<p>ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಹೈದರಾಬಾದ್ ಕರ್ನಾಟಕದ ಜನತೆ ಸಂತಸದಿಂದ ಬೀಗಲು ಕೇಂದ್ರ ಸರ್ಕಾರದ ಅಧಿಸೂಚನೆಯೊಂದು ಕಾರಣವಾಗಿದೆ. ಹುಮ್ನಾಬಾದ್- ಬಿಜಾಪುರ (ಜೇವರ್ಗಿ ಮಾರ್ಗ)ನಡುವಿನ ರಸ್ತೆಯನ್ನು ‘ರಾಷ್ಟ್ರೀಯ ಹೆದ್ದಾರಿ 218(ಇ)’ ಎಂದು ಅಧಿಸೂಚನೆ ಹೊರಡಿಸಿ ಅದರ ನಿರ್ವಹಣೆಯ ಉಸ್ತುವಾರಿಯನ್ನು ಕೇಂದ್ರ ಸರ್ಕಾರ ವಹಿಸಿಕೊಂಡಿರುವುದೇ ಈ ಭಾಗದ ಜನ ಸಂತಸಪಡಲು ಕಾರಣ. <br /> <br /> ಸ್ವಾತಂತ್ರ್ಯ ಲಭಿಸಿ 62 ವರ್ಷಗಳು ಗತಿಸಿದ್ದರೂ ಈ ಭಾಗದಲ್ಲಿ ಒಂದು ಕಿ.ಮೀ ಸಹ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಣೆಯಾಗಿರಲಿಲ್ಲ. ಈಗಿನ ಕೊಪ್ಪಳ ಜಿಲ್ಲೆಯ ಕುಷ್ಟಗಿ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 13 (ಸೋಲಾಪುರದಿಂದ ಚಿತ್ರದುರ್ಗ) ಮತ್ತು ಬೀದರ್ ಜಿಲ್ಲೆಯ ಹುಮ್ನಾಬಾದ್ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 9 (ಪುಣೆಯಿಂದ ಹೈದರಾಬಾದ್)ಗಳು ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಾಣವಾದವುಗಳು.<br /> <br /> ಯಾವುದೇ ಭಾಗದ ಸರ್ವತೋಮುಖ ಅಭಿವೃದ್ದಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಾತ್ರ ತುಂಬಾ ಮಹತ್ವದ್ದು. ಸರಕು ಸಾಗಣೆ ಸುಗಮವಾಗಲು ರಾಷ್ಟ್ರೀಯ ಹೆದ್ದಾರಿ ಅವಶ್ಯಕ. ಬೀದರ್ -ಶ್ರಿರಂಗಪಟ್ಟಣ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆ ಹಲವಾರು ವರ್ಷಗಳಿಂದ ಕೇಂದ್ರ ಸರ್ಕಾರದ ಮುಂದಿದೆ. ಸಾಕಷ್ಟು ಸಲ ಈ ಕುರಿತು ಸಂಸತ್ತಿನಲ್ಲಿ ಪ್ರಶ್ನಿಸಿದಾಗಲೆಲ್ಲ ಕೇಂದ್ರ ಸರ್ಕಾರದ ನಕಾರಾತ್ಮಕ ನಿಲುವು ಬಹಿರಂಗವಾಗಿದೆ.<br /> <br /> ಈ ಎರಡು ಐತಿಹಾಸಿಕ ನಗರಗಳನ್ನು ಸಂಪರ್ಕಿಸುವ ಈ ರಸ್ತೆಗೆ ಕೇಂದ್ರದ ನಿರಾಸಕ್ತಿ ಮನವರಿಕೆಯಾಗುತ್ತಿಲ್ಲ. ರಾಜ್ಯ ಸರ್ಕಾರ ಈಗಾಗಲೇ ಬೀದರ್-ಶ್ರಿರಂಗಪಟ್ಟಣ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟದಲ್ಲಿ ನಿರ್ಮಿಸಿದೆ. ಈಗ ಆಗಬೇಕಾಗಿರುವುದು ಈ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿ ಎಂದು ಔಪಚಾರಿಕ ಘೋಷಣೆ ಮಾಡುವುದು ಮಾತ್ರ. <br /> <br /> ಕೊನೆಯ ಪಕ್ಷ ಬೀದರ್ನಿಂದ ಲಿಂಗಸಗೂರ್, ಸಿಂಧನೂರ್, ಬಳ್ಳಾರಿ, ಚಳ್ಳಕೆರೆ ಮೂಲಕ ರಾಷ್ಟ್ರೀಯ ಹೆದ್ದಾರಿ 4 ರ ಹಿರಿಯೂರುವರೆಗಾದರೂ ಅಧಿಸೂಚನೆ ಹೊರಡಿಸಲು ಯಾವ ಅಡ್ಡಿಯೂ ಇಲ್ಲ. ಕೇಂದ್ರದಲ್ಲಿರುವ ರಾಜ್ಯದ ಸಚಿವರು ಗಮನ ಹರಿಸಬೇಕಾಗಿದೆ. ಅಷ್ಟೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ಹೈದರಾಬಾದ್ ಕರ್ನಾಟಕದ ಜನತೆ ಸಂತಸದಿಂದ ಬೀಗಲು ಕೇಂದ್ರ ಸರ್ಕಾರದ ಅಧಿಸೂಚನೆಯೊಂದು ಕಾರಣವಾಗಿದೆ. ಹುಮ್ನಾಬಾದ್- ಬಿಜಾಪುರ (ಜೇವರ್ಗಿ ಮಾರ್ಗ)ನಡುವಿನ ರಸ್ತೆಯನ್ನು ‘ರಾಷ್ಟ್ರೀಯ ಹೆದ್ದಾರಿ 218(ಇ)’ ಎಂದು ಅಧಿಸೂಚನೆ ಹೊರಡಿಸಿ ಅದರ ನಿರ್ವಹಣೆಯ ಉಸ್ತುವಾರಿಯನ್ನು ಕೇಂದ್ರ ಸರ್ಕಾರ ವಹಿಸಿಕೊಂಡಿರುವುದೇ ಈ ಭಾಗದ ಜನ ಸಂತಸಪಡಲು ಕಾರಣ. <br /> <br /> ಸ್ವಾತಂತ್ರ್ಯ ಲಭಿಸಿ 62 ವರ್ಷಗಳು ಗತಿಸಿದ್ದರೂ ಈ ಭಾಗದಲ್ಲಿ ಒಂದು ಕಿ.ಮೀ ಸಹ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಣೆಯಾಗಿರಲಿಲ್ಲ. ಈಗಿನ ಕೊಪ್ಪಳ ಜಿಲ್ಲೆಯ ಕುಷ್ಟಗಿ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 13 (ಸೋಲಾಪುರದಿಂದ ಚಿತ್ರದುರ್ಗ) ಮತ್ತು ಬೀದರ್ ಜಿಲ್ಲೆಯ ಹುಮ್ನಾಬಾದ್ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 9 (ಪುಣೆಯಿಂದ ಹೈದರಾಬಾದ್)ಗಳು ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಾಣವಾದವುಗಳು.<br /> <br /> ಯಾವುದೇ ಭಾಗದ ಸರ್ವತೋಮುಖ ಅಭಿವೃದ್ದಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಾತ್ರ ತುಂಬಾ ಮಹತ್ವದ್ದು. ಸರಕು ಸಾಗಣೆ ಸುಗಮವಾಗಲು ರಾಷ್ಟ್ರೀಯ ಹೆದ್ದಾರಿ ಅವಶ್ಯಕ. ಬೀದರ್ -ಶ್ರಿರಂಗಪಟ್ಟಣ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆ ಹಲವಾರು ವರ್ಷಗಳಿಂದ ಕೇಂದ್ರ ಸರ್ಕಾರದ ಮುಂದಿದೆ. ಸಾಕಷ್ಟು ಸಲ ಈ ಕುರಿತು ಸಂಸತ್ತಿನಲ್ಲಿ ಪ್ರಶ್ನಿಸಿದಾಗಲೆಲ್ಲ ಕೇಂದ್ರ ಸರ್ಕಾರದ ನಕಾರಾತ್ಮಕ ನಿಲುವು ಬಹಿರಂಗವಾಗಿದೆ.<br /> <br /> ಈ ಎರಡು ಐತಿಹಾಸಿಕ ನಗರಗಳನ್ನು ಸಂಪರ್ಕಿಸುವ ಈ ರಸ್ತೆಗೆ ಕೇಂದ್ರದ ನಿರಾಸಕ್ತಿ ಮನವರಿಕೆಯಾಗುತ್ತಿಲ್ಲ. ರಾಜ್ಯ ಸರ್ಕಾರ ಈಗಾಗಲೇ ಬೀದರ್-ಶ್ರಿರಂಗಪಟ್ಟಣ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟದಲ್ಲಿ ನಿರ್ಮಿಸಿದೆ. ಈಗ ಆಗಬೇಕಾಗಿರುವುದು ಈ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿ ಎಂದು ಔಪಚಾರಿಕ ಘೋಷಣೆ ಮಾಡುವುದು ಮಾತ್ರ. <br /> <br /> ಕೊನೆಯ ಪಕ್ಷ ಬೀದರ್ನಿಂದ ಲಿಂಗಸಗೂರ್, ಸಿಂಧನೂರ್, ಬಳ್ಳಾರಿ, ಚಳ್ಳಕೆರೆ ಮೂಲಕ ರಾಷ್ಟ್ರೀಯ ಹೆದ್ದಾರಿ 4 ರ ಹಿರಿಯೂರುವರೆಗಾದರೂ ಅಧಿಸೂಚನೆ ಹೊರಡಿಸಲು ಯಾವ ಅಡ್ಡಿಯೂ ಇಲ್ಲ. ಕೇಂದ್ರದಲ್ಲಿರುವ ರಾಜ್ಯದ ಸಚಿವರು ಗಮನ ಹರಿಸಬೇಕಾಗಿದೆ. ಅಷ್ಟೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>