<p><strong>ಬೆಂಗಳೂರು:</strong> ಇಲ್ಲಿಯ ಜೆ.ಪಿ.ನಗರದಲ್ಲಿರುವ `ರಂಗಶಂಕರ~ವು ಅಕ್ಟೋಬರ್ 15ರಿಂದ 23ರವರೆಗೆ `ನಾಟಕದಲ್ಲಿ ರಾಜಕೀಯ~ ಕುರಿತು ನಾಟಕೋತ್ಸವ- 2011ನ್ನು ಹಮ್ಮಿಕೊಂಡಿದ್ದು, ಇದೇ ಸಂದರ್ಭದಲ್ಲಿ ವಿಚಾರ ಸಂಕಿರಣ, ಸಿನಿಮಾ ಪ್ರದರ್ಶನ ಮತ್ತು ರಾಜಕೀಯ ವಿಡಂಬನಾತ್ಮಕ ವ್ಯಂಗ್ಯಚಿತ್ರಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. <br /> <br /> ನಗರದಲ್ಲಿ ಶುಕ್ರವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರ ನಿರ್ದೇಶಕ ಪ್ರಕಾಶ್ ಬೆಳವಾಡಿ ಮತ್ತು ರಂಗಶಂಕರದ ಸಂಸ್ಥಾಪಕಿ ಅರುಂಧತಿ ನಾಗ್ ಅವರು ಈ ಮಾಹಿತಿ ನೀಡಿದರು.<br /> <br /> ನೀಲಕಂಠೇಶ್ವರ ನಾಟ್ಯ ಸಂಘದ (ನೀನಾಸಂ) ಕಲಾವಿದರು ಅಭಿಯನಯಿಸಲಿರುವ `ಕಂತು~, ಸಂಕೇತ್ ತಂಡದ `ನಮ್ಮೂರ ಹೊಟ್ಟೆ ಬಾಕರು~, ಮತ್ತು ಸಿ.ಎಫ್.ಡಿ. ತಂಡದ `ಟಾಂಗೋ~ ಎಂಬ ಮೂರು ಹೊಸ ಪ್ರಯೋಗಗಳು ಸೇರಿದಂತೆ ಆರು ನಾಟಕಗಳ ಪ್ರದರ್ಶನ ನಡೆಯಲಿದೆ. <br /> <br /> ನಾಟಕ ಮತ್ತು ಕಲಾವರ್ಧಕ ಶಿಬಿರವನ್ನು ಖ್ಯಾತ ಕಲಾ ವಿಮರ್ಶಕ ಸದಾನಂದ ಮೆನನ್ ನಡೆಸಿಕೊಡಲಿದ್ದು, ರಮಾಕಾಂತ ಗುಂಡೇಚ, ಮಾರ್ಗಿ ಮಧು, ಬಾಲನ್ ನಂಬಿಯಾರ್, ಸುನಿಲ್ ಕೊಠಾರಿ ಅವರು ಶಿಬಿರದಲ್ಲಿ ಮಾತನಾಡಲಿದ್ದಾರೆ. <br /> <br /> <strong>ವಿಚಾರ ಸಂಕಿರಣವು `ಐಡೆಂಟಿಟಿ:</strong> ರಾಜನಿಷ್ಠೆ ಮತ್ತು ಪರಭಾರೆ~ ಕುರಿತು ನಡೆಯಲಿದ್ದು, ಪ್ರಕಾಶ್ ಬೆಳವಾಡಿ ಪ್ರಸ್ತುತಪಡಿಸಲಿದ್ದಾರೆ. ಅಂಕಣಕಾರ ಆಕಾರ್ ಪಟೇಲ್ ಅವರು ನರೇಂದ್ರ ಮೋದಿ ಕುರಿತು `ದಿ ಇಂಪಾಸಿಬಲ್ ಲೀಪ್ ಫ್ರಂ ಗುಜರಾತಿ ಅಸ್ಮಿತ ಟು ಇನ್ಕ್ಲುಸಿವ್ ಇಂಡಿಯಾ~ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ. <br /> <br /> ಡಾ.ಚಂದನಗೌಡ ಅವರು `ಬೆಂಗಳೂರು ಮತ್ತು ಕನ್ನಡತನದ ಪ್ರಶ್ನೆ~ ಕುರಿತು ತಮ್ಮ ವಿಚಾರ ಮಂಡಿಸಲಿದ್ದಾರೆ.<br /> ಬರಹಗಾರ್ತಿ ಡಾ.ಆರ್ಶಿಯ ಸತ್ತಾರ್ ಅವರು `ಅಸ್ ಎಂಡ್ ದೆಮ್ ಯೂರೋಪ್ಸ್, ಫೈಲ್ಡ್ ರೊಮ್ಯಾನ್ಸ್ ವಿಥ್ ಕಲ್ಚರಲಿಸಂ~ ಕುರಿತು ಮಾತನಾಡಲಿದ್ದಾರೆ. <br /> <br /> ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳು-ಕಂತು, ಕಾಮ್ರೇಡ್ ಕುಂಭಕರ್ಣ, ಕೃಷ್ಣ ಸಂಧಾನ, ತೀಸವಿ ಶತಾಬ್ದಿ, ಟಾಂಗೋ, ನಮ್ಮೂರು ಬೆಂಕಿ ಬಾಕರು. ನಾಟಕಗಳಿಗೆ ರೂ 100 (ತಲಾ ಒಂದು ಪ್ರದರ್ಶನಕ್ಕೆ) ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಟಿಕೆಟ್ಗಳು ರಂಗಶಂಕರದ ಬಾಕ್ಸ್ ಆಫೀಸ್ನಲ್ಲಿ ಮತ್ತು <a href="http://www.ind-i-a-s-t-a-ge.in">www.ind-i-a-s-t-a-ge.in</a>, <a href="http://www.bo-ok-m-y-s-h-ow.co-m-">www.bo-ok-m-y-s-h-ow.co-m-</a>ನಲ್ಲಿ ಪಡೆಯಬಹುದು. <br /> <br /> ಚಲನಚಿತ್ರಗಳು-ನೀರೋಸ್ ಗೆಸ್ಟ್ಸ್, ಇರಾನ್ (ಈಸ್ ನಾಟ್ ಎ ಪ್ರಾಬ್ಲಂ). ಚಲನಚಿತ್ರಗಳಿಗೆ ಉಚಿತ ಪ್ರವೇಶ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಇಲ್ಲಿಯ ಜೆ.ಪಿ.ನಗರದಲ್ಲಿರುವ `ರಂಗಶಂಕರ~ವು ಅಕ್ಟೋಬರ್ 15ರಿಂದ 23ರವರೆಗೆ `ನಾಟಕದಲ್ಲಿ ರಾಜಕೀಯ~ ಕುರಿತು ನಾಟಕೋತ್ಸವ- 2011ನ್ನು ಹಮ್ಮಿಕೊಂಡಿದ್ದು, ಇದೇ ಸಂದರ್ಭದಲ್ಲಿ ವಿಚಾರ ಸಂಕಿರಣ, ಸಿನಿಮಾ ಪ್ರದರ್ಶನ ಮತ್ತು ರಾಜಕೀಯ ವಿಡಂಬನಾತ್ಮಕ ವ್ಯಂಗ್ಯಚಿತ್ರಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. <br /> <br /> ನಗರದಲ್ಲಿ ಶುಕ್ರವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರ ನಿರ್ದೇಶಕ ಪ್ರಕಾಶ್ ಬೆಳವಾಡಿ ಮತ್ತು ರಂಗಶಂಕರದ ಸಂಸ್ಥಾಪಕಿ ಅರುಂಧತಿ ನಾಗ್ ಅವರು ಈ ಮಾಹಿತಿ ನೀಡಿದರು.<br /> <br /> ನೀಲಕಂಠೇಶ್ವರ ನಾಟ್ಯ ಸಂಘದ (ನೀನಾಸಂ) ಕಲಾವಿದರು ಅಭಿಯನಯಿಸಲಿರುವ `ಕಂತು~, ಸಂಕೇತ್ ತಂಡದ `ನಮ್ಮೂರ ಹೊಟ್ಟೆ ಬಾಕರು~, ಮತ್ತು ಸಿ.ಎಫ್.ಡಿ. ತಂಡದ `ಟಾಂಗೋ~ ಎಂಬ ಮೂರು ಹೊಸ ಪ್ರಯೋಗಗಳು ಸೇರಿದಂತೆ ಆರು ನಾಟಕಗಳ ಪ್ರದರ್ಶನ ನಡೆಯಲಿದೆ. <br /> <br /> ನಾಟಕ ಮತ್ತು ಕಲಾವರ್ಧಕ ಶಿಬಿರವನ್ನು ಖ್ಯಾತ ಕಲಾ ವಿಮರ್ಶಕ ಸದಾನಂದ ಮೆನನ್ ನಡೆಸಿಕೊಡಲಿದ್ದು, ರಮಾಕಾಂತ ಗುಂಡೇಚ, ಮಾರ್ಗಿ ಮಧು, ಬಾಲನ್ ನಂಬಿಯಾರ್, ಸುನಿಲ್ ಕೊಠಾರಿ ಅವರು ಶಿಬಿರದಲ್ಲಿ ಮಾತನಾಡಲಿದ್ದಾರೆ. <br /> <br /> <strong>ವಿಚಾರ ಸಂಕಿರಣವು `ಐಡೆಂಟಿಟಿ:</strong> ರಾಜನಿಷ್ಠೆ ಮತ್ತು ಪರಭಾರೆ~ ಕುರಿತು ನಡೆಯಲಿದ್ದು, ಪ್ರಕಾಶ್ ಬೆಳವಾಡಿ ಪ್ರಸ್ತುತಪಡಿಸಲಿದ್ದಾರೆ. ಅಂಕಣಕಾರ ಆಕಾರ್ ಪಟೇಲ್ ಅವರು ನರೇಂದ್ರ ಮೋದಿ ಕುರಿತು `ದಿ ಇಂಪಾಸಿಬಲ್ ಲೀಪ್ ಫ್ರಂ ಗುಜರಾತಿ ಅಸ್ಮಿತ ಟು ಇನ್ಕ್ಲುಸಿವ್ ಇಂಡಿಯಾ~ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ. <br /> <br /> ಡಾ.ಚಂದನಗೌಡ ಅವರು `ಬೆಂಗಳೂರು ಮತ್ತು ಕನ್ನಡತನದ ಪ್ರಶ್ನೆ~ ಕುರಿತು ತಮ್ಮ ವಿಚಾರ ಮಂಡಿಸಲಿದ್ದಾರೆ.<br /> ಬರಹಗಾರ್ತಿ ಡಾ.ಆರ್ಶಿಯ ಸತ್ತಾರ್ ಅವರು `ಅಸ್ ಎಂಡ್ ದೆಮ್ ಯೂರೋಪ್ಸ್, ಫೈಲ್ಡ್ ರೊಮ್ಯಾನ್ಸ್ ವಿಥ್ ಕಲ್ಚರಲಿಸಂ~ ಕುರಿತು ಮಾತನಾಡಲಿದ್ದಾರೆ. <br /> <br /> ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳು-ಕಂತು, ಕಾಮ್ರೇಡ್ ಕುಂಭಕರ್ಣ, ಕೃಷ್ಣ ಸಂಧಾನ, ತೀಸವಿ ಶತಾಬ್ದಿ, ಟಾಂಗೋ, ನಮ್ಮೂರು ಬೆಂಕಿ ಬಾಕರು. ನಾಟಕಗಳಿಗೆ ರೂ 100 (ತಲಾ ಒಂದು ಪ್ರದರ್ಶನಕ್ಕೆ) ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಟಿಕೆಟ್ಗಳು ರಂಗಶಂಕರದ ಬಾಕ್ಸ್ ಆಫೀಸ್ನಲ್ಲಿ ಮತ್ತು <a href="http://www.ind-i-a-s-t-a-ge.in">www.ind-i-a-s-t-a-ge.in</a>, <a href="http://www.bo-ok-m-y-s-h-ow.co-m-">www.bo-ok-m-y-s-h-ow.co-m-</a>ನಲ್ಲಿ ಪಡೆಯಬಹುದು. <br /> <br /> ಚಲನಚಿತ್ರಗಳು-ನೀರೋಸ್ ಗೆಸ್ಟ್ಸ್, ಇರಾನ್ (ಈಸ್ ನಾಟ್ ಎ ಪ್ರಾಬ್ಲಂ). ಚಲನಚಿತ್ರಗಳಿಗೆ ಉಚಿತ ಪ್ರವೇಶ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>