ರೈತರ ಘರ್ಷಣೆ: ಹಲವರಿಗೆ ಗಾಯ
ಸಿಂಧನೂರು: ತಾಲ್ಲೂಕಿನ ಗಡಿಗ್ರಾಮಗಳಾದ ಚನ್ನಳ್ಳಿ, ಸಿದ್ರಾಂಪುರ, ಗಣೇಶಕ್ಯಾಂಪ್, ಮಾವಿನಮಡು ಮತ್ತು ಗಂಗಾವತಿ ತಾಲ್ಲೂಕಿನ ಬೂದಗುಂಪಾ ಮತ್ತಿತರ ಗ್ರಾಮಗಳ ರೈತರ ನಡುವೆ ಶನಿವಾರ ಮಧ್ಯಾಹ್ನ ಗುಂಪು ಘರ್ಷಣೆ ನಡೆದಿದೆ. ಇದರಲ್ಲಿ ಇಬ್ಬರು ಪೊಲೀಸ್ ಪೇದೆಗಳು, ರೈತರಾದ ಹೊನ್ನಪ್ಪ, ಹುಸೇನಪ್ಪ, ರುದ್ರಪ್ಪ, ದುರುಗಪ್ಪ, ಖಾಜಪ್ಪ, ಕನಕರೆಡ್ಡಿ ಎನ್ನುವವರಿಗೆ ಗಾಯಗಳಾಗಿದೆ. ಗಾಯಾಳುಗಳು ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು ಎರಡೂ ಕಡೆಗಳಲ್ಲಿ ರೈತರು ಗುಂಪು-ಗುಂಪಾಗಿ ಜಮಾಯಿಸಿದ್ದರು. ತುಂಗಭದ್ರಾ ಎಡದಂಡೆ ನಾಲೆ 31/6 ಉಪ ಕಾಲುವೆಯಿಂದ ನೀರು ಪಡೆಯುವ ವಿಷಯದಲ್ಲಿ ಉಂಟಾದ ವಿವಾದವೇ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.