<p><strong>ಹುಮನಾಬಾದ್:</strong> ಸ್ವಚ್ಛತೆ ಇದ್ದರೆ ಆಸ್ಪತ್ರೆಗೆ ಬರುವ ವ್ಯಕ್ತಿಗಳ ರೋಗ ನಿಯಂತ್ರಿಸುವ ಶಕ್ತಿ ಇರುತ್ತದೆ ಎಂದು ಹೇಳುತ್ತಾರೆ. ಆದರೆ ಹುಮನಾಬಾದ್ ಆಸ್ಪತ್ರೆ ಮಟ್ಟಿಗೆ ಕೊಂಚ ತದ್ವಿರುದ್ಧ. ಆಸ್ಪತ್ರೆ ಪ್ರವೇಶ ದ್ವಾರದಲ್ಲಿ ಸಂಗ್ರಹಗೊಂಡ ಕಸದ ರಾಶಿ ನೋಡಿ ಜನರಿಗೆ ರೋಗ ಹೆಚ್ಚುವ ಭೀತಿ ನಿರ್ಮಾಣವಾಗಿದೆ.<br /> <br /> ಹುಮನಾಬಾದ್ ಕೇಂದ್ರ ಬಸ್ ನಿಲ್ದಾಣದ ಎದುರಿಗೆ ಇರುವ ಸರ್ಕಾರಿ ಆಸ್ಪತ್ರೆ ಪ್ರಾಂಗಣ ಸದಾ ಹಂದಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.<br /> <br /> ಇನ್ನೂ ಹೊರಗಿನಿಂದ ಆಸ್ಪತ್ರೆಗೆ ಬರಬೇಕಾದರೆ ಮೊದಲಿಗೆ ಕಸದರಾಶಿ ದುರ್ನಾತ ಸವಿದೇ ಬರಬೇಕು. ಅಕ್ಕಪಕ್ಕದ ಸಸ್ಯಹಾರಿ, ಮಾಂಸಹಾರಿ ಮೊದಲಾದ ಹೋಟೆಲ್ಗಳವರು ತಮ್ಮಲ್ಲಿನ ಇಡೀ ಕಸವನ್ನು ಆಸ್ಪತ್ರೆ ಪ್ರವೇಶ ದ್ವಾರದಲ್ಲೇ ಎಸೆಯುವ ಕಾರಣ ಸದಾ ದುರ್ನಾತದಿಂದ ಕೂಡಿರುತ್ತದೆ.<br /> <br /> ಕಸವನ್ನು ತೊಟ್ಟಿಗೆ ಚೆಲ್ಲಿದರೆ ಈ ಸಮಸ್ಯೆ ಉದ್ಭವ ಆಗುತ್ತಿರಲಿಲ್ಲ. ಮೈ ಉಳಿಸಿಕೊಳ್ಳಲು ಆ ಕಸ ತೊಟ್ಟಿ ಪಕ್ಕದಲ್ಲಿ ಎಸೆಯುತ್ತಿರುವುದೇ ಈ ಅವ್ಯವಸ್ಥೆಗೆ ಕಾರಣವಾಗಿದೆ.<br /> <br /> ಈ ನಿಟ್ಟಿನಲ್ಲಿ ಆಸ್ಪತ್ರೆ ಆಡಳಿತ ಅಧಿಕಾರಿಗಳು ಪ್ರವೇಶ ದ್ವಾರದ ಎದುರು ಸ್ವಚ್ಛತೆ ಕಾಪಾಡುವ ಬಗ್ಗೆ ಸಿಬ್ಬಂದಿ ಹಾಗೂ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅರಿವು ಮೂಡಿಸಬೇಕು.<br /> <br /> ಜೊತೆಗೆ ಅಕ್ಕಪಕ್ಕದ ಹೊಟೇಲ್ ಕಾರ್ಮಿಕರು ತಾವು ಚೆಲ್ಲುವ ಕಸದಿಂದ ಅನ್ಯರಿಗೆ ಆಗುವ ತೊಂದರೆ ಕುರಿತು ವಿವೇಚಿಸಿದರೆ ಮುಂದೆ ಆಗುವ ಅನಾಹುತ ತಡೆಗಟ್ಟಬಹುದು.<br /> <br /> ಸಂಗ್ರಹಗೊಂಡ ಕಸವನ್ನು ಸಂಬಂಧಪಟ್ಟವರು ತಕ್ಷಣ ವಿಲೆವಾರಿ ಮಾಡಿದರೇ ಈ ಸಮಸ್ಯೆ ನಿವಾರಣೆಗೆ ಕಡಿವಾಣ ಹಾಕಬಹುದು. ಈ ನಿಟ್ಟಿನಲ್ಲಿ ಆಸ್ಪತ್ರೆ ಸಿಬ್ಬಂದಿ, ರೋಗಿಗಳು ಹಾಗೂ ಅಕ್ಕಪಕ್ಕದವರು ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಮನಾಬಾದ್:</strong> ಸ್ವಚ್ಛತೆ ಇದ್ದರೆ ಆಸ್ಪತ್ರೆಗೆ ಬರುವ ವ್ಯಕ್ತಿಗಳ ರೋಗ ನಿಯಂತ್ರಿಸುವ ಶಕ್ತಿ ಇರುತ್ತದೆ ಎಂದು ಹೇಳುತ್ತಾರೆ. ಆದರೆ ಹುಮನಾಬಾದ್ ಆಸ್ಪತ್ರೆ ಮಟ್ಟಿಗೆ ಕೊಂಚ ತದ್ವಿರುದ್ಧ. ಆಸ್ಪತ್ರೆ ಪ್ರವೇಶ ದ್ವಾರದಲ್ಲಿ ಸಂಗ್ರಹಗೊಂಡ ಕಸದ ರಾಶಿ ನೋಡಿ ಜನರಿಗೆ ರೋಗ ಹೆಚ್ಚುವ ಭೀತಿ ನಿರ್ಮಾಣವಾಗಿದೆ.<br /> <br /> ಹುಮನಾಬಾದ್ ಕೇಂದ್ರ ಬಸ್ ನಿಲ್ದಾಣದ ಎದುರಿಗೆ ಇರುವ ಸರ್ಕಾರಿ ಆಸ್ಪತ್ರೆ ಪ್ರಾಂಗಣ ಸದಾ ಹಂದಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.<br /> <br /> ಇನ್ನೂ ಹೊರಗಿನಿಂದ ಆಸ್ಪತ್ರೆಗೆ ಬರಬೇಕಾದರೆ ಮೊದಲಿಗೆ ಕಸದರಾಶಿ ದುರ್ನಾತ ಸವಿದೇ ಬರಬೇಕು. ಅಕ್ಕಪಕ್ಕದ ಸಸ್ಯಹಾರಿ, ಮಾಂಸಹಾರಿ ಮೊದಲಾದ ಹೋಟೆಲ್ಗಳವರು ತಮ್ಮಲ್ಲಿನ ಇಡೀ ಕಸವನ್ನು ಆಸ್ಪತ್ರೆ ಪ್ರವೇಶ ದ್ವಾರದಲ್ಲೇ ಎಸೆಯುವ ಕಾರಣ ಸದಾ ದುರ್ನಾತದಿಂದ ಕೂಡಿರುತ್ತದೆ.<br /> <br /> ಕಸವನ್ನು ತೊಟ್ಟಿಗೆ ಚೆಲ್ಲಿದರೆ ಈ ಸಮಸ್ಯೆ ಉದ್ಭವ ಆಗುತ್ತಿರಲಿಲ್ಲ. ಮೈ ಉಳಿಸಿಕೊಳ್ಳಲು ಆ ಕಸ ತೊಟ್ಟಿ ಪಕ್ಕದಲ್ಲಿ ಎಸೆಯುತ್ತಿರುವುದೇ ಈ ಅವ್ಯವಸ್ಥೆಗೆ ಕಾರಣವಾಗಿದೆ.<br /> <br /> ಈ ನಿಟ್ಟಿನಲ್ಲಿ ಆಸ್ಪತ್ರೆ ಆಡಳಿತ ಅಧಿಕಾರಿಗಳು ಪ್ರವೇಶ ದ್ವಾರದ ಎದುರು ಸ್ವಚ್ಛತೆ ಕಾಪಾಡುವ ಬಗ್ಗೆ ಸಿಬ್ಬಂದಿ ಹಾಗೂ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅರಿವು ಮೂಡಿಸಬೇಕು.<br /> <br /> ಜೊತೆಗೆ ಅಕ್ಕಪಕ್ಕದ ಹೊಟೇಲ್ ಕಾರ್ಮಿಕರು ತಾವು ಚೆಲ್ಲುವ ಕಸದಿಂದ ಅನ್ಯರಿಗೆ ಆಗುವ ತೊಂದರೆ ಕುರಿತು ವಿವೇಚಿಸಿದರೆ ಮುಂದೆ ಆಗುವ ಅನಾಹುತ ತಡೆಗಟ್ಟಬಹುದು.<br /> <br /> ಸಂಗ್ರಹಗೊಂಡ ಕಸವನ್ನು ಸಂಬಂಧಪಟ್ಟವರು ತಕ್ಷಣ ವಿಲೆವಾರಿ ಮಾಡಿದರೇ ಈ ಸಮಸ್ಯೆ ನಿವಾರಣೆಗೆ ಕಡಿವಾಣ ಹಾಕಬಹುದು. ಈ ನಿಟ್ಟಿನಲ್ಲಿ ಆಸ್ಪತ್ರೆ ಸಿಬ್ಬಂದಿ, ರೋಗಿಗಳು ಹಾಗೂ ಅಕ್ಕಪಕ್ಕದವರು ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>