ರೈತ ಮತ್ತು ವಿಷ
ಬೆಲೆಯೂ ಇಲ್ಲದೆ
ಬೆಂಬಲವೂ ಇಲ್ಲದೆ
ಒಲವು ಛಲವೂ ಇಲ್ಲದೆ
ಬದುಕಲು ಬಲವೂ ಇಲ್ಲದೆ
ಸೋತು ಸುಣ್ಣವಾಗಿ
ಕುಸಿದು ಕಂಗಾಲಾಗಿ
‘ವಿಷ’ವನ್ನೆ ಉಣ್ಣುತ್ತಿಹರು
ನೇಗಿಲಯೋಗಿ ಎಂಬ ರೈತರು
ಓ ರೈತ ಬಂಧು, ಅನ್ನದಾತ
ಬೇಡ ಇಷ್ಟೊಂದು ಅಸಹನೆ
ಇರಲಿ ಇನ್ನೂ ಒಂದಷ್ಟು ಸಹನೆ
ನಿನ್ನಗಲಿಕೆಯಿಂದ ಸ್ಮಾರಕವಾಗುತ್ತದೆ
ಅಷ್ಟೆ, ನಿನ್ನಕ್ಕರೆಯ ಅರಮನೆ
‘ಸಾವು’ ಸಮಸ್ಯೆಗೆ ಪರಿಹಾರವಲ್ಲ
ಈಸಬೇಕು ಈಸಿ ಜೈಸಬೇಕು
ಜೈಸಿ ಬಾಳ ಬೆಳಗಬೇಕು!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.