<p><strong>ಭಾಲ್ಕಿ:</strong> ಬುಕಿಂಗ್ ಮಾಡಿ ತಿಂಗಳಾದರೂ ಸಿಗದೇ ಇರುವ ಸಿಲೆಂಡರ್ನಿಂದಾಗಿ ಬುಧವಾರ ಸಾರ್ವಜನಿಕರ ಸಿಟ್ಟು ಸ್ಪೋಟಗೊಂಡಿದೆ. ಇಲ್ಲಿನ ಸೋನಾ ಭಾರತ ಗ್ಯಾಸ್ ಏಜೆನ್ಸಿ ಕೇಂದ್ರದ ಮುಂದೆ ನೂರಾರು ಜನರು ಗುಂಪು ಗೂಡಿದ್ದರು. ಸಿಲೆಂಡರ್ ಲಾರಿ ಬರುತ್ತಿದ್ದಂತೆಯೇ ಕೆಲವರು ಕಲ್ಲು ತೂರಿದರು.<br /> <br /> ತಿಂಗಳಿಗೆ 15 ಲೋಡ್ ಬರುವ ಸಿಲೆಂಡರ್ಗಳು ಜನರಿಗೆ ಸರಿಯಾಗಿ ವಿತರಿಸದೇ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ರೊಚ್ಚಿಗೆದ್ದ ಗ್ರಾಹಕರು ಆರೋಪಿಸಿದರು. ಮೂರು ದಿನಗಳಿಂದ ಅಲೆಯುತ್ತಿದ್ದರೂ ಕೊಡುತ್ತಿಲ್ಲ. ಕೆಲವರು ನೊಂದಣಿ ಮಾಡಿಸಿ ಮೂರು ತಿಂಗಳಾಗಿವೆ ಎಂದರು.<br /> <br /> ಸರಿಯಾಗಿ ವಿತರಿಸಲು ಆಗದೇ ಇದ್ದರೆ ಏಜೆನ್ಸಿ ಬಿಟ್ಟುಬಿಡಿ ಎಂದು ನಾಗರಾಜ ಖಂಡ್ರೆ ದೂರಿದರು. ಈ ಬಗ್ಗೆ ಈಗಾಗಲೇ ತಹಸೀಲ್ದಾರರಿಗೆ ಹಲವು ಸಲ ದೂರುಗಳನ್ನು ನೀಡಲಾಗಿದೆ. ಆದರೆ ಯಾರೊಬ್ಬರೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರು.<br /> <br /> ಜನರು ಗಲಾಟೆ ಮಾಡುತ್ತಿರುವ ಸುದ್ದಿ ಅರಿತ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.<br /> <br /> ನಿರಂತರ ಮಳೆ ಬೀಳುತ್ತಿದ್ದರೂ ಮಕ್ಕಳು, ಮಹಿಳೆಯರು ಸಿಲೆಂಡರ್ ಹಿಡಿದು ಪರದಾಡುತ್ತಿದ್ದ ದೃಶ್ಯ ಕಂಡು ಬಂತು. ಪೊಲೀಸ್ ಭದ್ರತೆಯಲ್ಲಿ ಬಂದಷ್ಟು ಸಿಲೆಂಡರ್ ಹಂಚಲಾಯಿತಾದರೂ ನೂರಾರು ಗ್ರಾಹಕರು ಬರಿಗೈಲಿ ಗೊಣಗುತ್ತ ವಾಪಸ್ಸಾದರು. ಭಾಲ್ಕಿಯಲ್ಲಿ ಗ್ಯಾಸ್ ವಿತರಣೆ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತಿದ್ದು ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಲ್ಕಿ:</strong> ಬುಕಿಂಗ್ ಮಾಡಿ ತಿಂಗಳಾದರೂ ಸಿಗದೇ ಇರುವ ಸಿಲೆಂಡರ್ನಿಂದಾಗಿ ಬುಧವಾರ ಸಾರ್ವಜನಿಕರ ಸಿಟ್ಟು ಸ್ಪೋಟಗೊಂಡಿದೆ. ಇಲ್ಲಿನ ಸೋನಾ ಭಾರತ ಗ್ಯಾಸ್ ಏಜೆನ್ಸಿ ಕೇಂದ್ರದ ಮುಂದೆ ನೂರಾರು ಜನರು ಗುಂಪು ಗೂಡಿದ್ದರು. ಸಿಲೆಂಡರ್ ಲಾರಿ ಬರುತ್ತಿದ್ದಂತೆಯೇ ಕೆಲವರು ಕಲ್ಲು ತೂರಿದರು.<br /> <br /> ತಿಂಗಳಿಗೆ 15 ಲೋಡ್ ಬರುವ ಸಿಲೆಂಡರ್ಗಳು ಜನರಿಗೆ ಸರಿಯಾಗಿ ವಿತರಿಸದೇ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ರೊಚ್ಚಿಗೆದ್ದ ಗ್ರಾಹಕರು ಆರೋಪಿಸಿದರು. ಮೂರು ದಿನಗಳಿಂದ ಅಲೆಯುತ್ತಿದ್ದರೂ ಕೊಡುತ್ತಿಲ್ಲ. ಕೆಲವರು ನೊಂದಣಿ ಮಾಡಿಸಿ ಮೂರು ತಿಂಗಳಾಗಿವೆ ಎಂದರು.<br /> <br /> ಸರಿಯಾಗಿ ವಿತರಿಸಲು ಆಗದೇ ಇದ್ದರೆ ಏಜೆನ್ಸಿ ಬಿಟ್ಟುಬಿಡಿ ಎಂದು ನಾಗರಾಜ ಖಂಡ್ರೆ ದೂರಿದರು. ಈ ಬಗ್ಗೆ ಈಗಾಗಲೇ ತಹಸೀಲ್ದಾರರಿಗೆ ಹಲವು ಸಲ ದೂರುಗಳನ್ನು ನೀಡಲಾಗಿದೆ. ಆದರೆ ಯಾರೊಬ್ಬರೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರು.<br /> <br /> ಜನರು ಗಲಾಟೆ ಮಾಡುತ್ತಿರುವ ಸುದ್ದಿ ಅರಿತ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.<br /> <br /> ನಿರಂತರ ಮಳೆ ಬೀಳುತ್ತಿದ್ದರೂ ಮಕ್ಕಳು, ಮಹಿಳೆಯರು ಸಿಲೆಂಡರ್ ಹಿಡಿದು ಪರದಾಡುತ್ತಿದ್ದ ದೃಶ್ಯ ಕಂಡು ಬಂತು. ಪೊಲೀಸ್ ಭದ್ರತೆಯಲ್ಲಿ ಬಂದಷ್ಟು ಸಿಲೆಂಡರ್ ಹಂಚಲಾಯಿತಾದರೂ ನೂರಾರು ಗ್ರಾಹಕರು ಬರಿಗೈಲಿ ಗೊಣಗುತ್ತ ವಾಪಸ್ಸಾದರು. ಭಾಲ್ಕಿಯಲ್ಲಿ ಗ್ಯಾಸ್ ವಿತರಣೆ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತಿದ್ದು ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>