<p>ಕೆ.ವಿ.ಸುಬ್ಬಣ್ಣ ಆಪ್ತ ಸಮೂಹ ವಾರ್ತಾ ಇಲಾಖೆ ಸಹಯೋಗದಲ್ಲಿ ಭಾನುವಾರ ಪ್ರಶಸ್ತಿ ವಿಜೇತ ಸಿನಿಮಾ `ಮಾತಾಡ್ ಮಾತಾಡ್ ಮಲ್ಲಿಗೆ~ ಪ್ರದರ್ಶನ ಏರ್ಪಡಿಸಿದೆ. <br /> <br /> 2007ರಲ್ಲಿ ತೆರೆಕಂಡ `ಮಾತಾಡ್ ಮಾತಾಡ್ ಮಲ್ಲಿಗೆ~ ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದರು. ಚಿತ್ರಕಥೆ ಕೂಡ ಅವರದ್ದೆ. ಕೆ.ಮಂಜು ಚಿತ್ರದ ನಿರ್ಮಾಪಕರು. ಡಾ. ವಿಷ್ಣುವರ್ಧನ್, ಸುಹಾಸಿನಿ, ಸುದೀಪ್, ರಶ್ಮಿ ಮತ್ತಿತರರು ತಾರಾಗಣದಲ್ಲಿದ್ದಾರೆ. ಮನೋಮೂರ್ತಿ ಸಂಗೀತ ನೀಡಿದ್ದರು. <br /> <br /> ಒಬ್ಬ ಹೂವು ಬೆಳೆಗಾರ ತನ್ನ ಹಳ್ಳಿ, ತೋಟ, ಹೊಳೆ, ಬೆಟ್ಟ ಇವುಗಳೆಲ್ಲವನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟದ ಕತೆ ಇದು. ಮಲ್ಲಿಗೆ ಕಥೆ, ಅದನ್ನು ನಿರೂಪಿಸಿದ ರೀತಿ, ಸಮಕಾಲೀನ ಸಮಸ್ಯೆಗಳು ಹೀಗೆ ಅನೇಕ ವಿಷಯಗಳ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಈ ಚಿತ್ರದಲ್ಲಿ ಬೆಳಕು ಚೆಲ್ಲಿದ್ದರು. ಗಣಿಗಾರಿಕೆ ನೆಪದಲ್ಲಿ ನಮ್ಮ ಸಂಪತ್ತನ್ನು ಕಬಳಿಸಿ ತಮ್ಮ ಬೊಕ್ಕಸ ತುಂಬಿಕೊಳ್ಳಲು ಬರುವ ಬಹುರಾಷ್ಟ್ರೀಯ ಕಂಪೆನಿಗಳು ಕೊಡುವ ಎಂಜಲು ಕಾಸಿಗೆ ಹಳ್ಳಿಯನ್ನೇ ಒಕ್ಕಲೆಬ್ಬಿಸಲು ಆಜ್ಞೆ ಮಾಡುವ ಸರ್ಕಾರ, ಆ ಸರ್ಕಾರದ ಆಜ್ಞೆಯನ್ನು ಧಿಕ್ಕರಿಸಿ ಹೋರಾಡುವ ಒಂದು ಹಳ್ಳಿ ಮತ್ತು ಅದರ ಮುಖಂಡ ಪೂವಯ್ಯ, ಹೋರಾಟದಲ್ಲಿ ತನ್ನ ಹೆಂಡತಿಯನ್ನೇ ಕಳೆದು ಕೊಂಡರೂ ಗಾಂಧಿ ಮಾರ್ಗದಲ್ಲಿ ಅಹಿಂಸಾತ್ಮಕ ಹೋರಾಟ ನಡೆಸಿ ಸರ್ಕಾರದ ಆಜ್ಞೆಯ ವಿರುದ್ಧ ಗೆಲುವು ಸಾಧಿಸುವ ಈ ಕಥೆಯನ್ನು ನಾಗತಿಗಹಳ್ಳಿ ನೈಜವಾಗಿ ಕಟ್ಟಿಕೊಟ್ಟಿದ್ದರು. <br /> <br /> ರೈತ ಪೂವಯ್ಯನ ಪಾತ್ರದಲ್ಲಿ ವಿಷ್ಣುವರ್ಧನ್ ಅವರದ್ದು ಶ್ರೇಷ್ಠ ಅಭಿನಯ. ಮುಗ್ಧ ಜನ ಬಂದೂಕು ಹಿಡಿದು ನಕ್ಸಲೈಟ್ಗಳೇಕೆ ಆಗುತ್ತಾರೆ ಎಂಬುದನ್ನು ಕೂಡ ಸೂಕ್ಷ್ಮವಾಗಿ ಹೇಳಿದ್ದರು ನಾಗತಿಹಳ್ಳಿ. <br /> <br /> ಸ್ಥಳ: ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರ, ನಂ.151, 7ನೇ ಕ್ರಾಸ್, ಟೀಚರ್ಸ್ ಕಾಲೊನಿ 1ನೇ ಹಂತ, ದಯಾನಂದ ಸಾಗರ್ ಕಾಲೇಜು. ಸಂಜೆ 5.30. ಮಾಹಿತಿಗೆ: 99641 52999. <br /> <br /> ಚಿತ್ರ ಪ್ರದರ್ಶನಕ್ಕೂ ಮುನ್ನ `ಶ್ರದ್ಧಾ~ ನಾಟಕ ಪ್ರದರ್ಶನ. ನಾಟಕವನ್ನು ಬಿ.ಆರ್.ಗೋಪಿನಾಥ್ ನಿರ್ದೇಶಿಸಿದ್ದು, ಶ್ರೀನಿವಾಸ್ ವೈದ್ಯ ಕಥೆ ಬರೆದಿದ್ದಾರೆ. ನಾಟಕದಲ್ಲಿ ಎಂ.ಎಸ್.ಸತ್ಯನಾರಾಯಣ ರಾವ್, ಉಷಾ, ವನಜಾಕ್ಷಿ, ಮಂಜುನಾಥ್, ಕುಮಾರ್, ಯೋಗೇಶ್, ತ್ಯಾಗರಾಜ್. ಸಂಜೆ 5. ಚಿತ್ರಪ್ರದರ್ಶನದ ನಂತರ ನಾಟಕ ಕುರಿತು ಸಂವಾದ ಏರ್ಪಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆ.ವಿ.ಸುಬ್ಬಣ್ಣ ಆಪ್ತ ಸಮೂಹ ವಾರ್ತಾ ಇಲಾಖೆ ಸಹಯೋಗದಲ್ಲಿ ಭಾನುವಾರ ಪ್ರಶಸ್ತಿ ವಿಜೇತ ಸಿನಿಮಾ `ಮಾತಾಡ್ ಮಾತಾಡ್ ಮಲ್ಲಿಗೆ~ ಪ್ರದರ್ಶನ ಏರ್ಪಡಿಸಿದೆ. <br /> <br /> 2007ರಲ್ಲಿ ತೆರೆಕಂಡ `ಮಾತಾಡ್ ಮಾತಾಡ್ ಮಲ್ಲಿಗೆ~ ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದರು. ಚಿತ್ರಕಥೆ ಕೂಡ ಅವರದ್ದೆ. ಕೆ.ಮಂಜು ಚಿತ್ರದ ನಿರ್ಮಾಪಕರು. ಡಾ. ವಿಷ್ಣುವರ್ಧನ್, ಸುಹಾಸಿನಿ, ಸುದೀಪ್, ರಶ್ಮಿ ಮತ್ತಿತರರು ತಾರಾಗಣದಲ್ಲಿದ್ದಾರೆ. ಮನೋಮೂರ್ತಿ ಸಂಗೀತ ನೀಡಿದ್ದರು. <br /> <br /> ಒಬ್ಬ ಹೂವು ಬೆಳೆಗಾರ ತನ್ನ ಹಳ್ಳಿ, ತೋಟ, ಹೊಳೆ, ಬೆಟ್ಟ ಇವುಗಳೆಲ್ಲವನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟದ ಕತೆ ಇದು. ಮಲ್ಲಿಗೆ ಕಥೆ, ಅದನ್ನು ನಿರೂಪಿಸಿದ ರೀತಿ, ಸಮಕಾಲೀನ ಸಮಸ್ಯೆಗಳು ಹೀಗೆ ಅನೇಕ ವಿಷಯಗಳ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಈ ಚಿತ್ರದಲ್ಲಿ ಬೆಳಕು ಚೆಲ್ಲಿದ್ದರು. ಗಣಿಗಾರಿಕೆ ನೆಪದಲ್ಲಿ ನಮ್ಮ ಸಂಪತ್ತನ್ನು ಕಬಳಿಸಿ ತಮ್ಮ ಬೊಕ್ಕಸ ತುಂಬಿಕೊಳ್ಳಲು ಬರುವ ಬಹುರಾಷ್ಟ್ರೀಯ ಕಂಪೆನಿಗಳು ಕೊಡುವ ಎಂಜಲು ಕಾಸಿಗೆ ಹಳ್ಳಿಯನ್ನೇ ಒಕ್ಕಲೆಬ್ಬಿಸಲು ಆಜ್ಞೆ ಮಾಡುವ ಸರ್ಕಾರ, ಆ ಸರ್ಕಾರದ ಆಜ್ಞೆಯನ್ನು ಧಿಕ್ಕರಿಸಿ ಹೋರಾಡುವ ಒಂದು ಹಳ್ಳಿ ಮತ್ತು ಅದರ ಮುಖಂಡ ಪೂವಯ್ಯ, ಹೋರಾಟದಲ್ಲಿ ತನ್ನ ಹೆಂಡತಿಯನ್ನೇ ಕಳೆದು ಕೊಂಡರೂ ಗಾಂಧಿ ಮಾರ್ಗದಲ್ಲಿ ಅಹಿಂಸಾತ್ಮಕ ಹೋರಾಟ ನಡೆಸಿ ಸರ್ಕಾರದ ಆಜ್ಞೆಯ ವಿರುದ್ಧ ಗೆಲುವು ಸಾಧಿಸುವ ಈ ಕಥೆಯನ್ನು ನಾಗತಿಗಹಳ್ಳಿ ನೈಜವಾಗಿ ಕಟ್ಟಿಕೊಟ್ಟಿದ್ದರು. <br /> <br /> ರೈತ ಪೂವಯ್ಯನ ಪಾತ್ರದಲ್ಲಿ ವಿಷ್ಣುವರ್ಧನ್ ಅವರದ್ದು ಶ್ರೇಷ್ಠ ಅಭಿನಯ. ಮುಗ್ಧ ಜನ ಬಂದೂಕು ಹಿಡಿದು ನಕ್ಸಲೈಟ್ಗಳೇಕೆ ಆಗುತ್ತಾರೆ ಎಂಬುದನ್ನು ಕೂಡ ಸೂಕ್ಷ್ಮವಾಗಿ ಹೇಳಿದ್ದರು ನಾಗತಿಹಳ್ಳಿ. <br /> <br /> ಸ್ಥಳ: ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರ, ನಂ.151, 7ನೇ ಕ್ರಾಸ್, ಟೀಚರ್ಸ್ ಕಾಲೊನಿ 1ನೇ ಹಂತ, ದಯಾನಂದ ಸಾಗರ್ ಕಾಲೇಜು. ಸಂಜೆ 5.30. ಮಾಹಿತಿಗೆ: 99641 52999. <br /> <br /> ಚಿತ್ರ ಪ್ರದರ್ಶನಕ್ಕೂ ಮುನ್ನ `ಶ್ರದ್ಧಾ~ ನಾಟಕ ಪ್ರದರ್ಶನ. ನಾಟಕವನ್ನು ಬಿ.ಆರ್.ಗೋಪಿನಾಥ್ ನಿರ್ದೇಶಿಸಿದ್ದು, ಶ್ರೀನಿವಾಸ್ ವೈದ್ಯ ಕಥೆ ಬರೆದಿದ್ದಾರೆ. ನಾಟಕದಲ್ಲಿ ಎಂ.ಎಸ್.ಸತ್ಯನಾರಾಯಣ ರಾವ್, ಉಷಾ, ವನಜಾಕ್ಷಿ, ಮಂಜುನಾಥ್, ಕುಮಾರ್, ಯೋಗೇಶ್, ತ್ಯಾಗರಾಜ್. ಸಂಜೆ 5. ಚಿತ್ರಪ್ರದರ್ಶನದ ನಂತರ ನಾಟಕ ಕುರಿತು ಸಂವಾದ ಏರ್ಪಡಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>