<p><strong>ತುಮಕೂರು:</strong> ನಗರದ ಶಿರಾ ಗೇಟ್ಬಳಿ ಈಚೆಗೆ ಹಾಡಹಗಲೆ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ನರಸಿಂಹಮೂರ್ತಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಚಾಂದ್ ತಲೆಮರೆಸಿಕೊಂಡಿದ್ದಾನೆ.<br /> <br /> ಆರೋಪಿಗಳನ್ನು ಸೋಮಣ್ಣ (42), ರಾಜೀವಲೋಚನಬಾಬು (45), ಯೋಗೀಶ್ (40), ಪಾನಿಪೂರಿ ಯದು ಕುಮಾರ್ (42), ಹೆಬ್ಬಾಕ ಸಿದ್ದಲಿಂಗಪ್ಪ (58) ಎಂದು ಗುರುತಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಟಿ.ಆರ್ಸುರೇಶ್ ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.<br /> <br /> ಕೊಲೆಗೆ ಜಮೀನು, ಕೇಬಲ್ ವಿವಾದ ಕಾರಣವಾಗಿದ್ದು ಆರೋಪಿಗಳಾಗಿರುವ 6 ಜನರೊಂದಿಗೆ ಕೊಲೆಯಾದ ನರಸಿಂಹ ಮೂರ್ತಿ ಹಣಕಾಸು, ಭೂಮಿ ವಿಚಾರದಲ್ಲಿ ವೈಷಮ್ಯ ಕಟ್ಟಿಕೊಂಡಿದ್ದನು. ಶಿರಾಗೇಟ್ ನಿವೇಶನವೊಂದನ್ನು ಮಾರಾಟ ಮಾಡಿದ ಹಣದಲ್ಲಿ ನರಸಿಂಹ ಮೂರ್ತಿ ತನ್ನ ಹೆಂಡತಿಯ ಅಕ್ಕನ ಗಂಡನಾದ ಆರೋಪಿ ಸೋಮಣ್ಣನಿಗೆ ಕೊಡಬೇಕಾಗಿದ್ದ ಪಾಲು ಕೊಟ್ಟಿರಲಿಲ್ಲ.</p>.<p>ರಾಜೀವಲೋಚನಾ ಬಾಬು ಜತೆ ಕೇಬಲ್ ವ್ಯವಹಾರದಲ್ಲಿ ಜಗಳವಾಗಿತ್ತು. ಆರೋಪಿ ಯೋಗೀಶ್ನ ಜೊತೆಯೂ ನಿವೇಶನದ ವಿಚಾರದಲ್ಲಿ ವೈಷಮ್ಯ ಬೆಳೆದಿತ್ತು. ಈ ಎಲ್ಲ ಕಾರಣಗಳಿಂದ ಆರೋಪಿಗಳೆಲ್ಲರೂ ಒಟ್ಟಾಗಿ ಕೊಲೆ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.<br /> <br /> ಬಂಧಿತ ಆರೋಪಿಗಳ ಮೇಲೆ ಹಲವು ಪ್ರಕರಣಗಳಿವೆ. ಜಮೀನು, ಸೈಟು, ಕೇಬಲ್ ವ್ಯವಹಾರವನ್ನು ಜೊತೆಯಾಗಿ ಮಾಡುತ್ತಿದ್ದರು. ಜಗಳ- ತಕರಾರು ಇರುವ ಜಮೀನುಗಳನ್ನು ತೆಗೆದುಕೊಂಡು ಅದನ್ನು ಬೇರೆಯವರಿಗೆ ಮಾರಿ ಬಂದ ಲಾಭದಲ್ಲಿ ಹಣ ಹಂಚಿಕೊಳ್ಳುತ್ತಿದ್ದರು. 2010ರಲ್ಲಿ ರಮೇಶ್ ಎಂಬುವರಿಂದ ಶಿರಾಗೇಟ್ ಸಮೀಪ ತಕರಾರು ಇದ್ದ 3 ಎಕರೆ ಭೂಮಿಯನ್ನು ಖರೀದಿಸಿದ್ದರು.</p>.<p>ಈ ಭೂಮಿಯ ತಕರಾರು ಬಗೆಹರಿಸಿ ಮಾರಾಟ ಮಾಡುವ ಹೊಣೆಯನ್ನು ನರಸಿಂಹಮೂರ್ತಿ ಹಾಗೂ ಅವರ ತಾಯಿಗೆ ವಹಿಸಲಾಗಿತ್ತು. ಅದರಂತೆ ಮೂರು ಎಕರೆ ಜಮೀನು ಮಾರಿದ್ದರು. ಆದರೆ ಇದರಲ್ಲಿ ಹೆಚ್ಚುವರಿಯಾಗಿ ಇದ್ದ 16 ಗುಂಟೆ ಭೂಮಿಯನ್ನು ನರಸಿಂಹಮೂರ್ತಿ ಇಟ್ಟುಕೊಂಡಿದ್ದರು. ಈ ಭೂಮಿಗೆ ಸಂಬಂಧಿಸಿದಂತೆ ತಕರಾರು ಇತ್ತು ಎಂದು ಅವರು ಹೇಳಿದರು.<br /> <br /> ಆರೋಪಿಗಳೇ ನೇರವಾಗಿ ಕೊಲೆ ಮಾಡಿದ್ದಾರೆಯೇ ಅಥವಾ ಹೊರ ಗಿನವರೂ ಸುಫಾರಿ ನೀಡಿದ್ದರೆ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕೊಲೆಗೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದು ತನಿಖೆ ಇನ್ನು ಮುಂದುವರೆದಿದೆ. ತಲೆಮರೆಸಿಕೊಂಡಿ ರುವ ಪ್ರಮುಖ ಚಾಂದ್ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.<br /> <br /> ಸೋಮಣ್ಣ, ರಾಜೀವಲೋಚನ ಬಾಬು, ಯೋಗೀಶ್ ಸೇರಿಕೊಂಡು ದಾರಿಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ನರಸಿಂಹಮೂರ್ತಿಯನ್ನು ತಡೆದು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು. ಆದರೆ ಕೊಲೆಗೂ ಮುನ್ನ ಮಧ್ಯಾಹ್ನ 3 ಗಂಟೆಗೆ ಗುಪ್ತ ಸಭೆ ನಡೆಸಿದ್ದು, ಈ ಸಭೆಯಲ್ಲಿ ಪ್ರಕರಣದ ಆರು ಆರೋಪಿಗಳು ಭಾಗವಹಿಸಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ತಿಳಿಸಿದರು.<br /> <br /> ಆರೋಪಿಗಳ ಬಂಧನಕ್ಕೆ ನಗರ ಡಿವೈಎಸ್ಪಿ ಎಸ್.ಆರ್. ವಿಜಯಕುಮಾರ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಎಲ್.ಕುಮಾರಪ್ಪ, ಸಬ್ಇನ್ಸ್ಪೆಕ್ಟರ್ಗಳಾದ ಮುನಿರಾಜು, ಶ್ರೀಕಂಠಮೂರ್ತಿ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ನಗರದ ಶಿರಾ ಗೇಟ್ಬಳಿ ಈಚೆಗೆ ಹಾಡಹಗಲೆ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ನರಸಿಂಹಮೂರ್ತಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಚಾಂದ್ ತಲೆಮರೆಸಿಕೊಂಡಿದ್ದಾನೆ.<br /> <br /> ಆರೋಪಿಗಳನ್ನು ಸೋಮಣ್ಣ (42), ರಾಜೀವಲೋಚನಬಾಬು (45), ಯೋಗೀಶ್ (40), ಪಾನಿಪೂರಿ ಯದು ಕುಮಾರ್ (42), ಹೆಬ್ಬಾಕ ಸಿದ್ದಲಿಂಗಪ್ಪ (58) ಎಂದು ಗುರುತಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಟಿ.ಆರ್ಸುರೇಶ್ ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.<br /> <br /> ಕೊಲೆಗೆ ಜಮೀನು, ಕೇಬಲ್ ವಿವಾದ ಕಾರಣವಾಗಿದ್ದು ಆರೋಪಿಗಳಾಗಿರುವ 6 ಜನರೊಂದಿಗೆ ಕೊಲೆಯಾದ ನರಸಿಂಹ ಮೂರ್ತಿ ಹಣಕಾಸು, ಭೂಮಿ ವಿಚಾರದಲ್ಲಿ ವೈಷಮ್ಯ ಕಟ್ಟಿಕೊಂಡಿದ್ದನು. ಶಿರಾಗೇಟ್ ನಿವೇಶನವೊಂದನ್ನು ಮಾರಾಟ ಮಾಡಿದ ಹಣದಲ್ಲಿ ನರಸಿಂಹ ಮೂರ್ತಿ ತನ್ನ ಹೆಂಡತಿಯ ಅಕ್ಕನ ಗಂಡನಾದ ಆರೋಪಿ ಸೋಮಣ್ಣನಿಗೆ ಕೊಡಬೇಕಾಗಿದ್ದ ಪಾಲು ಕೊಟ್ಟಿರಲಿಲ್ಲ.</p>.<p>ರಾಜೀವಲೋಚನಾ ಬಾಬು ಜತೆ ಕೇಬಲ್ ವ್ಯವಹಾರದಲ್ಲಿ ಜಗಳವಾಗಿತ್ತು. ಆರೋಪಿ ಯೋಗೀಶ್ನ ಜೊತೆಯೂ ನಿವೇಶನದ ವಿಚಾರದಲ್ಲಿ ವೈಷಮ್ಯ ಬೆಳೆದಿತ್ತು. ಈ ಎಲ್ಲ ಕಾರಣಗಳಿಂದ ಆರೋಪಿಗಳೆಲ್ಲರೂ ಒಟ್ಟಾಗಿ ಕೊಲೆ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.<br /> <br /> ಬಂಧಿತ ಆರೋಪಿಗಳ ಮೇಲೆ ಹಲವು ಪ್ರಕರಣಗಳಿವೆ. ಜಮೀನು, ಸೈಟು, ಕೇಬಲ್ ವ್ಯವಹಾರವನ್ನು ಜೊತೆಯಾಗಿ ಮಾಡುತ್ತಿದ್ದರು. ಜಗಳ- ತಕರಾರು ಇರುವ ಜಮೀನುಗಳನ್ನು ತೆಗೆದುಕೊಂಡು ಅದನ್ನು ಬೇರೆಯವರಿಗೆ ಮಾರಿ ಬಂದ ಲಾಭದಲ್ಲಿ ಹಣ ಹಂಚಿಕೊಳ್ಳುತ್ತಿದ್ದರು. 2010ರಲ್ಲಿ ರಮೇಶ್ ಎಂಬುವರಿಂದ ಶಿರಾಗೇಟ್ ಸಮೀಪ ತಕರಾರು ಇದ್ದ 3 ಎಕರೆ ಭೂಮಿಯನ್ನು ಖರೀದಿಸಿದ್ದರು.</p>.<p>ಈ ಭೂಮಿಯ ತಕರಾರು ಬಗೆಹರಿಸಿ ಮಾರಾಟ ಮಾಡುವ ಹೊಣೆಯನ್ನು ನರಸಿಂಹಮೂರ್ತಿ ಹಾಗೂ ಅವರ ತಾಯಿಗೆ ವಹಿಸಲಾಗಿತ್ತು. ಅದರಂತೆ ಮೂರು ಎಕರೆ ಜಮೀನು ಮಾರಿದ್ದರು. ಆದರೆ ಇದರಲ್ಲಿ ಹೆಚ್ಚುವರಿಯಾಗಿ ಇದ್ದ 16 ಗುಂಟೆ ಭೂಮಿಯನ್ನು ನರಸಿಂಹಮೂರ್ತಿ ಇಟ್ಟುಕೊಂಡಿದ್ದರು. ಈ ಭೂಮಿಗೆ ಸಂಬಂಧಿಸಿದಂತೆ ತಕರಾರು ಇತ್ತು ಎಂದು ಅವರು ಹೇಳಿದರು.<br /> <br /> ಆರೋಪಿಗಳೇ ನೇರವಾಗಿ ಕೊಲೆ ಮಾಡಿದ್ದಾರೆಯೇ ಅಥವಾ ಹೊರ ಗಿನವರೂ ಸುಫಾರಿ ನೀಡಿದ್ದರೆ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕೊಲೆಗೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದು ತನಿಖೆ ಇನ್ನು ಮುಂದುವರೆದಿದೆ. ತಲೆಮರೆಸಿಕೊಂಡಿ ರುವ ಪ್ರಮುಖ ಚಾಂದ್ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.<br /> <br /> ಸೋಮಣ್ಣ, ರಾಜೀವಲೋಚನ ಬಾಬು, ಯೋಗೀಶ್ ಸೇರಿಕೊಂಡು ದಾರಿಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ನರಸಿಂಹಮೂರ್ತಿಯನ್ನು ತಡೆದು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು. ಆದರೆ ಕೊಲೆಗೂ ಮುನ್ನ ಮಧ್ಯಾಹ್ನ 3 ಗಂಟೆಗೆ ಗುಪ್ತ ಸಭೆ ನಡೆಸಿದ್ದು, ಈ ಸಭೆಯಲ್ಲಿ ಪ್ರಕರಣದ ಆರು ಆರೋಪಿಗಳು ಭಾಗವಹಿಸಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ತಿಳಿಸಿದರು.<br /> <br /> ಆರೋಪಿಗಳ ಬಂಧನಕ್ಕೆ ನಗರ ಡಿವೈಎಸ್ಪಿ ಎಸ್.ಆರ್. ವಿಜಯಕುಮಾರ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಎಲ್.ಕುಮಾರಪ್ಪ, ಸಬ್ಇನ್ಸ್ಪೆಕ್ಟರ್ಗಳಾದ ಮುನಿರಾಜು, ಶ್ರೀಕಂಠಮೂರ್ತಿ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>