<p><strong>ಹೊಸಪೇಟೆ</strong>: ಹಂಪಿ ಕನ್ನಡ ವಿಶ್ವ ವಿದ್ಯಾಲಯದ ‘ಅಕ್ಷರ’ ಗ್ರಂಥಾಲಯದ ಆವರಣದಲ್ಲಿ ಶನಿವಾರ ಸಂಜೆ ನಡೆದ ಸರಳ ಸಮಾರಂಭದಲ್ಲಿ ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ, ನಿವೃತ್ತ ನ್ಯಾಯಾಧೀಶ ಕೋ.ಚೆನ್ನಬಸಪ್ಪ ಹಾಗೂ ಖ್ಯಾತ ವಿಜ್ಞಾನಿ ಹಾಗೂ ಇಸ್ರೊ ಬಾಹ್ಯಾಕಾಶದ ನಿರ್ದೇಶಕ ಎಸ್.ಕೆ.ಶಿವಕುಮಾರ ಅವರಿಗೆ ‘ನಾಡೋಜ’ ಗೌರವ ಪ್ರದಾನ ಮಾಡಲಾಯಿತು.<br /> <br /> ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರ ಗೈರು ಹಾಜರಿಯಲ್ಲಿ ನಡೆದ ವಿಶ್ವವಿದ್ಯಾಲಯದ 22ನೇ ನುಡಿಹಬ್ಬದ ಸರಳ ಸಮಾರಂಭದಲ್ಲಿ ಕುಲಪತಿ ಡಾ. ಹಿ.ಚಿ.ಬೋರಲಿಂಗಯ್ಯ ಗೌರವ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.<br /> <br /> ನುಡಿಹಬ್ಬದ ಭಾಷಣ ಮಾಡಿದ ಅಂಕಣಕಾರ ನಾಗೇಶ ಹೆಗಡೆ, ‘ಖಾಸಗಿ ಕಂಪೆನಿಗಳು ತಮ್ಮ ಲಾಭಕ್ಕಾಗಿ ನಮ್ಮದೇ ವಿಜ್ಞಾನಿಗಳ ನೆರವಿನಿಂದ ಸಂಶೋಧನೆಯ ಹೆಸರಿನಲ್ಲಿ ತಳಿಗಣಿಗಾರಿಕೆ ನಡೆಸುತ್ತಿವೆ. ವಿಜ್ಞಾನದ ಫಲವನ್ನು ಲೋಕಕಲ್ಯಾಣಕ್ಕೆ ಅರ್ಪಿಸುವ ಕಾಲ ಎಂದೋ ಕಣ್ಮರೆಯಾಗಿದ್ದು, ಇಂದು ವಿಜ್ಞಾನ ಎಂದರೆ ಅಧಿಕಾರಶಾಹಿಗಳ, ಬಹುರಾಷ್ಟ್ರೀಯ ಕಂಪೆನಿಗಳ ಲಾಭಕ್ಕಾಗಿ ಹಾಗೂ ಸೇವೆಗಾಗಿ ಮುಡಿಪಾಗಿಡುವ ಜ್ಞಾನ ಶಾಖೆಯಾಗಿ ಮಾರ್ಪಟ್ಟಿದೆ’ ಎಂದು ವಿಷಾದಿಸಿದರು.<br /> <br /> ‘ವಿದ್ಯೆಯನ್ನು ಸೃಷ್ಟಿಸುವ ವಿಶ್ವವಿದ್ಯಾಲಯ ಎಂದೇ ಕರೆಯಲಾಗುವ ಈ ಸಂಸ್ಥೆ ಅಸಾಂಪ್ರದಾಯಿಕ ವಿಜ್ಞಾನವನ್ನೂ ಪೋಷಿಸುವ, ದೇಶೀಯ ಜ್ಞಾನವನ್ನು ಸೃಷ್ಟಿಸುವ ಸಂಸ್ಥೆಯಾಗಿ ಆಧುನಿಕ ವಿಜ್ಞಾನಕ್ಕೆ ಹೊಸ ಪಾಠ ಹೇಳಬೇಕಿದೆ’ ಎಂದು ಅವರು ಹೇಳಿದರು.<br /> <br /> ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ ಸ್ವಾಗತ ಭಾಷಣ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ</strong>: ಹಂಪಿ ಕನ್ನಡ ವಿಶ್ವ ವಿದ್ಯಾಲಯದ ‘ಅಕ್ಷರ’ ಗ್ರಂಥಾಲಯದ ಆವರಣದಲ್ಲಿ ಶನಿವಾರ ಸಂಜೆ ನಡೆದ ಸರಳ ಸಮಾರಂಭದಲ್ಲಿ ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ, ನಿವೃತ್ತ ನ್ಯಾಯಾಧೀಶ ಕೋ.ಚೆನ್ನಬಸಪ್ಪ ಹಾಗೂ ಖ್ಯಾತ ವಿಜ್ಞಾನಿ ಹಾಗೂ ಇಸ್ರೊ ಬಾಹ್ಯಾಕಾಶದ ನಿರ್ದೇಶಕ ಎಸ್.ಕೆ.ಶಿವಕುಮಾರ ಅವರಿಗೆ ‘ನಾಡೋಜ’ ಗೌರವ ಪ್ರದಾನ ಮಾಡಲಾಯಿತು.<br /> <br /> ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರ ಗೈರು ಹಾಜರಿಯಲ್ಲಿ ನಡೆದ ವಿಶ್ವವಿದ್ಯಾಲಯದ 22ನೇ ನುಡಿಹಬ್ಬದ ಸರಳ ಸಮಾರಂಭದಲ್ಲಿ ಕುಲಪತಿ ಡಾ. ಹಿ.ಚಿ.ಬೋರಲಿಂಗಯ್ಯ ಗೌರವ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.<br /> <br /> ನುಡಿಹಬ್ಬದ ಭಾಷಣ ಮಾಡಿದ ಅಂಕಣಕಾರ ನಾಗೇಶ ಹೆಗಡೆ, ‘ಖಾಸಗಿ ಕಂಪೆನಿಗಳು ತಮ್ಮ ಲಾಭಕ್ಕಾಗಿ ನಮ್ಮದೇ ವಿಜ್ಞಾನಿಗಳ ನೆರವಿನಿಂದ ಸಂಶೋಧನೆಯ ಹೆಸರಿನಲ್ಲಿ ತಳಿಗಣಿಗಾರಿಕೆ ನಡೆಸುತ್ತಿವೆ. ವಿಜ್ಞಾನದ ಫಲವನ್ನು ಲೋಕಕಲ್ಯಾಣಕ್ಕೆ ಅರ್ಪಿಸುವ ಕಾಲ ಎಂದೋ ಕಣ್ಮರೆಯಾಗಿದ್ದು, ಇಂದು ವಿಜ್ಞಾನ ಎಂದರೆ ಅಧಿಕಾರಶಾಹಿಗಳ, ಬಹುರಾಷ್ಟ್ರೀಯ ಕಂಪೆನಿಗಳ ಲಾಭಕ್ಕಾಗಿ ಹಾಗೂ ಸೇವೆಗಾಗಿ ಮುಡಿಪಾಗಿಡುವ ಜ್ಞಾನ ಶಾಖೆಯಾಗಿ ಮಾರ್ಪಟ್ಟಿದೆ’ ಎಂದು ವಿಷಾದಿಸಿದರು.<br /> <br /> ‘ವಿದ್ಯೆಯನ್ನು ಸೃಷ್ಟಿಸುವ ವಿಶ್ವವಿದ್ಯಾಲಯ ಎಂದೇ ಕರೆಯಲಾಗುವ ಈ ಸಂಸ್ಥೆ ಅಸಾಂಪ್ರದಾಯಿಕ ವಿಜ್ಞಾನವನ್ನೂ ಪೋಷಿಸುವ, ದೇಶೀಯ ಜ್ಞಾನವನ್ನು ಸೃಷ್ಟಿಸುವ ಸಂಸ್ಥೆಯಾಗಿ ಆಧುನಿಕ ವಿಜ್ಞಾನಕ್ಕೆ ಹೊಸ ಪಾಠ ಹೇಳಬೇಕಿದೆ’ ಎಂದು ಅವರು ಹೇಳಿದರು.<br /> <br /> ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ ಸ್ವಾಗತ ಭಾಷಣ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>