<p>ಬಾಲಿವುಡ್ನ `ಮುತ್ತು~ ರಾಜ್ ಎಂದೇ ಹೆಸರಾಗಿರುವ ಇಮ್ರಾನ್ ಹಷ್ಮಿ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ.ಈ ಕ್ಷೇತ್ರದಲ್ಲಿ ಸುದೀರ್ಘ ಕಾಲ ನೆಲೆ ಕಾಣ ಬೇಕಿರುವುದರಿಂದ ಇದು ಅನಿವಾರ್ಯವಾಗಿದೆ. ಆದರೆ ತೀರ ಚಿತ್ರ ನಿರ್ಮಾಪಕರಿಗೆ ಹೊರೆಯಾಗುವಷ್ಟು ಸಂಭಾವನೆಯನ್ನಂತೂ ಹೆಚ್ಚಿಸುವುದಿಲ್ಲ ಎಂಬುದನ್ನು ಖಾತರಿಪಡಿಸಿದ್ದಾರೆ.<br /> <br /> ಈಗ ಸಂಭಾವನೆ ಎಷ್ಟಿದೆ, ಎಷ್ಟಕ್ಕೆ ಹೆಚ್ಚಿಸುತ್ತೀರಿ ಎಂಬ ಪ್ರಶ್ನೆಗೆ ಮಾತ್ರ ಉತ್ತರ ನೀಡದ ಹಷ್ಮಿ, ಇದೀಗ ಬದುಕಲು ಸಾಕಾಗುವಷ್ಟು ಸಂಭಾವನೆ ಇದೆ. ಉಳಿಸಲು ಬೇಕಾಗುವಷ್ಟು ಹೆಚ್ಚಿಸಲಿದ್ದೇನೆ ಎಂದು ಜಾಣ್ಮೆಯ ಉತ್ತರ ನೀಡಿದ್ದಾರೆ. ಸಂಭಾವನೆಯನ್ನು ಇದ್ದಕ್ಕಿದ್ದಂತೆ ಹುಚ್ಚಾಪಟ್ಟೆ ಏರಿಸುವ ನಟರನ್ನೂ ನಾನು ನೋಡಿದ್ದೇನೆ. <br /> <br /> ಅವರಿಂದ ಕಲಿತ ಪಾಠವೆಂದರೆ, ಸಿನಿಮಾರಂಗದಲ್ಲಿ ನೆಲೆಯೂರಬೇಕಾದರೆ ದರ ಏರಿಕೆಯನ್ನು ಕ್ರಮೇಣ ಮಾಡಬೇಕು ಎಂಬುದು. ದರ ಏರಿಕೆಯನ್ನು ಕೇವಲ ದಿನದ ಅಗತ್ಯಕ್ಕಾಗಿ ಮಾಡುತ್ತಿಲ್ಲ.<br /> <br /> ಸ್ಟಾರ್ ವ್ಯಾಲ್ಯು ಹೆಚ್ಚಿಸುತ್ತಲೇ ಇಲ್ಲಿ ನೆಲೆಯೂರುವ ತಂತ್ರ ಇದು ಎಂದೆಲ್ಲ ಮ್ಯಾನೆಜ್ಮೆಂಟ್ ಬಗ್ಗೆ ಇಮ್ರಾನ್ ಮಾತನಾಡಿದ್ದಾರೆ. ದಿವಾಕರ್ ಬ್ಯಾನರ್ಜಿ ಅವರ `ಶಾಂಘೈ~ ಚಿತ್ರದ ಸಿದ್ಧತೆಯಲ್ಲಿ ಇಮ್ರಾನ್ ನಿರತರಾಗಿದ್ದಾರೆ. ಇದರಲ್ಲಿ ಅವರು ನೀಲಿ ಚಿತ್ರ ತೆಗೆಯುವ ನಿರ್ಮಾಪಕನ ಪಾತ್ರ ನಿರ್ವಹಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾಲಿವುಡ್ನ `ಮುತ್ತು~ ರಾಜ್ ಎಂದೇ ಹೆಸರಾಗಿರುವ ಇಮ್ರಾನ್ ಹಷ್ಮಿ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ.ಈ ಕ್ಷೇತ್ರದಲ್ಲಿ ಸುದೀರ್ಘ ಕಾಲ ನೆಲೆ ಕಾಣ ಬೇಕಿರುವುದರಿಂದ ಇದು ಅನಿವಾರ್ಯವಾಗಿದೆ. ಆದರೆ ತೀರ ಚಿತ್ರ ನಿರ್ಮಾಪಕರಿಗೆ ಹೊರೆಯಾಗುವಷ್ಟು ಸಂಭಾವನೆಯನ್ನಂತೂ ಹೆಚ್ಚಿಸುವುದಿಲ್ಲ ಎಂಬುದನ್ನು ಖಾತರಿಪಡಿಸಿದ್ದಾರೆ.<br /> <br /> ಈಗ ಸಂಭಾವನೆ ಎಷ್ಟಿದೆ, ಎಷ್ಟಕ್ಕೆ ಹೆಚ್ಚಿಸುತ್ತೀರಿ ಎಂಬ ಪ್ರಶ್ನೆಗೆ ಮಾತ್ರ ಉತ್ತರ ನೀಡದ ಹಷ್ಮಿ, ಇದೀಗ ಬದುಕಲು ಸಾಕಾಗುವಷ್ಟು ಸಂಭಾವನೆ ಇದೆ. ಉಳಿಸಲು ಬೇಕಾಗುವಷ್ಟು ಹೆಚ್ಚಿಸಲಿದ್ದೇನೆ ಎಂದು ಜಾಣ್ಮೆಯ ಉತ್ತರ ನೀಡಿದ್ದಾರೆ. ಸಂಭಾವನೆಯನ್ನು ಇದ್ದಕ್ಕಿದ್ದಂತೆ ಹುಚ್ಚಾಪಟ್ಟೆ ಏರಿಸುವ ನಟರನ್ನೂ ನಾನು ನೋಡಿದ್ದೇನೆ. <br /> <br /> ಅವರಿಂದ ಕಲಿತ ಪಾಠವೆಂದರೆ, ಸಿನಿಮಾರಂಗದಲ್ಲಿ ನೆಲೆಯೂರಬೇಕಾದರೆ ದರ ಏರಿಕೆಯನ್ನು ಕ್ರಮೇಣ ಮಾಡಬೇಕು ಎಂಬುದು. ದರ ಏರಿಕೆಯನ್ನು ಕೇವಲ ದಿನದ ಅಗತ್ಯಕ್ಕಾಗಿ ಮಾಡುತ್ತಿಲ್ಲ.<br /> <br /> ಸ್ಟಾರ್ ವ್ಯಾಲ್ಯು ಹೆಚ್ಚಿಸುತ್ತಲೇ ಇಲ್ಲಿ ನೆಲೆಯೂರುವ ತಂತ್ರ ಇದು ಎಂದೆಲ್ಲ ಮ್ಯಾನೆಜ್ಮೆಂಟ್ ಬಗ್ಗೆ ಇಮ್ರಾನ್ ಮಾತನಾಡಿದ್ದಾರೆ. ದಿವಾಕರ್ ಬ್ಯಾನರ್ಜಿ ಅವರ `ಶಾಂಘೈ~ ಚಿತ್ರದ ಸಿದ್ಧತೆಯಲ್ಲಿ ಇಮ್ರಾನ್ ನಿರತರಾಗಿದ್ದಾರೆ. ಇದರಲ್ಲಿ ಅವರು ನೀಲಿ ಚಿತ್ರ ತೆಗೆಯುವ ನಿರ್ಮಾಪಕನ ಪಾತ್ರ ನಿರ್ವಹಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>