<p><strong>ಬೆಂಗಳೂರು:</strong> ಉತ್ತರ ಭಾಗದಿಂದ ಬರುತ್ತಿರುವ ಚಳಿಗಾಲದ ಮಾರುತಗಳು ಮತ್ತು ದಕ್ಷಿಣದಿಂದ ಬೀಸುತ್ತಿರುವ ತೇವಾಂಶ ಭರಿತ ಮಾರುತಗಳ ಸಂಘರ್ಷದಿಂದ ರಾಜ್ಯದಲ್ಲಿ ಕೆಲವೆಡೆ ಅಕಾಲಿಕ ಮಳೆ ಕಾಣಿಸಿಕೊಂಡಿದೆ ಎನ್ನುವುದು ಹವಾಮಾನ ತಜ್ಞರ ಅಭಿಮತ.<br /> <br /> ‘ಉತ್ತರದ ದೇಶಗಳಿಂದ ಚಳಿ ಮಾರುತಗಳು ಪಶ್ಚಿಮದಿಂದ ಪೂರ್ವದೆಡೆಗೆ ಚಲಿಸುತ್ತಿವೆ. ದಕ್ಷಿಣ ಭಾರತದಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡು ತೇವಾಂಶವಿರುವ ಮಾರುತಗಳು ಪೂರ್ವದಿಂದ ಪಶ್ಚಿಮದತ್ತ ಸಾಗುತ್ತಿವೆ. ಈ ಎರಡು ಮಾರುತಗಳ ಸಂಘರ್ಷದಿಂದಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಕೆಲ ಪ್ರದೇಶಗಳಲ್ಲಿ ಸಾಧಾರಣ ಮಳೆ ಕಾಣಿಸಿಕೊಂಡಿದೆ’ ಎಂದು ಹವಾಮಾನ ಇಲಾಖೆ ನಿವೃತ್ತ ನಿರ್ದೇಶಕ ಬಿ.ಪುಟ್ಟಣ್ಣ ಹೇಳಿದರು.<br /> <br /> ‘ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ತಮಿಳುನಾಡಿಗೆ ಹೊಂದಿಕೊಂಡಂತೆ ಸಮುದ್ರಮಟ್ಟದಿಂದ ಒಂದೂವರೆ ಕಿ.ಮೀ ಎತ್ತರದವರೆಗೆ ಮಂಗಳವಾರ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿತ್ತು. ಇದರಿಂದ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಬೆಂಗಳೂರು, ತುಮಕೂರು ಸುತ್ತಮುತ್ತ ಅಕಾಲಿಕ ಮಳೆ ಸುರಿದಿದೆ’ ಎಂದು ತಿಳಿಸಿದರು.<br /> <br /> ‘ಚಳಿಗಾಲದಲ್ಲಿ ಮಳೆ ಸುರಿಯುವುದು ಅಪರೂಪದ ಸಂಗತಿಯೇನಲ್ಲ. ಐದು ವರ್ಷಕ್ಕೊಮ್ಮೆ ಇಂತಹ ವಿದ್ಯಮಾನ ನಡೆಯುತ್ತಿರುತ್ತದೆ. ಸಾಮಾನ್ಯವಾಗಿ ಅಕಾಲಿಕ ಮಳೆ ಫೆಬ್ರುವರಿ ತಿಂಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಬಾರಿ ಅದು ಜನವರಿಯಲ್ಲಿ ಬಿದ್ದಿದೆ’ ಎಂದರು.<br /> <br /> <strong>ಹೆಚ್ಚಾದರೆ ವ್ಯತಿರಿಕ್ತ ಪರಿಣಾಮ:</strong> ‘ವಾತಾವರಣ ಒತ್ತಡ ವ್ಯತ್ಯಾಸದಿಂದ ಈ ಅಕಾಲಿಕ ಮಳೆ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಇದು ಬಹಳ ದಿನ ಇರುವುದಿಲ್ಲ. ಒಂದೊಮ್ಮೆ, ತುಂಬಾ ದಿನ ಕಾಣಿಸಿಕೊಂಡರೆ ಅದು ಮುಂಬರುವ ಮಳೆಗಾಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹವಾಮಾನ ತಜ್ಞ ಎಂ.ಬಿ. ರಾಜೇಗೌಡ ಹೇಳಿದರು.<br /> <br /> <strong>ಮೂರು ದಿನ ಮಳೆ ಸಾಧ್ಯತೆ</strong><br /> ‘ನಗರದಲ್ಲಿ ಗುರುವಾರದಿಂದ ಮೂರು ದಿನ ಮಳೆ ಸುರಿಯುವ ಸಾಧ್ಯತೆ ಇದೆ’ ಭಾರತೀಯ ಹವಾ ಮಾನ ಇಲಾಖೆ ಅಧಿಕಾರಿಗಳು ತಿಳಿಸಿದರು. ‘ಬುಧವಾರ ನಗರದಲ್ಲಿ 4.4 ಮಿ.ಮೀ, ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 5.2 ಮಿ.ಮೀ ಮತ್ತು ಯಲಹಂಕದಲ್ಲಿ 1.2 ಮಿ.ಮೀ ಮಳೆಯಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಉತ್ತರ ಭಾಗದಿಂದ ಬರುತ್ತಿರುವ ಚಳಿಗಾಲದ ಮಾರುತಗಳು ಮತ್ತು ದಕ್ಷಿಣದಿಂದ ಬೀಸುತ್ತಿರುವ ತೇವಾಂಶ ಭರಿತ ಮಾರುತಗಳ ಸಂಘರ್ಷದಿಂದ ರಾಜ್ಯದಲ್ಲಿ ಕೆಲವೆಡೆ ಅಕಾಲಿಕ ಮಳೆ ಕಾಣಿಸಿಕೊಂಡಿದೆ ಎನ್ನುವುದು ಹವಾಮಾನ ತಜ್ಞರ ಅಭಿಮತ.<br /> <br /> ‘ಉತ್ತರದ ದೇಶಗಳಿಂದ ಚಳಿ ಮಾರುತಗಳು ಪಶ್ಚಿಮದಿಂದ ಪೂರ್ವದೆಡೆಗೆ ಚಲಿಸುತ್ತಿವೆ. ದಕ್ಷಿಣ ಭಾರತದಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡು ತೇವಾಂಶವಿರುವ ಮಾರುತಗಳು ಪೂರ್ವದಿಂದ ಪಶ್ಚಿಮದತ್ತ ಸಾಗುತ್ತಿವೆ. ಈ ಎರಡು ಮಾರುತಗಳ ಸಂಘರ್ಷದಿಂದಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಕೆಲ ಪ್ರದೇಶಗಳಲ್ಲಿ ಸಾಧಾರಣ ಮಳೆ ಕಾಣಿಸಿಕೊಂಡಿದೆ’ ಎಂದು ಹವಾಮಾನ ಇಲಾಖೆ ನಿವೃತ್ತ ನಿರ್ದೇಶಕ ಬಿ.ಪುಟ್ಟಣ್ಣ ಹೇಳಿದರು.<br /> <br /> ‘ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ತಮಿಳುನಾಡಿಗೆ ಹೊಂದಿಕೊಂಡಂತೆ ಸಮುದ್ರಮಟ್ಟದಿಂದ ಒಂದೂವರೆ ಕಿ.ಮೀ ಎತ್ತರದವರೆಗೆ ಮಂಗಳವಾರ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿತ್ತು. ಇದರಿಂದ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಬೆಂಗಳೂರು, ತುಮಕೂರು ಸುತ್ತಮುತ್ತ ಅಕಾಲಿಕ ಮಳೆ ಸುರಿದಿದೆ’ ಎಂದು ತಿಳಿಸಿದರು.<br /> <br /> ‘ಚಳಿಗಾಲದಲ್ಲಿ ಮಳೆ ಸುರಿಯುವುದು ಅಪರೂಪದ ಸಂಗತಿಯೇನಲ್ಲ. ಐದು ವರ್ಷಕ್ಕೊಮ್ಮೆ ಇಂತಹ ವಿದ್ಯಮಾನ ನಡೆಯುತ್ತಿರುತ್ತದೆ. ಸಾಮಾನ್ಯವಾಗಿ ಅಕಾಲಿಕ ಮಳೆ ಫೆಬ್ರುವರಿ ತಿಂಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಬಾರಿ ಅದು ಜನವರಿಯಲ್ಲಿ ಬಿದ್ದಿದೆ’ ಎಂದರು.<br /> <br /> <strong>ಹೆಚ್ಚಾದರೆ ವ್ಯತಿರಿಕ್ತ ಪರಿಣಾಮ:</strong> ‘ವಾತಾವರಣ ಒತ್ತಡ ವ್ಯತ್ಯಾಸದಿಂದ ಈ ಅಕಾಲಿಕ ಮಳೆ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಇದು ಬಹಳ ದಿನ ಇರುವುದಿಲ್ಲ. ಒಂದೊಮ್ಮೆ, ತುಂಬಾ ದಿನ ಕಾಣಿಸಿಕೊಂಡರೆ ಅದು ಮುಂಬರುವ ಮಳೆಗಾಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹವಾಮಾನ ತಜ್ಞ ಎಂ.ಬಿ. ರಾಜೇಗೌಡ ಹೇಳಿದರು.<br /> <br /> <strong>ಮೂರು ದಿನ ಮಳೆ ಸಾಧ್ಯತೆ</strong><br /> ‘ನಗರದಲ್ಲಿ ಗುರುವಾರದಿಂದ ಮೂರು ದಿನ ಮಳೆ ಸುರಿಯುವ ಸಾಧ್ಯತೆ ಇದೆ’ ಭಾರತೀಯ ಹವಾ ಮಾನ ಇಲಾಖೆ ಅಧಿಕಾರಿಗಳು ತಿಳಿಸಿದರು. ‘ಬುಧವಾರ ನಗರದಲ್ಲಿ 4.4 ಮಿ.ಮೀ, ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 5.2 ಮಿ.ಮೀ ಮತ್ತು ಯಲಹಂಕದಲ್ಲಿ 1.2 ಮಿ.ಮೀ ಮಳೆಯಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>