<p><strong>ಬೆಂಗಳೂರು:</strong> ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಹುತಾತ್ಮ ಯೋಧ ಅಬ್ದುಲ್ ಹಮೀದ್ ಅವರ ಸ್ಮಾರಕವನ್ನು ಫ್ಲಾಗ್ಸ್ ಆಫ್ ಹಾನರ್ ಪ್ರತಿಷ್ಠಾನವು ನವೀಕರಿಸಿದೆ.<br /> <br /> ಯೋಧನ ಹುಟ್ಟೂರಾದ ಉತ್ತರ ಪ್ರದೇಶದ ಘಾಜಿಪುರ್ ಜಿಲ್ಲೆಯ ದಾಮುಪುರದಲ್ಲಿದ್ದ ಸ್ಮಾರಕವು ಸಂಪೂರ್ಣವಾಗಿ ಹಾಳಾಗಿತ್ತು. <br /> <br /> ಹಮೀದ್ ಅವರ 46ನೇ ಪುಣ್ಯಸ್ಮರಣೆಯ ದಿನವಾದ ಸೆಪ್ಟೆಂಬರ್ 10ರೊಳಗೆ ಪುನರ್ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವ ಭರವಸೆಯನ್ನು ಪ್ರತಿಷ್ಠಾನ ನೀಡಿತ್ತು.<br /> <br /> ಅದರಂತೆ ಹಮೀದ್ ಅವರ ಹೊಸ ಪ್ರತಿಮೆ, ನವೀಕೃತ ಸ್ಮಾರಕ ಗೋಪುರ, ಆವರಣದ ಗೋಡೆಗಳ ದುರಸ್ತಿ, ಒಂದು ಎಕರೆ ವಿಸ್ತೀರ್ಣದ ಉದ್ಯಾನದ ನವೀಕರಣ ಕಾರ್ಯವನ್ನು ಸಂಸ್ಥೆ ಪೂರ್ಣಗೊಳಿಸಿದೆ. <br /> ಇದಕ್ಕೆ ಯೋಧರ ಕುಟುಂಬ ಪ್ರತಿಷ್ಠಾನಕ್ಕೆ ವಂದನೆ ಸಲ್ಲಿಸಿದೆ.<br /> <br /> ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಷ್ಠಾನದ ಸ್ಥಾಪಕರಾದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, `ದೇಶದ ಹೆಮ್ಮೆಯ ಪುತ್ರರಲ್ಲಿ ಒಬ್ಬರಾದ ಹಮೀದ್ ಅವರ ಸ್ಮಾರಕವನ್ನು ನವೀಕರಿಸಲು ನೆರವಾಗಿದ್ದಕ್ಕೆ ಹೆಮ್ಮೆ ಎನಿಸಿದೆ. ಈ ಸ್ಮಾರಕ ಯುವ ಜನತೆಗೆ ನಾಯಕತ್ವ ಹಾಗೂ ಸಾಹಸ ಮನೋಭಾವ ಬೆಳೆಸಿಕೊಳ್ಳಲು ಪ್ರೇರಣೆ ನೀಡಲಿ ಎಂಬುದು ನನ್ನ ಆಶಯ~ ಎಂದರು.<br /> <br /> `ಸ್ಮಾರಕದ ಗೋಡೆಗಳು ಬಿರುಕು ಬಿಟ್ಟಿದ್ದರೆ, ಪ್ರತಿಮೆ ಮಸುಕಾಗಿತ್ತು. ಪರಿಣಾಮವಾಗಿ ಇಡೀ ಸ್ಮಾರಕ ಕಳೆಗುಂದಿತ್ತು. <br /> <br /> ಆ ಕಾರಣಕ್ಕೆ ಸ್ಮಾರಕವನ್ನು ನವೀಕರಿಸಲು ನಿರ್ಧರಿಸಲಾಯಿತು. ಪುಣ್ಯತಿಥಿ ಸಂದರ್ಭದ ಹೊತ್ತಿಗೆ ನವೀಕರಣ ಕಾರ್ಯ ಪೂರ್ಣಗೊಂಡಿರುವುದು ತೃಪ್ತಿ ತಂದಿದೆ~ ಎಂದು ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಹುತಾತ್ಮ ಯೋಧ ಅಬ್ದುಲ್ ಹಮೀದ್ ಅವರ ಸ್ಮಾರಕವನ್ನು ಫ್ಲಾಗ್ಸ್ ಆಫ್ ಹಾನರ್ ಪ್ರತಿಷ್ಠಾನವು ನವೀಕರಿಸಿದೆ.<br /> <br /> ಯೋಧನ ಹುಟ್ಟೂರಾದ ಉತ್ತರ ಪ್ರದೇಶದ ಘಾಜಿಪುರ್ ಜಿಲ್ಲೆಯ ದಾಮುಪುರದಲ್ಲಿದ್ದ ಸ್ಮಾರಕವು ಸಂಪೂರ್ಣವಾಗಿ ಹಾಳಾಗಿತ್ತು. <br /> <br /> ಹಮೀದ್ ಅವರ 46ನೇ ಪುಣ್ಯಸ್ಮರಣೆಯ ದಿನವಾದ ಸೆಪ್ಟೆಂಬರ್ 10ರೊಳಗೆ ಪುನರ್ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವ ಭರವಸೆಯನ್ನು ಪ್ರತಿಷ್ಠಾನ ನೀಡಿತ್ತು.<br /> <br /> ಅದರಂತೆ ಹಮೀದ್ ಅವರ ಹೊಸ ಪ್ರತಿಮೆ, ನವೀಕೃತ ಸ್ಮಾರಕ ಗೋಪುರ, ಆವರಣದ ಗೋಡೆಗಳ ದುರಸ್ತಿ, ಒಂದು ಎಕರೆ ವಿಸ್ತೀರ್ಣದ ಉದ್ಯಾನದ ನವೀಕರಣ ಕಾರ್ಯವನ್ನು ಸಂಸ್ಥೆ ಪೂರ್ಣಗೊಳಿಸಿದೆ. <br /> ಇದಕ್ಕೆ ಯೋಧರ ಕುಟುಂಬ ಪ್ರತಿಷ್ಠಾನಕ್ಕೆ ವಂದನೆ ಸಲ್ಲಿಸಿದೆ.<br /> <br /> ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಷ್ಠಾನದ ಸ್ಥಾಪಕರಾದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, `ದೇಶದ ಹೆಮ್ಮೆಯ ಪುತ್ರರಲ್ಲಿ ಒಬ್ಬರಾದ ಹಮೀದ್ ಅವರ ಸ್ಮಾರಕವನ್ನು ನವೀಕರಿಸಲು ನೆರವಾಗಿದ್ದಕ್ಕೆ ಹೆಮ್ಮೆ ಎನಿಸಿದೆ. ಈ ಸ್ಮಾರಕ ಯುವ ಜನತೆಗೆ ನಾಯಕತ್ವ ಹಾಗೂ ಸಾಹಸ ಮನೋಭಾವ ಬೆಳೆಸಿಕೊಳ್ಳಲು ಪ್ರೇರಣೆ ನೀಡಲಿ ಎಂಬುದು ನನ್ನ ಆಶಯ~ ಎಂದರು.<br /> <br /> `ಸ್ಮಾರಕದ ಗೋಡೆಗಳು ಬಿರುಕು ಬಿಟ್ಟಿದ್ದರೆ, ಪ್ರತಿಮೆ ಮಸುಕಾಗಿತ್ತು. ಪರಿಣಾಮವಾಗಿ ಇಡೀ ಸ್ಮಾರಕ ಕಳೆಗುಂದಿತ್ತು. <br /> <br /> ಆ ಕಾರಣಕ್ಕೆ ಸ್ಮಾರಕವನ್ನು ನವೀಕರಿಸಲು ನಿರ್ಧರಿಸಲಾಯಿತು. ಪುಣ್ಯತಿಥಿ ಸಂದರ್ಭದ ಹೊತ್ತಿಗೆ ನವೀಕರಣ ಕಾರ್ಯ ಪೂರ್ಣಗೊಂಡಿರುವುದು ತೃಪ್ತಿ ತಂದಿದೆ~ ಎಂದು ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>