<p>ನೃತ್ಯಕುಟೀರದ ಕಲಾವಿದರು ಬುಧವಾರ (ಜು.4) ಎ.ಡಿ.ಎ. ರಂಗಮಂದಿರದಲ್ಲಿ ಅಭಿನಯಿಸಿದ ಕೀಚಕ ನೃತ್ಯನಾಟಕ ಪ್ರೇಕ್ಷಕರನ್ನು ಮನಸೂರೆಗೊಳಿಸಿತು.<br /> ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, ಪ್ರವೃತ್ತಿಯಲ್ಲಿ ಕಲಾವಿದರಾಗಿರುವ ಎಸ್. ನಾಗಭೂಷಣ್ ಅವರು ಈ ನಾಟಕವನ್ನು ನೃತ್ಯರೂಪಕ್ಕೆ ತಂದಿದ್ದಾರೆ. ಜಿ.ಪಿ. ರಾಜರತ್ನಂ ನಾಟಕ ರಚಿಸಿದ್ದಾರೆ. <br /> <br /> ನೃತ್ಯನಾಟಕದ ಚೊಚ್ಚಲ ಪ್ರದರ್ಶನ ಇದಾಗಿತ್ತು. ಇಸ್ಮಾಯಿಲ್ ಗೋನಾಳ್ ಅವರ ಸಂಗೀತ ಸಂಯೊಜನೆ ಹಾಗೂ ದೀಪಾಭಟ್ ನಿರ್ದೇಶನದಲ್ಲಿ ನೃತ್ಯಕುಟೀರದ ಕಲಾವಿದರು ಪ್ರದರ್ಶಿಸಿದ ಕೀಚಕ ನೃತ್ಯರೂಪಕ ಅಮೋಘವಾಗಿ ಮೂಡಿಬಂತು. <br /> <br /> ಪ್ರೇಕ್ಷಕರ ಕರತಾಡನದ ಪ್ರೋತ್ಸಾಹಕ್ಕೆ ಪಾತ್ರವಾಯಿತು. ಕಲಾವಿದರ ಉನ್ನತ ಮಟ್ಟದ ಅಭಿನಯ, ವೇಷಭೂಷಣ, ರಂಗಸಜ್ಜಿಕೆ, ಬೆಳಕು ವಿನ್ಯಾಸ ಹಾಗೂ ಹಿನ್ನೆಲೆಯಲ್ಲಿ ಮೂಡಿಬಂದ ವಿವಿಧ ದೃಶ್ಯಾವಳಿಗಳು ನಾಟಕದ ಯಶಸ್ಸಿಗೆ ಪೂರಕವಾಗಿತ್ತು. <br /> <br /> ಕೀಚಕ ಪಾತ್ರದಲ್ಲಿ ನಾಗರಾಜ್ ರಾಜ್, ಭೀಮನಾಗಿ ಪವನ್ ಕುಮಾರ್, ಸುದೀಷ್ಣೆಯಾಗಿ ಅರ್ಚನಾ ಶ್ಯಾಮ್, ಸೈರಂದ್ರಿಯಾಗಿ ಭವಾನಿ, ಉತ್ತರೆಯಾಗಿ ಅಂಬಿಕಾ ಜನರನ್ನು ರಂಜಿಸುವಲ್ಲಿ ಯಶಸ್ವಿಯಾದರು. <br /> <br /> ರಂಗಭೂಮಿ ಹಿರಿಯ ಕಲಾವಿದೆ ಭಾರ್ಗವಿ ನಾರಾಯಣ್ ಹಾಗೂ ಕೂಚಿಪೂಡಿ ನೃತ್ಯಗಾರ್ತಿ ವಿದುಷಿ ವೀಣಾಮೂರ್ತಿ ವಿಜಯ್ ಅತಿಥಿಗಳಾಗಿ ಆಗಮಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನೃತ್ಯಕುಟೀರದ ಕಲಾವಿದರು ಬುಧವಾರ (ಜು.4) ಎ.ಡಿ.ಎ. ರಂಗಮಂದಿರದಲ್ಲಿ ಅಭಿನಯಿಸಿದ ಕೀಚಕ ನೃತ್ಯನಾಟಕ ಪ್ರೇಕ್ಷಕರನ್ನು ಮನಸೂರೆಗೊಳಿಸಿತು.<br /> ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, ಪ್ರವೃತ್ತಿಯಲ್ಲಿ ಕಲಾವಿದರಾಗಿರುವ ಎಸ್. ನಾಗಭೂಷಣ್ ಅವರು ಈ ನಾಟಕವನ್ನು ನೃತ್ಯರೂಪಕ್ಕೆ ತಂದಿದ್ದಾರೆ. ಜಿ.ಪಿ. ರಾಜರತ್ನಂ ನಾಟಕ ರಚಿಸಿದ್ದಾರೆ. <br /> <br /> ನೃತ್ಯನಾಟಕದ ಚೊಚ್ಚಲ ಪ್ರದರ್ಶನ ಇದಾಗಿತ್ತು. ಇಸ್ಮಾಯಿಲ್ ಗೋನಾಳ್ ಅವರ ಸಂಗೀತ ಸಂಯೊಜನೆ ಹಾಗೂ ದೀಪಾಭಟ್ ನಿರ್ದೇಶನದಲ್ಲಿ ನೃತ್ಯಕುಟೀರದ ಕಲಾವಿದರು ಪ್ರದರ್ಶಿಸಿದ ಕೀಚಕ ನೃತ್ಯರೂಪಕ ಅಮೋಘವಾಗಿ ಮೂಡಿಬಂತು. <br /> <br /> ಪ್ರೇಕ್ಷಕರ ಕರತಾಡನದ ಪ್ರೋತ್ಸಾಹಕ್ಕೆ ಪಾತ್ರವಾಯಿತು. ಕಲಾವಿದರ ಉನ್ನತ ಮಟ್ಟದ ಅಭಿನಯ, ವೇಷಭೂಷಣ, ರಂಗಸಜ್ಜಿಕೆ, ಬೆಳಕು ವಿನ್ಯಾಸ ಹಾಗೂ ಹಿನ್ನೆಲೆಯಲ್ಲಿ ಮೂಡಿಬಂದ ವಿವಿಧ ದೃಶ್ಯಾವಳಿಗಳು ನಾಟಕದ ಯಶಸ್ಸಿಗೆ ಪೂರಕವಾಗಿತ್ತು. <br /> <br /> ಕೀಚಕ ಪಾತ್ರದಲ್ಲಿ ನಾಗರಾಜ್ ರಾಜ್, ಭೀಮನಾಗಿ ಪವನ್ ಕುಮಾರ್, ಸುದೀಷ್ಣೆಯಾಗಿ ಅರ್ಚನಾ ಶ್ಯಾಮ್, ಸೈರಂದ್ರಿಯಾಗಿ ಭವಾನಿ, ಉತ್ತರೆಯಾಗಿ ಅಂಬಿಕಾ ಜನರನ್ನು ರಂಜಿಸುವಲ್ಲಿ ಯಶಸ್ವಿಯಾದರು. <br /> <br /> ರಂಗಭೂಮಿ ಹಿರಿಯ ಕಲಾವಿದೆ ಭಾರ್ಗವಿ ನಾರಾಯಣ್ ಹಾಗೂ ಕೂಚಿಪೂಡಿ ನೃತ್ಯಗಾರ್ತಿ ವಿದುಷಿ ವೀಣಾಮೂರ್ತಿ ವಿಜಯ್ ಅತಿಥಿಗಳಾಗಿ ಆಗಮಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>