<p>ನವದೆಹಲಿ(ಪಿಟಿಐ): ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರನ್ನು ಮೂದಲಿಸಿದ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಸದಸ್ಯರ ಪ್ರತಿಭಟನೆಗೆ ಮಣಿದು ಕ್ಷಮೆಯಾಚಿಸಿದ ಘಟನೆ ಗುರುವಾರ ರಾಜ್ಯಸಭೆಯಲ್ಲಿ ನಡೆಯಿತು.<br /> <br /> ಶಿಂಧೆ ಆಡಿದ ಹಗುರ ಮಾತಿಗೆ ರಾಜ್ಯಸಭೆಯ ಅನೇಕ ಸದಸ್ಯರು ತಿರುಗಿಬಿದ್ದರು. ಸಚಿವರು ಕ್ಷಮೆ ಕೋರಿ, ತಮ್ಮ ಮೂದಲಿಕೆ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ತೀವ್ರವಾದಾಗ ಶಿಂಧೆ ಅನಿವಾರ್ಯವಾಗಿ ಕ್ಷಮೆ ಕೋರಬೇಕಾಯಿತು.<br /> <br /> ಅಸ್ಸಾಂ ಹಿಂಸಾಚಾರದ ಬಗ್ಗೆ ಗುರುವಾರ ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ಶಿಂಧೆ ಮಾತನಾಡುತ್ತಿದ್ದರು. ಆಗ ಜಯಾ ಬಚ್ಚನ್ ಅವರು, `ಸಚಿವರು ಸದಸ್ಯರ ನಿರ್ದಿಷ್ಟ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸುತ್ತಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.<br /> <br /> ತಮಗೆ ಅಡಚಣೆ ಉಂಟುಮಾಡಿದ ಜಯಾ ಬಚ್ಚನ್ ಅವರಿಗೆ ಶಿಂಧೆ, `ಇದು ತುಂಬ ಗಂಭೀರ ವಿಷಯ. ಸಿನಿಮಾ ಅಲ್ಲ~ ಎಂದು ಹಂಗಿಸುವಂತಹ ಮಾತುಗಳನ್ನು ಆಡಿದರು. ಬಾಲಿವುಡ್ ನಟಿಯೂ ಆಗಿರುವ ಜಯಾ ಬಚ್ಚನ್, ಸಚಿವರ ಮಾತಿಗೆ ಬಲವಾಗಿ ಆಕ್ಷೇಪಿಸಿದರು. ಇದಕ್ಕೆ ಇತರ ಅನೇಕ ಸದಸ್ಯರೂ ದನಿಗೂಡಿಸಿದರು. ಆಗ ಸದನದಲ್ಲಿ ಹುಯಿಲು ಎದ್ದಿತು.<br /> <br /> `ಜಯಾ ಬಚ್ಚನ್ ಶ್ರೇಷ್ಠ ನಟಿ. ಈ ಸದನದ ಸದಸ್ಯರು. ನೀವು (ಶಿಂಧೆ) ಗೃಹ ಸಚಿವರಾಗಿ ಅವರನ್ನು ಮೂದಲಿಸುವಂತಹ ಮಾತುಗಳನ್ನಾಡಿದ್ದು ಸರಿಯಲ್ಲ. ಕ್ಷಮೆ ಕೋರಿ, ಬಳಕೆ ಮಾಡಿದ ಪದ ಹಿಂದಕ್ಕೆ ಪಡೆಯಿರಿ~ ಎಂದು ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಒತ್ತಾಯಿಸಿದರು.<br /> <br /> ಈ ಒತ್ತಾಯಕ್ಕೆ ಮೊದಲು ಮಣಿಯದ ಶಿಂಧೆ, `ನಾನು ಮಾತನಾಡುತ್ತಿದ್ದಾಗ ಜಯಾ ಅವರು ಮಧ್ಯೆ ಬಾಯಿ ಹಾಕಿದ್ದು ಸರಿಯಾದ ಕ್ರಮವಲ್ಲ~ ಎಂದು ತಮ್ಮ ಮಾತುಗಳನ್ನು ಸಮರ್ಥಿಸಿಕೊಳ್ಳಲು ನೋಡಿದರು. ಆಗ ಜೇಟ್ಲಿ, ಅಧ್ಯಕ್ಷರ ಪೀಠದಲ್ಲಿ ಆಸೀನರಾಗಿದ್ದ ತಾರಿಕ್ ಅನ್ವರ್ ಅವರನ್ನು ಮಧ್ಯ ಪ್ರವೇಶಿಸಲು ಕೋರಿ; ಸಚಿವರು ತಾವಾಡಿದ ಮಾತನ್ನು ಹಿಂದಕ್ಕೆ ಪಡೆಯದಿದ್ದರೆ, ಅದನ್ನು ಕಡತದಿಂದ ತೆಗೆದುಹಾಕಬೇಕು ಎಂದರು.<br /> <br /> ನಂತರ ಶಿಂಧೆ, `ನನ್ನ ಮಾತುಗಳಿಂದ ಅವರಿಗೆ (ಜಯಾ ಬಚ್ಚನ್) ನೋವಾಗಿದ್ದರೆ ಕ್ಷಮೆ ಕೋರುವೆ. ಅವರು ನನ್ನ ತಂಗಿಯಂತೆ.ಬಚ್ಚನ್ ಅವರ ಕುಟುಂಬದ ಬಗ್ಗೆ ನನಗೆ ಅಪಾರ ಗೌರವ ಇದೆ~ ಎಂದರು. ಈ ಗದ್ದಲದಲ್ಲಿ, ಶಿಂಧೆ ಅವರು ಅಸ್ಸಾಂ ದಳ್ಳುರಿಯ ಕುರಿತು ನೀಡುತ್ತಿದ್ದ ಹೇಳಿಕೆಯನ್ನು ಅರ್ಧಕ್ಕೆ ನಿಲ್ಲಿಸಿಬಿಟ್ಟರು. ಇದರಿಂದ ಸದಸ್ಯರ ಅನೇಕ ಪ್ರಶ್ನೆಗಳಿಗೆ ಉತ್ತರವೇ ದೊರಕಲಿಲ್ಲ. `ಸಿನಿಮಾ~ ಅರ್ಧಕ್ಕೆ ಮೊಟಕುಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ(ಪಿಟಿಐ): ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರನ್ನು ಮೂದಲಿಸಿದ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಸದಸ್ಯರ ಪ್ರತಿಭಟನೆಗೆ ಮಣಿದು ಕ್ಷಮೆಯಾಚಿಸಿದ ಘಟನೆ ಗುರುವಾರ ರಾಜ್ಯಸಭೆಯಲ್ಲಿ ನಡೆಯಿತು.<br /> <br /> ಶಿಂಧೆ ಆಡಿದ ಹಗುರ ಮಾತಿಗೆ ರಾಜ್ಯಸಭೆಯ ಅನೇಕ ಸದಸ್ಯರು ತಿರುಗಿಬಿದ್ದರು. ಸಚಿವರು ಕ್ಷಮೆ ಕೋರಿ, ತಮ್ಮ ಮೂದಲಿಕೆ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ತೀವ್ರವಾದಾಗ ಶಿಂಧೆ ಅನಿವಾರ್ಯವಾಗಿ ಕ್ಷಮೆ ಕೋರಬೇಕಾಯಿತು.<br /> <br /> ಅಸ್ಸಾಂ ಹಿಂಸಾಚಾರದ ಬಗ್ಗೆ ಗುರುವಾರ ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ಶಿಂಧೆ ಮಾತನಾಡುತ್ತಿದ್ದರು. ಆಗ ಜಯಾ ಬಚ್ಚನ್ ಅವರು, `ಸಚಿವರು ಸದಸ್ಯರ ನಿರ್ದಿಷ್ಟ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸುತ್ತಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.<br /> <br /> ತಮಗೆ ಅಡಚಣೆ ಉಂಟುಮಾಡಿದ ಜಯಾ ಬಚ್ಚನ್ ಅವರಿಗೆ ಶಿಂಧೆ, `ಇದು ತುಂಬ ಗಂಭೀರ ವಿಷಯ. ಸಿನಿಮಾ ಅಲ್ಲ~ ಎಂದು ಹಂಗಿಸುವಂತಹ ಮಾತುಗಳನ್ನು ಆಡಿದರು. ಬಾಲಿವುಡ್ ನಟಿಯೂ ಆಗಿರುವ ಜಯಾ ಬಚ್ಚನ್, ಸಚಿವರ ಮಾತಿಗೆ ಬಲವಾಗಿ ಆಕ್ಷೇಪಿಸಿದರು. ಇದಕ್ಕೆ ಇತರ ಅನೇಕ ಸದಸ್ಯರೂ ದನಿಗೂಡಿಸಿದರು. ಆಗ ಸದನದಲ್ಲಿ ಹುಯಿಲು ಎದ್ದಿತು.<br /> <br /> `ಜಯಾ ಬಚ್ಚನ್ ಶ್ರೇಷ್ಠ ನಟಿ. ಈ ಸದನದ ಸದಸ್ಯರು. ನೀವು (ಶಿಂಧೆ) ಗೃಹ ಸಚಿವರಾಗಿ ಅವರನ್ನು ಮೂದಲಿಸುವಂತಹ ಮಾತುಗಳನ್ನಾಡಿದ್ದು ಸರಿಯಲ್ಲ. ಕ್ಷಮೆ ಕೋರಿ, ಬಳಕೆ ಮಾಡಿದ ಪದ ಹಿಂದಕ್ಕೆ ಪಡೆಯಿರಿ~ ಎಂದು ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಒತ್ತಾಯಿಸಿದರು.<br /> <br /> ಈ ಒತ್ತಾಯಕ್ಕೆ ಮೊದಲು ಮಣಿಯದ ಶಿಂಧೆ, `ನಾನು ಮಾತನಾಡುತ್ತಿದ್ದಾಗ ಜಯಾ ಅವರು ಮಧ್ಯೆ ಬಾಯಿ ಹಾಕಿದ್ದು ಸರಿಯಾದ ಕ್ರಮವಲ್ಲ~ ಎಂದು ತಮ್ಮ ಮಾತುಗಳನ್ನು ಸಮರ್ಥಿಸಿಕೊಳ್ಳಲು ನೋಡಿದರು. ಆಗ ಜೇಟ್ಲಿ, ಅಧ್ಯಕ್ಷರ ಪೀಠದಲ್ಲಿ ಆಸೀನರಾಗಿದ್ದ ತಾರಿಕ್ ಅನ್ವರ್ ಅವರನ್ನು ಮಧ್ಯ ಪ್ರವೇಶಿಸಲು ಕೋರಿ; ಸಚಿವರು ತಾವಾಡಿದ ಮಾತನ್ನು ಹಿಂದಕ್ಕೆ ಪಡೆಯದಿದ್ದರೆ, ಅದನ್ನು ಕಡತದಿಂದ ತೆಗೆದುಹಾಕಬೇಕು ಎಂದರು.<br /> <br /> ನಂತರ ಶಿಂಧೆ, `ನನ್ನ ಮಾತುಗಳಿಂದ ಅವರಿಗೆ (ಜಯಾ ಬಚ್ಚನ್) ನೋವಾಗಿದ್ದರೆ ಕ್ಷಮೆ ಕೋರುವೆ. ಅವರು ನನ್ನ ತಂಗಿಯಂತೆ.ಬಚ್ಚನ್ ಅವರ ಕುಟುಂಬದ ಬಗ್ಗೆ ನನಗೆ ಅಪಾರ ಗೌರವ ಇದೆ~ ಎಂದರು. ಈ ಗದ್ದಲದಲ್ಲಿ, ಶಿಂಧೆ ಅವರು ಅಸ್ಸಾಂ ದಳ್ಳುರಿಯ ಕುರಿತು ನೀಡುತ್ತಿದ್ದ ಹೇಳಿಕೆಯನ್ನು ಅರ್ಧಕ್ಕೆ ನಿಲ್ಲಿಸಿಬಿಟ್ಟರು. ಇದರಿಂದ ಸದಸ್ಯರ ಅನೇಕ ಪ್ರಶ್ನೆಗಳಿಗೆ ಉತ್ತರವೇ ದೊರಕಲಿಲ್ಲ. `ಸಿನಿಮಾ~ ಅರ್ಧಕ್ಕೆ ಮೊಟಕುಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>