<p><strong>ನವದೆಹಲಿ:</strong> ವಿದ್ಯುತ್ ವಿತರಣಾ ಕಂಪೆನಿಗಳ ಹಣಕಾಸು ಪರಿಸ್ಥಿತಿಯನ್ನು ಸುಧಾರಿಸಲು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ವಿದ್ಯುತ್ ವಲಯದಲ್ಲಿ ತಾನು ನೀಡುತ್ತಿರುವ ಕೇಂದ್ರ ಪ್ರಾಯೋಜಿತ ಯೋಜನೆಗಳ ಎಲ್ಲ ಅನುದಾನಗಳನ್ನು ನಿಲ್ಲಿಸುವುದಾಗಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.<br /> <br /> ಕೇಂದ್ರ ವಿದ್ಯುತ್ ಸಚಿವಾಲಯ ತಯಾರಿಸಿರುವ ವರದಿ ಪ್ರಕಾರ, ದೇಶದ ಬಹುತೇಕ ವಿದ್ಯುತ್ ವಿತರಣಾ ಕಂಪೆನಿಗಳ (ಡಿಸ್ಕಾಮ್ಸ) ಆರ್ಥಿಕ ಪರಿಸ್ಥಿತಿ ಬಹಳ ದುರ್ಬಲವಾಗಿದ್ದು, 2009ರ ಮಾರ್ಚ್ವರೆಗೆ ಒಟ್ಟು ರೂ 73,000 ಕೋಟಿಗಳ ನಷ್ಟ ಅನುಭವಿಸಿವೆ. ಕರ್ನಾಟಕದ ವಿದ್ಯುತ್ ವಿತರಣಾ ಕಂಪೆನಿಗಳು 2004-05ರಿಂದ 2007-08ರ ಅವಧಿಯಲ್ಲಿ ಲಾಭ ಸಂಪಾದಿಸಿದರೂ ಸಹ 2009ರ ಮಾರ್ಚ್ವರೆಗೆ ರೂ 1,203 ಕೋಟಿಗಳಷ್ಟು ನಷ್ಟವನ್ನು ದಾಖಲಿಸಿವೆ.<br /> <br /> 2009ರ ಮಾರ್ಚ್ವರೆಗೆ ಇಡೀ ದೇಶದ ಡಿಸ್ಕಾಮ್ಗಳ ಸ್ಥಾನಮಾನ ಕುರಿತ ವಿದ್ಯುತ್ ವಲಯದ ಮೇಲಿನ ವಿವರವಾದ ವರದಿಯನ್ನು ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೇತೃತ್ವದ ಹಿರಿಯ ಸಚಿವರ ತಂಡದ ಮುಂದೆ ಇತ್ತೀಚೆಗೆ ಸಲ್ಲಿಸಲಾಗಿದೆ.<br /> <br /> `ಡಿಸ್ಕಾಮ್ಗಳ ದುರ್ಬಲ ಆರ್ಥಿಕ ಪರಿಸ್ಥಿತಿಗೆ ಮುಖ್ಯ ಕಾರಣಗಳು ಪರಿಷ್ಕೃತ ವಿದ್ಯುತ್ ತೆರಿಗೆಯಲ್ಲ ಮತ್ತು ಕಲ್ಯಾಣ ಯೋಜನೆಗಳಡಿ ರೈತರು ಹಾಗೂ ಇತರ ವರ್ಗಗಳಿಗೆ ಪೂರೈಸಿದ ವಿದ್ಯುತ್ಗೆ ಸರ್ಕಾರ ಸಬ್ಸಿಡಿ ಹಣವನ್ನು ಹಿಂತಿರುಗಿಸಿರುವುದಲ್ಲ~ ಎಂದು ಸ್ಪಷ್ಪಪಡಿಸಿದೆ.<br /> <br /> ಕೇವಲ ಆಂಧ್ರಪ್ರದೇಶ, ಗುಜರಾತ್ ಹಾಗೂ ಛತ್ತೀಸ್ಗಡ ರಾಜ್ಯಗಳ ಡಿಸ್ಕಾಮ್ಗಳು ಮಾತ್ರ ಲಾಭ ಸಂಪಾದಿಸಿದ್ದು, ಉಳಿದ ರಾಜ್ಯಗಳ ಡಿಸ್ಕಾಮ್ಗಳು ಭಾರಿ ನಷ್ಟ ಹೊಂದಿವೆ ಎಂದು ವರದಿ ತಿಳಿಸಿದೆ.<br /> <br /> ಕರ್ನಾಟಕದಲ್ಲಿ 2004-05 ಮತ್ತು 2008-09ರ ಅವಧಿಯಲ್ಲಿ ವಿದ್ಯುತ್ ಖರೀದಿ ವೆಚ್ಚ ಶೇ 13.47ರಷ್ಟು ಹೆಚ್ಚಾಗಿದ್ದು, ಆದರೆ ವಿದ್ಯುತ್ ಮಾರಾಟದಿಂದ ಗಳಿಸಿದ ಆದಾಯ ಕೇವಲ ಶೇ 10.80ರಷ್ಟು ಏರಿಕೆಯಾಗುವ ಮೂಲಕ ಆದಾಯಕ್ಕಿಂತ ವೆಚ್ಚವೇ ಜಾಸ್ತಿ ಕಂಡುಬಂದಿದೆ ಎಂದು ವಿದ್ಯುತ್ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.<br /> <br /> ರಾಜ್ಯದಲ್ಲಿ ಕೃಷಿ ಬಳಕೆಯು ವಾರ್ಷಿಕ ಶೇ 9.70ರಷ್ಟು ಬೆಳವಣಿಗೆ ದರ ತೋರಿದ್ದರೂ, ಕೃಷಿ ವಲಯದಲ್ಲಿನ ಆದಾಯವು ಕೇವಲ ಶೇ 5.09ರಷ್ಟಾಗಿದೆ. ವಿದ್ಯುತ್ ಸರಬರಾಜು ಮತ್ತು ವಿತರಣಾ ನಷ್ಟವು ರಾಜ್ಯದಲ್ಲಿ 2006-07ರಲ್ಲಿ ಶೇ 38.04ರಷ್ಟಿದ್ದು, ಅದು 2008-09ರಲ್ಲಿ ಶೇ 24.94ಕ್ಕೆ ಇಳಿಯುವ ಮೂಲಕ ಸುಧಾರಣೆ ಕಂಡಿದೆ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ವಿದ್ಯುತ್ ವಿತರಣಾ ಕಂಪೆನಿಗಳ ಹಣಕಾಸು ಪರಿಸ್ಥಿತಿಯನ್ನು ಸುಧಾರಿಸಲು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ವಿದ್ಯುತ್ ವಲಯದಲ್ಲಿ ತಾನು ನೀಡುತ್ತಿರುವ ಕೇಂದ್ರ ಪ್ರಾಯೋಜಿತ ಯೋಜನೆಗಳ ಎಲ್ಲ ಅನುದಾನಗಳನ್ನು ನಿಲ್ಲಿಸುವುದಾಗಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.<br /> <br /> ಕೇಂದ್ರ ವಿದ್ಯುತ್ ಸಚಿವಾಲಯ ತಯಾರಿಸಿರುವ ವರದಿ ಪ್ರಕಾರ, ದೇಶದ ಬಹುತೇಕ ವಿದ್ಯುತ್ ವಿತರಣಾ ಕಂಪೆನಿಗಳ (ಡಿಸ್ಕಾಮ್ಸ) ಆರ್ಥಿಕ ಪರಿಸ್ಥಿತಿ ಬಹಳ ದುರ್ಬಲವಾಗಿದ್ದು, 2009ರ ಮಾರ್ಚ್ವರೆಗೆ ಒಟ್ಟು ರೂ 73,000 ಕೋಟಿಗಳ ನಷ್ಟ ಅನುಭವಿಸಿವೆ. ಕರ್ನಾಟಕದ ವಿದ್ಯುತ್ ವಿತರಣಾ ಕಂಪೆನಿಗಳು 2004-05ರಿಂದ 2007-08ರ ಅವಧಿಯಲ್ಲಿ ಲಾಭ ಸಂಪಾದಿಸಿದರೂ ಸಹ 2009ರ ಮಾರ್ಚ್ವರೆಗೆ ರೂ 1,203 ಕೋಟಿಗಳಷ್ಟು ನಷ್ಟವನ್ನು ದಾಖಲಿಸಿವೆ.<br /> <br /> 2009ರ ಮಾರ್ಚ್ವರೆಗೆ ಇಡೀ ದೇಶದ ಡಿಸ್ಕಾಮ್ಗಳ ಸ್ಥಾನಮಾನ ಕುರಿತ ವಿದ್ಯುತ್ ವಲಯದ ಮೇಲಿನ ವಿವರವಾದ ವರದಿಯನ್ನು ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೇತೃತ್ವದ ಹಿರಿಯ ಸಚಿವರ ತಂಡದ ಮುಂದೆ ಇತ್ತೀಚೆಗೆ ಸಲ್ಲಿಸಲಾಗಿದೆ.<br /> <br /> `ಡಿಸ್ಕಾಮ್ಗಳ ದುರ್ಬಲ ಆರ್ಥಿಕ ಪರಿಸ್ಥಿತಿಗೆ ಮುಖ್ಯ ಕಾರಣಗಳು ಪರಿಷ್ಕೃತ ವಿದ್ಯುತ್ ತೆರಿಗೆಯಲ್ಲ ಮತ್ತು ಕಲ್ಯಾಣ ಯೋಜನೆಗಳಡಿ ರೈತರು ಹಾಗೂ ಇತರ ವರ್ಗಗಳಿಗೆ ಪೂರೈಸಿದ ವಿದ್ಯುತ್ಗೆ ಸರ್ಕಾರ ಸಬ್ಸಿಡಿ ಹಣವನ್ನು ಹಿಂತಿರುಗಿಸಿರುವುದಲ್ಲ~ ಎಂದು ಸ್ಪಷ್ಪಪಡಿಸಿದೆ.<br /> <br /> ಕೇವಲ ಆಂಧ್ರಪ್ರದೇಶ, ಗುಜರಾತ್ ಹಾಗೂ ಛತ್ತೀಸ್ಗಡ ರಾಜ್ಯಗಳ ಡಿಸ್ಕಾಮ್ಗಳು ಮಾತ್ರ ಲಾಭ ಸಂಪಾದಿಸಿದ್ದು, ಉಳಿದ ರಾಜ್ಯಗಳ ಡಿಸ್ಕಾಮ್ಗಳು ಭಾರಿ ನಷ್ಟ ಹೊಂದಿವೆ ಎಂದು ವರದಿ ತಿಳಿಸಿದೆ.<br /> <br /> ಕರ್ನಾಟಕದಲ್ಲಿ 2004-05 ಮತ್ತು 2008-09ರ ಅವಧಿಯಲ್ಲಿ ವಿದ್ಯುತ್ ಖರೀದಿ ವೆಚ್ಚ ಶೇ 13.47ರಷ್ಟು ಹೆಚ್ಚಾಗಿದ್ದು, ಆದರೆ ವಿದ್ಯುತ್ ಮಾರಾಟದಿಂದ ಗಳಿಸಿದ ಆದಾಯ ಕೇವಲ ಶೇ 10.80ರಷ್ಟು ಏರಿಕೆಯಾಗುವ ಮೂಲಕ ಆದಾಯಕ್ಕಿಂತ ವೆಚ್ಚವೇ ಜಾಸ್ತಿ ಕಂಡುಬಂದಿದೆ ಎಂದು ವಿದ್ಯುತ್ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.<br /> <br /> ರಾಜ್ಯದಲ್ಲಿ ಕೃಷಿ ಬಳಕೆಯು ವಾರ್ಷಿಕ ಶೇ 9.70ರಷ್ಟು ಬೆಳವಣಿಗೆ ದರ ತೋರಿದ್ದರೂ, ಕೃಷಿ ವಲಯದಲ್ಲಿನ ಆದಾಯವು ಕೇವಲ ಶೇ 5.09ರಷ್ಟಾಗಿದೆ. ವಿದ್ಯುತ್ ಸರಬರಾಜು ಮತ್ತು ವಿತರಣಾ ನಷ್ಟವು ರಾಜ್ಯದಲ್ಲಿ 2006-07ರಲ್ಲಿ ಶೇ 38.04ರಷ್ಟಿದ್ದು, ಅದು 2008-09ರಲ್ಲಿ ಶೇ 24.94ಕ್ಕೆ ಇಳಿಯುವ ಮೂಲಕ ಸುಧಾರಣೆ ಕಂಡಿದೆ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>