<p><strong>ನವದೆಹಲಿ: </strong>ಜುಲೈ 1ರಿಂದ ರೈಲ್ವೆ ಟಿಕೆಟ್ಗಳನ್ನು ಎಸ್ಎಂಎಸ್ ಮೂಲಕ ಪಡೆಯುವ ವ್ಯವಸ್ಥೆ ಜಾರಿಗೊಳಿಸಲು ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮವು (ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್- ಐಆರ್ಸಿಟಿಸಿ) ತಯಾರಿ ಮಾಡಿಕೊಂಡಿದೆ.<br /> <br /> ಈ ಸೌಲಭ್ಯಕ್ಕೆ ಚಾಲನೆ ನೀಡುವ ಮುನ್ನ ಐಆರ್ಸಿಟಿಸಿ ಅದಕ್ಕೆಂದೇ ನಿಗದಿಯಾದ ಪ್ರತ್ಯೇಕ ಸಂಖ್ಯೆ ಪ್ರಕಟಿಸಲಿದೆ. ಇದರ ಮೂಲಕ ಟಿಕೆಟ್ ಪಡೆಯಲು ಇಚ್ಛಿಸುವವರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಬ್ಯಾಂಕಿನಲ್ಲಿ ನೋಂದಣಿ ಮಾಡಿಸಬೇಕಾಗುತ್ತದೆ. ಇದಾದ ನಂತರ ಬ್ಯಾಂಕುಗಳು ಪ್ರತಿಯೊಬ್ಬ ನೋಂದಣಿದಾರರಿಗೂ `ಮೊಬೈಲ್ ಮನಿ ಐಡೆಂಟಿಫಯರ್' (ಎಂಎಂಐಡಿ) ಮತ್ತು `ಗುಪ್ತಪದ'ವನ್ನು (ಒನ್ಟೈಮ್ ಪಾಸ್ವರ್ಡ್) ನೀಡುತ್ತವೆ.<br /> <br /> ಟಿಕೆಟ್ ಬೇಕಾದವರು ತಮ್ಮ ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಐಆರ್ಸಿಟಿಸಿ ಪ್ರಕಟಿಸುವ ಸಂಖ್ಯೆಗೆ ಎಸ್ಎಂಎಸ್ ಮಾಡಬೇಕು. ತಾವು ಪ್ರಯಾಣಿಸಲಿರುವ ರೈಲಿನ ಸಂಖ್ಯೆ, ಪ್ರಯಾಣ ದಿನಾಂಕ, ಹತ್ತುವ ನಿಲ್ದಾಣದ ಹೆಸರು, ಇಳಿಯುವ ನಿಲ್ದಾಣದ ಹೆಸರು, ಪ್ರಯಾಣಿಸಲಿರುವ ದರ್ಜೆ, ಹೆಸರು, ವಯಸ್ಸು, ಲಿಂಗ- ಈ ಮಾಹಿತಿಗಳನ್ನು ಎಸ್ಎಂಎಸ್ ಒಳಗೊಂಡಿರಬೇಕು.<br /> <br /> ಇದನ್ನು ಐಆರ್ಸಿಟಿಸಿ ಪ್ರಕಟಿಸುವ ಸಂಖ್ಯೆಗೆ ಕಳುಹಿಸುತ್ತಿದ್ದಂತೆ, ಅತ್ತ ಕಡೆಯಿಂದ ಎಸ್ಎಂಎಸ್ ಕಳಿಸಿದವರ ಮೊಬೈಲ್ಗೆ ಟಾನ್ಸಾಕ್ಷನ್ ಐಡಿ ಬರುತ್ತದೆ. ಇದಾದ ಮೇಲೆ ಟಿಕೆಟ್ ಬೇಕಾದವರು ಈ ಟ್ರಾನ್ಸಾಕ್ಷನ್ ಐಡಿ ಯ ಜತೆಗೆ `ಎಂಎಂಐಡಿ' ಮತ್ತು `ಒಟಿಪಿ' ಯನ್ನು ಮುದ್ರಿಸಿ ಮತ್ತೆ ಎಸ್ಎಂಎಸ್ ಕಳುಹಿಸಬೇಕು. ಹೀಗೆ ಮಾಡಿದಾಗ ಸಂಬಂಧಿಸಿದವರ ಬ್ಯಾಂಕ್ ಖಾತೆಯಿಂದ ಟಿಕೆಟ್ ಮೊತ್ತ ಕಡಿತವಾಗುತ್ತದೆ. ಇದಾದ ಮೇಲೆ ಪ್ರಯಾಣಿಸಲಿರುವವರ ಮೊಬೈಲ್ಗೆ ಒಂದು ಎಸ್ಎಂಎಸ್ ಬರುತ್ತದೆ. ಇದನ್ನೇ ಟಿಕೆಟ್ ಆಗಿ ಬಳಸಬಹುದು.<br /> <br /> ಈ ಪ್ರತಿ ಎಸ್ಎಂಎಸ್ ಗೆ 3 ರೂಪಾಯಿ ಕಡಿತವಾಗುತ್ತದೆ. ಜತೆಗೆ, 5000 ರೂಪಾಯಿವರೆಗಿನ ಬುಕಿಂಗ್ಗೆ 5 ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಬುಕಿಂಗ್ಗೆ 10 ರೂಪಾಯಿಯನ್ನು ಐಆರ್ಸಿಟಿಸಿ ಶುಲ್ಕವಾಗಿ ಪಡೆಯುತ್ತದೆ.<br /> <br /> <strong>ಟಿಕೆಟ್ ರದ್ದತಿ ಶುಲ್ಕ ಹೆಚ್ಚಳ<br /> ನವದೆಹಲಿ: </strong>ಕಾಯ್ದಿರಿಸಿದ ಟಿಕೆಟ್ ರದ್ದತಿ ಹಾಗೂ ಹಣ ಮರುಪಾವತಿಗೆ ರೈಲ್ವೆ ಇಲಾಖೆ ಕೆಲವು ಕಠಿಣ ನಿಯಮ ರೂಪಿಸಿದ್ದು, ಜುಲೈ 1ರಿಂದ ಜಾರಿಗೆ ಬರಲಿವೆ.<br /> <br /> ಆಸನ ಕಾಯ್ದಿರಿಸಿ ಖಾತರಿ (ಕನ್ಫರ್ಮಡ್) ಟಿಕೆಟ್ ಅನ್ನು ರೈಲು ಹೊರಟ ಎರಡು ಗಂಟೆ ಅವಧಿ ಬಳಿಕ ರದ್ದುಗೊಳಿಸಲು ಅವಕಾಶವಿಲ್ಲ. ಕಾಯ್ದಿರಿಸಿದ (ವೇಟ್ಲಿಸ್ಟ್) ಅಥವಾ ಆರ್ಎಸಿ ಟಿಕೆಟ್ಗಳನ್ನು ರೈಲು ಹೊರಟ ಮೂರು ಗಂಟಗಳ ನಂತರವಷ್ಟೇ ರದ್ದುಗೊಳಿಸಲು ಅವಕಾಶ ನೀಡಲಾಗುವುದು.<br /> <br /> ಪ್ರಯಾಣಿಕನೊಬ್ಬ ಖಾತರಿ (ಕನ್ಫರ್ಮಡ್) ಟಿಕೆಟ್ ಅನ್ನು ಪ್ರಯಾಣಕ್ಕೆ 48 ಗಂಟೆ ಮುಂಚಿತವಾಗಿ ರದ್ದುಪಡಿಸಿದರೆ, ರದ್ದತಿ ಶುಲ್ಕವನ್ನಷ್ಟೇ ಕಡಿತ ಮಾಡಿ, ಉಳಿದ ಸಂಪೂರ್ಣ ಪ್ರಯಾಣ ದರ ಮರುಪಾವತಿಸಲಾಗುವುದು.<br /> <br /> ಟಿಕೆಟ್ ರದ್ದುಗೊಳಿಸಿದರೆ ಕಡಿತ ಮಾಡಲಾಗುವ ಶುಲ್ಕವನ್ನು ಈ ಕೆಳಗಿನಂತೆ ಏರಿಸಲಾಗಿದೆ:<br /> ಎಸಿ ಮೊದಲ ದರ್ಜೆ ಹಾಗೂ ಎಕ್ಸಿಕ್ಯುಟಿವ್: 70ರಿಂದ 120 ರೂ.<br /> ದ್ವಿತೀಯ ಎಸಿ: 60ರಿಂದ 100 ರೂ.<br /> ತೃತೀಯ ಎಸಿ, ಚೇರ್ ಕಾರ್ ಹಾಗೂ ಎಕಾನಮಿ ದರ್ಜೆ: 60ರಿಂದ 90 ರೂ.<br /> ಸ್ಲೀಪರ್ ದರ್ಜೆ: 40ರಿಂದ 60 ರೂ.<br /> ದ್ವಿತೀಯ ದರ್ಜೆ: 20ರಿಂದ 30 ರೂ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಜುಲೈ 1ರಿಂದ ರೈಲ್ವೆ ಟಿಕೆಟ್ಗಳನ್ನು ಎಸ್ಎಂಎಸ್ ಮೂಲಕ ಪಡೆಯುವ ವ್ಯವಸ್ಥೆ ಜಾರಿಗೊಳಿಸಲು ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮವು (ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್- ಐಆರ್ಸಿಟಿಸಿ) ತಯಾರಿ ಮಾಡಿಕೊಂಡಿದೆ.<br /> <br /> ಈ ಸೌಲಭ್ಯಕ್ಕೆ ಚಾಲನೆ ನೀಡುವ ಮುನ್ನ ಐಆರ್ಸಿಟಿಸಿ ಅದಕ್ಕೆಂದೇ ನಿಗದಿಯಾದ ಪ್ರತ್ಯೇಕ ಸಂಖ್ಯೆ ಪ್ರಕಟಿಸಲಿದೆ. ಇದರ ಮೂಲಕ ಟಿಕೆಟ್ ಪಡೆಯಲು ಇಚ್ಛಿಸುವವರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಬ್ಯಾಂಕಿನಲ್ಲಿ ನೋಂದಣಿ ಮಾಡಿಸಬೇಕಾಗುತ್ತದೆ. ಇದಾದ ನಂತರ ಬ್ಯಾಂಕುಗಳು ಪ್ರತಿಯೊಬ್ಬ ನೋಂದಣಿದಾರರಿಗೂ `ಮೊಬೈಲ್ ಮನಿ ಐಡೆಂಟಿಫಯರ್' (ಎಂಎಂಐಡಿ) ಮತ್ತು `ಗುಪ್ತಪದ'ವನ್ನು (ಒನ್ಟೈಮ್ ಪಾಸ್ವರ್ಡ್) ನೀಡುತ್ತವೆ.<br /> <br /> ಟಿಕೆಟ್ ಬೇಕಾದವರು ತಮ್ಮ ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಐಆರ್ಸಿಟಿಸಿ ಪ್ರಕಟಿಸುವ ಸಂಖ್ಯೆಗೆ ಎಸ್ಎಂಎಸ್ ಮಾಡಬೇಕು. ತಾವು ಪ್ರಯಾಣಿಸಲಿರುವ ರೈಲಿನ ಸಂಖ್ಯೆ, ಪ್ರಯಾಣ ದಿನಾಂಕ, ಹತ್ತುವ ನಿಲ್ದಾಣದ ಹೆಸರು, ಇಳಿಯುವ ನಿಲ್ದಾಣದ ಹೆಸರು, ಪ್ರಯಾಣಿಸಲಿರುವ ದರ್ಜೆ, ಹೆಸರು, ವಯಸ್ಸು, ಲಿಂಗ- ಈ ಮಾಹಿತಿಗಳನ್ನು ಎಸ್ಎಂಎಸ್ ಒಳಗೊಂಡಿರಬೇಕು.<br /> <br /> ಇದನ್ನು ಐಆರ್ಸಿಟಿಸಿ ಪ್ರಕಟಿಸುವ ಸಂಖ್ಯೆಗೆ ಕಳುಹಿಸುತ್ತಿದ್ದಂತೆ, ಅತ್ತ ಕಡೆಯಿಂದ ಎಸ್ಎಂಎಸ್ ಕಳಿಸಿದವರ ಮೊಬೈಲ್ಗೆ ಟಾನ್ಸಾಕ್ಷನ್ ಐಡಿ ಬರುತ್ತದೆ. ಇದಾದ ಮೇಲೆ ಟಿಕೆಟ್ ಬೇಕಾದವರು ಈ ಟ್ರಾನ್ಸಾಕ್ಷನ್ ಐಡಿ ಯ ಜತೆಗೆ `ಎಂಎಂಐಡಿ' ಮತ್ತು `ಒಟಿಪಿ' ಯನ್ನು ಮುದ್ರಿಸಿ ಮತ್ತೆ ಎಸ್ಎಂಎಸ್ ಕಳುಹಿಸಬೇಕು. ಹೀಗೆ ಮಾಡಿದಾಗ ಸಂಬಂಧಿಸಿದವರ ಬ್ಯಾಂಕ್ ಖಾತೆಯಿಂದ ಟಿಕೆಟ್ ಮೊತ್ತ ಕಡಿತವಾಗುತ್ತದೆ. ಇದಾದ ಮೇಲೆ ಪ್ರಯಾಣಿಸಲಿರುವವರ ಮೊಬೈಲ್ಗೆ ಒಂದು ಎಸ್ಎಂಎಸ್ ಬರುತ್ತದೆ. ಇದನ್ನೇ ಟಿಕೆಟ್ ಆಗಿ ಬಳಸಬಹುದು.<br /> <br /> ಈ ಪ್ರತಿ ಎಸ್ಎಂಎಸ್ ಗೆ 3 ರೂಪಾಯಿ ಕಡಿತವಾಗುತ್ತದೆ. ಜತೆಗೆ, 5000 ರೂಪಾಯಿವರೆಗಿನ ಬುಕಿಂಗ್ಗೆ 5 ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಬುಕಿಂಗ್ಗೆ 10 ರೂಪಾಯಿಯನ್ನು ಐಆರ್ಸಿಟಿಸಿ ಶುಲ್ಕವಾಗಿ ಪಡೆಯುತ್ತದೆ.<br /> <br /> <strong>ಟಿಕೆಟ್ ರದ್ದತಿ ಶುಲ್ಕ ಹೆಚ್ಚಳ<br /> ನವದೆಹಲಿ: </strong>ಕಾಯ್ದಿರಿಸಿದ ಟಿಕೆಟ್ ರದ್ದತಿ ಹಾಗೂ ಹಣ ಮರುಪಾವತಿಗೆ ರೈಲ್ವೆ ಇಲಾಖೆ ಕೆಲವು ಕಠಿಣ ನಿಯಮ ರೂಪಿಸಿದ್ದು, ಜುಲೈ 1ರಿಂದ ಜಾರಿಗೆ ಬರಲಿವೆ.<br /> <br /> ಆಸನ ಕಾಯ್ದಿರಿಸಿ ಖಾತರಿ (ಕನ್ಫರ್ಮಡ್) ಟಿಕೆಟ್ ಅನ್ನು ರೈಲು ಹೊರಟ ಎರಡು ಗಂಟೆ ಅವಧಿ ಬಳಿಕ ರದ್ದುಗೊಳಿಸಲು ಅವಕಾಶವಿಲ್ಲ. ಕಾಯ್ದಿರಿಸಿದ (ವೇಟ್ಲಿಸ್ಟ್) ಅಥವಾ ಆರ್ಎಸಿ ಟಿಕೆಟ್ಗಳನ್ನು ರೈಲು ಹೊರಟ ಮೂರು ಗಂಟಗಳ ನಂತರವಷ್ಟೇ ರದ್ದುಗೊಳಿಸಲು ಅವಕಾಶ ನೀಡಲಾಗುವುದು.<br /> <br /> ಪ್ರಯಾಣಿಕನೊಬ್ಬ ಖಾತರಿ (ಕನ್ಫರ್ಮಡ್) ಟಿಕೆಟ್ ಅನ್ನು ಪ್ರಯಾಣಕ್ಕೆ 48 ಗಂಟೆ ಮುಂಚಿತವಾಗಿ ರದ್ದುಪಡಿಸಿದರೆ, ರದ್ದತಿ ಶುಲ್ಕವನ್ನಷ್ಟೇ ಕಡಿತ ಮಾಡಿ, ಉಳಿದ ಸಂಪೂರ್ಣ ಪ್ರಯಾಣ ದರ ಮರುಪಾವತಿಸಲಾಗುವುದು.<br /> <br /> ಟಿಕೆಟ್ ರದ್ದುಗೊಳಿಸಿದರೆ ಕಡಿತ ಮಾಡಲಾಗುವ ಶುಲ್ಕವನ್ನು ಈ ಕೆಳಗಿನಂತೆ ಏರಿಸಲಾಗಿದೆ:<br /> ಎಸಿ ಮೊದಲ ದರ್ಜೆ ಹಾಗೂ ಎಕ್ಸಿಕ್ಯುಟಿವ್: 70ರಿಂದ 120 ರೂ.<br /> ದ್ವಿತೀಯ ಎಸಿ: 60ರಿಂದ 100 ರೂ.<br /> ತೃತೀಯ ಎಸಿ, ಚೇರ್ ಕಾರ್ ಹಾಗೂ ಎಕಾನಮಿ ದರ್ಜೆ: 60ರಿಂದ 90 ರೂ.<br /> ಸ್ಲೀಪರ್ ದರ್ಜೆ: 40ರಿಂದ 60 ರೂ.<br /> ದ್ವಿತೀಯ ದರ್ಜೆ: 20ರಿಂದ 30 ರೂ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>