<p><strong>ರಾಮದುರ್ಗ</strong>: ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನೂರಾರು ಜನರು ಪರಸ್ಪರ ಕಲ್ಲು ತೂರಾಟ ನಡೆಸಿದ್ದರಿಂದ 12 ಜನರಿಗೆ ತೀವ್ರ ಗಾಯಗಳಾದ ಘಟನೆ ತಾಲೂಕಿನ ಗೊಣ್ಣಾಗರದಲ್ಲಿ ಶುಕ್ರವಾರ ನಡೆದಿದೆ.<br /> <br /> ಗಾಣಿಗ ಸಮಾಜ ಮತ್ತು ಶೆಟ್ಟರ್, ಮರಾಠ, ತಳವಾರ ಸಮಾಜದ ಮಧ್ಯೆ ಎರಡು ವರ್ಷಗಳಿಂದ ಜಾತಿ ವೈಷಮ್ಯ ತಲೆದೋರಿತ್ತು. ಇಪ್ಪತ್ತು ದಿನಗಳ ಹಿಂದೆಯೇ ಪೊಲೀಸರು ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.<br /> <br /> ಆದರೆ ಗುರುವಾರ ಸಂಜೆ ಯುವತಿಯೊಬ್ಬಳು ಬಟ್ಟೆ ತೊಳೆಯಲು ಹೋದಾಗ ಮತ್ತೊಂದು ಗುಂಪಿನ ಯುವಕನೊಬ್ಬ ಚುಡಾಯಿಸಿದ್ದ. ಹಿರಿಯರು ಪಂಚಾಯ್ತಿ ನಡೆಸಿ ಯಾರೂ ಈ ವಿಷಯದಲ್ಲಿ ತಂಟೆ ತೆಗೆಯಬಾರದು ಎಂದು ತಿಳಿವಳಿಕೆ ನೀಡಿದ್ದರು. ಕುಡುಕನೊಬ್ಬ ರಾತ್ರಿ ಇನ್ನೊಂದು ಕಾಲೊನಿಗೆ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೂಗಾಡಿದ್ದರಿಂದ ಎರಡು ಗುಂಪುಗಳ ಮಧ್ಯೆ ಘರ್ಷಣೆಗೆ ಕಾರಣವಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ಗೆ ಗ್ರಾಮಸ್ಥರು ತಿಳಿಸಿದರು. ಒಂದು ಗುಂಪು ಕಲ್ಲು, ಬಡಿಗೆಯೊಂದಿಗೆ ಹಲ್ಲೆಗೆ ಮುಂದಾಗಿದ್ದರೆ ಮತ್ತೊಂದು ಗುಂಪು ಕಲ್ಲು ತೂರಾಟದಲ್ಲಿ ತೊಡಗಿತ್ತು. <br /> <br /> ಬೆಳಿಗ್ಗೆ 10.30 ರಿಂದ ಒಂದು ತಾಸು ರಾಮದುರ್ಗ-ಕೊಣ್ಣೂರು ರಸ್ತೆಯಲ್ಲಿ ಸಂಚಾರವೂ ಸ್ಥಗಿತಗೊಂಡಿತ್ತು. ಉಭಯ ಬಣಗಳ ಸುಮಾರು 12 ಜನರಿಗೆ ಕಲ್ಲಿನೇಟಿನಿಂದ ಗಾಯಗಳಾಗಿದ್ದು, ಒಬ್ಬನ ಸ್ಥಿತಿ ಚಿಂತಾಜನಕ ವಾಗಿದ್ದು, ಆತನನ್ನು ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ಕಳಿಸಲಾಗಿದೆ. ಉಳಿದವರಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. <br /> <br /> ಸಕಾಲಕ್ಕೆ ಪೊಲೀಸರು ಬಂದಿದ್ದರಿಂದ ಕಲ್ಲು ತೂರಾಟ ನಿಂತಿದೆಯಾದರೂ ಗ್ರಾಮದಲ್ಲಿ ಇನ್ನೂ ಬಿಗುವಿನ ವಾತಾವರಣವಿದೆ. ಬೈಲಹೊಂಗಲದ ಡಿವೈಎಸ್ಪಿ ಶಿವಕುಮಾರ ಪಾಟೀಲ, ಸಿಪಿಐ ಪ್ರಕಾಶ ನಾಯ್ಡು, ಸಬ್ ಇನ್ಸ್ಪೆಕ್ಟರ್ ಸಂಜೀವ ಬಳೆಗಾರ ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ಈ ಸಂಬಂಧ ಯಾರನ್ನೂ ಬಂಧಿಸಿಲ್ಲ. ರಾಮದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮದುರ್ಗ</strong>: ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನೂರಾರು ಜನರು ಪರಸ್ಪರ ಕಲ್ಲು ತೂರಾಟ ನಡೆಸಿದ್ದರಿಂದ 12 ಜನರಿಗೆ ತೀವ್ರ ಗಾಯಗಳಾದ ಘಟನೆ ತಾಲೂಕಿನ ಗೊಣ್ಣಾಗರದಲ್ಲಿ ಶುಕ್ರವಾರ ನಡೆದಿದೆ.<br /> <br /> ಗಾಣಿಗ ಸಮಾಜ ಮತ್ತು ಶೆಟ್ಟರ್, ಮರಾಠ, ತಳವಾರ ಸಮಾಜದ ಮಧ್ಯೆ ಎರಡು ವರ್ಷಗಳಿಂದ ಜಾತಿ ವೈಷಮ್ಯ ತಲೆದೋರಿತ್ತು. ಇಪ್ಪತ್ತು ದಿನಗಳ ಹಿಂದೆಯೇ ಪೊಲೀಸರು ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.<br /> <br /> ಆದರೆ ಗುರುವಾರ ಸಂಜೆ ಯುವತಿಯೊಬ್ಬಳು ಬಟ್ಟೆ ತೊಳೆಯಲು ಹೋದಾಗ ಮತ್ತೊಂದು ಗುಂಪಿನ ಯುವಕನೊಬ್ಬ ಚುಡಾಯಿಸಿದ್ದ. ಹಿರಿಯರು ಪಂಚಾಯ್ತಿ ನಡೆಸಿ ಯಾರೂ ಈ ವಿಷಯದಲ್ಲಿ ತಂಟೆ ತೆಗೆಯಬಾರದು ಎಂದು ತಿಳಿವಳಿಕೆ ನೀಡಿದ್ದರು. ಕುಡುಕನೊಬ್ಬ ರಾತ್ರಿ ಇನ್ನೊಂದು ಕಾಲೊನಿಗೆ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೂಗಾಡಿದ್ದರಿಂದ ಎರಡು ಗುಂಪುಗಳ ಮಧ್ಯೆ ಘರ್ಷಣೆಗೆ ಕಾರಣವಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ಗೆ ಗ್ರಾಮಸ್ಥರು ತಿಳಿಸಿದರು. ಒಂದು ಗುಂಪು ಕಲ್ಲು, ಬಡಿಗೆಯೊಂದಿಗೆ ಹಲ್ಲೆಗೆ ಮುಂದಾಗಿದ್ದರೆ ಮತ್ತೊಂದು ಗುಂಪು ಕಲ್ಲು ತೂರಾಟದಲ್ಲಿ ತೊಡಗಿತ್ತು. <br /> <br /> ಬೆಳಿಗ್ಗೆ 10.30 ರಿಂದ ಒಂದು ತಾಸು ರಾಮದುರ್ಗ-ಕೊಣ್ಣೂರು ರಸ್ತೆಯಲ್ಲಿ ಸಂಚಾರವೂ ಸ್ಥಗಿತಗೊಂಡಿತ್ತು. ಉಭಯ ಬಣಗಳ ಸುಮಾರು 12 ಜನರಿಗೆ ಕಲ್ಲಿನೇಟಿನಿಂದ ಗಾಯಗಳಾಗಿದ್ದು, ಒಬ್ಬನ ಸ್ಥಿತಿ ಚಿಂತಾಜನಕ ವಾಗಿದ್ದು, ಆತನನ್ನು ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ಕಳಿಸಲಾಗಿದೆ. ಉಳಿದವರಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. <br /> <br /> ಸಕಾಲಕ್ಕೆ ಪೊಲೀಸರು ಬಂದಿದ್ದರಿಂದ ಕಲ್ಲು ತೂರಾಟ ನಿಂತಿದೆಯಾದರೂ ಗ್ರಾಮದಲ್ಲಿ ಇನ್ನೂ ಬಿಗುವಿನ ವಾತಾವರಣವಿದೆ. ಬೈಲಹೊಂಗಲದ ಡಿವೈಎಸ್ಪಿ ಶಿವಕುಮಾರ ಪಾಟೀಲ, ಸಿಪಿಐ ಪ್ರಕಾಶ ನಾಯ್ಡು, ಸಬ್ ಇನ್ಸ್ಪೆಕ್ಟರ್ ಸಂಜೀವ ಬಳೆಗಾರ ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ಈ ಸಂಬಂಧ ಯಾರನ್ನೂ ಬಂಧಿಸಿಲ್ಲ. ರಾಮದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>