<p><strong>ಗದಗ:</strong> ನಾಗರ ಪಂಚಮಿ ಮರುದಿನ ನಡೆಯುವ ಪರಸ್ಪರ ಸಗಣಿ ಎರಚಾಟ ಬುಧವಾರ ನಗರದಲ್ಲಿ ಮಳೆಯ ನಡುವೆಯೇ ನಡೆಯಿತು. <br /> <br /> ಸ್ಥಳೀಯ ಗಂಗಾಪುರ ಪೇಟೆ ಕುಂಬಾರ ಗಲ್ಲಿಯಲ್ಲಿ ಓಣಿಯ ಯುವಕರು ಬೆಳಿಗ್ಗೆ ಬಸವ ಮತ್ತು ದುರ್ಗಾ ದೇವಿಗೆ ಪೂಜೆ ಸಲ್ಲಿಸಿ, ಸಂಪ್ರದಾಯದಂತೆ ಚಿಕ್ಕ ಮಕ್ಕಳಿಂದ ಗರಡಿ ಮನೆಯಲ್ಲಿ ಕುಸ್ತಿ ಆಡಿಸಿದರು.<br /> <br /> ನಂತರ ಯುವಕರು ಯುವತಿಯರ ಬಟ್ಟೆ ಮತ್ತು ತರಕಾರಿ ಮಾಲೆಯನ್ನು ಕೊರಳಿಗೆ ಧರಿಸಿ, ಸೆಗಣಿ ಆಟಕ್ಕೆ ಸಜ್ಜುಗೊಂಡರು. ಒಂದು ತಿಂಗಳಿನಿಂದ ಓಣಿಯಲ್ಲಿ ಸಂಗ್ರಹ ಮಾಡಿದ್ದ ಸಗಣಿ ಗುಡ್ಡೆಯನ್ನು ದಾರಿಯುದ್ದಕ್ಕೂ ಹಾಕಿದ್ದರು. <br /> <br /> ಯುವಕರು ಗುಡ್ಡೆಗೆ ಎರಡು ಸುತ್ತು ಪ್ರದಕ್ಷಿಣೆ ಹಾಕಿ ದೇವರನ್ನು ಸ್ಮರಿಸಿಕೊಂಡು, ತೆಂಗಿನ ಕಾಯಿ ಒಡೆದು ಪರಸ್ಪರ ಸಗಣಿ ಎರೆಚಾಡಿದರು. ಮಳೆಯನ್ನು ಲೆಕ್ಕಿಸದೆ ಕುಣಿದು ಕುಪ್ಪಳಿಸಿದರು. <br /> <br /> ಹಬ್ಬಕ್ಕೆಂದು ಮಾವನ ಮನೆಗೆ ಬಂದಿದ್ದ ನವ ಜೋಡಿಗಳು ವಿವಿಧ ತರಹದ ತಿಂಡಿಗಳನ್ನು ತಿಂದು, ಮೋಜಿನ ಆಟ ನೋಡಿ ಆನಂದಿಸಿದರು. ಈ ಆಟ ನೋಡಲು ನಗರ ಅಲ್ಲದೆ ಸುತ್ತಮುತ್ತಲ ಊರು ಗಳಿಂದಲೂ ಜನರು ಆಗಮಿಸಿದ್ದರು. <br /> <br /> `ತಲೆ ತಲೆ ಮಾರಿನಿಂದ ಈ ಆಟವನ್ನು ನಾಗರಪಂಚಮಿ ಮರುದಿನ `ಕರಿಕಟಂಬ್ಲಿ ದಿನ~ ಎಂದು ಆಚರಿಸ ಲಾಗುವುದು. ಪಂಚಮಿ ಹಬ್ಬಕ್ಕೆ ಆಗಮಿಸಿದ್ದ ಮಗಳು ಮತ್ತು ಅಳಿಯನಿಗೆ ಖುಷಿ ಪಡಿಸಲು ಈ ಮೋಜಿನ ಆಟ ನಾಲ್ಕೈದು ತಲೆಮಾರುಗಳಿಂದ ಆಚರಿಸುತ್ತ ಬರಲಾಗಿದೆ~ ಎಂದು ರಾಮಣ್ಣ ಬಿಂಗಿ ಹೇಳುತ್ತಾರೆ. <br /> <br /> ಸಗಣಿ ಎರೆಚಾಟದಲ್ಲಿ ಕಾರ್ತಿಕ ಬಳ್ಳಾರಿ, ಬೆಳಧಡಿ, ನಾಗಪ್ಪ ಘಳಗಂಟಿ, ಲವಕುಮಾರ ಮಾರುತಿ ಗಳಗಂಟಿ, ಮಲ್ಲೇಶ ಕೊರ್ಲಹಳ್ಳಿ, ಬಸವರಾಜ ಇಂಜೇಟಿ, ಪರಶುರಾಮ ಕುಂಬಾರ, ಮಹಾಂತೇಶ ಹಾದಿಮನಿ, ಹನುಮಂತ ಜಡಿ, ಫಕೀರಪ್ಪ ಕೆರಿಯವರ, ಪ್ರದೀಪ ಕದಡಿ, ರಿಯಾಜ್ ದಾವಲಖಾನ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ನಾಗರ ಪಂಚಮಿ ಮರುದಿನ ನಡೆಯುವ ಪರಸ್ಪರ ಸಗಣಿ ಎರಚಾಟ ಬುಧವಾರ ನಗರದಲ್ಲಿ ಮಳೆಯ ನಡುವೆಯೇ ನಡೆಯಿತು. <br /> <br /> ಸ್ಥಳೀಯ ಗಂಗಾಪುರ ಪೇಟೆ ಕುಂಬಾರ ಗಲ್ಲಿಯಲ್ಲಿ ಓಣಿಯ ಯುವಕರು ಬೆಳಿಗ್ಗೆ ಬಸವ ಮತ್ತು ದುರ್ಗಾ ದೇವಿಗೆ ಪೂಜೆ ಸಲ್ಲಿಸಿ, ಸಂಪ್ರದಾಯದಂತೆ ಚಿಕ್ಕ ಮಕ್ಕಳಿಂದ ಗರಡಿ ಮನೆಯಲ್ಲಿ ಕುಸ್ತಿ ಆಡಿಸಿದರು.<br /> <br /> ನಂತರ ಯುವಕರು ಯುವತಿಯರ ಬಟ್ಟೆ ಮತ್ತು ತರಕಾರಿ ಮಾಲೆಯನ್ನು ಕೊರಳಿಗೆ ಧರಿಸಿ, ಸೆಗಣಿ ಆಟಕ್ಕೆ ಸಜ್ಜುಗೊಂಡರು. ಒಂದು ತಿಂಗಳಿನಿಂದ ಓಣಿಯಲ್ಲಿ ಸಂಗ್ರಹ ಮಾಡಿದ್ದ ಸಗಣಿ ಗುಡ್ಡೆಯನ್ನು ದಾರಿಯುದ್ದಕ್ಕೂ ಹಾಕಿದ್ದರು. <br /> <br /> ಯುವಕರು ಗುಡ್ಡೆಗೆ ಎರಡು ಸುತ್ತು ಪ್ರದಕ್ಷಿಣೆ ಹಾಕಿ ದೇವರನ್ನು ಸ್ಮರಿಸಿಕೊಂಡು, ತೆಂಗಿನ ಕಾಯಿ ಒಡೆದು ಪರಸ್ಪರ ಸಗಣಿ ಎರೆಚಾಡಿದರು. ಮಳೆಯನ್ನು ಲೆಕ್ಕಿಸದೆ ಕುಣಿದು ಕುಪ್ಪಳಿಸಿದರು. <br /> <br /> ಹಬ್ಬಕ್ಕೆಂದು ಮಾವನ ಮನೆಗೆ ಬಂದಿದ್ದ ನವ ಜೋಡಿಗಳು ವಿವಿಧ ತರಹದ ತಿಂಡಿಗಳನ್ನು ತಿಂದು, ಮೋಜಿನ ಆಟ ನೋಡಿ ಆನಂದಿಸಿದರು. ಈ ಆಟ ನೋಡಲು ನಗರ ಅಲ್ಲದೆ ಸುತ್ತಮುತ್ತಲ ಊರು ಗಳಿಂದಲೂ ಜನರು ಆಗಮಿಸಿದ್ದರು. <br /> <br /> `ತಲೆ ತಲೆ ಮಾರಿನಿಂದ ಈ ಆಟವನ್ನು ನಾಗರಪಂಚಮಿ ಮರುದಿನ `ಕರಿಕಟಂಬ್ಲಿ ದಿನ~ ಎಂದು ಆಚರಿಸ ಲಾಗುವುದು. ಪಂಚಮಿ ಹಬ್ಬಕ್ಕೆ ಆಗಮಿಸಿದ್ದ ಮಗಳು ಮತ್ತು ಅಳಿಯನಿಗೆ ಖುಷಿ ಪಡಿಸಲು ಈ ಮೋಜಿನ ಆಟ ನಾಲ್ಕೈದು ತಲೆಮಾರುಗಳಿಂದ ಆಚರಿಸುತ್ತ ಬರಲಾಗಿದೆ~ ಎಂದು ರಾಮಣ್ಣ ಬಿಂಗಿ ಹೇಳುತ್ತಾರೆ. <br /> <br /> ಸಗಣಿ ಎರೆಚಾಟದಲ್ಲಿ ಕಾರ್ತಿಕ ಬಳ್ಳಾರಿ, ಬೆಳಧಡಿ, ನಾಗಪ್ಪ ಘಳಗಂಟಿ, ಲವಕುಮಾರ ಮಾರುತಿ ಗಳಗಂಟಿ, ಮಲ್ಲೇಶ ಕೊರ್ಲಹಳ್ಳಿ, ಬಸವರಾಜ ಇಂಜೇಟಿ, ಪರಶುರಾಮ ಕುಂಬಾರ, ಮಹಾಂತೇಶ ಹಾದಿಮನಿ, ಹನುಮಂತ ಜಡಿ, ಫಕೀರಪ್ಪ ಕೆರಿಯವರ, ಪ್ರದೀಪ ಕದಡಿ, ರಿಯಾಜ್ ದಾವಲಖಾನ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>