<p><strong>ಬೆಂಗಳೂರು: `</strong>ಆಧುನಿಕ ಜಾನಪದ ಗಾಯಕರು ಮೂಲ ಗಾಯಕರಲ್ಲಿನ ಸಾಮರ್ಥ್ಯ, ಶ್ರುತಿ ಜ್ಞಾನವನ್ನು ರೂಢಿಸಿಕೊಳ್ಳುವತ್ತ ಗಮನ ಹರಿಸಬೇಕು~ ಎಂದು ಜಾನಪದ ವಿದ್ವಾಂಸ ಡಾ.ಬಸವರಾಜ ಮಲಶೆಟ್ಟಿ ಕಿವಿಮಾತು ಹೇಳಿದರು.<br /> <br /> ಕರ್ನಾಟಕ ಜಾನಪದ ಅಕಾಡೆಮಿಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮೂಲ ಹಾಗೂ ಆಧುನಿಕ ಜಾನಪದ ಗಾಯಕರ ಪ್ರಥಮ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> `ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆಯಾದಂತೆ ಜಾನಪದದಲ್ಲೂ ಬದಲಾವಣೆಯಾಗಿದೆ. ಕಲಾ ಪ್ರಕಾರದಲ್ಲಾಗುವ ಬದಲಾವಣೆ ಪ್ರವಾಹವಿದ್ದಂತೆ. ಇದನ್ನು ತಡೆಯಲು ಸಾಧ್ಯವಿಲ್ಲ. ಹಾಗಾಗಿ ಬದಲಾವಣೆಯ ಬಗ್ಗೆ ವಿಮರ್ಶೆ ಮಾಡುವ ಅಗತ್ಯವಿಲ್ಲ. ಬದಲಾವಣೆಯನ್ನು ಒಪ್ಪಿಕೊಳ್ಳಬೇಕು~ ಎಂದರು.<br /> <br /> `ಹಳ್ಳಿಗಳು ಇಂದು ಬದಲಾಗಿವೆ. ಹಳ್ಳಿಗರ ಜೀವನ ಶೈಲಿಯೂ ಬದಲಾಗಿದೆ. ಪರಿಣಾಮವಾಗಿ ವೃತ್ತಿಪರ ಗಾಯಕರು ಒತ್ತಡಕ್ಕೆ ಒಳಗಾಗಿದ್ದಾರೆ. ಅವರಿಗೆ ಜನರನ್ನು ರಂಜಿಸಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಅವರು ಹೊಸ ಪ್ರಯೋಗ, ಹೊಸ ಸಾಹಿತ್ಯ ಸೃಷ್ಟಿಸುವತ್ತ ಗಮನ ಹರಿಸಬೇಕು~ ಎಂದು ಹೇಳಿದರು.<br /> <br /> `ಜಾನಪದ ಸಾಹಿತ್ಯಕ್ಕೆ ಹೊಸ ದಾಟಿ ನೀಡುವ ಪ್ರಯತ್ನ ಉತ್ತಮವಾಗಿದೆ. ಉದ್ದೇಶಿತ ಜಾನಪದ ವಿಶ್ವವಿದ್ಯಾಲಯದಲ್ಲಿ ಜಾನಪದ ಕಲೆಗಳ ದಾಖಲೀಕರಣ ಹಾಗೂ ಪರಿಷ್ಕರಣೆ ಕಾರ್ಯಕ್ಕೆ ಒತ್ತು ನೀಡಬೇಕು. ಇದರಿಂದ ಹೊಸಬರಿಗೆ ಅನುಕೂಲವಾಗಲಿದೆ~ ಎಂದರು.<br /> <br /> ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ, `ರಾಷ್ಟ್ರೀಯ ದೃಷ್ಟಿಯಿಲ್ಲದ ರಾಜಕಾರಣಿಗಳು, ಆಡಳಿತದ ಹೊಣೆಗಾರಿಕೆ ಅರಿಯದ ಅಧಿಕಾರಿಗಳು, ಪ್ರಜೆಗಳನ್ನು ಪೀಡಿಸುವ ಪೊಲೀಸರು, ಸಹಾಯದ ಗುಣವಿಲ್ಲದ ಶ್ರೀಮಂತರು, ವೃತ್ತಿ ಧರ್ಮವಿಲ್ಲದ ವೈದ್ಯರು, ಅಶ್ಲೀಲ ಅಭಿರುಚಿಯ ಕಲಾವಿದರು... ಹೀಗೆ ಎಲ್ಲ ಕ್ಷೇತ್ರಗಳೂ ಹದಗೆಟ್ಟಿರುವ ಪರಿಸ್ಥಿತಿಯಲ್ಲಿ ಜಾನಪದದಿಂದ ಮಾತ್ರ ತುಸು ನೆಮ್ಮದಿ ಸಿಗುತ್ತದೆ~ ಎಂದು ಹೇಳಿದರು.<br /> <br /> `ಜಾನಪದ ಕಲಾವಿದರಿಗೆ ಸಹನೆ ಇರಬೇಕು. ಯಾರ ಬಳಿಯೂ ಭಿಕ್ಷೆ ಬೇಡುವ ಅಗತ್ಯವಿಲ್ಲ. ಕಲಾವಿದರಿಗೂ ಒಳ್ಳೆಯ ಕಾಲ ಬರುತ್ತದೆ. ಕಲಾವಿದರು ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು~ ಎಂದು ಕಿವಿಮಾತು ಹೇಳಿದರು.<br /> <br /> ಮೈಸೂರು ರಂಗಾಯಣದ ನಿರ್ದೇಶಕ ಡಾ.ಬಿ.ವಿ. ರಾಜಾರಾಂ, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ವೀರೇಶ್ ಬಳ್ಳಾರಿ, ಅಕಾಡೆಮಿಯ ರಿಜಿಸ್ಟ್ರಾರ್ ಬಿ.ಎನ್. ಪರಡ್ಡಿ, ಸದಸ್ಯ ಸಂಚಾಲಕ ಎಂ.ಕೆ. ಸಿದ್ಧರಾಜು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: `</strong>ಆಧುನಿಕ ಜಾನಪದ ಗಾಯಕರು ಮೂಲ ಗಾಯಕರಲ್ಲಿನ ಸಾಮರ್ಥ್ಯ, ಶ್ರುತಿ ಜ್ಞಾನವನ್ನು ರೂಢಿಸಿಕೊಳ್ಳುವತ್ತ ಗಮನ ಹರಿಸಬೇಕು~ ಎಂದು ಜಾನಪದ ವಿದ್ವಾಂಸ ಡಾ.ಬಸವರಾಜ ಮಲಶೆಟ್ಟಿ ಕಿವಿಮಾತು ಹೇಳಿದರು.<br /> <br /> ಕರ್ನಾಟಕ ಜಾನಪದ ಅಕಾಡೆಮಿಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮೂಲ ಹಾಗೂ ಆಧುನಿಕ ಜಾನಪದ ಗಾಯಕರ ಪ್ರಥಮ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> `ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆಯಾದಂತೆ ಜಾನಪದದಲ್ಲೂ ಬದಲಾವಣೆಯಾಗಿದೆ. ಕಲಾ ಪ್ರಕಾರದಲ್ಲಾಗುವ ಬದಲಾವಣೆ ಪ್ರವಾಹವಿದ್ದಂತೆ. ಇದನ್ನು ತಡೆಯಲು ಸಾಧ್ಯವಿಲ್ಲ. ಹಾಗಾಗಿ ಬದಲಾವಣೆಯ ಬಗ್ಗೆ ವಿಮರ್ಶೆ ಮಾಡುವ ಅಗತ್ಯವಿಲ್ಲ. ಬದಲಾವಣೆಯನ್ನು ಒಪ್ಪಿಕೊಳ್ಳಬೇಕು~ ಎಂದರು.<br /> <br /> `ಹಳ್ಳಿಗಳು ಇಂದು ಬದಲಾಗಿವೆ. ಹಳ್ಳಿಗರ ಜೀವನ ಶೈಲಿಯೂ ಬದಲಾಗಿದೆ. ಪರಿಣಾಮವಾಗಿ ವೃತ್ತಿಪರ ಗಾಯಕರು ಒತ್ತಡಕ್ಕೆ ಒಳಗಾಗಿದ್ದಾರೆ. ಅವರಿಗೆ ಜನರನ್ನು ರಂಜಿಸಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಅವರು ಹೊಸ ಪ್ರಯೋಗ, ಹೊಸ ಸಾಹಿತ್ಯ ಸೃಷ್ಟಿಸುವತ್ತ ಗಮನ ಹರಿಸಬೇಕು~ ಎಂದು ಹೇಳಿದರು.<br /> <br /> `ಜಾನಪದ ಸಾಹಿತ್ಯಕ್ಕೆ ಹೊಸ ದಾಟಿ ನೀಡುವ ಪ್ರಯತ್ನ ಉತ್ತಮವಾಗಿದೆ. ಉದ್ದೇಶಿತ ಜಾನಪದ ವಿಶ್ವವಿದ್ಯಾಲಯದಲ್ಲಿ ಜಾನಪದ ಕಲೆಗಳ ದಾಖಲೀಕರಣ ಹಾಗೂ ಪರಿಷ್ಕರಣೆ ಕಾರ್ಯಕ್ಕೆ ಒತ್ತು ನೀಡಬೇಕು. ಇದರಿಂದ ಹೊಸಬರಿಗೆ ಅನುಕೂಲವಾಗಲಿದೆ~ ಎಂದರು.<br /> <br /> ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ, `ರಾಷ್ಟ್ರೀಯ ದೃಷ್ಟಿಯಿಲ್ಲದ ರಾಜಕಾರಣಿಗಳು, ಆಡಳಿತದ ಹೊಣೆಗಾರಿಕೆ ಅರಿಯದ ಅಧಿಕಾರಿಗಳು, ಪ್ರಜೆಗಳನ್ನು ಪೀಡಿಸುವ ಪೊಲೀಸರು, ಸಹಾಯದ ಗುಣವಿಲ್ಲದ ಶ್ರೀಮಂತರು, ವೃತ್ತಿ ಧರ್ಮವಿಲ್ಲದ ವೈದ್ಯರು, ಅಶ್ಲೀಲ ಅಭಿರುಚಿಯ ಕಲಾವಿದರು... ಹೀಗೆ ಎಲ್ಲ ಕ್ಷೇತ್ರಗಳೂ ಹದಗೆಟ್ಟಿರುವ ಪರಿಸ್ಥಿತಿಯಲ್ಲಿ ಜಾನಪದದಿಂದ ಮಾತ್ರ ತುಸು ನೆಮ್ಮದಿ ಸಿಗುತ್ತದೆ~ ಎಂದು ಹೇಳಿದರು.<br /> <br /> `ಜಾನಪದ ಕಲಾವಿದರಿಗೆ ಸಹನೆ ಇರಬೇಕು. ಯಾರ ಬಳಿಯೂ ಭಿಕ್ಷೆ ಬೇಡುವ ಅಗತ್ಯವಿಲ್ಲ. ಕಲಾವಿದರಿಗೂ ಒಳ್ಳೆಯ ಕಾಲ ಬರುತ್ತದೆ. ಕಲಾವಿದರು ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು~ ಎಂದು ಕಿವಿಮಾತು ಹೇಳಿದರು.<br /> <br /> ಮೈಸೂರು ರಂಗಾಯಣದ ನಿರ್ದೇಶಕ ಡಾ.ಬಿ.ವಿ. ರಾಜಾರಾಂ, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ವೀರೇಶ್ ಬಳ್ಳಾರಿ, ಅಕಾಡೆಮಿಯ ರಿಜಿಸ್ಟ್ರಾರ್ ಬಿ.ಎನ್. ಪರಡ್ಡಿ, ಸದಸ್ಯ ಸಂಚಾಲಕ ಎಂ.ಕೆ. ಸಿದ್ಧರಾಜು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>