<p><strong>ಬೆಂಗಳೂರು</strong>: ‘ರಫ್ತು ವಹಿವಾಟು ಉತ್ತೇಜಿಸಲು ವಾಣಿಜ್ಯ ಸಚಿವಾಲಯವು ಹಲವಾರು ಉತ್ತೇಜನಾ ಕ್ರಮಗಳನ್ನು ಕೈಗೊಂಡಿದೆ’ ಎಂದು ವಿದೇಶಿ ವ್ಯಾಪಾರದ ಹೆಚ್ಚುವರಿ ಮಹಾ ನಿರ್ದೇಶಕ ವಿಜಯ್ ಕುಮಾರ್ ಹೇಳಿದರು.<br /> <br /> ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿದೇಶಿ ವ್ಯಾಪಾರ ನೀತಿ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.<br /> <br /> ‘ಎರಡು ವರ್ಷಗಳಲ್ಲಿ ದೇಶಿ ರಫ್ತು ವಹಿವಾಟು ಗಣನೀಯವಾಗಿ ಕಡಿಮೆಯಾಗಿದೆ. ರಫ್ತು ವಹಿವಾಟಿನಿಂದ ಆಗುವ ಪ್ರಯೋಜನಗಳನ್ನು ಉದ್ಯಮಿಗಳಿಗೆ ಪರಿಚಯಿಸಲು ವಾಣಿಜ್ಯ ಸಚಿವಾಲಯವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹಲವಾರು ನಿಯಮಗಳನ್ನು ಸಡಿಲಿಸಲಾಗಿದೆ. ವಿಳಂಬ ತಪ್ಪಿಸಲಾಗಿದೆ.</p>.<p>ವಿದೇಶ ವ್ಯಾಪಾರದ ಮಹಾ ನಿರ್ದೇಶನಾಲಯದ ಬೆಂಗಳೂರು ಕಚೇರಿಯು ಹುಬ್ಬಳ್ಳಿ, ಚಿಕ್ಕಮಗಳೂರು, ಮಂಗಳೂರಿನಲ್ಲಿ ರಫ್ತು ಉತ್ತೇಜನಾ ಕಾರ್ಯಕ್ರಮಗಳ ಬಗ್ಗೆ ಉದ್ದಿಮೆದಾರರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು. ‘ನಿರ್ಯಾತ ಬಂಧು’ ಯೋಜನೆಯ ರೂಪು ರೇಷೆಗಳನ್ನೂ ಅವರು ಪರಿಚಯಿಸಿದರು.<br /> <br /> ‘ರಫ್ತುದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಇಲಾಖೆ ಅಗತ್ಯ ಸಹಕಾರ ನೀಡಲಿದೆ’ ಎಂದೂ ತಿಳಿಸಿದರು.<br /> <br /> ‘ಕಾಸಿಯಾ’ ಅಧ್ಯಕ್ಷ ಎ.ಪದ್ಮನಾಭ ಅವರು ಮಾತನಾಡಿ, ‘ಇಂತಹ ಕಾರ್ಯಕ್ರಮಗಳಿಂದ ರಫ್ತುದಾರರು ಮತ್ತು ಇಲಾಖೆ ಮಧ್ಯೆ ಇರುವ ಅಂತರ ಕಡಿಮೆಯಾಗುವುದು’ ಎಂದರು.<br /> <br /> ‘ಸಣ್ಣ ಕೈಗಾರಿಕೆಗಳು ಜಾಗತಿಕವಾಗಿ ಮುಕ್ತ ಮಾರುಕಟ್ಟೆ ಎದುರಿಸಲು ರಫ್ತು ಉತ್ತೇಜನಾ ಕ್ರಮಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ’ ಎಂದರು.<br /> ರಫ್ತುದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆರ್.ರಾಜು ಮನವಿ ಸಲ್ಲಿಸಿದರು.<br /> <br /> ವಿದೇಶ ವ್ಯಾಪಾರ ನೀತಿಯ ಸಹಾಯಕ ಮಹಾ ನಿರ್ದೇಶಕ ಮೊಹಮ್ಮದ್ ಮೊಹಿನ್ ಅಫಾಕ್, ‘ಕಾಸಿಯಾ’ದ ಗೌರವ ಕಾರ್ಯದರ್ಶಿ ಬಿ.ಪ್ರವೀಣ್ ಮಾತನಾಡಿದರು. ಸಭೆಯಲ್ಲಿ ಹಾಜರಿದ್ದ ರಫ್ತುದಾರರು ತಮ್ಮ ಅನೇಕ ಅನುಮಾನಗಳಿಗೆ ಸ್ಪಷ್ಟನೆ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ರಫ್ತು ವಹಿವಾಟು ಉತ್ತೇಜಿಸಲು ವಾಣಿಜ್ಯ ಸಚಿವಾಲಯವು ಹಲವಾರು ಉತ್ತೇಜನಾ ಕ್ರಮಗಳನ್ನು ಕೈಗೊಂಡಿದೆ’ ಎಂದು ವಿದೇಶಿ ವ್ಯಾಪಾರದ ಹೆಚ್ಚುವರಿ ಮಹಾ ನಿರ್ದೇಶಕ ವಿಜಯ್ ಕುಮಾರ್ ಹೇಳಿದರು.<br /> <br /> ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿದೇಶಿ ವ್ಯಾಪಾರ ನೀತಿ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.<br /> <br /> ‘ಎರಡು ವರ್ಷಗಳಲ್ಲಿ ದೇಶಿ ರಫ್ತು ವಹಿವಾಟು ಗಣನೀಯವಾಗಿ ಕಡಿಮೆಯಾಗಿದೆ. ರಫ್ತು ವಹಿವಾಟಿನಿಂದ ಆಗುವ ಪ್ರಯೋಜನಗಳನ್ನು ಉದ್ಯಮಿಗಳಿಗೆ ಪರಿಚಯಿಸಲು ವಾಣಿಜ್ಯ ಸಚಿವಾಲಯವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹಲವಾರು ನಿಯಮಗಳನ್ನು ಸಡಿಲಿಸಲಾಗಿದೆ. ವಿಳಂಬ ತಪ್ಪಿಸಲಾಗಿದೆ.</p>.<p>ವಿದೇಶ ವ್ಯಾಪಾರದ ಮಹಾ ನಿರ್ದೇಶನಾಲಯದ ಬೆಂಗಳೂರು ಕಚೇರಿಯು ಹುಬ್ಬಳ್ಳಿ, ಚಿಕ್ಕಮಗಳೂರು, ಮಂಗಳೂರಿನಲ್ಲಿ ರಫ್ತು ಉತ್ತೇಜನಾ ಕಾರ್ಯಕ್ರಮಗಳ ಬಗ್ಗೆ ಉದ್ದಿಮೆದಾರರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು. ‘ನಿರ್ಯಾತ ಬಂಧು’ ಯೋಜನೆಯ ರೂಪು ರೇಷೆಗಳನ್ನೂ ಅವರು ಪರಿಚಯಿಸಿದರು.<br /> <br /> ‘ರಫ್ತುದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಇಲಾಖೆ ಅಗತ್ಯ ಸಹಕಾರ ನೀಡಲಿದೆ’ ಎಂದೂ ತಿಳಿಸಿದರು.<br /> <br /> ‘ಕಾಸಿಯಾ’ ಅಧ್ಯಕ್ಷ ಎ.ಪದ್ಮನಾಭ ಅವರು ಮಾತನಾಡಿ, ‘ಇಂತಹ ಕಾರ್ಯಕ್ರಮಗಳಿಂದ ರಫ್ತುದಾರರು ಮತ್ತು ಇಲಾಖೆ ಮಧ್ಯೆ ಇರುವ ಅಂತರ ಕಡಿಮೆಯಾಗುವುದು’ ಎಂದರು.<br /> <br /> ‘ಸಣ್ಣ ಕೈಗಾರಿಕೆಗಳು ಜಾಗತಿಕವಾಗಿ ಮುಕ್ತ ಮಾರುಕಟ್ಟೆ ಎದುರಿಸಲು ರಫ್ತು ಉತ್ತೇಜನಾ ಕ್ರಮಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ’ ಎಂದರು.<br /> ರಫ್ತುದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆರ್.ರಾಜು ಮನವಿ ಸಲ್ಲಿಸಿದರು.<br /> <br /> ವಿದೇಶ ವ್ಯಾಪಾರ ನೀತಿಯ ಸಹಾಯಕ ಮಹಾ ನಿರ್ದೇಶಕ ಮೊಹಮ್ಮದ್ ಮೊಹಿನ್ ಅಫಾಕ್, ‘ಕಾಸಿಯಾ’ದ ಗೌರವ ಕಾರ್ಯದರ್ಶಿ ಬಿ.ಪ್ರವೀಣ್ ಮಾತನಾಡಿದರು. ಸಭೆಯಲ್ಲಿ ಹಾಜರಿದ್ದ ರಫ್ತುದಾರರು ತಮ್ಮ ಅನೇಕ ಅನುಮಾನಗಳಿಗೆ ಸ್ಪಷ್ಟನೆ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>