<p><strong>ತುಮಕೂರು: </strong>ಬಡವರ ಆರ್ಥಿಕ ಸಬಲೀಕರಣವೇ ಕಿರು ಹಣಕಾಸು ಕ್ಷೇತ್ರದ ಮೂಲ ಧ್ಯೇಯವಾದರೂ ಕೆಲವು ನ್ಯೂನತೆಗಳಿಂದ ಈವರೆಗೂ ಅದು ಯಶಸ್ಸು ಕಂಡಿಲ್ಲ ಎಂದು ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಕುಲಸಚಿವ ಡಾ.ಸಿದ್ದೇಗೌಡ ಇಲ್ಲಿ ಶನಿವಾರ ಹೇಳಿದರು.<br /> <br /> ಗುರುಶ್ರೀ ವಾಣಿಜ್ಯ ಹಾಗೂ ಸಮಾಜ ಅಧ್ಯಯನ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ‘ಸುಸ್ಥಿರ ಸಮಾಜದ ಅಭಿವೃದ್ಧಿಯಲ್ಲಿ ಕಿರು ಹಣಕಾಸಿನ ಪಾತ್ರ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಬಡವರನ್ನು ಆರ್ಥಿಕವಾಗಿ ಸಬಲಗೊಳಿಸಲು ಸಾಂಘಿಕ ಶ್ರಮದ ಅಗತ್ಯವಿದೆ. ಇದಕ್ಕೆ ಪೂರಕವಾದ ವಾತಾವರಣವನ್ನು ಸಮಾಜ ಸೇವಾ ಕ್ಷೇತ್ರ ಒದಗಿಸಬೇಕು ಎಂದು ಸಲಹೆ ಮಾಡಿದರು.<br /> <br /> ಕೃಷಿ, ಕೈಗಾರಿಕೆ, ಹಣಕಾಸು ಕ್ಷೇತ್ರಗಳಲ್ಲಿ ಸಾಮಾಜಿಕ ಸೇವೆಯ ಅಗತ್ಯವಿದೆ. ಕಿರು ಹಣಕಾಸು ವಲಯ ಭಾರತದ ಆರ್ಥಿಕತೆಯಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತದೋ ಹಾಗೆಯೇ ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲೂ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಲೇವಾದೇವಿದಾರರು, ಗಿರವಿ ಅಂಗಡಿಯವರ ಕಪಿಮುಷ್ಟಿಯಿಂದ ಬಡವರು, ರೈತರು, ಮಹಿಳೆಯರು, ಕೂಲಿ ಕಾರ್ಮಿಕರು ಬಿಡುಗಡೆ ಹೊಂದಲು ಕಿರು ಹಣಕಾಸು ನೆರವಾಗಿತ್ತು.<br /> <br /> ಆದರೆ ಇಂದು ಅಧಿಕ ಬಡ್ಡಿ, ಸರಿಯಾದ ಸಾಲ ಮರುಪಾವತಿಯಾಗದೆ ಸಾಕಷ್ಟು ಬಿಕ್ಕಟ್ಟು ಎದುರಿಸುತ್ತಿದೆ. ಹಣಕಾಸು ವಲಯದಿಂದ ಸಾಲ ಪಡೆದ ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಾಗಾಗಿ ಕಿರು ಹಣಕಾಸು ವಲಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಿದೆ ಎಂದು ಹೇಳಿದರು.<br /> <br /> ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಪ್ರೊ.ಟಿ.ಗಂಗಾಧರಯ್ಯ, ಗುರುಶ್ರೀ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪ್ರೊ.ಜಿ.ಎಸ್.ಬಸವರಾಜು, ಪ್ರೊ.ಶಂಕರಯ್ಯ, ಡಾ.ಪರಶುರಾಮ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಬಡವರ ಆರ್ಥಿಕ ಸಬಲೀಕರಣವೇ ಕಿರು ಹಣಕಾಸು ಕ್ಷೇತ್ರದ ಮೂಲ ಧ್ಯೇಯವಾದರೂ ಕೆಲವು ನ್ಯೂನತೆಗಳಿಂದ ಈವರೆಗೂ ಅದು ಯಶಸ್ಸು ಕಂಡಿಲ್ಲ ಎಂದು ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಕುಲಸಚಿವ ಡಾ.ಸಿದ್ದೇಗೌಡ ಇಲ್ಲಿ ಶನಿವಾರ ಹೇಳಿದರು.<br /> <br /> ಗುರುಶ್ರೀ ವಾಣಿಜ್ಯ ಹಾಗೂ ಸಮಾಜ ಅಧ್ಯಯನ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ‘ಸುಸ್ಥಿರ ಸಮಾಜದ ಅಭಿವೃದ್ಧಿಯಲ್ಲಿ ಕಿರು ಹಣಕಾಸಿನ ಪಾತ್ರ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಬಡವರನ್ನು ಆರ್ಥಿಕವಾಗಿ ಸಬಲಗೊಳಿಸಲು ಸಾಂಘಿಕ ಶ್ರಮದ ಅಗತ್ಯವಿದೆ. ಇದಕ್ಕೆ ಪೂರಕವಾದ ವಾತಾವರಣವನ್ನು ಸಮಾಜ ಸೇವಾ ಕ್ಷೇತ್ರ ಒದಗಿಸಬೇಕು ಎಂದು ಸಲಹೆ ಮಾಡಿದರು.<br /> <br /> ಕೃಷಿ, ಕೈಗಾರಿಕೆ, ಹಣಕಾಸು ಕ್ಷೇತ್ರಗಳಲ್ಲಿ ಸಾಮಾಜಿಕ ಸೇವೆಯ ಅಗತ್ಯವಿದೆ. ಕಿರು ಹಣಕಾಸು ವಲಯ ಭಾರತದ ಆರ್ಥಿಕತೆಯಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತದೋ ಹಾಗೆಯೇ ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲೂ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಲೇವಾದೇವಿದಾರರು, ಗಿರವಿ ಅಂಗಡಿಯವರ ಕಪಿಮುಷ್ಟಿಯಿಂದ ಬಡವರು, ರೈತರು, ಮಹಿಳೆಯರು, ಕೂಲಿ ಕಾರ್ಮಿಕರು ಬಿಡುಗಡೆ ಹೊಂದಲು ಕಿರು ಹಣಕಾಸು ನೆರವಾಗಿತ್ತು.<br /> <br /> ಆದರೆ ಇಂದು ಅಧಿಕ ಬಡ್ಡಿ, ಸರಿಯಾದ ಸಾಲ ಮರುಪಾವತಿಯಾಗದೆ ಸಾಕಷ್ಟು ಬಿಕ್ಕಟ್ಟು ಎದುರಿಸುತ್ತಿದೆ. ಹಣಕಾಸು ವಲಯದಿಂದ ಸಾಲ ಪಡೆದ ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಾಗಾಗಿ ಕಿರು ಹಣಕಾಸು ವಲಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಿದೆ ಎಂದು ಹೇಳಿದರು.<br /> <br /> ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಪ್ರೊ.ಟಿ.ಗಂಗಾಧರಯ್ಯ, ಗುರುಶ್ರೀ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪ್ರೊ.ಜಿ.ಎಸ್.ಬಸವರಾಜು, ಪ್ರೊ.ಶಂಕರಯ್ಯ, ಡಾ.ಪರಶುರಾಮ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>