<p>ರಾಜ್ಯದಲ್ಲಿ ಮೊದಲ ಬಾರಿಗೆ ಯುವ ಕಾಂಗ್ರೆಸ್ ಪದಾಧಿಕಾರಿಗಳ ಸ್ಥಾನಕ್ಕೆ ಜನತಾಂತ್ರಿಕವಾಗಿ ನಡೆದ ಚುನಾವಣೆ ಮುಗಿದು ಹೊಸ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. <br /> <br /> ಹೆಚ್ಚಿನ ಗದ್ದಲವಿಲ್ಲದೆ ನಡೆದ ಚುನಾವಣೆಯಲ್ಲಿ 31 ವರ್ಷದ ಮೈಸೂರಿನ ಯುವಕ ರಿಜ್ವಾನ್ ಅರ್ಷದ್ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. <br /> <br /> ಪಕ್ಷದಲ್ಲಿ ಗುಂಪುಗಾರಿಕೆ ಮತ್ತು ಭಿನ್ನಮತ ಇದ್ದರೂ ಸುಸೂತ್ರವಾಗಿ ನಡೆದಿರುವ ಪಕ್ಷದ ಆಂತರಿಕ ಚುನಾವಣೆ ಒಳ್ಳೆಯ ಬೆಳವಣಿಗೆ. ಒಂದು ಕಾಲಕ್ಕೆ ಯುವ ಕಾಂಗ್ರೆಸ್ ಎಂದರೆ ಗೂಂಡಾಗಿರಿಗೆ ಕುಖ್ಯಾತಿ ಪಡೆದಿತ್ತು. <br /> <br /> ದೇವರಾಜ ಅರಸು ಮತ್ತು ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಯುವ ಕಾಂಗ್ರೆಸ್ ಸಂಸ್ಕೃತಿಗೆ ಜನರು ಹೆದರುತ್ತಿದ್ದರು. ಅಂತಹ, ಪರಿಸ್ಥಿತಿ ಇತ್ತೀಚಿನ ದಿನಗಳಲ್ಲಿ ಇಲ್ಲದಿರುವುದು ಸಮಾಧಾನಕರ. <br /> <br /> ಆದರೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಹುರುಪು ತುಂಬಬೇಕಾದ ಬಿಸಿರಕ್ತದ ಯುವ ಪಡೆಯ ಕೊರತೆ ದಟ್ಟವಾಗಿ ಕಾಡುತ್ತಿದೆ. ಅಖಿಲ ಭಾರತ ಮಟ್ಟದಲ್ಲಿ ಯುವಶಕ್ತಿಯನ್ನು ಸೆಳೆಯುವ ರಾಹುಲ್ಗಾಂಧಿ ಪ್ರಯತ್ನಕ್ಕೆ ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲ. <br /> <br /> ಅನಾಯಾಸವಾಗಿ ಒದಗಿಬಂದ ಅವಕಾಶವನ್ನು ಬಳಸಿಕೊಂಡು ನಾಯಕನಾಗಿ ಹೊರಹೊಮ್ಮಲು ಅವರಿಗೂ ಸಾಧ್ಯವಾಗುತ್ತಿಲ್ಲ. <br /> <br /> ಪಕ್ಷದಲ್ಲಿ ಅವರು ಹೊಂದಿರುವ ವಿಶೇಷ ಸ್ಥಾನಮಾನದಿಂದಾಗಿ ಬೇರೆ ಯುವನಾಯಕರಿಗೆ ಬೆಳೆಯಲು ಅವಕಾಶವೂ ಇಲ್ಲದಂತಾಗಿದೆ ಎನ್ನುವುದು ವಾಸ್ತವ. ಮೊದಲು ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಬೇಕು. <br /> <br /> ರಾಹುಲ್ಗಾಂಧಿ ಜತೆ ಬೇರೆ ಯುವನಾಯಕರು ಕೂಡಾ ರಾಷ್ಟ್ರಮಟ್ಟದಲ್ಲಿ ಬೆಳೆಯಲು ಕಾಂಗ್ರೆಸ್ ಅವಕಾಶ ನೀಡಬೇಕು.ರಾಜಕಾರಣ ಎನ್ನುವುದು ಇತ್ತೀಚಿನ ದಿನಗಳಲ್ಲಿ ಒಂದು ದಂಧೆಯಾಗಿದೆ. ಹಣ ಮಾಡುವುದೇ ರಾಜಕಾರಣಿಗಳ ಗುರಿ ಎನ್ನುವಂತಾಗಿದೆ. <br /> <br /> ಪಕ್ಷದಲ್ಲಿ ಎಲ್ಲ ಅಧಿಕಾರವನ್ನು ಅನುಭವಿಸಿ ಆ ಅಧಿಕಾರ ತಮ್ಮ ಕುಟುಂಬಕ್ಕೇ ಇರಲಿ ಎಂದು ಲೆಕ್ಕಾಚಾರ ಹಾಕುವ ನಾಯಕರ ಸಂಕುಚಿತ ಮನೋಭಾವ ಮತ್ತು ಸ್ವಾರ್ಥದಿಂದಾಗಿ ಎಲ್ಲ ಪಕ್ಷಗಳೂ ನೈತಿಕವಾಗಿ ದಿವಾಳಿಯಾಗುತ್ತಿವೆ. <br /> <br /> ಆದರ್ಶ ಇಟ್ಟುಕೊಂಡು ಬರುವ ಯುವಕರಿಗೆ ಬೆಳೆಯುವ ಅವಕಾಶ ಇಲ್ಲದಾಗಿದೆ. ಇದರಿಂದ ಭ್ರಮನಿರಸನಗೊಂಡ ಯುವಕರು ರಾಜಕೀಯ ಎಂದರೆ ದೂರವೇ ಉಳಿಯುತ್ತಿದ್ದಾರೆ. ಇದು ನಿಜಕ್ಕೂ ದುರಂತ. <br /> <br /> ಹಣ ಮತ್ತು ಅಧಿಕಾರ ಹೊಂದಿರುವ ಕೆಲವೇ ನಾಯಕರು ತಮಗೆ ಪರಾಕು ಹಾಕುವ ಮತ್ತು ತಮ್ಮ ಹಿಂಬಾಲಕರಾಗುವವರಿಗೇ ಮಾತ್ರ ಮಣೆ ಹಾಕುತ್ತಿದ್ದಾರೆ. ಎಲ್ಲ ರಾಜಕಾರಣಿಗಳಲ್ಲೂ ಪುತ್ರ ವ್ಯಾಮೋಹ ಮತ್ತು ಸ್ವಜಾತಿ ಪ್ರೇಮ ಹೆಚ್ಚುತ್ತಿರುವುದು ಯುವಕರು ರಾಜಕಾರಣದಲ್ಲಿ ಆಸಕ್ತಿ ಕಳೆದುಕೊಳ್ಳಲು ಇನ್ನೊಂದು ಕಾರಣ.<br /> <br /> ಈ ಬೆಳವಣಿಗೆ ಪಕ್ಷಕ್ಕಾಗಲಿ, ಸಮಾಜಕ್ಕಾಗಲಿ ಒಳ್ಳೆಯದಲ್ಲ. ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಮಾಜಿಕ ಕಾಳಜಿಯೊಂದಿಗೆ ರಾಜಕೀಯಕ್ಕೆ ಕಾಲಿಡುವ ಯುವಜನರಿಗೆ ಅವಕಾಶವೇ ಇಲ್ಲದಂತಾಗಿದೆ. <br /> <br /> ಈ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ಸಿಗೆ ಚುನಾವಣೆ ನಡೆಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿರುವುದು ಒಂದು ಸ್ವಾಗತಾರ್ಹ ಬೆಳವಣಿಗೆ. ಇದು ಯುವ ಕಾಂಗ್ರೆಸ್ಸಿಗಷ್ಟೇ ಸೀಮಿತವಾಗುವುದು ಬೇಡ, ಪ್ರದೇಶ ಕಾಂಗ್ರೆಸ್ ಸಮಿತಿಗೂ ಇದೇ ರೀತಿ ಪ್ರಜಾತಾಂತ್ರಿಕ ರೀತಿಯಲ್ಲಿ ಚುನಾವಣೆ ನಡೆಯಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯದಲ್ಲಿ ಮೊದಲ ಬಾರಿಗೆ ಯುವ ಕಾಂಗ್ರೆಸ್ ಪದಾಧಿಕಾರಿಗಳ ಸ್ಥಾನಕ್ಕೆ ಜನತಾಂತ್ರಿಕವಾಗಿ ನಡೆದ ಚುನಾವಣೆ ಮುಗಿದು ಹೊಸ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. <br /> <br /> ಹೆಚ್ಚಿನ ಗದ್ದಲವಿಲ್ಲದೆ ನಡೆದ ಚುನಾವಣೆಯಲ್ಲಿ 31 ವರ್ಷದ ಮೈಸೂರಿನ ಯುವಕ ರಿಜ್ವಾನ್ ಅರ್ಷದ್ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. <br /> <br /> ಪಕ್ಷದಲ್ಲಿ ಗುಂಪುಗಾರಿಕೆ ಮತ್ತು ಭಿನ್ನಮತ ಇದ್ದರೂ ಸುಸೂತ್ರವಾಗಿ ನಡೆದಿರುವ ಪಕ್ಷದ ಆಂತರಿಕ ಚುನಾವಣೆ ಒಳ್ಳೆಯ ಬೆಳವಣಿಗೆ. ಒಂದು ಕಾಲಕ್ಕೆ ಯುವ ಕಾಂಗ್ರೆಸ್ ಎಂದರೆ ಗೂಂಡಾಗಿರಿಗೆ ಕುಖ್ಯಾತಿ ಪಡೆದಿತ್ತು. <br /> <br /> ದೇವರಾಜ ಅರಸು ಮತ್ತು ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಯುವ ಕಾಂಗ್ರೆಸ್ ಸಂಸ್ಕೃತಿಗೆ ಜನರು ಹೆದರುತ್ತಿದ್ದರು. ಅಂತಹ, ಪರಿಸ್ಥಿತಿ ಇತ್ತೀಚಿನ ದಿನಗಳಲ್ಲಿ ಇಲ್ಲದಿರುವುದು ಸಮಾಧಾನಕರ. <br /> <br /> ಆದರೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಹುರುಪು ತುಂಬಬೇಕಾದ ಬಿಸಿರಕ್ತದ ಯುವ ಪಡೆಯ ಕೊರತೆ ದಟ್ಟವಾಗಿ ಕಾಡುತ್ತಿದೆ. ಅಖಿಲ ಭಾರತ ಮಟ್ಟದಲ್ಲಿ ಯುವಶಕ್ತಿಯನ್ನು ಸೆಳೆಯುವ ರಾಹುಲ್ಗಾಂಧಿ ಪ್ರಯತ್ನಕ್ಕೆ ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲ. <br /> <br /> ಅನಾಯಾಸವಾಗಿ ಒದಗಿಬಂದ ಅವಕಾಶವನ್ನು ಬಳಸಿಕೊಂಡು ನಾಯಕನಾಗಿ ಹೊರಹೊಮ್ಮಲು ಅವರಿಗೂ ಸಾಧ್ಯವಾಗುತ್ತಿಲ್ಲ. <br /> <br /> ಪಕ್ಷದಲ್ಲಿ ಅವರು ಹೊಂದಿರುವ ವಿಶೇಷ ಸ್ಥಾನಮಾನದಿಂದಾಗಿ ಬೇರೆ ಯುವನಾಯಕರಿಗೆ ಬೆಳೆಯಲು ಅವಕಾಶವೂ ಇಲ್ಲದಂತಾಗಿದೆ ಎನ್ನುವುದು ವಾಸ್ತವ. ಮೊದಲು ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಬೇಕು. <br /> <br /> ರಾಹುಲ್ಗಾಂಧಿ ಜತೆ ಬೇರೆ ಯುವನಾಯಕರು ಕೂಡಾ ರಾಷ್ಟ್ರಮಟ್ಟದಲ್ಲಿ ಬೆಳೆಯಲು ಕಾಂಗ್ರೆಸ್ ಅವಕಾಶ ನೀಡಬೇಕು.ರಾಜಕಾರಣ ಎನ್ನುವುದು ಇತ್ತೀಚಿನ ದಿನಗಳಲ್ಲಿ ಒಂದು ದಂಧೆಯಾಗಿದೆ. ಹಣ ಮಾಡುವುದೇ ರಾಜಕಾರಣಿಗಳ ಗುರಿ ಎನ್ನುವಂತಾಗಿದೆ. <br /> <br /> ಪಕ್ಷದಲ್ಲಿ ಎಲ್ಲ ಅಧಿಕಾರವನ್ನು ಅನುಭವಿಸಿ ಆ ಅಧಿಕಾರ ತಮ್ಮ ಕುಟುಂಬಕ್ಕೇ ಇರಲಿ ಎಂದು ಲೆಕ್ಕಾಚಾರ ಹಾಕುವ ನಾಯಕರ ಸಂಕುಚಿತ ಮನೋಭಾವ ಮತ್ತು ಸ್ವಾರ್ಥದಿಂದಾಗಿ ಎಲ್ಲ ಪಕ್ಷಗಳೂ ನೈತಿಕವಾಗಿ ದಿವಾಳಿಯಾಗುತ್ತಿವೆ. <br /> <br /> ಆದರ್ಶ ಇಟ್ಟುಕೊಂಡು ಬರುವ ಯುವಕರಿಗೆ ಬೆಳೆಯುವ ಅವಕಾಶ ಇಲ್ಲದಾಗಿದೆ. ಇದರಿಂದ ಭ್ರಮನಿರಸನಗೊಂಡ ಯುವಕರು ರಾಜಕೀಯ ಎಂದರೆ ದೂರವೇ ಉಳಿಯುತ್ತಿದ್ದಾರೆ. ಇದು ನಿಜಕ್ಕೂ ದುರಂತ. <br /> <br /> ಹಣ ಮತ್ತು ಅಧಿಕಾರ ಹೊಂದಿರುವ ಕೆಲವೇ ನಾಯಕರು ತಮಗೆ ಪರಾಕು ಹಾಕುವ ಮತ್ತು ತಮ್ಮ ಹಿಂಬಾಲಕರಾಗುವವರಿಗೇ ಮಾತ್ರ ಮಣೆ ಹಾಕುತ್ತಿದ್ದಾರೆ. ಎಲ್ಲ ರಾಜಕಾರಣಿಗಳಲ್ಲೂ ಪುತ್ರ ವ್ಯಾಮೋಹ ಮತ್ತು ಸ್ವಜಾತಿ ಪ್ರೇಮ ಹೆಚ್ಚುತ್ತಿರುವುದು ಯುವಕರು ರಾಜಕಾರಣದಲ್ಲಿ ಆಸಕ್ತಿ ಕಳೆದುಕೊಳ್ಳಲು ಇನ್ನೊಂದು ಕಾರಣ.<br /> <br /> ಈ ಬೆಳವಣಿಗೆ ಪಕ್ಷಕ್ಕಾಗಲಿ, ಸಮಾಜಕ್ಕಾಗಲಿ ಒಳ್ಳೆಯದಲ್ಲ. ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಮಾಜಿಕ ಕಾಳಜಿಯೊಂದಿಗೆ ರಾಜಕೀಯಕ್ಕೆ ಕಾಲಿಡುವ ಯುವಜನರಿಗೆ ಅವಕಾಶವೇ ಇಲ್ಲದಂತಾಗಿದೆ. <br /> <br /> ಈ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ಸಿಗೆ ಚುನಾವಣೆ ನಡೆಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿರುವುದು ಒಂದು ಸ್ವಾಗತಾರ್ಹ ಬೆಳವಣಿಗೆ. ಇದು ಯುವ ಕಾಂಗ್ರೆಸ್ಸಿಗಷ್ಟೇ ಸೀಮಿತವಾಗುವುದು ಬೇಡ, ಪ್ರದೇಶ ಕಾಂಗ್ರೆಸ್ ಸಮಿತಿಗೂ ಇದೇ ರೀತಿ ಪ್ರಜಾತಾಂತ್ರಿಕ ರೀತಿಯಲ್ಲಿ ಚುನಾವಣೆ ನಡೆಯಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>