<p><strong>ಬೆಂಗಳೂರು: </strong>ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಮುಂದುವರಿಯಬೇಕೆ ಬೇಡವೇ ಎಂಬ ಪ್ರಶ್ನೆಗಳ ಮೂಲಕ ಜನಾಭಿಪ್ರಾಯ ಸಂಗ್ರಹಿಸಲು ರಾಜ್ಯ ಯುವ ಕಾಂಗ್ರೆಸ್, `ಯುವ ಧ್ವನಿ~ ಅಭಿಯಾನವನ್ನು ಹಮ್ಮಿಕೊಂಡಿದೆ. ಇದೇ ಗುರುವಾರದಿಂದ (ಆ. 16) ಒಂದು ತಿಂಗಳ ಕಾಲ ಅಭಿಯಾನ ನಡೆಯಲಿದೆ.<br /> <br /> ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್, `ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಜನಾಭಿಪ್ರಾಯ ಸಂಗ್ರಹ ನಡೆಯಲಿದೆ. <br /> <br /> ಮಿಸ್ ಕಾಲ್, ಎಸ್ಎಂಎಸ್, ಇ-ಮೇಲ್ ಮತ್ತು ಯುವ ಕಾಂಗ್ರೆಸ್ ಸ್ಥಾಪಿಸುವ ಮತಗಟ್ಟೆಗಳಲ್ಲಿ ನೇರ ಮತದಾನದ ಮೂಲಕ ಅಭಿಪ್ರಾಯ ವ್ಯಕ್ತಪಡಿಸಬಹುದು. ನಾಲ್ಕು ವರ್ಷಗಳಿಂದ ಅಧಿಕಾರದಲ್ಲಿ ಇರುವ ಬಿಜೆಪಿ, ರಾಜ್ಯಕ್ಕೆ ನೀಡಿರುವ ಕೊಡುಗೆ ಮತ್ತು ಈ ಅವಧಿಯಲ್ಲಿ ಆಗಿರುವ ಲೋಪಗಳನ್ನು ಪರಿಗಣಿಸಿ ಅಭಿಪ್ರಾಯ ವ್ಯಕ್ತಪಡಿಸುವಂತೆ ಜನತೆಗೆ ಮನವಿ ಮಾಡಲಾಗುವುದು~ ಎಂದರು.<br /> <br /> `ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರ, ದುರಾಡಳಿತಕ್ಕೆ ಸಂಬಂಧಿಸಿದ ಭಿತ್ತಿಪತ್ರಗಳ ಮೂಲಕ ರಾಜ್ಯದಾದ್ಯಂತ ಜನಜಾಗೃತಿ ಮೂಡಿಸಲಾಗುವುದು. ಅಭಿಯಾನಕ್ಕಾಗಿಯೇ `ಯುವಧ್ವನಿ.ಕಾಮ್~ ಎಂಬ ಅಂತರ್ಜಾಲ ತಾಣ ಸಜ್ಜುಗೊಳಿಸಲಾಗಿದೆ. ಬಿಜೆಪಿ ನಾಯಕರ ವಿರುದ್ಧದ ವಿವಿಧ ಆರೋಪಗಳ ಪಟ್ಟಿಯನ್ನು ಈ ತಾಣದಲ್ಲಿ ಪ್ರಕಟಿಸಲಾಗುವುದು~ ಎಂದರು.<br /> <br /> ಮಂಗಳೂರಿನಲ್ಲಿ ಇತ್ತೀಚೆಗೆ ಯುವಕ-ಯುವತಿಯರ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಬೇಜವಾಬ್ದಾರಿ ನಡವಳಿಕೆ ಪ್ರದರ್ಶಿಸುತ್ತಿದೆ. ಪೊಲೀಸರು, ಅದು ಜನ್ಮದಿನಾಚರಣೆ ಪಾರ್ಟಿ ಎನ್ನುತ್ತಿದ್ದಾರೆ. <br /> <br /> ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ, ದಾಂದಲೆ ನಡೆಸಿದ್ದಾರೆ. ರಾಜ್ಯ ಮಹಿಳಾ ಆಯೋಗ ಅಲ್ಲಿ ಮಾದಕ ವಸ್ತುಗಳ ಬಳಕೆ ಆಗಿದೆ ಎನ್ನುತ್ತಿದೆ. ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು.<br /> <br /> `ಉತ್ತಮ ಆಡಳಿತ, ಭ್ರಷ್ಟಾಚಾರ ನಿಯಂತ್ರಣ ಮತ್ತು ಸಾಮಾಜಿಕ ನ್ಯಾಯ ದೊರೆಯಬೇಕು ಎಂಬುದು ಯುವ ಕಾಂಗ್ರೆಸ್ನ ನಿಲುವು. ಈ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಯುವ ಜನರನ್ನು ಸಜ್ಜುಗೊಳಿಸಲು ಯುವ ಧ್ವನಿ ಅಭಿಯಾನ ಆಯೋಜಿಸಲಾಗಿದೆ.<br /> <br /> ಶುದ್ಧ ಮತ್ತು ಸಚ್ಚಾರಿತ್ರ್ಯದ ರಾಜಕಾರಣ ಈ ಅಭಿಯಾನದ ಗುರಿ. ಮುಂದೆ ಮತ್ತಷ್ಟು ವಿಷಯಗಳನ್ನು ಆಧರಿಸಿ ಅಭಿಯಾನ ಮುಂದುವರಿಸುತ್ತೇವೆ~ ಎಂದು ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರಿಯಾಂಕ ಖರ್ಗೆ ಹೇಳಿದರು.<br /> <br /> <strong>ಅಭಿಯಾನ ಹೇಗೆ?</strong><br /> ಬಿಜೆಪಿ ಸರ್ಕಾರ ಮುಂದುವರಿಯಬೇಕೆ? ಬೇಡವೆ? ಎಂಬುದು ಪ್ರಶ್ನೆ.<br /> <a href="http://www.yuvadhwani.com">www.yuvadhwani.com</a> ಮೂಲಕ ಆನ್ಲೈನ್ ಮತದಾನ<br /> 56767 ಸಂಖ್ಯೆಗೆ `ಹೌದು~ ಅಥವಾ `ಇಲ್ಲ~ ಎಂಬ ಎಸ್ಎಂಎಸ್ ಕಳುಹಿಸಬಹುದು. <br /> <br /> `ಬೇಡ~ ಎನ್ನುವವರು ದೂರವಾಣಿಸಂಖ್ಯೆ 080-67006531ಗೆ ಮಿಸ್ ಕಾಲ್ ನೀಡಬಹುದು.<br /> ಯುವ ಕಾಂಗ್ರೆಸ್ ಸ್ಥಾಪಿಸುವ ಮತಗಟ್ಟೆಗಳಿಗೆ ತೆರಳಿ ನೇರ ಮತದಾನ ಮಾಡಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಮುಂದುವರಿಯಬೇಕೆ ಬೇಡವೇ ಎಂಬ ಪ್ರಶ್ನೆಗಳ ಮೂಲಕ ಜನಾಭಿಪ್ರಾಯ ಸಂಗ್ರಹಿಸಲು ರಾಜ್ಯ ಯುವ ಕಾಂಗ್ರೆಸ್, `ಯುವ ಧ್ವನಿ~ ಅಭಿಯಾನವನ್ನು ಹಮ್ಮಿಕೊಂಡಿದೆ. ಇದೇ ಗುರುವಾರದಿಂದ (ಆ. 16) ಒಂದು ತಿಂಗಳ ಕಾಲ ಅಭಿಯಾನ ನಡೆಯಲಿದೆ.<br /> <br /> ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್, `ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಜನಾಭಿಪ್ರಾಯ ಸಂಗ್ರಹ ನಡೆಯಲಿದೆ. <br /> <br /> ಮಿಸ್ ಕಾಲ್, ಎಸ್ಎಂಎಸ್, ಇ-ಮೇಲ್ ಮತ್ತು ಯುವ ಕಾಂಗ್ರೆಸ್ ಸ್ಥಾಪಿಸುವ ಮತಗಟ್ಟೆಗಳಲ್ಲಿ ನೇರ ಮತದಾನದ ಮೂಲಕ ಅಭಿಪ್ರಾಯ ವ್ಯಕ್ತಪಡಿಸಬಹುದು. ನಾಲ್ಕು ವರ್ಷಗಳಿಂದ ಅಧಿಕಾರದಲ್ಲಿ ಇರುವ ಬಿಜೆಪಿ, ರಾಜ್ಯಕ್ಕೆ ನೀಡಿರುವ ಕೊಡುಗೆ ಮತ್ತು ಈ ಅವಧಿಯಲ್ಲಿ ಆಗಿರುವ ಲೋಪಗಳನ್ನು ಪರಿಗಣಿಸಿ ಅಭಿಪ್ರಾಯ ವ್ಯಕ್ತಪಡಿಸುವಂತೆ ಜನತೆಗೆ ಮನವಿ ಮಾಡಲಾಗುವುದು~ ಎಂದರು.<br /> <br /> `ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರ, ದುರಾಡಳಿತಕ್ಕೆ ಸಂಬಂಧಿಸಿದ ಭಿತ್ತಿಪತ್ರಗಳ ಮೂಲಕ ರಾಜ್ಯದಾದ್ಯಂತ ಜನಜಾಗೃತಿ ಮೂಡಿಸಲಾಗುವುದು. ಅಭಿಯಾನಕ್ಕಾಗಿಯೇ `ಯುವಧ್ವನಿ.ಕಾಮ್~ ಎಂಬ ಅಂತರ್ಜಾಲ ತಾಣ ಸಜ್ಜುಗೊಳಿಸಲಾಗಿದೆ. ಬಿಜೆಪಿ ನಾಯಕರ ವಿರುದ್ಧದ ವಿವಿಧ ಆರೋಪಗಳ ಪಟ್ಟಿಯನ್ನು ಈ ತಾಣದಲ್ಲಿ ಪ್ರಕಟಿಸಲಾಗುವುದು~ ಎಂದರು.<br /> <br /> ಮಂಗಳೂರಿನಲ್ಲಿ ಇತ್ತೀಚೆಗೆ ಯುವಕ-ಯುವತಿಯರ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಬೇಜವಾಬ್ದಾರಿ ನಡವಳಿಕೆ ಪ್ರದರ್ಶಿಸುತ್ತಿದೆ. ಪೊಲೀಸರು, ಅದು ಜನ್ಮದಿನಾಚರಣೆ ಪಾರ್ಟಿ ಎನ್ನುತ್ತಿದ್ದಾರೆ. <br /> <br /> ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ, ದಾಂದಲೆ ನಡೆಸಿದ್ದಾರೆ. ರಾಜ್ಯ ಮಹಿಳಾ ಆಯೋಗ ಅಲ್ಲಿ ಮಾದಕ ವಸ್ತುಗಳ ಬಳಕೆ ಆಗಿದೆ ಎನ್ನುತ್ತಿದೆ. ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು.<br /> <br /> `ಉತ್ತಮ ಆಡಳಿತ, ಭ್ರಷ್ಟಾಚಾರ ನಿಯಂತ್ರಣ ಮತ್ತು ಸಾಮಾಜಿಕ ನ್ಯಾಯ ದೊರೆಯಬೇಕು ಎಂಬುದು ಯುವ ಕಾಂಗ್ರೆಸ್ನ ನಿಲುವು. ಈ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಯುವ ಜನರನ್ನು ಸಜ್ಜುಗೊಳಿಸಲು ಯುವ ಧ್ವನಿ ಅಭಿಯಾನ ಆಯೋಜಿಸಲಾಗಿದೆ.<br /> <br /> ಶುದ್ಧ ಮತ್ತು ಸಚ್ಚಾರಿತ್ರ್ಯದ ರಾಜಕಾರಣ ಈ ಅಭಿಯಾನದ ಗುರಿ. ಮುಂದೆ ಮತ್ತಷ್ಟು ವಿಷಯಗಳನ್ನು ಆಧರಿಸಿ ಅಭಿಯಾನ ಮುಂದುವರಿಸುತ್ತೇವೆ~ ಎಂದು ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರಿಯಾಂಕ ಖರ್ಗೆ ಹೇಳಿದರು.<br /> <br /> <strong>ಅಭಿಯಾನ ಹೇಗೆ?</strong><br /> ಬಿಜೆಪಿ ಸರ್ಕಾರ ಮುಂದುವರಿಯಬೇಕೆ? ಬೇಡವೆ? ಎಂಬುದು ಪ್ರಶ್ನೆ.<br /> <a href="http://www.yuvadhwani.com">www.yuvadhwani.com</a> ಮೂಲಕ ಆನ್ಲೈನ್ ಮತದಾನ<br /> 56767 ಸಂಖ್ಯೆಗೆ `ಹೌದು~ ಅಥವಾ `ಇಲ್ಲ~ ಎಂಬ ಎಸ್ಎಂಎಸ್ ಕಳುಹಿಸಬಹುದು. <br /> <br /> `ಬೇಡ~ ಎನ್ನುವವರು ದೂರವಾಣಿಸಂಖ್ಯೆ 080-67006531ಗೆ ಮಿಸ್ ಕಾಲ್ ನೀಡಬಹುದು.<br /> ಯುವ ಕಾಂಗ್ರೆಸ್ ಸ್ಥಾಪಿಸುವ ಮತಗಟ್ಟೆಗಳಿಗೆ ತೆರಳಿ ನೇರ ಮತದಾನ ಮಾಡಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>