<p>ಬೆಂಗಳೂರು: ಐಪಿಎಲ್ ಐದನೇ ಆವೃತ್ತಿಗೆ ಇನ್ನು ನಾಲ್ಕು ದಿನ ಬಾಕಿ ಇದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. <br /> <br /> ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರವೂ ಆಟಗಾರರು ಅಭ್ಯಾಸ ಪಂದ್ಯವನ್ನು ಆಡಿದರು.<br /> ಸ್ನಾಯುಸೆಳೆತದ ನೋವಿನಿಂದ ಚೇತರಿಸಿಕೊಂಡಿರುವ ಜಹೀರ್ ಖಾನ್ ಸಾಕಷ್ಟು ಹೊತ್ತು ಬೌಲಿಂಗ್ ಅಭ್ಯಾಸ ನಡೆಸಿದರು. ಫೆಬ್ರುವರಿ 28ರಂದು ಶ್ರೀಲಂಕಾ ವಿರುದ್ಧ ಹೋಬರ್ಟ್ನಲ್ಲಿ ಆಡಿದ್ದ ಪಂದ್ಯವೇ ಜಹೀರ್ಗೆ ಕೊನೆಯದಾಗಿತ್ತು. ನೋವಿನ ಕಾರಣದಿಂದ ಅವರು ಕಣಕ್ಕಿಳಿದಿರಲಿಲ್ಲ. <br /> <br /> ಎಡಗೈ ವೇಗಿ ಜಹೀರ್ ಜೊತೆ ಅಭಿಮನ್ಯು ಮಿಥುನ್, ನಾಯಕ ಡೇನಿಯಲ್ ವೆಟೋರಿ, ಕರ್ನಾಟಕದ ಆರ್. ವಿನಯ್ ಕುಮಾರ್ ಅಭ್ಯಾಸ ನಡೆಸಿದರು. <br /> <br /> `ಜಹೀರ್ ಅತ್ಯುತ್ತಮ ಬೌಲರ್. ಐಪಿಎಲ್ನಲ್ಲಿ ಇದೇ ಮೊದಲ ಸಲ ಅವರ ಜೊತೆ ಆಡುವ ಅವಕಾಶ ಲಭಿಸಿದೆ. ಈ ಸಲ ನನ್ನ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತೇನೆ~ ಎಂದು ವಿನಯ್ ವಿಶ್ವಾಸ ವ್ಯಕ್ತಪಡಿಸಿದರು. <br /> <br /> `ತವರು ನೆಲದಲ್ಲಿ ಮೊದಲ ಪಂದ್ಯ ಆಯೋಜನೆಯಾಗಿರುವುದು ಖುಷಿ ನೀಡಿದೆ. ರಣಜಿ ಕ್ರಿಕೆಟ್ಗೆ ಬಂದ ಮೇಲೆ ಹಿರಿಯ ಆಟಗಾರರಿಂದ ಸಾಕಷ್ಟು ತಿಳಿದುಕೊಂಡಿದ್ದೇನೆ~ ಎಂದು ವಿನಯ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಐಪಿಎಲ್ ಐದನೇ ಆವೃತ್ತಿಗೆ ಇನ್ನು ನಾಲ್ಕು ದಿನ ಬಾಕಿ ಇದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. <br /> <br /> ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರವೂ ಆಟಗಾರರು ಅಭ್ಯಾಸ ಪಂದ್ಯವನ್ನು ಆಡಿದರು.<br /> ಸ್ನಾಯುಸೆಳೆತದ ನೋವಿನಿಂದ ಚೇತರಿಸಿಕೊಂಡಿರುವ ಜಹೀರ್ ಖಾನ್ ಸಾಕಷ್ಟು ಹೊತ್ತು ಬೌಲಿಂಗ್ ಅಭ್ಯಾಸ ನಡೆಸಿದರು. ಫೆಬ್ರುವರಿ 28ರಂದು ಶ್ರೀಲಂಕಾ ವಿರುದ್ಧ ಹೋಬರ್ಟ್ನಲ್ಲಿ ಆಡಿದ್ದ ಪಂದ್ಯವೇ ಜಹೀರ್ಗೆ ಕೊನೆಯದಾಗಿತ್ತು. ನೋವಿನ ಕಾರಣದಿಂದ ಅವರು ಕಣಕ್ಕಿಳಿದಿರಲಿಲ್ಲ. <br /> <br /> ಎಡಗೈ ವೇಗಿ ಜಹೀರ್ ಜೊತೆ ಅಭಿಮನ್ಯು ಮಿಥುನ್, ನಾಯಕ ಡೇನಿಯಲ್ ವೆಟೋರಿ, ಕರ್ನಾಟಕದ ಆರ್. ವಿನಯ್ ಕುಮಾರ್ ಅಭ್ಯಾಸ ನಡೆಸಿದರು. <br /> <br /> `ಜಹೀರ್ ಅತ್ಯುತ್ತಮ ಬೌಲರ್. ಐಪಿಎಲ್ನಲ್ಲಿ ಇದೇ ಮೊದಲ ಸಲ ಅವರ ಜೊತೆ ಆಡುವ ಅವಕಾಶ ಲಭಿಸಿದೆ. ಈ ಸಲ ನನ್ನ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತೇನೆ~ ಎಂದು ವಿನಯ್ ವಿಶ್ವಾಸ ವ್ಯಕ್ತಪಡಿಸಿದರು. <br /> <br /> `ತವರು ನೆಲದಲ್ಲಿ ಮೊದಲ ಪಂದ್ಯ ಆಯೋಜನೆಯಾಗಿರುವುದು ಖುಷಿ ನೀಡಿದೆ. ರಣಜಿ ಕ್ರಿಕೆಟ್ಗೆ ಬಂದ ಮೇಲೆ ಹಿರಿಯ ಆಟಗಾರರಿಂದ ಸಾಕಷ್ಟು ತಿಳಿದುಕೊಂಡಿದ್ದೇನೆ~ ಎಂದು ವಿನಯ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>