<p><strong>ಬಳ್ಳಾರಿ:</strong> ‘ಪೊಲೀಸರ ಕ್ರೂರ ದೌರ್ಜನ್ಯಕ್ಕೆ ನಾನು ಬಲಿ ಆದೆರಿ. ನಮ್ ಜನ್ರಿಗೆ ಭಾಳ ಅನ್ಯಾಯ ಮಾಡ್ಯಾರ. ಅದ್ರ ಸಲುವಾಗ್ಯಾದ್ರೂ ನಾನು ಛೊಲೊತ್ನಗಿ ಓದಿ ಐಎಎಸ್ ಆಫೀಸರ್ ಆಕ್ಕೇನಿ’<br /> <br /> ನವಲಗುಂದ ಗಲಾಟೆಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿದ್ದ ಹರಿಕೃಷ್ಣ ಹೆಬಸೂರ, ಯುಪಿಎಸ್ಸಿ ಪರೀಕ್ಷೆ ಬರೆಯಲೆಂದು ಶುಕ್ರವಾರ ಧಾರವಾಡಕ್ಕೆ ತೆರಳುವ ಮುನ್ನ ಸುದ್ದಿಗಾರರ ಮುಂದೆ ಹೇಳಿದ ಮಾತುಗಳಿವು. <br /> <br /> ಪರೀಕ್ಷೆಗೆ ಹಾಜರಾಗಲು ನ್ಯಾಯಾಲಯದಿಂದ ಅನುಮತಿ ಪಡೆದಿರುವ ಅವರು ಮಧ್ಯಾಹ್ನ 2.15ರ ವೇಳೆಗೆ ಕಾರಾಗೃಹದಿಂದ ಹೊರ ಬಂದಾಗ, ತಾಯಿ ಸುಜಾತಾ ಮಗನನ್ನು ಅಪ್ಪಿಕೊಂಡು ಸಂತೈಸಿ, ಕೆನ್ನೆಗೆ ಮುತ್ತಿಟ್ಟರು.<br /> <br /> ಈ ಸನ್ನಿವೇಶಕ್ಕೆ ಸಾಕ್ಷಿಯಾದ ಸುದ್ದಿಗಾರರಿಗೆ ಹರಿಕೃಷ್ಣ, ತಮ್ಮ ಬಂಧನವಾದ ದಿನದ ಘಟನೆಯನ್ನು ವಿವರಿಸಿದರು.ಲ‘ಮಧ್ಯಾಹ್ನ ಮೂರು ಗಂಟೆ ಆಗಿತ್ರಿ. ಕರೆಂಟ್ ಹೋಗಿತ್ತು.<br /> <br /> ಹಾಲ್ನ್ಯಾಗ ನಾನು ಓದಕೊಂತ ಕುಂತಿದ್ದೆ. ನನ್ ಕಾಟ್ ಮೇಲೆ ಪುಸ್ತಕ ಇತ್ತು. ಮನಿ ಒಳಗ ನುಗ್ಗಿದ ಒಬ್ಬ ಪಿಎಸ್ಐ ಮತ್ತ ಏಳೆಂಟು ಮಂದಿ ಕಾನ್ಸ್ಟೆಬಲ್ಗಳು ಮನೆಯಿಂದಲೇ ಎಳ್ಕೊಂಡು ಹೋದ್ರು. ನಮ್ಮವ್ವಾರ್ನ ಒದ್ದು, ನನ್ನ ಪೊಲೀಸ್ ಜೀಪನ್ಯಾಗ ಹಾಕ್ಕೊಂಡ್ ಹೋದ್ರು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ‘ಪೊಲೀಸರ ಕ್ರೂರ ದೌರ್ಜನ್ಯಕ್ಕೆ ನಾನು ಬಲಿ ಆದೆರಿ. ನಮ್ ಜನ್ರಿಗೆ ಭಾಳ ಅನ್ಯಾಯ ಮಾಡ್ಯಾರ. ಅದ್ರ ಸಲುವಾಗ್ಯಾದ್ರೂ ನಾನು ಛೊಲೊತ್ನಗಿ ಓದಿ ಐಎಎಸ್ ಆಫೀಸರ್ ಆಕ್ಕೇನಿ’<br /> <br /> ನವಲಗುಂದ ಗಲಾಟೆಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿದ್ದ ಹರಿಕೃಷ್ಣ ಹೆಬಸೂರ, ಯುಪಿಎಸ್ಸಿ ಪರೀಕ್ಷೆ ಬರೆಯಲೆಂದು ಶುಕ್ರವಾರ ಧಾರವಾಡಕ್ಕೆ ತೆರಳುವ ಮುನ್ನ ಸುದ್ದಿಗಾರರ ಮುಂದೆ ಹೇಳಿದ ಮಾತುಗಳಿವು. <br /> <br /> ಪರೀಕ್ಷೆಗೆ ಹಾಜರಾಗಲು ನ್ಯಾಯಾಲಯದಿಂದ ಅನುಮತಿ ಪಡೆದಿರುವ ಅವರು ಮಧ್ಯಾಹ್ನ 2.15ರ ವೇಳೆಗೆ ಕಾರಾಗೃಹದಿಂದ ಹೊರ ಬಂದಾಗ, ತಾಯಿ ಸುಜಾತಾ ಮಗನನ್ನು ಅಪ್ಪಿಕೊಂಡು ಸಂತೈಸಿ, ಕೆನ್ನೆಗೆ ಮುತ್ತಿಟ್ಟರು.<br /> <br /> ಈ ಸನ್ನಿವೇಶಕ್ಕೆ ಸಾಕ್ಷಿಯಾದ ಸುದ್ದಿಗಾರರಿಗೆ ಹರಿಕೃಷ್ಣ, ತಮ್ಮ ಬಂಧನವಾದ ದಿನದ ಘಟನೆಯನ್ನು ವಿವರಿಸಿದರು.ಲ‘ಮಧ್ಯಾಹ್ನ ಮೂರು ಗಂಟೆ ಆಗಿತ್ರಿ. ಕರೆಂಟ್ ಹೋಗಿತ್ತು.<br /> <br /> ಹಾಲ್ನ್ಯಾಗ ನಾನು ಓದಕೊಂತ ಕುಂತಿದ್ದೆ. ನನ್ ಕಾಟ್ ಮೇಲೆ ಪುಸ್ತಕ ಇತ್ತು. ಮನಿ ಒಳಗ ನುಗ್ಗಿದ ಒಬ್ಬ ಪಿಎಸ್ಐ ಮತ್ತ ಏಳೆಂಟು ಮಂದಿ ಕಾನ್ಸ್ಟೆಬಲ್ಗಳು ಮನೆಯಿಂದಲೇ ಎಳ್ಕೊಂಡು ಹೋದ್ರು. ನಮ್ಮವ್ವಾರ್ನ ಒದ್ದು, ನನ್ನ ಪೊಲೀಸ್ ಜೀಪನ್ಯಾಗ ಹಾಕ್ಕೊಂಡ್ ಹೋದ್ರು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>