<p><strong>ಗೌರಿಬಿದನೂರು: </strong>ಬರದಿಂದ ತತ್ತರಿಸಿರುವ ತಾಲ್ಲೂಕಿನ ಡಿ.ಪಾಳ್ಯ ಗ್ರಾಮಸ್ಥರು ತಮ್ಮ ಬದುಕನ್ನು ಕಂಡುಕೊಳ್ಳುವುದರ ಜತೆ ಜಾನುವಾರುಗಳನ್ನು ಸಾಕಲು ಆಗುತ್ತಿಲ್ಲ.ದನ, ಹಸು, ಕರು. ಕುರಿ, ಮೇಕೆಗಳನ್ನು ಸಾಕುವುದು ಕಷ್ಟವಾಗಿದೆ. ಮೇವು ಸಿಗದಾಗಿದ್ದು, ವಿವಿಧ ತಳಿಯ ಮರಗಳ ಸೊಪ್ಪು ಕಡಿದು ಹಾಕುತ್ತಿದ್ದಾರೆ. <br /> <br /> ರಸ್ತೆಯುದ್ದಕ್ಕೂ ಇರುವ ಸಾಲುಮರಗಳಿಂದ ಸೊಪ್ಪು ಕಡಿದುಕೊಂಡು ಬಂದು ಜಾನುವಾರು ರಕ್ಷಿಸುತ್ತಿದ್ದಾರೆ.<br /> ಮೇವು ಸಿಗದಿರುವುದರಿಂದ ಜಾನುವಾರುಗಳು ಊರು ಗ್ರಾಮಗಳನ್ನು ಹುಡುಕಿಕೊಂಡು ಹೊರಟಿದ್ದು ರಸ್ತೆಬದಿಗಳಲ್ಲಿ ಅರಣ್ಯ ಇಲಾಖೆ ಬೆಳೆಸಿರುವ ಗಿಡಮರಗಳನ್ನು ತಿನ್ನುತ್ತಿವೆ. ಕೆಲ ಕಡೆ ರೈತರೇ ರಸ್ತೆಬದಿಗಳಲ್ಲಿರುವ ಬೇವು, ಅರಳಿ, ಗೋಣಿಮರ, ಇತರ ಸಾಲುಮರಗಳ ರಂಬೆಕೊಂಬೆಗಳನ್ನು ಕಡಿದುಕೊಂಡು ಮನೆಗೆ ಒಯ್ದು ಜಾನುವಾರುಗಳಿಗೆ ತಿನ್ನಿಸುತ್ತಿದ್ದಾರೆ.<br /> <br /> ಒಂದು ಹೊತ್ತಿನ ಊಟಕ್ಕೂ ಕಷ್ಟಪಟ್ಟು ಜೀವನ ನಡೆಸುತ್ತಿರುವ ಗ್ರಾಮಸ್ಥರಿಗೆ ಈಗ ಜಾನುವಾರು ಸಾಕಣೆ ದುಸ್ತರ.ಅಗತ್ಯವಿದ್ದಷ್ಟು ಮೇವು ಹಾಕಲಾಗದೆ ನೀರನ್ನು ಕುಡಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಹೇಳಿದರು ರೈತ ಬಸವರಾಜ.<br /> <br /> `ಜಾನುವಾರು ಸಾಕಲು ನಮಗೆ ಮೇವು ಸಿಗುತ್ತಿಲ್ಲ. ವಿಧಿಯಿಲ್ಲದೆ ರಸ್ತೆಬದಿಗಳಲ್ಲಿರುವ ಮರಗಳನ್ನು ಕಡಿಯಬೇಕಾಗಿದೆ. ಮಳೆ ಬಾರದಿದ್ದರೆ, ಸಮಸ್ಯೆ ಇನ್ನಷ್ಟು ಗಂಭೀರವಾಗಲಿದೆ. ಬರಗಾಲ ಬಂದು ವರ್ಷವೇ ಕಳೆದರೂ ಇಲ್ಲಿ ಎಲ್ಲೂ ಮೇವು ಬ್ಯಾಂಕ್ ತೆರೆಯಲಾಗಿಲ್ಲ. <br /> <br /> ಅಗತ್ಯವಿರುವಷ್ಟು ಮೇವು ತಿನ್ನದ ಕಾರಣ ಹಸುಗಳು ಸಾಕಷ್ಟು ಪ್ರಮಾಣದಲ್ಲಿ ಹಾಲನ್ನು ನೀಡುತ್ತಿಲ್ಲ~ ಎಂದು ರೈತ ಬೈರೇಗೌಡ ನೊಂದು ನುಡಿದರು.ಮಳೆ ಬಾರದ ಕಾರಣ ಈಗಾಗಲೇ ಗ್ರಾಮದ ಯುವಕರು ಮಹಾನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ವೃದ್ಧರು ಗ್ರಾಮದಲ್ಲೇ ಜಾನುವಾರುಗಳಿಗಾಗಿ ಹಾಗೂ ಚಿಕ್ಕಮಕ್ಕಳಿಗಾಗಿ ಉಳಿಯಬೇಕಾಗಿದೆ.<br /> <br /> `ತಾಲ್ಲೂಕಿನಾದ್ಯಂತ ಬರಗಾಲ ವ್ಯಾಪಿಸಿರುವುದು ನಿಜ. ಆದರೆ ಅದನ್ನೇ ನೆಪವಾಗಿಸಿಕೊಂಡು ಗಿಡಮರಗಳನ್ನು ಕಡಿಯುವುದು ಸರಿಯಲ್ಲ. ಹೀಗೆ ಅನಾಯಸವಾಗಿ ಗಿಡಮರಗಳನ್ನು ಕಡಿದು ಹಾಕುತ್ತಿದ್ದರೆ ಅಥವಾ ಜಾನುವಾರುಗಳಿಗೆ ತಿನ್ನಿಸುತ್ತಿದ್ದರೆ, ಹಸಿರಾದ ಪರಿಸರ ಕಾಪಾಡುವುದಾದರೂ ಹೇಗೆ. ಸರ್ಕಾರವೇ ಇದಕ್ಕೆ ಹೊಣೆ~ ಎನ್ನುವುದು ಇಲ್ಲಿನ ಪರಿಸರವಾದಿಗಳ ಅನಿಸಿಕೆ.<br /> <br /> ಮೇವಿನ ಕೊರತೆಯಿದ್ದ ಕಡೆಯಲೆಲ್ಲ, ಮೇವನ್ನು ಪೂರೈಸಬೇಕು. ಹೋಬಳಿಗಳ ಮಟ್ಟದಲ್ಲಿ ಮೇವು ಬ್ಯಾಂಕುಗಳನ್ನು ಆರಂಭಿಸಿ, ಮೇವಿನ ಕೊರತೆ ತಲೆದೋರದಂತೆ ನೋಡಿಕೊಳ್ಳಬೇಕು. ಅರಣ್ಯ ಇಲಾಖೆಯ ಸಹಕಾರದಲ್ಲಿ ಈ ಕಾರ್ಯ ನಡೆಯಬೇಕು. ಗಿಡಮರಗಳನ್ನು ಕಡಿಯುವುದನ್ನು ತಡೆಗಟ್ಟಲು ಸರ್ಕಾರವು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು ಪರಿಸರವಾದಿ ಕೆ.ನಾರಾಯಣಸ್ವಾಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೌರಿಬಿದನೂರು: </strong>ಬರದಿಂದ ತತ್ತರಿಸಿರುವ ತಾಲ್ಲೂಕಿನ ಡಿ.ಪಾಳ್ಯ ಗ್ರಾಮಸ್ಥರು ತಮ್ಮ ಬದುಕನ್ನು ಕಂಡುಕೊಳ್ಳುವುದರ ಜತೆ ಜಾನುವಾರುಗಳನ್ನು ಸಾಕಲು ಆಗುತ್ತಿಲ್ಲ.ದನ, ಹಸು, ಕರು. ಕುರಿ, ಮೇಕೆಗಳನ್ನು ಸಾಕುವುದು ಕಷ್ಟವಾಗಿದೆ. ಮೇವು ಸಿಗದಾಗಿದ್ದು, ವಿವಿಧ ತಳಿಯ ಮರಗಳ ಸೊಪ್ಪು ಕಡಿದು ಹಾಕುತ್ತಿದ್ದಾರೆ. <br /> <br /> ರಸ್ತೆಯುದ್ದಕ್ಕೂ ಇರುವ ಸಾಲುಮರಗಳಿಂದ ಸೊಪ್ಪು ಕಡಿದುಕೊಂಡು ಬಂದು ಜಾನುವಾರು ರಕ್ಷಿಸುತ್ತಿದ್ದಾರೆ.<br /> ಮೇವು ಸಿಗದಿರುವುದರಿಂದ ಜಾನುವಾರುಗಳು ಊರು ಗ್ರಾಮಗಳನ್ನು ಹುಡುಕಿಕೊಂಡು ಹೊರಟಿದ್ದು ರಸ್ತೆಬದಿಗಳಲ್ಲಿ ಅರಣ್ಯ ಇಲಾಖೆ ಬೆಳೆಸಿರುವ ಗಿಡಮರಗಳನ್ನು ತಿನ್ನುತ್ತಿವೆ. ಕೆಲ ಕಡೆ ರೈತರೇ ರಸ್ತೆಬದಿಗಳಲ್ಲಿರುವ ಬೇವು, ಅರಳಿ, ಗೋಣಿಮರ, ಇತರ ಸಾಲುಮರಗಳ ರಂಬೆಕೊಂಬೆಗಳನ್ನು ಕಡಿದುಕೊಂಡು ಮನೆಗೆ ಒಯ್ದು ಜಾನುವಾರುಗಳಿಗೆ ತಿನ್ನಿಸುತ್ತಿದ್ದಾರೆ.<br /> <br /> ಒಂದು ಹೊತ್ತಿನ ಊಟಕ್ಕೂ ಕಷ್ಟಪಟ್ಟು ಜೀವನ ನಡೆಸುತ್ತಿರುವ ಗ್ರಾಮಸ್ಥರಿಗೆ ಈಗ ಜಾನುವಾರು ಸಾಕಣೆ ದುಸ್ತರ.ಅಗತ್ಯವಿದ್ದಷ್ಟು ಮೇವು ಹಾಕಲಾಗದೆ ನೀರನ್ನು ಕುಡಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಹೇಳಿದರು ರೈತ ಬಸವರಾಜ.<br /> <br /> `ಜಾನುವಾರು ಸಾಕಲು ನಮಗೆ ಮೇವು ಸಿಗುತ್ತಿಲ್ಲ. ವಿಧಿಯಿಲ್ಲದೆ ರಸ್ತೆಬದಿಗಳಲ್ಲಿರುವ ಮರಗಳನ್ನು ಕಡಿಯಬೇಕಾಗಿದೆ. ಮಳೆ ಬಾರದಿದ್ದರೆ, ಸಮಸ್ಯೆ ಇನ್ನಷ್ಟು ಗಂಭೀರವಾಗಲಿದೆ. ಬರಗಾಲ ಬಂದು ವರ್ಷವೇ ಕಳೆದರೂ ಇಲ್ಲಿ ಎಲ್ಲೂ ಮೇವು ಬ್ಯಾಂಕ್ ತೆರೆಯಲಾಗಿಲ್ಲ. <br /> <br /> ಅಗತ್ಯವಿರುವಷ್ಟು ಮೇವು ತಿನ್ನದ ಕಾರಣ ಹಸುಗಳು ಸಾಕಷ್ಟು ಪ್ರಮಾಣದಲ್ಲಿ ಹಾಲನ್ನು ನೀಡುತ್ತಿಲ್ಲ~ ಎಂದು ರೈತ ಬೈರೇಗೌಡ ನೊಂದು ನುಡಿದರು.ಮಳೆ ಬಾರದ ಕಾರಣ ಈಗಾಗಲೇ ಗ್ರಾಮದ ಯುವಕರು ಮಹಾನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ವೃದ್ಧರು ಗ್ರಾಮದಲ್ಲೇ ಜಾನುವಾರುಗಳಿಗಾಗಿ ಹಾಗೂ ಚಿಕ್ಕಮಕ್ಕಳಿಗಾಗಿ ಉಳಿಯಬೇಕಾಗಿದೆ.<br /> <br /> `ತಾಲ್ಲೂಕಿನಾದ್ಯಂತ ಬರಗಾಲ ವ್ಯಾಪಿಸಿರುವುದು ನಿಜ. ಆದರೆ ಅದನ್ನೇ ನೆಪವಾಗಿಸಿಕೊಂಡು ಗಿಡಮರಗಳನ್ನು ಕಡಿಯುವುದು ಸರಿಯಲ್ಲ. ಹೀಗೆ ಅನಾಯಸವಾಗಿ ಗಿಡಮರಗಳನ್ನು ಕಡಿದು ಹಾಕುತ್ತಿದ್ದರೆ ಅಥವಾ ಜಾನುವಾರುಗಳಿಗೆ ತಿನ್ನಿಸುತ್ತಿದ್ದರೆ, ಹಸಿರಾದ ಪರಿಸರ ಕಾಪಾಡುವುದಾದರೂ ಹೇಗೆ. ಸರ್ಕಾರವೇ ಇದಕ್ಕೆ ಹೊಣೆ~ ಎನ್ನುವುದು ಇಲ್ಲಿನ ಪರಿಸರವಾದಿಗಳ ಅನಿಸಿಕೆ.<br /> <br /> ಮೇವಿನ ಕೊರತೆಯಿದ್ದ ಕಡೆಯಲೆಲ್ಲ, ಮೇವನ್ನು ಪೂರೈಸಬೇಕು. ಹೋಬಳಿಗಳ ಮಟ್ಟದಲ್ಲಿ ಮೇವು ಬ್ಯಾಂಕುಗಳನ್ನು ಆರಂಭಿಸಿ, ಮೇವಿನ ಕೊರತೆ ತಲೆದೋರದಂತೆ ನೋಡಿಕೊಳ್ಳಬೇಕು. ಅರಣ್ಯ ಇಲಾಖೆಯ ಸಹಕಾರದಲ್ಲಿ ಈ ಕಾರ್ಯ ನಡೆಯಬೇಕು. ಗಿಡಮರಗಳನ್ನು ಕಡಿಯುವುದನ್ನು ತಡೆಗಟ್ಟಲು ಸರ್ಕಾರವು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು ಪರಿಸರವಾದಿ ಕೆ.ನಾರಾಯಣಸ್ವಾಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>