<p><strong>ನೆಲಮಂಗಲ: </strong> ಪಟ್ಟಣದ ಚೆನ್ನಪ್ಪ ಬಡಾವಣೆಯ ಸಮಾನ ಮನಸ್ಕ ನಿವಾಸಿಗಳ ಸಕಾರಾತ್ಮಕ ಚಿಂತನೆಯ ಫಲವಾಗಿ ಸುಂದರ ಉದ್ಯಾನವನವೊಂದು ಯುಗಾದಿ ಹಬ್ಬದಂದು ಅನಾವರಣಗೊಂಡು ಹೊಸ ವರ್ಷದ ವೈಚಾರಿಕತೆಗೆ ನಾಂದಿ ಹಾಡಿತು.<br /> <br /> ಬಡಾವಣೆಯಲ್ಲಿ ಪ್ರಜ್ಞಾವಂತ ಪ್ರಜೆಗಳಿದ್ದಾಗ ಮೂಲಭೂತ ಸೌಲಭ್ಯಗಳನ್ನು ಸ್ವಯಂ ಸೇವೆಯಿಂದ ಹೇಗೆ ಮಾಡಿಕೊಳ್ಳಬಹುದು ಎಂಬುದಕ್ಕೆ ಜ್ವಲಂತ ನಿದರ್ಶನ ಇದಾಗಿದೆ. ಔಷಧಿ ಮತ್ತು ಅಲಂಕಾರಿಕ ಸಸ್ಯಗಳಿಂದ ಕಂಗೊಳಿಸುವ ಈ ಉದ್ಯಾನದಲ್ಲಿ ಹಿರಿಯರಿಗಾಗಿ ವಿಶ್ರಾಂತಿಧಾಮ, ಅಧ್ಯಯನಾಸಕ್ತರಿಗೆ ವಾಚನಾಲಯ, ಪುಟ್ಟ ಮಕ್ಕಳಿಗೆ ಜೋಕಾಲಿ ನಿರ್ಮಿಸಲಾಗಿದೆ. ಸುಂದರ ಪುಷ್ಪಗಳ ರಾಶಿ ನೋಡುಗರನ್ನು ಆಕರ್ಷಿಸುತ್ತದೆ.<br /> <br /> ನೀರಿನ ಪೂರೈಕೆಗಾಗಿ ಕೊಳವೆ ಬಾವಿಯೊಂದನ್ನು ಕೊರೆಸಿ ಪುರಸಭೆಗೆ ಹಸ್ತಾಂತರಿಸಿದ ಹೆಗ್ಗಳಿಕೆಯೂ ಬಡಾವಣೆಯ ನಿವಾಸಿಗಳಿಗೆ ಸಲ್ಲುತ್ತದೆ. ಯುಗಾದಿ ಹಬ್ಬದಂದು ಹೊಸ ಬಟ್ಟೆ ಧರಿಸಿ ಭಕ್ಷ್ಯ ಭೋಜನಗಳನ್ನು ಸವಿದು ಕಳೆಯುವುದರೊಂದಿಗೆ ಕಳೆದ ವರ್ಷದ ಯುಗಾದಿಯಂದು ಅಂಕುರಗೊಂಡ ಉದ್ಯಾನದ ಕನಸು ಈ ಯುಗಾದಿಗೆ ನನಸಾಗಿದೆ. ಈ ಸಾರ್ಥಕ ಕಾರ್ಯಕ್ಕೆ ಭೂದಾನ ಮಾಡಿದ ನಾರಾಯಣಪ್ಪ, ಪ್ರೇರಣೆ ನೀಡಿದ ಡಾ.ಧನಪಾಲ್, ಕಾರ್ಯಾನುಷ್ಠಾನಗೊಳಿಸಿದ ಅಯ್ಯಪ್ಪ, ಪ್ರೋತ್ಸಾಹಿಸಿದ ಎನ್.ಗಣೇಶ್, ಬೈರಶೆಟ್ಟಿ, ವೀರಭದ್ರಪ್ಪ, ಚಂದ್ರಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.<br /> <br /> ಹಾರ- ತುರಾಯಿ ಭಾಷಣಗಳ ಅಬ್ಬರವಿಲ್ಲದೆ ಜೋಕಾಲಿ ಆಡುವುದರೊಂದಿಗೆ ಪುಟಾಣಿ ಮಕ್ಕಳೇ ಉದ್ಯಾನವನವನ್ನು ಉದ್ಘಾಟಿಸಿದ್ದು ವಿಶೇಷವಾಗಿತ್ತು. ಎಂ.ಇ.ಎಸ್. ಶಾಲೆಯ ಮಕ್ಕಳಿಂದ ಮನರಂಜನೆ, ಬಡಾವಣೆಯ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಕರಾಟೆ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೆಲಮಂಗಲ: </strong> ಪಟ್ಟಣದ ಚೆನ್ನಪ್ಪ ಬಡಾವಣೆಯ ಸಮಾನ ಮನಸ್ಕ ನಿವಾಸಿಗಳ ಸಕಾರಾತ್ಮಕ ಚಿಂತನೆಯ ಫಲವಾಗಿ ಸುಂದರ ಉದ್ಯಾನವನವೊಂದು ಯುಗಾದಿ ಹಬ್ಬದಂದು ಅನಾವರಣಗೊಂಡು ಹೊಸ ವರ್ಷದ ವೈಚಾರಿಕತೆಗೆ ನಾಂದಿ ಹಾಡಿತು.<br /> <br /> ಬಡಾವಣೆಯಲ್ಲಿ ಪ್ರಜ್ಞಾವಂತ ಪ್ರಜೆಗಳಿದ್ದಾಗ ಮೂಲಭೂತ ಸೌಲಭ್ಯಗಳನ್ನು ಸ್ವಯಂ ಸೇವೆಯಿಂದ ಹೇಗೆ ಮಾಡಿಕೊಳ್ಳಬಹುದು ಎಂಬುದಕ್ಕೆ ಜ್ವಲಂತ ನಿದರ್ಶನ ಇದಾಗಿದೆ. ಔಷಧಿ ಮತ್ತು ಅಲಂಕಾರಿಕ ಸಸ್ಯಗಳಿಂದ ಕಂಗೊಳಿಸುವ ಈ ಉದ್ಯಾನದಲ್ಲಿ ಹಿರಿಯರಿಗಾಗಿ ವಿಶ್ರಾಂತಿಧಾಮ, ಅಧ್ಯಯನಾಸಕ್ತರಿಗೆ ವಾಚನಾಲಯ, ಪುಟ್ಟ ಮಕ್ಕಳಿಗೆ ಜೋಕಾಲಿ ನಿರ್ಮಿಸಲಾಗಿದೆ. ಸುಂದರ ಪುಷ್ಪಗಳ ರಾಶಿ ನೋಡುಗರನ್ನು ಆಕರ್ಷಿಸುತ್ತದೆ.<br /> <br /> ನೀರಿನ ಪೂರೈಕೆಗಾಗಿ ಕೊಳವೆ ಬಾವಿಯೊಂದನ್ನು ಕೊರೆಸಿ ಪುರಸಭೆಗೆ ಹಸ್ತಾಂತರಿಸಿದ ಹೆಗ್ಗಳಿಕೆಯೂ ಬಡಾವಣೆಯ ನಿವಾಸಿಗಳಿಗೆ ಸಲ್ಲುತ್ತದೆ. ಯುಗಾದಿ ಹಬ್ಬದಂದು ಹೊಸ ಬಟ್ಟೆ ಧರಿಸಿ ಭಕ್ಷ್ಯ ಭೋಜನಗಳನ್ನು ಸವಿದು ಕಳೆಯುವುದರೊಂದಿಗೆ ಕಳೆದ ವರ್ಷದ ಯುಗಾದಿಯಂದು ಅಂಕುರಗೊಂಡ ಉದ್ಯಾನದ ಕನಸು ಈ ಯುಗಾದಿಗೆ ನನಸಾಗಿದೆ. ಈ ಸಾರ್ಥಕ ಕಾರ್ಯಕ್ಕೆ ಭೂದಾನ ಮಾಡಿದ ನಾರಾಯಣಪ್ಪ, ಪ್ರೇರಣೆ ನೀಡಿದ ಡಾ.ಧನಪಾಲ್, ಕಾರ್ಯಾನುಷ್ಠಾನಗೊಳಿಸಿದ ಅಯ್ಯಪ್ಪ, ಪ್ರೋತ್ಸಾಹಿಸಿದ ಎನ್.ಗಣೇಶ್, ಬೈರಶೆಟ್ಟಿ, ವೀರಭದ್ರಪ್ಪ, ಚಂದ್ರಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.<br /> <br /> ಹಾರ- ತುರಾಯಿ ಭಾಷಣಗಳ ಅಬ್ಬರವಿಲ್ಲದೆ ಜೋಕಾಲಿ ಆಡುವುದರೊಂದಿಗೆ ಪುಟಾಣಿ ಮಕ್ಕಳೇ ಉದ್ಯಾನವನವನ್ನು ಉದ್ಘಾಟಿಸಿದ್ದು ವಿಶೇಷವಾಗಿತ್ತು. ಎಂ.ಇ.ಎಸ್. ಶಾಲೆಯ ಮಕ್ಕಳಿಂದ ಮನರಂಜನೆ, ಬಡಾವಣೆಯ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಕರಾಟೆ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>