<p><strong>ಬೆಂಗಳೂರು: </strong>ಎರಡು ತಿಂಗಳ ಹಿಂದೆ ಅಣ್ಣಾ ಹಜಾರೆ ಅವರು ದೆಹಲಿಯ ಜಂತರ್-ಮಂತರ್ನಲ್ಲಿ ನಡೆಸಿದ ಭ್ರಷ್ಟಾಚಾರ ವಿರೋಧಿ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಹಲವಾರು ಮಂದಿ ಉಪವಾಸ ಕುಳಿತಿದ್ದ ನಗರದ ಶೇಷಾದ್ರಿ ರಸ್ತೆಯ ಸ್ವಾತಂತ್ರ್ಯ ಉದ್ಯಾನವನ ಶನಿವಾರ ಅಂಥದೇ ಮತ್ತೊಂದು ಕಾರ್ಯಕ್ರಮಕ್ಕೆ ವೇದಿಕೆಯಾಯಿತು.<br /> <br /> ಯೋಗ ಗುರು ಬಾಬಾ ರಾಮದೇವ್ ಅವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಸುತ್ತಿರುವ ಉಪ ವಾಸಕ್ಕೆ ಬೆಂಬಲಾರ್ಥವಾಗಿ ಅವರೇ ಹುಟ್ಟುಹಾಕಿದ `ಭಾರತ ಸ್ವಾಭಿಮಾನ್ ಟ್ರಸ್ಟ್ ` ನಗರದಲ್ಲಿ ಈ ಸತ್ಯಾಗ್ರಹ ಆಯೋಜಿಸಿತ್ತು.<br /> <br /> ಬೆಳಿಗ್ಗೆ 9ಕ್ಕೆ ಅಧಿಕೃತವಾಗಿ ಆರಂಭ ವಾದ ಸತ್ಯಾಗ್ರಹಕ್ಕೆ ಆರಂಭದಲ್ಲಿ ಬೆರಳೆಣಿಕೆಯಷ್ಟು ಮಂದಿ ಆಗಮಿಸಿದ್ದರು. ಸಮಯ ಸರಿದಂತೆಲ್ಲ ಹೋರಾಟದಲ್ಲಿ ಭಾಗವಹಿಸಿಸುವವರ ಸಂಖ್ಯೆ ಹೆಚ್ಚುತ್ತಾ ಹೋಯಿತು. <br /> `ಅನಿರ್ದಿಷ್ಟ~ ಅವಧಿಯ ವರೆಗೆ ಉಪವಾಸ ಕುಳಿತುಕೊಳ್ಳುವ ವರನ್ನು ಸಂಘಟಕರು ವೇದಿಕೆಯ ಮೇಲೆ ಕರೆದು ಕುಳ್ಳಿರಿಸಿದರು. `ನಿರ್ದಿಷ್ಟ~ ಅವಧಿಯವರೆಗೆ ಉಪವಾಸ ಇರುವವರು ವೇದಿಕೆಯ ಮುಂಭಾಗದಲ್ಲಿ ಆಸೀನ ರಾಗಿದ್ದರು. ಸಮಯ ಸರಿದಂತೆಲ್ಲ ಹಲವಾರು ಗಣ್ಯರು ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು.<br /> <br /> ಈ ಸತ್ಯಾಗ್ರಹ ಭ್ರಷ್ಟಾಚಾರ ವಿರೋಧಿಸಲಿಕ್ಕೆ ಮಾತ್ರ ಸೀಮಿತ ವಾಗಿರಲಿಲ್ಲ. ಜೊತೆಗೆ ಕನ್ನಡ ಭಾಷೆಯ ಮಹತ್ವದ ಕುರಿತ ಮಾತುಗಳು, ಆಧ್ಯಾ ತ್ಮಿಕ ಹಾಡುಗಳು, ಸಂಸ್ಕೃತ ಶ್ಲೋಕಗಳೂ ಕೇಳಿ ಬಂದುವು. ರಾಮ್ದೇವ್ ಅವರ ಯೋಗದಿಂದ ಪ್ರಭಾವಿತರಾಗಿದ್ದ ಮಹಿಳೆಯರೂ ಉಪವಾಸದಲ್ಲಿ ಭಾಗವಹಿಸಿ ಭ್ರಷ್ಟಾಚಾರ ವಿರೋಧಿ ಘೋಷಣೆಗಳಿಗೆ `ಜೈ~ ಎನ್ನುತ್ತಿದ್ದರು.<br /> <br /> ವಿಧಾನಸಭೆಯ ಮಾಜಿ ಸ್ಪೀಕರ್ ಕೃಷ್ಣ ಮಾತನಾಡಿ, `ಭ್ರಷ್ಟಾಚಾರವು ವಿದ್ಯಾ ವಂತರಿಂದಲೇ ಹೆಚ್ಚುತ್ತಿದೆ. ಪ್ರತಿವರ್ಷ ಸುಮಾರು 20 ಸಾವಿರ ಕೋಟಿ ರೂಪಾಯಿ ಕಪ್ಪುಹಣ ಸೃಷ್ಟಿಯಾಗುತ್ತಿದೆ. ಪ್ರಧಾನಮಂತ್ರಿಯನ್ನು ಜನರೇ ನೇರವಾಗಿ ಚುನಾಯಿಸುವ ವ್ಯವಸ್ಥೆ ಜಾರಿಗೆ ಬರಬೇಕು.<br /> <br /> ಹಿಂದೆ ಕೆಲವೇ ಮಂದಿ ಭ್ರಷ್ಟ ರಾಜಕಾರಣಿಗಳಿದ್ದರು. ಇಂದು ಯಾರು ಭ್ರಷ್ಟರಲ್ಲ ಎಂದು ಹುಡುಕಬೇಕಾಗಿದೆ. ಕೊಳ್ಳೆ ಹೊಡೆಯಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಅಧಿಕಾರಿಗಳು ಸ್ವಾಮೀಜಿಗಳ ಕಾಲು ಹಿಡಿಯುವ ಬದಲು, ರಾಜಕಾರಣಿಗಳ ಕಾಲು ಹಿಡಿಯುತ್ತಿದ್ದಾರೆ~ ಎಂದು ವ್ಯಂಗ್ಯವಾಡಿದರು. <br /> <br /> ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ಮಾತ ನಾಡಿ, `ಜನರು ಭ್ರಷ್ಟಾಚಾರದ ವಿರುದ್ಧ ಸಿಡಿದೇಳಬೇಕು. ನಿದ್ದೆಯಿಂದ ಎಚ್ಚೆತ್ತು ಕೊಳ್ಳಬೇಕು~ ಎಂದು ಹೇಳಿದರಲ್ಲದೇ ಕುವೆಂಪು ಅವರ ಪ್ರಸಿದ್ಧ `ಆನಂದಮಯ ಈ ಕವಿ ಹೃದಯ~ ಗೀತೆ ಹಾಡಿದರು.<br /> <br /> ಆರ್ಎಸ್ಎಸ್ ಮುಖಂಡ ಮೈ.ಚ.ಜಯದೇವ, ವಿಧಾನಪರಿಷತ್ ಸದಸ್ಯ ಪ್ರೊ.ಪಿ.ವಿ.ಕೃಷ್ಣಭಟ್, ವಿ. ನಾಗರಾಜ್, ಕವಿಗಳಾದ ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ಎಂ.ಎನ್.ವ್ಯಾಸರಾವ್, ಧಾರವಾಡದ ಬಸವಾನಂದ ಸ್ವಾಮೀಜಿ, ಬಿ.ಆರ್.ಛಾಯಾ ದಂಪತಿ, ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ರವಿಕುಮಾರ್, ಚಕ್ರವರ್ತಿ ಸೂಲಿಬೆಲೆ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.<br /> <br /> ಹಿರಿಯ ಕವಿಗಳಾದ ಡಾ.ಜಿ.ಎಸ್.ಶಿವರುದ್ರಪ್ಪ, ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರು ಬೆಂಬಲ ಪತ್ರ ಕಳುಹಿಸಿದ್ದರು. ಆಮರಣಾಂತ ಉಪವಾ ಸದಲ್ಲಿ 150ಕ್ಕೂ ಅಧಿಕ ಮಂದಿ ಭಾಗವ ಹಿಸಿದ್ದರು. ಉಳಿದವರು ಭಾನುವಾರ ಬೆಳಿಗ್ಗೆ ಭಾಗವಹಿಸಲಿದ್ದಾರೆ ಎಂದು ಸಂಘಟಕರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಎರಡು ತಿಂಗಳ ಹಿಂದೆ ಅಣ್ಣಾ ಹಜಾರೆ ಅವರು ದೆಹಲಿಯ ಜಂತರ್-ಮಂತರ್ನಲ್ಲಿ ನಡೆಸಿದ ಭ್ರಷ್ಟಾಚಾರ ವಿರೋಧಿ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಹಲವಾರು ಮಂದಿ ಉಪವಾಸ ಕುಳಿತಿದ್ದ ನಗರದ ಶೇಷಾದ್ರಿ ರಸ್ತೆಯ ಸ್ವಾತಂತ್ರ್ಯ ಉದ್ಯಾನವನ ಶನಿವಾರ ಅಂಥದೇ ಮತ್ತೊಂದು ಕಾರ್ಯಕ್ರಮಕ್ಕೆ ವೇದಿಕೆಯಾಯಿತು.<br /> <br /> ಯೋಗ ಗುರು ಬಾಬಾ ರಾಮದೇವ್ ಅವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಸುತ್ತಿರುವ ಉಪ ವಾಸಕ್ಕೆ ಬೆಂಬಲಾರ್ಥವಾಗಿ ಅವರೇ ಹುಟ್ಟುಹಾಕಿದ `ಭಾರತ ಸ್ವಾಭಿಮಾನ್ ಟ್ರಸ್ಟ್ ` ನಗರದಲ್ಲಿ ಈ ಸತ್ಯಾಗ್ರಹ ಆಯೋಜಿಸಿತ್ತು.<br /> <br /> ಬೆಳಿಗ್ಗೆ 9ಕ್ಕೆ ಅಧಿಕೃತವಾಗಿ ಆರಂಭ ವಾದ ಸತ್ಯಾಗ್ರಹಕ್ಕೆ ಆರಂಭದಲ್ಲಿ ಬೆರಳೆಣಿಕೆಯಷ್ಟು ಮಂದಿ ಆಗಮಿಸಿದ್ದರು. ಸಮಯ ಸರಿದಂತೆಲ್ಲ ಹೋರಾಟದಲ್ಲಿ ಭಾಗವಹಿಸಿಸುವವರ ಸಂಖ್ಯೆ ಹೆಚ್ಚುತ್ತಾ ಹೋಯಿತು. <br /> `ಅನಿರ್ದಿಷ್ಟ~ ಅವಧಿಯ ವರೆಗೆ ಉಪವಾಸ ಕುಳಿತುಕೊಳ್ಳುವ ವರನ್ನು ಸಂಘಟಕರು ವೇದಿಕೆಯ ಮೇಲೆ ಕರೆದು ಕುಳ್ಳಿರಿಸಿದರು. `ನಿರ್ದಿಷ್ಟ~ ಅವಧಿಯವರೆಗೆ ಉಪವಾಸ ಇರುವವರು ವೇದಿಕೆಯ ಮುಂಭಾಗದಲ್ಲಿ ಆಸೀನ ರಾಗಿದ್ದರು. ಸಮಯ ಸರಿದಂತೆಲ್ಲ ಹಲವಾರು ಗಣ್ಯರು ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು.<br /> <br /> ಈ ಸತ್ಯಾಗ್ರಹ ಭ್ರಷ್ಟಾಚಾರ ವಿರೋಧಿಸಲಿಕ್ಕೆ ಮಾತ್ರ ಸೀಮಿತ ವಾಗಿರಲಿಲ್ಲ. ಜೊತೆಗೆ ಕನ್ನಡ ಭಾಷೆಯ ಮಹತ್ವದ ಕುರಿತ ಮಾತುಗಳು, ಆಧ್ಯಾ ತ್ಮಿಕ ಹಾಡುಗಳು, ಸಂಸ್ಕೃತ ಶ್ಲೋಕಗಳೂ ಕೇಳಿ ಬಂದುವು. ರಾಮ್ದೇವ್ ಅವರ ಯೋಗದಿಂದ ಪ್ರಭಾವಿತರಾಗಿದ್ದ ಮಹಿಳೆಯರೂ ಉಪವಾಸದಲ್ಲಿ ಭಾಗವಹಿಸಿ ಭ್ರಷ್ಟಾಚಾರ ವಿರೋಧಿ ಘೋಷಣೆಗಳಿಗೆ `ಜೈ~ ಎನ್ನುತ್ತಿದ್ದರು.<br /> <br /> ವಿಧಾನಸಭೆಯ ಮಾಜಿ ಸ್ಪೀಕರ್ ಕೃಷ್ಣ ಮಾತನಾಡಿ, `ಭ್ರಷ್ಟಾಚಾರವು ವಿದ್ಯಾ ವಂತರಿಂದಲೇ ಹೆಚ್ಚುತ್ತಿದೆ. ಪ್ರತಿವರ್ಷ ಸುಮಾರು 20 ಸಾವಿರ ಕೋಟಿ ರೂಪಾಯಿ ಕಪ್ಪುಹಣ ಸೃಷ್ಟಿಯಾಗುತ್ತಿದೆ. ಪ್ರಧಾನಮಂತ್ರಿಯನ್ನು ಜನರೇ ನೇರವಾಗಿ ಚುನಾಯಿಸುವ ವ್ಯವಸ್ಥೆ ಜಾರಿಗೆ ಬರಬೇಕು.<br /> <br /> ಹಿಂದೆ ಕೆಲವೇ ಮಂದಿ ಭ್ರಷ್ಟ ರಾಜಕಾರಣಿಗಳಿದ್ದರು. ಇಂದು ಯಾರು ಭ್ರಷ್ಟರಲ್ಲ ಎಂದು ಹುಡುಕಬೇಕಾಗಿದೆ. ಕೊಳ್ಳೆ ಹೊಡೆಯಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಅಧಿಕಾರಿಗಳು ಸ್ವಾಮೀಜಿಗಳ ಕಾಲು ಹಿಡಿಯುವ ಬದಲು, ರಾಜಕಾರಣಿಗಳ ಕಾಲು ಹಿಡಿಯುತ್ತಿದ್ದಾರೆ~ ಎಂದು ವ್ಯಂಗ್ಯವಾಡಿದರು. <br /> <br /> ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ಮಾತ ನಾಡಿ, `ಜನರು ಭ್ರಷ್ಟಾಚಾರದ ವಿರುದ್ಧ ಸಿಡಿದೇಳಬೇಕು. ನಿದ್ದೆಯಿಂದ ಎಚ್ಚೆತ್ತು ಕೊಳ್ಳಬೇಕು~ ಎಂದು ಹೇಳಿದರಲ್ಲದೇ ಕುವೆಂಪು ಅವರ ಪ್ರಸಿದ್ಧ `ಆನಂದಮಯ ಈ ಕವಿ ಹೃದಯ~ ಗೀತೆ ಹಾಡಿದರು.<br /> <br /> ಆರ್ಎಸ್ಎಸ್ ಮುಖಂಡ ಮೈ.ಚ.ಜಯದೇವ, ವಿಧಾನಪರಿಷತ್ ಸದಸ್ಯ ಪ್ರೊ.ಪಿ.ವಿ.ಕೃಷ್ಣಭಟ್, ವಿ. ನಾಗರಾಜ್, ಕವಿಗಳಾದ ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ಎಂ.ಎನ್.ವ್ಯಾಸರಾವ್, ಧಾರವಾಡದ ಬಸವಾನಂದ ಸ್ವಾಮೀಜಿ, ಬಿ.ಆರ್.ಛಾಯಾ ದಂಪತಿ, ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ರವಿಕುಮಾರ್, ಚಕ್ರವರ್ತಿ ಸೂಲಿಬೆಲೆ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.<br /> <br /> ಹಿರಿಯ ಕವಿಗಳಾದ ಡಾ.ಜಿ.ಎಸ್.ಶಿವರುದ್ರಪ್ಪ, ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರು ಬೆಂಬಲ ಪತ್ರ ಕಳುಹಿಸಿದ್ದರು. ಆಮರಣಾಂತ ಉಪವಾ ಸದಲ್ಲಿ 150ಕ್ಕೂ ಅಧಿಕ ಮಂದಿ ಭಾಗವ ಹಿಸಿದ್ದರು. ಉಳಿದವರು ಭಾನುವಾರ ಬೆಳಿಗ್ಗೆ ಭಾಗವಹಿಸಲಿದ್ದಾರೆ ಎಂದು ಸಂಘಟಕರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>