<p><strong>ಗುಲ್ಬರ್ಗ: </strong>ರಾಜಕೀಯಕ್ಕೆ ಸೇರುವ ಇಚ್ಛೆ ನನಗಿಲ್ಲ. ರಾಜಕೀಯ ಮಾಡುವುದು ತಮಾಷೆಯ ಮಾತಲ್ಲ ಎಂದು ದುನಿಯಾ ಖ್ಯಾತಿಯ ನಟ ವಿಜಯ್ ಹೇಳಿದರು.<br /> <br /> ಗುಲ್ಬರ್ಗದ ದಲಿತ ಸೇನೆ ಮತ್ತು ದುನಿಯಾ ವಿಜಯ್ ಅಭಿಮಾನಿ ಬಳಗ ಭಾನುವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.<br /> <br /> ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಮತದಾನದ ಪರಮ ಹಕ್ಕನ್ನು ಚಲಾಯಿಸಿ ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆಮಾಡಬೇಕು ಎಂದರು.<br /> <br /> ಸಿನಿಮಾ ರಂಗದ ಬಗ್ಗೆ ಮಾತನಾಡಿದ ಅವರು, ಬೆಂಗಳೂರಿನ ಗಾಂಧಿನಗರ ಎನ್ನುವುದು ವಿಷವ್ಯೂಹವಿದ್ದಂತೆ. ಇದರಿಂದ ಜೀವಂತ ಹೊರಬಂದವನೇ ಗೆಲುವಿನ ಸರದಾರನಾಗಲು ಸಾಧ್ಯ ಎಂದರು. ಚಿತ್ರರಂಗದಲ್ಲಿ ಮಹಿಳೆಯರನ್ನು ದೈಹಿಕವಾಗಿ ಹಿಂಸಿಸಿದರೆ, ಪುರುಷರನ್ನು ಮಾನಸಿಕವಾಗಿ ಹಿಂಸಿಸಲಾಗುತ್ತಿದೆ. ಈ ಎಲ್ಲ ಶೋಷಣೆಗಳನ್ನು ಮೀರಿ ನಾನು ಬೆಳೆದು ಬಂದಿದ್ದರಿಂದ ಕನ್ನಡ ಚಿತ್ರರಂಗದಲ್ಲಿ ಪುಟಾಣಿ ಸೇವಕನಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಮನಬಿಚ್ಚಿ ಮಾತನಾಡಿದರು.<br /> <br /> ಅವಕಾಶವಾದಿಯಾಗಿ ಬದುಕಬೇಡ ಎಂದು ಹಿಂದೆ ಒಂದು ಸಾರಿ ಮೇರುನಟ ರಜನಿಕಾಂತ್ ಅವರು ಹೇಳಿದ್ದ ಮಾತು ಕಿವಿಯಲ್ಲಿ ಇಂದಿಗೂ ಮೊಳಗುತ್ತಿದೆ. ಕುಟುಂಬದಲ್ಲಿ ಪತಿ–ಪತ್ನಿ ಅನ್ಯೋನ್ಯವಾಗಿರದಿದ್ದರೆ ವಿಚ್ಛೇದನೆ ಅನಿವಾರ್ಯವಾಗುತ್ತದೆ. ವಿಚ್ಛೇದನೆ ಪಡೆಯುವುದು ಅಪರಾಧವೆನಲ್ಲ.<br /> <br /> ನಮ್ಮ ವಿಚ್ಛೇದ ಪ್ರಕರಣ ನ್ಯಾಯಾಲಯದಲ್ಲಿದೆ. ಕುಟುಂಬ ಜೀವನದಲ್ಲಿ ಗಂಡಸರ ಮೇಲೂ ಶೋಷಣೆಗಳು ನಡೆಯುತ್ತಿವೆ. ಅನ್ಯಾಯಕ್ಕೊಳಗಾಗಿ ನೊಂದವನೇ ನಿಜವಾದ ದಲಿತ.<br /> <br /> ಶೋಷಿತರ ಪರ ಒಂದು ಸಿನಿಮಾ ಮಾಡುವ ಆಸೆ ಇದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.<br /> <br /> ಜಾಕ್ಸನ್ ಚಿತ್ರ ನಿರ್ದೇಶಕ ಸನತ್ಕುಮಾರ್, ದಲಿತ ಸೇನೆ ಮುಖಂಡ ಹಣಮಂತ ಯಳಸಂಗಿ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಲ್ಬರ್ಗ: </strong>ರಾಜಕೀಯಕ್ಕೆ ಸೇರುವ ಇಚ್ಛೆ ನನಗಿಲ್ಲ. ರಾಜಕೀಯ ಮಾಡುವುದು ತಮಾಷೆಯ ಮಾತಲ್ಲ ಎಂದು ದುನಿಯಾ ಖ್ಯಾತಿಯ ನಟ ವಿಜಯ್ ಹೇಳಿದರು.<br /> <br /> ಗುಲ್ಬರ್ಗದ ದಲಿತ ಸೇನೆ ಮತ್ತು ದುನಿಯಾ ವಿಜಯ್ ಅಭಿಮಾನಿ ಬಳಗ ಭಾನುವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.<br /> <br /> ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಮತದಾನದ ಪರಮ ಹಕ್ಕನ್ನು ಚಲಾಯಿಸಿ ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆಮಾಡಬೇಕು ಎಂದರು.<br /> <br /> ಸಿನಿಮಾ ರಂಗದ ಬಗ್ಗೆ ಮಾತನಾಡಿದ ಅವರು, ಬೆಂಗಳೂರಿನ ಗಾಂಧಿನಗರ ಎನ್ನುವುದು ವಿಷವ್ಯೂಹವಿದ್ದಂತೆ. ಇದರಿಂದ ಜೀವಂತ ಹೊರಬಂದವನೇ ಗೆಲುವಿನ ಸರದಾರನಾಗಲು ಸಾಧ್ಯ ಎಂದರು. ಚಿತ್ರರಂಗದಲ್ಲಿ ಮಹಿಳೆಯರನ್ನು ದೈಹಿಕವಾಗಿ ಹಿಂಸಿಸಿದರೆ, ಪುರುಷರನ್ನು ಮಾನಸಿಕವಾಗಿ ಹಿಂಸಿಸಲಾಗುತ್ತಿದೆ. ಈ ಎಲ್ಲ ಶೋಷಣೆಗಳನ್ನು ಮೀರಿ ನಾನು ಬೆಳೆದು ಬಂದಿದ್ದರಿಂದ ಕನ್ನಡ ಚಿತ್ರರಂಗದಲ್ಲಿ ಪುಟಾಣಿ ಸೇವಕನಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಮನಬಿಚ್ಚಿ ಮಾತನಾಡಿದರು.<br /> <br /> ಅವಕಾಶವಾದಿಯಾಗಿ ಬದುಕಬೇಡ ಎಂದು ಹಿಂದೆ ಒಂದು ಸಾರಿ ಮೇರುನಟ ರಜನಿಕಾಂತ್ ಅವರು ಹೇಳಿದ್ದ ಮಾತು ಕಿವಿಯಲ್ಲಿ ಇಂದಿಗೂ ಮೊಳಗುತ್ತಿದೆ. ಕುಟುಂಬದಲ್ಲಿ ಪತಿ–ಪತ್ನಿ ಅನ್ಯೋನ್ಯವಾಗಿರದಿದ್ದರೆ ವಿಚ್ಛೇದನೆ ಅನಿವಾರ್ಯವಾಗುತ್ತದೆ. ವಿಚ್ಛೇದನೆ ಪಡೆಯುವುದು ಅಪರಾಧವೆನಲ್ಲ.<br /> <br /> ನಮ್ಮ ವಿಚ್ಛೇದ ಪ್ರಕರಣ ನ್ಯಾಯಾಲಯದಲ್ಲಿದೆ. ಕುಟುಂಬ ಜೀವನದಲ್ಲಿ ಗಂಡಸರ ಮೇಲೂ ಶೋಷಣೆಗಳು ನಡೆಯುತ್ತಿವೆ. ಅನ್ಯಾಯಕ್ಕೊಳಗಾಗಿ ನೊಂದವನೇ ನಿಜವಾದ ದಲಿತ.<br /> <br /> ಶೋಷಿತರ ಪರ ಒಂದು ಸಿನಿಮಾ ಮಾಡುವ ಆಸೆ ಇದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.<br /> <br /> ಜಾಕ್ಸನ್ ಚಿತ್ರ ನಿರ್ದೇಶಕ ಸನತ್ಕುಮಾರ್, ದಲಿತ ಸೇನೆ ಮುಖಂಡ ಹಣಮಂತ ಯಳಸಂಗಿ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>