<p><strong>ಸುರತ್ಕಲ್: </strong>ಶುಕ್ರವಾರ ನಸು ಮುಂಜಾವಿನಿಂದ ಇಳಿ ಸಂಜೆಯವರೆಗೆ ಪಣಂಬೂರು ಕಡಲ ತಡಿಯಲ್ಲಿ ಯುವ ಯುವಜನರದ್ದೇ ಹಬ್ಬ . ಎಲ್ಲಿ ನೋಡಿದರಲ್ಲಿ ವಿದ್ಯಾರ್ಥಿ ಸಮುದಾಯ, ಯುವಕ ಯುವತಿಯರ ಕಿಲಕಿಲ ನಗು, ಓಡಾಟ ತುಂಟಾಟಗಳದ್ದೇ ಸದ್ದು.<br /> <br /> ಏನನ್ನಾದರೂ ಸಾಧಿಸ ಬೇಕು ಸ್ಪರ್ಧೆಯಲ್ಲಿ ಗೆಲ್ಲಬೇಕು ತನ್ನ ಬಗಲಿಗೂ ಒಂದು ಬಹುಮಾನ ಬೀಳಬೇಕು ಎನ್ನುವ ಹುರುಪಿನದ್ದೇ ಓಡಾಟ ಇದೆಲ್ಲ ನೋಡುಗರ ಕಣ್ಣಿಗೆ ರಸದೌತಣ ನೀಡಿತ್ತು. ಇದಕ್ಕೆ ಮುಖ್ಯ ಕಾರಣ ಪಣಂಬೂರು ಬೀಚಿನಲ್ಲಿ ಶುಕ್ರವಾರ ನಡೆದಿದ್ದ ಯೂತ್ ಫೆಸ್ಟ್.<br /> ಎಚ್ಎಚ್ಪಿ ಎಂಟರ್ಟೈನ್ಮೆಂಟ್ ಸಂಸ್ಥೆ ಯುವ ಸಮುದಾಯವನ್ನೇ ಗುರಿಯಾಗಿಸಿಕೊಂಡು, ಯುವಸಮುದಾಯಕ್ಕೆ ವಿಶೇಷ ಮನರಂಜನೆ ನೀಡಲು ಯೂತ್ ಫೆಸ್ಟ್ ಆಯೋಜಿಸಿತ್ತು. ಇದು ಪ್ರತಿಭಾ ವಿಕಸನದ ಮುಖ್ಯ ವೇದಿಕೆಯಾಗಿತ್ತು.<br /> <br /> ಸಂಗೀತ, ನೃತ್ಯ, ಬೈಕ್ ಸಾಹಸ ಪ್ರದರ್ಶನ, ಮರಳು ಶಿಲ್ಪ, ಬೀಚ್ ಬಾಕ್ಸಿಂಗ್ ಇನ್ನೂ ಹಲವಾರು ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿತ್ತು. ಸಂಜನಾ ಪೈ ಚೆಂಡೆ ಬಾರಿಸುವ ಮೂಲಕ 2 ದಿನಗಳ ಉತ್ಸವಕ್ಕೆ ಚಾಲನೆ ನೀಡಿದರು. ಹೃದಯ ಪೈ, ಸಂಕೀರ್ತನ್, ಕೀರ್ತಿಕುಮಾರ್, ನರಸಿಂಹ, ಅನ್ನು ಮಂಗಳೂರು ,ಪಣಂಬೂರು ಬೀಚ್ ಅಭಿವೃದ್ದಿ ಸಮಿತಿಯ ಸಿಇಒ ಯತೀಶ್ ಬೈಕಂಪಾಡಿ ಮುಂತಾದವರು ಉಪಸ್ಥಿತರಿದ್ದರು.<br /> <br /> ಡಿ.14ರ ಶನಿವಾರ ಖ್ಯಾತ ಡಿಜೆ ಕಿರಣ್ ಕಾಮತ್ ಅವರು ಮನರಂಜನಾ ಕಾರ್ಯಕ್ರಮ ನೀಡಲಿದ್ದು, ಡಿಜೆ ವ್ಲಾಕ್ಯೂ, ಡಿಜೆ ಲೋಗನ್, ಡಿಜೆ ಅದಿತಿ ಆಳ್ವ ಮತ್ತಿತರರು ಭಾಗವಹಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರತ್ಕಲ್: </strong>ಶುಕ್ರವಾರ ನಸು ಮುಂಜಾವಿನಿಂದ ಇಳಿ ಸಂಜೆಯವರೆಗೆ ಪಣಂಬೂರು ಕಡಲ ತಡಿಯಲ್ಲಿ ಯುವ ಯುವಜನರದ್ದೇ ಹಬ್ಬ . ಎಲ್ಲಿ ನೋಡಿದರಲ್ಲಿ ವಿದ್ಯಾರ್ಥಿ ಸಮುದಾಯ, ಯುವಕ ಯುವತಿಯರ ಕಿಲಕಿಲ ನಗು, ಓಡಾಟ ತುಂಟಾಟಗಳದ್ದೇ ಸದ್ದು.<br /> <br /> ಏನನ್ನಾದರೂ ಸಾಧಿಸ ಬೇಕು ಸ್ಪರ್ಧೆಯಲ್ಲಿ ಗೆಲ್ಲಬೇಕು ತನ್ನ ಬಗಲಿಗೂ ಒಂದು ಬಹುಮಾನ ಬೀಳಬೇಕು ಎನ್ನುವ ಹುರುಪಿನದ್ದೇ ಓಡಾಟ ಇದೆಲ್ಲ ನೋಡುಗರ ಕಣ್ಣಿಗೆ ರಸದೌತಣ ನೀಡಿತ್ತು. ಇದಕ್ಕೆ ಮುಖ್ಯ ಕಾರಣ ಪಣಂಬೂರು ಬೀಚಿನಲ್ಲಿ ಶುಕ್ರವಾರ ನಡೆದಿದ್ದ ಯೂತ್ ಫೆಸ್ಟ್.<br /> ಎಚ್ಎಚ್ಪಿ ಎಂಟರ್ಟೈನ್ಮೆಂಟ್ ಸಂಸ್ಥೆ ಯುವ ಸಮುದಾಯವನ್ನೇ ಗುರಿಯಾಗಿಸಿಕೊಂಡು, ಯುವಸಮುದಾಯಕ್ಕೆ ವಿಶೇಷ ಮನರಂಜನೆ ನೀಡಲು ಯೂತ್ ಫೆಸ್ಟ್ ಆಯೋಜಿಸಿತ್ತು. ಇದು ಪ್ರತಿಭಾ ವಿಕಸನದ ಮುಖ್ಯ ವೇದಿಕೆಯಾಗಿತ್ತು.<br /> <br /> ಸಂಗೀತ, ನೃತ್ಯ, ಬೈಕ್ ಸಾಹಸ ಪ್ರದರ್ಶನ, ಮರಳು ಶಿಲ್ಪ, ಬೀಚ್ ಬಾಕ್ಸಿಂಗ್ ಇನ್ನೂ ಹಲವಾರು ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿತ್ತು. ಸಂಜನಾ ಪೈ ಚೆಂಡೆ ಬಾರಿಸುವ ಮೂಲಕ 2 ದಿನಗಳ ಉತ್ಸವಕ್ಕೆ ಚಾಲನೆ ನೀಡಿದರು. ಹೃದಯ ಪೈ, ಸಂಕೀರ್ತನ್, ಕೀರ್ತಿಕುಮಾರ್, ನರಸಿಂಹ, ಅನ್ನು ಮಂಗಳೂರು ,ಪಣಂಬೂರು ಬೀಚ್ ಅಭಿವೃದ್ದಿ ಸಮಿತಿಯ ಸಿಇಒ ಯತೀಶ್ ಬೈಕಂಪಾಡಿ ಮುಂತಾದವರು ಉಪಸ್ಥಿತರಿದ್ದರು.<br /> <br /> ಡಿ.14ರ ಶನಿವಾರ ಖ್ಯಾತ ಡಿಜೆ ಕಿರಣ್ ಕಾಮತ್ ಅವರು ಮನರಂಜನಾ ಕಾರ್ಯಕ್ರಮ ನೀಡಲಿದ್ದು, ಡಿಜೆ ವ್ಲಾಕ್ಯೂ, ಡಿಜೆ ಲೋಗನ್, ಡಿಜೆ ಅದಿತಿ ಆಳ್ವ ಮತ್ತಿತರರು ಭಾಗವಹಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>