<p><strong>ಚಳ್ಳಕೆರೆ:</strong>ಆಂಧ್ರ ಹಾಗೂ ಕರ್ನಾಟಕದ ನಿಕಟ ಸಂಪರ್ಕ ಹೊಂದಿರುವ ಜಾಜೂರು ಜಿ.ಪಂ. ಕ್ಷೇತ್ರ ಸಮಸ್ಯೆಗಳ ಆಗರವಾಗಿದೆ.<br /> ಈ ಭಾಗದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ರಸ್ತೆ, ಶಾಲಾ ಕೊಠಡಿಗಳ ದುರಸ್ತಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಈ ಕ್ಷೇತ್ರದ ಸದಸ್ಯ ಜೆ.ಪಿ. ಜಯಪಾಲಯ್ಯ ಹೇಳುತ್ತಾರೆ.‘ಪ್ರಜಾವಾಣಿ’ ಜತೆಗೆ ಅಭಿವೃದ್ಧಿಯ ಕನಸುಗಳನ್ನು ಅವರು ಹಂಚಿಕೊಂಡಿದ್ದಾರೆ.<br /> <br /> <strong>* ಕೃಷಿ ಪದವೀಧರರಾಗಿರುವ ನೀವು ರಾಜಕೀಯ ಆಯ್ದುಕೊಂಡಿದ್ದು ಏಕೆ?</strong><br /> ವಿದ್ಯಾರ್ಥಿ ಜೀವನದಲ್ಲಿ ಚಳವಳಿಗಳಲ್ಲಿ ತೊಡಗಿಸಿಕೊಂಡ ನನಗೆ ಜೀವನದಲ್ಲಿ ರಾಜಕೀಯವೇ ಆಯ್ಕೆಯ ಕ್ಷೇತ್ರವಾಗಿತ್ತು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುವಾಗಲೇ ಹೋರಾಟದ ಮುಂಚೂಣಿಯಲ್ಲಿದ್ದೆ. ಸರ್ಕಾರಿ ಕೆಲಸಕ್ಕೆ ಹೋಗಬಹುದಿತ್ತು. ಆದರೆ, ರಾಜಕೀಯವು ಆಸಕ್ತಿಯ ಕ್ಷೇತ್ರ ಆಗಿರುವುದರಿಂದ ಸಹಜವಾಗಿಯೇ ಈ ಕ್ಷೇತ್ರಕ್ಕೆ ಬಂದೆ. ನನ್ನನ್ನು ಆಯ್ಕೆ ಮಾಡಿ ಕಳುಹಿಸಿದ ಜನತೆಗೆ ಕೈಲಾದಷ್ಟು ಕೆಲಸ ಮಾಡುವ ಉದ್ದೇಶವಿಟ್ಟುಕೊಂಡೇ ಚುನಾವಣೆಗೆ ಸ್ಪರ್ಧಿಸಿದ್ದೆ. ಜಾಜೂರು ಜಿ.ಪಂ. ಕ್ಷೇತ್ರವನ್ನು ಇಡೀ ಜಿಲ್ಲೆಗೆ ಮಾದರಿ ಕ್ಷೇತ್ರ ಮಾಡಬೇಕು ಎನ್ನುವುದೇ ನನ್ನ ಗುರಿ. ನಂತರವೇ ಮುಂದಿನ ಹಾದಿ.<br /> <strong><br /> * ಕ್ಷೇತ್ರದ ಸಮಸ್ಯೆಗಳು ಏನು?</strong><br /> ಪ್ರಮುಖವಾಗಿ ಶಾಲಾ ಕೊಠಡಿಗಳು ದುಸ್ಥಿತಿಯಲ್ಲಿವೆ. ಆಂಧ್ರದ ಗಡಿ ಭಾಗದಲ್ಲಿರುವುದರಿಂದ ಕನ್ನಡ ಶಾಲೆಗಳ ಕಡೆಗೆ ಹೆಚ್ಚು ಗಮನ ಹರಿಸುವ ನಿಟ್ಟಿನಲ್ಲಿ ಕೊಠಡಿಗಳ ದುರಸ್ತಿಗಾಗಿ ಶ್ರಮಿಸುವೆ.ನನ್ನ ಕ್ಷೇತ್ರ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ವೇದಾವತಿ ನದಿ ಈ ಭಾಗದಲ್ಲಿ ಹರಿಯುತ್ತಿದ್ದರೂ ಈ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಈ ವಿಷಯದ ಬಗ್ಗೆ ಹೆಚ್ಚು ಗಮನ ನೀಡಲಾಗುವುದು. ಇನ್ನೂ ತಾಲ್ಲೂಕಿನಿಂದ ದೂರದಲ್ಲಿರುವ ಓಬಳಾಪುರ, ತಿಪ್ಪೆರೆಡ್ಡಿಹಳ್ಳಿ ರಸ್ತೆ ಹದಗೆಟ್ಟಿವೆ. ಚುನಾವಣೆ ಸಮಯದಲ್ಲಿ ಈ ರಸ್ತೆಯಲ್ಲಿ ವಾಹನಗಳಲ್ಲಿ ಪ್ರಚಾರಕ್ಕೆ ಹೋಗುವ ಸಂದರ್ಭದಲ್ಲಿಯೇ ನನ್ನನ್ನು ಕಾಡಿದ ಮೊದಲ ಸಮಸ್ಯೆ ಇದಾಗಿತ್ತು.<br /> <br /> <strong>* ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಏನು ಕ್ರಮ ಕೈಗೊಳ್ಳುತ್ತೀರಿ?<br /> </strong>ನಮ್ಮ ಕ್ಷೇತ್ರ ಜಾಜೂರು ವೇದಾವತಿ ನದಿ ದಂಡೆ ಮೇಲಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು ಸುಲಭವಾಗಿದೆ. ಯಾವ ಹಳ್ಳಿಗಳಲ್ಲಿ ಕುಡಿಯುವ ನೀರಿನ ಬವಣೆ ಇದೆ ಎಂಬುದನ್ನು ಈಗಾಗಲೇ ತಿಳಿದಿದ್ದೇನೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ಕೆ ಮುಂದಾಗುತ್ತೇನೆ. ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಯೋಜನೆ ರೂಪಿಸುತ್ತೇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಳ್ಳಕೆರೆ:</strong>ಆಂಧ್ರ ಹಾಗೂ ಕರ್ನಾಟಕದ ನಿಕಟ ಸಂಪರ್ಕ ಹೊಂದಿರುವ ಜಾಜೂರು ಜಿ.ಪಂ. ಕ್ಷೇತ್ರ ಸಮಸ್ಯೆಗಳ ಆಗರವಾಗಿದೆ.<br /> ಈ ಭಾಗದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ರಸ್ತೆ, ಶಾಲಾ ಕೊಠಡಿಗಳ ದುರಸ್ತಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಈ ಕ್ಷೇತ್ರದ ಸದಸ್ಯ ಜೆ.ಪಿ. ಜಯಪಾಲಯ್ಯ ಹೇಳುತ್ತಾರೆ.‘ಪ್ರಜಾವಾಣಿ’ ಜತೆಗೆ ಅಭಿವೃದ್ಧಿಯ ಕನಸುಗಳನ್ನು ಅವರು ಹಂಚಿಕೊಂಡಿದ್ದಾರೆ.<br /> <br /> <strong>* ಕೃಷಿ ಪದವೀಧರರಾಗಿರುವ ನೀವು ರಾಜಕೀಯ ಆಯ್ದುಕೊಂಡಿದ್ದು ಏಕೆ?</strong><br /> ವಿದ್ಯಾರ್ಥಿ ಜೀವನದಲ್ಲಿ ಚಳವಳಿಗಳಲ್ಲಿ ತೊಡಗಿಸಿಕೊಂಡ ನನಗೆ ಜೀವನದಲ್ಲಿ ರಾಜಕೀಯವೇ ಆಯ್ಕೆಯ ಕ್ಷೇತ್ರವಾಗಿತ್ತು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುವಾಗಲೇ ಹೋರಾಟದ ಮುಂಚೂಣಿಯಲ್ಲಿದ್ದೆ. ಸರ್ಕಾರಿ ಕೆಲಸಕ್ಕೆ ಹೋಗಬಹುದಿತ್ತು. ಆದರೆ, ರಾಜಕೀಯವು ಆಸಕ್ತಿಯ ಕ್ಷೇತ್ರ ಆಗಿರುವುದರಿಂದ ಸಹಜವಾಗಿಯೇ ಈ ಕ್ಷೇತ್ರಕ್ಕೆ ಬಂದೆ. ನನ್ನನ್ನು ಆಯ್ಕೆ ಮಾಡಿ ಕಳುಹಿಸಿದ ಜನತೆಗೆ ಕೈಲಾದಷ್ಟು ಕೆಲಸ ಮಾಡುವ ಉದ್ದೇಶವಿಟ್ಟುಕೊಂಡೇ ಚುನಾವಣೆಗೆ ಸ್ಪರ್ಧಿಸಿದ್ದೆ. ಜಾಜೂರು ಜಿ.ಪಂ. ಕ್ಷೇತ್ರವನ್ನು ಇಡೀ ಜಿಲ್ಲೆಗೆ ಮಾದರಿ ಕ್ಷೇತ್ರ ಮಾಡಬೇಕು ಎನ್ನುವುದೇ ನನ್ನ ಗುರಿ. ನಂತರವೇ ಮುಂದಿನ ಹಾದಿ.<br /> <strong><br /> * ಕ್ಷೇತ್ರದ ಸಮಸ್ಯೆಗಳು ಏನು?</strong><br /> ಪ್ರಮುಖವಾಗಿ ಶಾಲಾ ಕೊಠಡಿಗಳು ದುಸ್ಥಿತಿಯಲ್ಲಿವೆ. ಆಂಧ್ರದ ಗಡಿ ಭಾಗದಲ್ಲಿರುವುದರಿಂದ ಕನ್ನಡ ಶಾಲೆಗಳ ಕಡೆಗೆ ಹೆಚ್ಚು ಗಮನ ಹರಿಸುವ ನಿಟ್ಟಿನಲ್ಲಿ ಕೊಠಡಿಗಳ ದುರಸ್ತಿಗಾಗಿ ಶ್ರಮಿಸುವೆ.ನನ್ನ ಕ್ಷೇತ್ರ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ವೇದಾವತಿ ನದಿ ಈ ಭಾಗದಲ್ಲಿ ಹರಿಯುತ್ತಿದ್ದರೂ ಈ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಈ ವಿಷಯದ ಬಗ್ಗೆ ಹೆಚ್ಚು ಗಮನ ನೀಡಲಾಗುವುದು. ಇನ್ನೂ ತಾಲ್ಲೂಕಿನಿಂದ ದೂರದಲ್ಲಿರುವ ಓಬಳಾಪುರ, ತಿಪ್ಪೆರೆಡ್ಡಿಹಳ್ಳಿ ರಸ್ತೆ ಹದಗೆಟ್ಟಿವೆ. ಚುನಾವಣೆ ಸಮಯದಲ್ಲಿ ಈ ರಸ್ತೆಯಲ್ಲಿ ವಾಹನಗಳಲ್ಲಿ ಪ್ರಚಾರಕ್ಕೆ ಹೋಗುವ ಸಂದರ್ಭದಲ್ಲಿಯೇ ನನ್ನನ್ನು ಕಾಡಿದ ಮೊದಲ ಸಮಸ್ಯೆ ಇದಾಗಿತ್ತು.<br /> <br /> <strong>* ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಏನು ಕ್ರಮ ಕೈಗೊಳ್ಳುತ್ತೀರಿ?<br /> </strong>ನಮ್ಮ ಕ್ಷೇತ್ರ ಜಾಜೂರು ವೇದಾವತಿ ನದಿ ದಂಡೆ ಮೇಲಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು ಸುಲಭವಾಗಿದೆ. ಯಾವ ಹಳ್ಳಿಗಳಲ್ಲಿ ಕುಡಿಯುವ ನೀರಿನ ಬವಣೆ ಇದೆ ಎಂಬುದನ್ನು ಈಗಾಗಲೇ ತಿಳಿದಿದ್ದೇನೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ಕೆ ಮುಂದಾಗುತ್ತೇನೆ. ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಯೋಜನೆ ರೂಪಿಸುತ್ತೇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>