<p>ಸೊರಬ: ರಸಗೊಬ್ಬರ ಮಾರಾಟ ಕೇಂದ್ರ ಹಾಗೂ ರೈತರ ನಡುವೆ ಗೊಬ್ಬರ ಹಂಚಿಕೆ ವೇಳೆ ಗದ್ದಲ ಉಂಟಾಗಿ 7 ಚೀಲ ಗೊಬ್ಬರ ನಾಪತ್ತೆಯಾದ ಘಟನೆ ಬುಧವಾರ ನಡೆಯಿತು.<br /> <br /> ಆನವಟ್ಟಿಯ ವ್ಯವಸಾಯೋತ್ಪನ್ನ ಮಾರುಕಟ್ಟೆ ಮೂಲಕ ಚೀಲವೊಂದಕ್ಕೆ ್ಙ 320 ರಂತೆ ಗೊಬ್ಬರ ವಿತರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕೃಷಿ ಇಲಾಖೆ ಆದೇಶದ ಪ್ರಕಾರ ್ಙ 310 ಗಿಂತ ಹೆಚ್ಚು ತೆಗೆದುಕೊಳ್ಳುವಂತಿಲ್ಲ ಎಂದು ರಾಜ್ಯ ರೈತಸಂಘದ ಘಟಕ ಹಾಗೂ ರೈತರು ಆಕ್ಷೇಪ ವ್ಯಕ್ತಪಡಿಸಿದರು.<br /> <br /> ಗೊಬ್ಬರ ತರಿಸಿಕೊಳ್ಳಲು ್ಙ 317ಕ್ಕೂ ಹೆಚ್ಚು ವೆಚ್ಚ ತಗಲುತ್ತಿದೆ ಎಂದು ವಿವರಿಸಿದ ಸಂಘದ ಅಧ್ಯಕ್ಷ ರಾಜೇಂದ್ರನಾಯ್ಕ, ಸಂಘಕ್ಕೆ ನಷ್ಟವಾಗದಂತೆ, ರೈತರಿಗೆ ಹೊರೆ ಆಗದಂತೆ ನೋಡಿಕೊಳ್ಳಲು ದರ ನಿಗದಿಪಡಿಸಿದ್ದಾಗಿ ಸ್ಪಷ್ಟಪಡಿಸಿದರು.<br /> <br /> ಈ ಮೊದಲು ನಷ್ಟದಿಂದ ಮುಚ್ಚಿಹೋಗಿದ್ದ ಸಂಘವನ್ನು ರೈತರಿಗಾಗಿ ಪುನಶ್ಚೇತನ ಮಾಡಿ ಆರಂಭಿಸಲಾಗಿದೆ. ಪುನಃ ನಷ್ಟವಾದರೆ ಅದರ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತದೆ. ಲಾಭಾಂಶವಿದ್ದರೆ ಸಂಘ ಹಾಗೂ ರೈತರು ಇಬ್ಬರಿಗೂ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.<br /> <br /> ನಂತರ ಮಾಜಿ ಜಿ.ಪಂ. ಸದಸ್ಯ ಎ.ಎಲ್. ಅರವಿಂದ್ ಉಪಸ್ಥಿತಿಯಲ್ಲಿ ಮಾತುಕತೆ ನಡೆದು 315ಕ್ಕೆ ದರ ನಿಗದಿಪಡಿಸಿ ವಿತರಣೆಗೆ ಚಾಲನೆ ನೀಡಲಾಯಿತು.<br /> <br /> ಆದರೆ, ಈ ಗದ್ದಲದ ನಡುವೆ ಸಂಘದ ಗೋದಾಮಿನಲ್ಲಿದ್ದ 7 ಚೀಲ ಗೊಬ್ಬರ ಕಾಣೆಯಾಗಿತ್ತು. <br /> ಸಂಘದ ನಿರ್ದೇಶಕರಾದ ರಾಮಣ್ಣ, ಚನ್ನಕೇಶವ, ಜಯಲಿಂಗಪ್ಪ, ರೈತ ಸಂಘದ ಬಿ.ವಿ. ಗೌಡ, ಡಿ. ಶಿವಣ್ಣ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸೊರಬ: ರಸಗೊಬ್ಬರ ಮಾರಾಟ ಕೇಂದ್ರ ಹಾಗೂ ರೈತರ ನಡುವೆ ಗೊಬ್ಬರ ಹಂಚಿಕೆ ವೇಳೆ ಗದ್ದಲ ಉಂಟಾಗಿ 7 ಚೀಲ ಗೊಬ್ಬರ ನಾಪತ್ತೆಯಾದ ಘಟನೆ ಬುಧವಾರ ನಡೆಯಿತು.<br /> <br /> ಆನವಟ್ಟಿಯ ವ್ಯವಸಾಯೋತ್ಪನ್ನ ಮಾರುಕಟ್ಟೆ ಮೂಲಕ ಚೀಲವೊಂದಕ್ಕೆ ್ಙ 320 ರಂತೆ ಗೊಬ್ಬರ ವಿತರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕೃಷಿ ಇಲಾಖೆ ಆದೇಶದ ಪ್ರಕಾರ ್ಙ 310 ಗಿಂತ ಹೆಚ್ಚು ತೆಗೆದುಕೊಳ್ಳುವಂತಿಲ್ಲ ಎಂದು ರಾಜ್ಯ ರೈತಸಂಘದ ಘಟಕ ಹಾಗೂ ರೈತರು ಆಕ್ಷೇಪ ವ್ಯಕ್ತಪಡಿಸಿದರು.<br /> <br /> ಗೊಬ್ಬರ ತರಿಸಿಕೊಳ್ಳಲು ್ಙ 317ಕ್ಕೂ ಹೆಚ್ಚು ವೆಚ್ಚ ತಗಲುತ್ತಿದೆ ಎಂದು ವಿವರಿಸಿದ ಸಂಘದ ಅಧ್ಯಕ್ಷ ರಾಜೇಂದ್ರನಾಯ್ಕ, ಸಂಘಕ್ಕೆ ನಷ್ಟವಾಗದಂತೆ, ರೈತರಿಗೆ ಹೊರೆ ಆಗದಂತೆ ನೋಡಿಕೊಳ್ಳಲು ದರ ನಿಗದಿಪಡಿಸಿದ್ದಾಗಿ ಸ್ಪಷ್ಟಪಡಿಸಿದರು.<br /> <br /> ಈ ಮೊದಲು ನಷ್ಟದಿಂದ ಮುಚ್ಚಿಹೋಗಿದ್ದ ಸಂಘವನ್ನು ರೈತರಿಗಾಗಿ ಪುನಶ್ಚೇತನ ಮಾಡಿ ಆರಂಭಿಸಲಾಗಿದೆ. ಪುನಃ ನಷ್ಟವಾದರೆ ಅದರ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತದೆ. ಲಾಭಾಂಶವಿದ್ದರೆ ಸಂಘ ಹಾಗೂ ರೈತರು ಇಬ್ಬರಿಗೂ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.<br /> <br /> ನಂತರ ಮಾಜಿ ಜಿ.ಪಂ. ಸದಸ್ಯ ಎ.ಎಲ್. ಅರವಿಂದ್ ಉಪಸ್ಥಿತಿಯಲ್ಲಿ ಮಾತುಕತೆ ನಡೆದು 315ಕ್ಕೆ ದರ ನಿಗದಿಪಡಿಸಿ ವಿತರಣೆಗೆ ಚಾಲನೆ ನೀಡಲಾಯಿತು.<br /> <br /> ಆದರೆ, ಈ ಗದ್ದಲದ ನಡುವೆ ಸಂಘದ ಗೋದಾಮಿನಲ್ಲಿದ್ದ 7 ಚೀಲ ಗೊಬ್ಬರ ಕಾಣೆಯಾಗಿತ್ತು. <br /> ಸಂಘದ ನಿರ್ದೇಶಕರಾದ ರಾಮಣ್ಣ, ಚನ್ನಕೇಶವ, ಜಯಲಿಂಗಪ್ಪ, ರೈತ ಸಂಘದ ಬಿ.ವಿ. ಗೌಡ, ಡಿ. ಶಿವಣ್ಣ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>