<p>ಹುಬ್ಬಳ್ಳಿ: `ಭಾರತೀಯ ರೈಲ್ವೆಗೆ ಆದಾಯ ತಂದುಕೊಡುವ ಪ್ರಮುಖ ವಲಯಗಳಲ್ಲಿ ಹುಬ್ಬಳ್ಳಿ ವಲಯ ಒಂದು~ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪ್ರವೀಣ ಮಿಶ್ರಾ ಹೇಳಿದರು.<br /> <br /> ನಗರದ ಚಾಲುಕ್ಯ ರೈಲ್ವೆ ಇನ್ಸ್ಟಿಟ್ಯೂಟ್ನಲ್ಲಿ ಈಚೆಗೆ ನಡೆದ ಭಾರತೀಯ ರೈಲ್ವೆ ಸಪ್ತಾಹ ಆಚರಣೆ ಯಲ್ಲಿ ನಾಲ್ವರು ಅಧಿಕಾರಿಗಳು ಸೇರಿದಂತೆ 343 ಮಂದಿ ಹಾಗೂ 14 ತಂಡಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು. <br /> <br /> `ಆರ್ಥಿಕ ಹಿಂಜರಿಕೆ ಸೇರಿದಂತೆ ವಿವಿಧ ಸಮಸ್ಯೆಗಳು ಹಾಗೂ ಅನೇಕ ಇತಿಮಿತಿಗಳ ನಡುವೆ ಹುಬ್ಬಳ್ಳಿ ವಲಯ ದೇಶಿ ಸರಕು ಸಾಗಾಟದಲ್ಲಿ ಉತ್ತಮ ಮುನ್ನಡೆ ಸಾಧಿಸಿದೆ ಎಂದು ಹೇಳಿದ ಅವರು, ಪ್ರಯಾಣಿಕರ ಸಂಖ್ಯೆಯಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ 4.1 ಶೇಕಡಾ ಹೆಚ್ಚಳ ಕಂಡಿದೆ~ ಎಂದರು.<br /> <br /> `ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಹೊಸ ರೈಲು ನಿಲ್ದಾಣ ಪೂರ್ಣಗೊಳ್ಳುವುದರೊಂದಿಗೆ ನೈರುತ್ಯ ರೈಲ್ವೆಯ ಇತಿಹಾಸದಲ್ಲಿ ಮೈಲಿಗಲ್ಲಾ ಗಲಿದೆ. ಇಲ್ಲಿ ಎಲ್ಲ ರೀತಿಯ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗುವುದು.<br /> <br /> ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದ್ದು, ರೈಲು ಟಿಕೆಟ್ಗಳನ್ನು ಸುಲಭವಾಗಿ ಪಡೆಯಲು ಬೇಕಾದ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆ~ ಎಂದು ಅವರು ತಿಳಿಸಿದರು. <br /> <br /> `ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು 20 ಲೆವೆಲ್ ಕ್ರಾಸಿಂಗ್ಗಳಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. 9 ಸಬ್ವೇಗಳನ್ನು ನಿರ್ಮಿಸಲಾಗಿದೆ. 15 ಲೆವೆಲ್ ಕ್ರಾಸಿಂಗ್ಗಳಲ್ಲಿ ಗೇಟ್ ಅಳವಡಿಸಲಾಗಿದೆ. ಇದು ದೇಶದ ಯಾವುದೇ ವಲಯ ಮಾಡಿರುವ ಸಾಧನೆಗಳಲ್ಲೇ ಅತ್ಯುತ್ತಮ~ ಎಂದು ಅವರು ತಿಳಿಸಿದರು.<br /> <br /> `ವಿಜಾಪುರ-ಹುಟಗಿ, ಹುಬ್ಬಳ್ಳಿ- ಹೆಬಸೂರು, ಧಾರವಾಡ- ಮುಗದ, ಬಳ್ಳಾರಿ-ತೋರಣಗಲ್ ನಡುವೆ ಸಂಚಾರದ ಸಂದರ್ಭದಲ್ಲಿ ವೇಗ ಹೆಚ್ಚಳಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಹೊಸಪೇಟೆ- ಕೊಟ್ಟೂರು ನಡುವೆ ಹೊಸ ಪ್ಯಾಸೆಂಜರ್ ರೈಲು ಆರಂಭಿಸಲಾಗಿದೆ.<br /> <br /> ಹಳಿಯ ಉನ್ನತೀಕರಣ, ಸ್ಟೇಷನ್ಗಳ ನಿರ್ಮಾಣ, ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳು, ಲೆವೆಲ್ ಕ್ರಾಸಿಂಗ್, ಸಿಗ್ನಲ್ ವ್ಯವಸ್ಥೆ ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಮಾಡಲಾಗಿದೆ. ಸಿಬ್ಬಂದಿ ಕ್ಷೇಮ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಉಳಿದಿರುವ ಬೇಡಿಕೆಗಳನ್ನು ಶೀಘ್ರ ಈಡೇರಿಸಲಾಗುವುದು~ ಎಂದು ಅವರು ಭರವಸೆ ನೀಡಿದರು.<br /> <br /> ನೈರುತ್ಯ ರೈಲ್ವೆ ವಲಯದ ಹೆಚ್ಚುವರಿ ವ್ಯವಸ್ಥಾಪಕ ಜಿ.ಕೆ. ದ್ವಿವೇದಿ, ನೈರುತ್ಯ ರೈಲ್ವೆ ಮಹಿಳಾ ಕ್ಷೇಮ ಸಂಸ್ಥೆಯ ಅಧ್ಯಕ್ಷೆ ಸುನೀತಾ ಮಿಶ್ರಾ ಮತ್ತಿತರರು ಭಾಗವಹಿಸಿದ್ದರು. ಜಿ.ಆರ್.ಎಸ್ ರಾವ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: `ಭಾರತೀಯ ರೈಲ್ವೆಗೆ ಆದಾಯ ತಂದುಕೊಡುವ ಪ್ರಮುಖ ವಲಯಗಳಲ್ಲಿ ಹುಬ್ಬಳ್ಳಿ ವಲಯ ಒಂದು~ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪ್ರವೀಣ ಮಿಶ್ರಾ ಹೇಳಿದರು.<br /> <br /> ನಗರದ ಚಾಲುಕ್ಯ ರೈಲ್ವೆ ಇನ್ಸ್ಟಿಟ್ಯೂಟ್ನಲ್ಲಿ ಈಚೆಗೆ ನಡೆದ ಭಾರತೀಯ ರೈಲ್ವೆ ಸಪ್ತಾಹ ಆಚರಣೆ ಯಲ್ಲಿ ನಾಲ್ವರು ಅಧಿಕಾರಿಗಳು ಸೇರಿದಂತೆ 343 ಮಂದಿ ಹಾಗೂ 14 ತಂಡಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು. <br /> <br /> `ಆರ್ಥಿಕ ಹಿಂಜರಿಕೆ ಸೇರಿದಂತೆ ವಿವಿಧ ಸಮಸ್ಯೆಗಳು ಹಾಗೂ ಅನೇಕ ಇತಿಮಿತಿಗಳ ನಡುವೆ ಹುಬ್ಬಳ್ಳಿ ವಲಯ ದೇಶಿ ಸರಕು ಸಾಗಾಟದಲ್ಲಿ ಉತ್ತಮ ಮುನ್ನಡೆ ಸಾಧಿಸಿದೆ ಎಂದು ಹೇಳಿದ ಅವರು, ಪ್ರಯಾಣಿಕರ ಸಂಖ್ಯೆಯಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ 4.1 ಶೇಕಡಾ ಹೆಚ್ಚಳ ಕಂಡಿದೆ~ ಎಂದರು.<br /> <br /> `ಹುಬ್ಬಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಹೊಸ ರೈಲು ನಿಲ್ದಾಣ ಪೂರ್ಣಗೊಳ್ಳುವುದರೊಂದಿಗೆ ನೈರುತ್ಯ ರೈಲ್ವೆಯ ಇತಿಹಾಸದಲ್ಲಿ ಮೈಲಿಗಲ್ಲಾ ಗಲಿದೆ. ಇಲ್ಲಿ ಎಲ್ಲ ರೀತಿಯ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗುವುದು.<br /> <br /> ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದ್ದು, ರೈಲು ಟಿಕೆಟ್ಗಳನ್ನು ಸುಲಭವಾಗಿ ಪಡೆಯಲು ಬೇಕಾದ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆ~ ಎಂದು ಅವರು ತಿಳಿಸಿದರು. <br /> <br /> `ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು 20 ಲೆವೆಲ್ ಕ್ರಾಸಿಂಗ್ಗಳಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. 9 ಸಬ್ವೇಗಳನ್ನು ನಿರ್ಮಿಸಲಾಗಿದೆ. 15 ಲೆವೆಲ್ ಕ್ರಾಸಿಂಗ್ಗಳಲ್ಲಿ ಗೇಟ್ ಅಳವಡಿಸಲಾಗಿದೆ. ಇದು ದೇಶದ ಯಾವುದೇ ವಲಯ ಮಾಡಿರುವ ಸಾಧನೆಗಳಲ್ಲೇ ಅತ್ಯುತ್ತಮ~ ಎಂದು ಅವರು ತಿಳಿಸಿದರು.<br /> <br /> `ವಿಜಾಪುರ-ಹುಟಗಿ, ಹುಬ್ಬಳ್ಳಿ- ಹೆಬಸೂರು, ಧಾರವಾಡ- ಮುಗದ, ಬಳ್ಳಾರಿ-ತೋರಣಗಲ್ ನಡುವೆ ಸಂಚಾರದ ಸಂದರ್ಭದಲ್ಲಿ ವೇಗ ಹೆಚ್ಚಳಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಹೊಸಪೇಟೆ- ಕೊಟ್ಟೂರು ನಡುವೆ ಹೊಸ ಪ್ಯಾಸೆಂಜರ್ ರೈಲು ಆರಂಭಿಸಲಾಗಿದೆ.<br /> <br /> ಹಳಿಯ ಉನ್ನತೀಕರಣ, ಸ್ಟೇಷನ್ಗಳ ನಿರ್ಮಾಣ, ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳು, ಲೆವೆಲ್ ಕ್ರಾಸಿಂಗ್, ಸಿಗ್ನಲ್ ವ್ಯವಸ್ಥೆ ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಮಾಡಲಾಗಿದೆ. ಸಿಬ್ಬಂದಿ ಕ್ಷೇಮ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಉಳಿದಿರುವ ಬೇಡಿಕೆಗಳನ್ನು ಶೀಘ್ರ ಈಡೇರಿಸಲಾಗುವುದು~ ಎಂದು ಅವರು ಭರವಸೆ ನೀಡಿದರು.<br /> <br /> ನೈರುತ್ಯ ರೈಲ್ವೆ ವಲಯದ ಹೆಚ್ಚುವರಿ ವ್ಯವಸ್ಥಾಪಕ ಜಿ.ಕೆ. ದ್ವಿವೇದಿ, ನೈರುತ್ಯ ರೈಲ್ವೆ ಮಹಿಳಾ ಕ್ಷೇಮ ಸಂಸ್ಥೆಯ ಅಧ್ಯಕ್ಷೆ ಸುನೀತಾ ಮಿಶ್ರಾ ಮತ್ತಿತರರು ಭಾಗವಹಿಸಿದ್ದರು. ಜಿ.ಆರ್.ಎಸ್ ರಾವ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>