<p><strong>ಮಂಗಳೂರು:</strong> ಹಫ್ತಾ ವಸೂಲಿಯಲ್ಲಿ ತೊಡಗಿದ್ದ ಭೂಗತ ಪಾತಕಿಗಳಾದ ರವಿಪೂಜಾರಿ ಮತ್ತು ಕಲಿ ಯೋಗೀಶನ ಸಹಚರರಿಬ್ಬರನ್ನು ಬಂಧಿಸಿದ ಸಿಸಿಬಿ ಪೊಲೀಸರು 1 ಲಕ್ಷ ರೂಪಾಯಿ ಹಫ್ತಾ ಹಣ ಹಾಗೂ ಎಂಟು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. <br /> <br /> ಸುರತ್ಕಲ್ ಸಮೀಪದ ಮುಚ್ಚೂರಿನ ತಾರಾನಾಥ (40) ಹಾಗೂ ಸುಬ್ರಹ್ಮಣ್ಯ ಯಾನೆ ಸುಬ್ಬು (25) ಬಂಧಿತರು.ಈ ಕುರಿತು ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಮನೀಶ್ ಖರ್ಬಿಕರ್, `ರವಿ ಪೂಜಾರಿ ಹಾಗೂ ಕಲಿ ಯೋಗೀಶ ನಗರದ ಉದ್ಯಮಿಗಳನ್ನು ಹಫ್ತಾ ನೀಡುವಂತೆ ಬೆದರಿಸುತ್ತಿದ್ದರು. <br /> <br /> ಹಫ್ತಾ ಹಣವನ್ನು ಪಿ.ವಿ.ಎಸ್ ವೃತ್ತದ ಬಳಿ ತಾರಾನಾಥ ನಡೆಸುತ್ತಿರುವ `ಮಿಲ್ಕ್ ವೇ~ ಹಾಲಿನ ಬೂತ್ಗೆ ಕಳುಹಿಸಲು ತಿಳಿಸುತ್ತಿದ್ದರು. ಬುಧವಾರ ಉದ್ಯಮಿಯೊಬ್ಬರು 1ಲಕ್ಷ ರೂಪಾಯಿ ಹಫ್ತಾವನ್ನು ಹಾಲಿನ ಬೂತ್ಗೆ ತಲುಪಿಸಿದ ಬಗ್ಗೆ ಮಾಹಿತಿ ಇತ್ತು. ಈ ಆಧಾರದಲ್ಲಿ ಸಿಸಿಬಿ ಪೊಲೀಸರು ಇನ್ಸ್ಪೆಕ್ಟರ್ ವೆಂಕಟೇಶ ಪ್ರಸನ್ನ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ~ ಎಂದು ಅವರು ತಿಳಿಸಿದರು.<br /> <br /> ವಕೀಲ ನೌಷದ್ ಖಾಸಿಂಜಿ ಹತ್ಯೆಯಲ್ಲೂ ಆರೋಪಿಯಾಗಿದ್ದ ಆರೋಪಿ ಸುಬ್ರಹ್ಮಣ್ಯ ಒಂದೂವರೆ ವರ್ಷ ಜೈಲುವಾಸವನ್ನೂ ಅನುಭವಿಸಿದ್ದ. ಖಾಸಿಂಜಿ ಹತ್ಯೆಗೆ ಬಳಸಿದ್ದ ಮೂರು ರಿವಾಲ್ವರ್ಗಳನ್ನು ಆತ ಕೆ.ಎಸ್.ರಾವ್ ರಸ್ತೆಯಲ್ಲಿ ಹೊಂದಿದ್ದ ಕ್ಷೌರದಂಗಡಿಯಿಂದ ವಶಪಡಿಸಿಕೊಳ್ಳಲಾಗಿತ್ತು. <br /> <br /> ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಆತ ಹಫ್ತಾ ವಸೂಲಿ ಹಾಗೂ ಹವಾಲ ಜಾಲದಲ್ಲಿ ತೊಡಗಿಸಿಕೊಂಡಿದ್ದ ಎಂದ ಅವರು ತಿಳಿಸಿದರು. ಗೋಷ್ಠಿಯಲ್ಲಿ ಡಿಸಿಪಿ ಮುತ್ತೂರಾಯ ಹಾಗೂ ಧರ್ಮಯ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಹಫ್ತಾ ವಸೂಲಿಯಲ್ಲಿ ತೊಡಗಿದ್ದ ಭೂಗತ ಪಾತಕಿಗಳಾದ ರವಿಪೂಜಾರಿ ಮತ್ತು ಕಲಿ ಯೋಗೀಶನ ಸಹಚರರಿಬ್ಬರನ್ನು ಬಂಧಿಸಿದ ಸಿಸಿಬಿ ಪೊಲೀಸರು 1 ಲಕ್ಷ ರೂಪಾಯಿ ಹಫ್ತಾ ಹಣ ಹಾಗೂ ಎಂಟು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. <br /> <br /> ಸುರತ್ಕಲ್ ಸಮೀಪದ ಮುಚ್ಚೂರಿನ ತಾರಾನಾಥ (40) ಹಾಗೂ ಸುಬ್ರಹ್ಮಣ್ಯ ಯಾನೆ ಸುಬ್ಬು (25) ಬಂಧಿತರು.ಈ ಕುರಿತು ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಮನೀಶ್ ಖರ್ಬಿಕರ್, `ರವಿ ಪೂಜಾರಿ ಹಾಗೂ ಕಲಿ ಯೋಗೀಶ ನಗರದ ಉದ್ಯಮಿಗಳನ್ನು ಹಫ್ತಾ ನೀಡುವಂತೆ ಬೆದರಿಸುತ್ತಿದ್ದರು. <br /> <br /> ಹಫ್ತಾ ಹಣವನ್ನು ಪಿ.ವಿ.ಎಸ್ ವೃತ್ತದ ಬಳಿ ತಾರಾನಾಥ ನಡೆಸುತ್ತಿರುವ `ಮಿಲ್ಕ್ ವೇ~ ಹಾಲಿನ ಬೂತ್ಗೆ ಕಳುಹಿಸಲು ತಿಳಿಸುತ್ತಿದ್ದರು. ಬುಧವಾರ ಉದ್ಯಮಿಯೊಬ್ಬರು 1ಲಕ್ಷ ರೂಪಾಯಿ ಹಫ್ತಾವನ್ನು ಹಾಲಿನ ಬೂತ್ಗೆ ತಲುಪಿಸಿದ ಬಗ್ಗೆ ಮಾಹಿತಿ ಇತ್ತು. ಈ ಆಧಾರದಲ್ಲಿ ಸಿಸಿಬಿ ಪೊಲೀಸರು ಇನ್ಸ್ಪೆಕ್ಟರ್ ವೆಂಕಟೇಶ ಪ್ರಸನ್ನ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ~ ಎಂದು ಅವರು ತಿಳಿಸಿದರು.<br /> <br /> ವಕೀಲ ನೌಷದ್ ಖಾಸಿಂಜಿ ಹತ್ಯೆಯಲ್ಲೂ ಆರೋಪಿಯಾಗಿದ್ದ ಆರೋಪಿ ಸುಬ್ರಹ್ಮಣ್ಯ ಒಂದೂವರೆ ವರ್ಷ ಜೈಲುವಾಸವನ್ನೂ ಅನುಭವಿಸಿದ್ದ. ಖಾಸಿಂಜಿ ಹತ್ಯೆಗೆ ಬಳಸಿದ್ದ ಮೂರು ರಿವಾಲ್ವರ್ಗಳನ್ನು ಆತ ಕೆ.ಎಸ್.ರಾವ್ ರಸ್ತೆಯಲ್ಲಿ ಹೊಂದಿದ್ದ ಕ್ಷೌರದಂಗಡಿಯಿಂದ ವಶಪಡಿಸಿಕೊಳ್ಳಲಾಗಿತ್ತು. <br /> <br /> ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಆತ ಹಫ್ತಾ ವಸೂಲಿ ಹಾಗೂ ಹವಾಲ ಜಾಲದಲ್ಲಿ ತೊಡಗಿಸಿಕೊಂಡಿದ್ದ ಎಂದ ಅವರು ತಿಳಿಸಿದರು. ಗೋಷ್ಠಿಯಲ್ಲಿ ಡಿಸಿಪಿ ಮುತ್ತೂರಾಯ ಹಾಗೂ ಧರ್ಮಯ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>