚಿವರು ಸ್ಪಂದಿಸಿರುವುದು ಕಂಡು ತಮಗೆ ಸಂತಸ ವಾಗಿದೆ. ಈ ವಿಷಯವು ನವೆಂಬರ್ 3ರಿಂದ ಕಾನ್ಸ್ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಮಂಡನೆಯಾಗಲಿದೆ ಎಂದೂ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.</p>.<p>ಭಾರತದ ದೃಷ್ಟಿಕೋನದಿಂದ ನೋಡಿದರೆ, ಬ್ಯಾಂಕಿಂಗ್ ವಹಿವಾಟು ಮತ್ತು ತೆರಿಗೆಗೆ ಸಂಬಂಧಿಸಿದ ಮಾಹಿತಿ ವಿನಿಮಯಕ್ಕೆ `ಜಿ-20~ ದೇಶಗಳು ಸಮ್ಮತಿಸಿರುವುದು ಮಹತ್ವದ ಸಾಧನೆಯಾಗಿದೆ ಎಂಬುದು ಪ್ರಣವ್ ಅವರ ಅಭಿಮತವಾಗಿದೆ. ಪ್ಯಾರಿಸ್ನಲ್ಲಿ ನಡೆದ `ಜಿ-20~ ದೇಶಗಳ ಹಣಕಾಸು ಸಚಿವರ ಮತ್ತು ಕೇಂದ್ರೀಯ ಬ್ಯಾಂಕ್ಗಳ ಗವರ್ನರ್ಗಳ ಎರಡು ದಿನಗಳ ಸಮಾವೇಶದಲ್ಲಿ ಪ್ರಣವ್ ಭಾಗವಹಿಸಿದ್ದರು.</p>.<p>ಬ್ಯಾಂಕಿಂಗ್ ಮತ್ತು ತೆರಿಗೆಗೆ ಸಂಬಂಧಿಸಿದಂತೆ ದೇಶ - ದೇಶಗಳ ಮಧ್ಯೆ ಸಮಗ್ರ ಮಾಹಿತಿ ವಿನಿಮಯ ನಡೆಯಬೇಕು. `ಜಿ-20~ ದೇಶಗಳು ಸ್ವಇಚ್ಛೆಯಿಂದ ಮಾಹಿತಿ ವಿನಿಮಯಕ್ಕೆ ಮುಂದಾಗಬೇಕು ಎಂದೂ ಪ್ರಣವ್ ಬಲವಾಗಿ ಪ್ರತಿಪಾದಿಸಿದ್ದರು.ಸರಕುಗಳ ಬೆಲೆ ಏರಿಳಿತ, ಕರೆನ್ಸಿ ಸಮರ ಮತ್ತು ತೆರಿಗೆ ಕುರಿತ ಚರ್ಚೆಯನ್ನು ಮೆಕ್ಸಿಕೊದಲ್ಲಿ ನಡೆಯಲಿರುವ ಸಚಿವರ ಸಭೆಗೆ ಶಿಫಾರಸು ಮಾಡದಿರುವ ಬಗ್ಗೆಯೂ ಪ್ರಣವ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>