<p>ಮುಂಬೈ, ದೆಹಲಿಯ ಯಶಸ್ಸಿನ ನಂತರ ರೆಸ್ಟೊರೆಂಟ್ ಸಪ್ತಾಹ ಬೆಂಗಳೂರಿಗೆ ಬರುತ್ತಿದೆ. ಸೆ.19ರಿಂದ 25ರವರೆಗೆ ನಡೆಯಲಿರುವ ಈ ಸಪ್ತಾಹದಲ್ಲಿ ಬೆಂಗಳೂರಿನ ಪ್ರಖ್ಯಾತ ರೆಸ್ಟೊರೆಂಟ್ಗಳ ಪ್ರಸಿದ್ಧ ಬಾಣಸಿಗರು ಸಿದ್ಧಪಡಿಸಿದ ಸ್ವಾದಿಷ್ಟ ಊಟ, ತಿಂಡಿ ವಿಶೇಷ ಖಾದ್ಯಗಳನ್ನು 1 ಸಾವಿರ ರೂ ದರದಲ್ಲಿ ಸವಿಯವ ಅವಕಾಶ ಲಭ್ಯ.<br /> <br /> ಎಂ ಜಿ ರಸ್ತೆ ಒಬೆರಾಯ್ ಹೋಟೆಲ್ನ ಶೆಜ್ವಾನ್ ಕೋರ್ಟ್ ಮತ್ತು ಲಿ ಜಾರ್ಡಿನ್, ದಿ ಲೀಲಾ ಪ್ಯಾಲೇಸ್ನ ಜೆನ್, ಶೆರಟಾನ್ ಬೆಂಗಳೂರು ಹೋಟೆಲ್ನ ಬೆನ್, ಇಷ್ಟಾ ಹೋಟೆಲ್ನ ದಿ ಪಿಂಕ್ ಪೊಪಾಡಂ, ಅಶೋಕ ನಗರದ ಆಲಿವ್ ಬೀಚ್ ಹಾಗೂ ಡಿಕನ್ಸ್ನ್ ರಸ್ತೆಯಲ್ಲಿರುವ ಕ್ಯಾಪರ್ಬೆರ್ರಿ ಈ ಸಪ್ತಾಹದಲ್ಲಿ ಪಾಲ್ಗೊಳ್ಳುತ್ತಿವೆ. ಗ್ರಾಹಕರು ಬಯಸಿದಲ್ಲಿ ವಿದೇಶಿ ವೈನ್ ಜತೆ ಊಟ ಸವಿಯಬಹುದು. <a href="http://www.restaurantweekindia.com">www.restaurantweekindia.com</a> ಮೂಲಕ ಟೇಬಲ್ ಕಾಯ್ದಿರಿಸಬಹುದು. <br /> <br /> <strong>ರಂಗಶಂಕರದಲ್ಲಿ ಓಣಂ <br /> </strong>ಜೆಪಿ ನಗರ 2ನೇ ಹಂತದ ರಂಗ ಶಂಕರ ಕೆಫೆಯಲ್ಲಿ ಭಾನುವಾರ ಮಧ್ಯಾಹ್ನ 1ರಿಂದ 3 ರವರೆಗೆ ಓಣಂ ಅಂಗವಾಗಿ ಕೇರಳದ ಸಾಂಪ್ರದಾಯಿಕ ಭರ್ಜರಿ `ಓಣಂ ಸದ್ಯ~ ಭೋಜನ ಸವಿಯಬಹುದು. <br /> <br /> ರಂಗ ಶಂಕರ ಕೆಫೆ ನಡೆಸುತ್ತಿರುವ ಅಂಜು ಸುದರ್ಶನ್ ಅವರು ಓಣಂ ಹಬ್ಬದ ವಿಶೇಷ ಖಾದ್ಯಗಳನ್ನು ತಯಾರುಮಾಡಿದ್ದಾರೆ. ಮಾಹಿತಿಗೆ: 99000 64931. <br /> <br /> <strong>ಶಾಹಿ ದಸ್ತಾರ್ಖ್ವಾನ್</strong><br /> ಬಾರ್ಬೆಕ್ಯೂ ನೇಷನ್ ರೆಸ್ಟೊರೆಂಟ್ ಈಗ ರಾಜ ಮಹಾರಾಜರು ಸೇವಿಸುತ್ತಿದ್ದ ರಾಜ ವೈಭೋಗದ ವಿಶೇಷ ತಿನಿಸುಗಳ `ಶಾಹಿ ದಸ್ತಾರ್ಖ್ವಾನ್~ ಆಹಾರ ಮೇಳ ನಡೆಸುತ್ತಿದೆ.<br /> <br /> ಇಲ್ಲಿ ಸೆ. 11ರ ವರೆಗೂ ಮೊಘಲ್ನಿಜಾಂ, ರಜಪೂತ್ ಮತ್ತು ಕಾಶ್ಮೀರಿ ರಾಜ ಶೈಲಿಯ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಖಾದ್ಯಗಳನ್ನು ಮೆಲ್ಲಬಹುದು. ಕಾಶ್ಮೀರಿಗಳು `ಡಿಷ್ ಆಫ್ ಕಿಂಗ್ಸ್~ ಎಂದೇ ಕರೆಯುವ ಗುಶ್ತಾಬಾ ಈ ಮೇಳದ ಪ್ರಮುಖ ಆಕರ್ಷಣೆ. ಇದು ಮೊಸರಿನಿಂದ ತಯಾರಿಸಿದ ಗ್ರೇವಿಯಲ್ಲಿ ಅದ್ದಿದ (ಪೌಂಡೆಡ್ ಮೀಟ್) ಮಾಂಸದ ಈ ವಿಶೇಷ ತಿನಿಸು ತನ್ನ ಸ್ವಾದ ಮತ್ತು ರುಚಿಗೆ ಪ್ರಸಿದ್ಧವಾಗಿದೆ. <br /> <br /> ಮಾಹಿ ಶುರ್ಕ್ ಕುರ್ಮಾ, ಕಚ್ಚೇ ಗೋಷ್ಟ್ ಕೀ ಬಿರ್ಯಾನಿ, ದಮ್ ಕಾ ಮುರ್ಘ್, ರಜಪೂತರ ನೆಚ್ಚಿನ ಅಡುಗೆ ಸಸ್ಯಾಹಾರಿ ದಹಿ ಕೇ ಶೋಲೆ ಮತ್ತು ಧಿಂಗ್ರಿ ಖಾಸ್ಗಳನ್ನು ಮೆಲ್ಲುತ್ತ ಟಕೀಲಾ, ವೈಟ್ ರಮ್ ಮತ್ತು ದ್ರಾಕ್ಷಿ ರಸದ ವಿಶೇಷ ಮಿಶ್ರಣ `ಗುಸ್ತಾಕಿ ಮಾಫ್~ ಎಂಬ ವಿಶಿಷ್ಟ ಪಾನೀಯ ಸೇವಿಸಿದರೆ ಅದರ ಸವಿಯೇ ಬೇರೆ. ಸ್ಥಳ: ಇಂದಿರಾನಗರ, ಕೋರಮಂಗಲ ಮತ್ತು ಜೆಪಿ ನಗರ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಂಬೈ, ದೆಹಲಿಯ ಯಶಸ್ಸಿನ ನಂತರ ರೆಸ್ಟೊರೆಂಟ್ ಸಪ್ತಾಹ ಬೆಂಗಳೂರಿಗೆ ಬರುತ್ತಿದೆ. ಸೆ.19ರಿಂದ 25ರವರೆಗೆ ನಡೆಯಲಿರುವ ಈ ಸಪ್ತಾಹದಲ್ಲಿ ಬೆಂಗಳೂರಿನ ಪ್ರಖ್ಯಾತ ರೆಸ್ಟೊರೆಂಟ್ಗಳ ಪ್ರಸಿದ್ಧ ಬಾಣಸಿಗರು ಸಿದ್ಧಪಡಿಸಿದ ಸ್ವಾದಿಷ್ಟ ಊಟ, ತಿಂಡಿ ವಿಶೇಷ ಖಾದ್ಯಗಳನ್ನು 1 ಸಾವಿರ ರೂ ದರದಲ್ಲಿ ಸವಿಯವ ಅವಕಾಶ ಲಭ್ಯ.<br /> <br /> ಎಂ ಜಿ ರಸ್ತೆ ಒಬೆರಾಯ್ ಹೋಟೆಲ್ನ ಶೆಜ್ವಾನ್ ಕೋರ್ಟ್ ಮತ್ತು ಲಿ ಜಾರ್ಡಿನ್, ದಿ ಲೀಲಾ ಪ್ಯಾಲೇಸ್ನ ಜೆನ್, ಶೆರಟಾನ್ ಬೆಂಗಳೂರು ಹೋಟೆಲ್ನ ಬೆನ್, ಇಷ್ಟಾ ಹೋಟೆಲ್ನ ದಿ ಪಿಂಕ್ ಪೊಪಾಡಂ, ಅಶೋಕ ನಗರದ ಆಲಿವ್ ಬೀಚ್ ಹಾಗೂ ಡಿಕನ್ಸ್ನ್ ರಸ್ತೆಯಲ್ಲಿರುವ ಕ್ಯಾಪರ್ಬೆರ್ರಿ ಈ ಸಪ್ತಾಹದಲ್ಲಿ ಪಾಲ್ಗೊಳ್ಳುತ್ತಿವೆ. ಗ್ರಾಹಕರು ಬಯಸಿದಲ್ಲಿ ವಿದೇಶಿ ವೈನ್ ಜತೆ ಊಟ ಸವಿಯಬಹುದು. <a href="http://www.restaurantweekindia.com">www.restaurantweekindia.com</a> ಮೂಲಕ ಟೇಬಲ್ ಕಾಯ್ದಿರಿಸಬಹುದು. <br /> <br /> <strong>ರಂಗಶಂಕರದಲ್ಲಿ ಓಣಂ <br /> </strong>ಜೆಪಿ ನಗರ 2ನೇ ಹಂತದ ರಂಗ ಶಂಕರ ಕೆಫೆಯಲ್ಲಿ ಭಾನುವಾರ ಮಧ್ಯಾಹ್ನ 1ರಿಂದ 3 ರವರೆಗೆ ಓಣಂ ಅಂಗವಾಗಿ ಕೇರಳದ ಸಾಂಪ್ರದಾಯಿಕ ಭರ್ಜರಿ `ಓಣಂ ಸದ್ಯ~ ಭೋಜನ ಸವಿಯಬಹುದು. <br /> <br /> ರಂಗ ಶಂಕರ ಕೆಫೆ ನಡೆಸುತ್ತಿರುವ ಅಂಜು ಸುದರ್ಶನ್ ಅವರು ಓಣಂ ಹಬ್ಬದ ವಿಶೇಷ ಖಾದ್ಯಗಳನ್ನು ತಯಾರುಮಾಡಿದ್ದಾರೆ. ಮಾಹಿತಿಗೆ: 99000 64931. <br /> <br /> <strong>ಶಾಹಿ ದಸ್ತಾರ್ಖ್ವಾನ್</strong><br /> ಬಾರ್ಬೆಕ್ಯೂ ನೇಷನ್ ರೆಸ್ಟೊರೆಂಟ್ ಈಗ ರಾಜ ಮಹಾರಾಜರು ಸೇವಿಸುತ್ತಿದ್ದ ರಾಜ ವೈಭೋಗದ ವಿಶೇಷ ತಿನಿಸುಗಳ `ಶಾಹಿ ದಸ್ತಾರ್ಖ್ವಾನ್~ ಆಹಾರ ಮೇಳ ನಡೆಸುತ್ತಿದೆ.<br /> <br /> ಇಲ್ಲಿ ಸೆ. 11ರ ವರೆಗೂ ಮೊಘಲ್ನಿಜಾಂ, ರಜಪೂತ್ ಮತ್ತು ಕಾಶ್ಮೀರಿ ರಾಜ ಶೈಲಿಯ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಖಾದ್ಯಗಳನ್ನು ಮೆಲ್ಲಬಹುದು. ಕಾಶ್ಮೀರಿಗಳು `ಡಿಷ್ ಆಫ್ ಕಿಂಗ್ಸ್~ ಎಂದೇ ಕರೆಯುವ ಗುಶ್ತಾಬಾ ಈ ಮೇಳದ ಪ್ರಮುಖ ಆಕರ್ಷಣೆ. ಇದು ಮೊಸರಿನಿಂದ ತಯಾರಿಸಿದ ಗ್ರೇವಿಯಲ್ಲಿ ಅದ್ದಿದ (ಪೌಂಡೆಡ್ ಮೀಟ್) ಮಾಂಸದ ಈ ವಿಶೇಷ ತಿನಿಸು ತನ್ನ ಸ್ವಾದ ಮತ್ತು ರುಚಿಗೆ ಪ್ರಸಿದ್ಧವಾಗಿದೆ. <br /> <br /> ಮಾಹಿ ಶುರ್ಕ್ ಕುರ್ಮಾ, ಕಚ್ಚೇ ಗೋಷ್ಟ್ ಕೀ ಬಿರ್ಯಾನಿ, ದಮ್ ಕಾ ಮುರ್ಘ್, ರಜಪೂತರ ನೆಚ್ಚಿನ ಅಡುಗೆ ಸಸ್ಯಾಹಾರಿ ದಹಿ ಕೇ ಶೋಲೆ ಮತ್ತು ಧಿಂಗ್ರಿ ಖಾಸ್ಗಳನ್ನು ಮೆಲ್ಲುತ್ತ ಟಕೀಲಾ, ವೈಟ್ ರಮ್ ಮತ್ತು ದ್ರಾಕ್ಷಿ ರಸದ ವಿಶೇಷ ಮಿಶ್ರಣ `ಗುಸ್ತಾಕಿ ಮಾಫ್~ ಎಂಬ ವಿಶಿಷ್ಟ ಪಾನೀಯ ಸೇವಿಸಿದರೆ ಅದರ ಸವಿಯೇ ಬೇರೆ. ಸ್ಥಳ: ಇಂದಿರಾನಗರ, ಕೋರಮಂಗಲ ಮತ್ತು ಜೆಪಿ ನಗರ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>