<p>ಶಿವಮೊಗ್ಗ: `ರೋಗಿಗಳು ಸೇವಕರಲ್ಲ; ನೀವು ರಾಜರಲ್ಲ. ಕನಿಷ್ಠ ಅವರನ್ನು ಮನುಷ್ಯರಂತೆ ಉಪಚರಿಸಿ' -ಇದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಣ್ಣರೆಡ್ಡಿ, ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ವಿಚಾರರಿಗೆ ಮಾಸಿಕ ಸಭೆಯಲ್ಲಿ ನೀಡಿದ ಸಲಹೆ.<br /> <br /> ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮೇಲ್ವಿ ಚಾರಕರನ್ನು ಅವರು ತರಾಟೆ ತೆಗೆದುಕೊಂಡರು.<br /> <br /> `ಆಸ್ಪತ್ರೆಗೆ ಬರುವ ರೋಗಿಗಳನ್ನು ಕೆಲವು ಕಡೆ ಭಿಕ್ಷುಕರಂತೆ ನೋಡಲಾಗುತ್ತಿದೆ. ಹಾಗಾದರೆ, ಅವರು ಆಸ್ಪತ್ರೆಗೆ ಬರುವುದು ಬೇಡವೇ? ಶಿರಾಳಕೊಪ್ಪದಲ್ಲಿ ಮಹಿಳೆಯೊಬ್ಬರು ಓಲೆ ಮಾರಿ ತಮ್ಮ ಮಕ್ಕಳಿಗೆ ಜ್ವರಕ್ಕೆ ಔಷಧ ಕೊಡಿಸಿದ ಬಗ್ಗೆ ಹೇಳಿಕೊಂಡರು. ಈ ಆಸ್ಪತ್ರೆಯಲ್ಲಿ ಔಷಧ ದಾಸ್ತಾನು ಇದೆ. ಆದರೂ ಔಷಧವನ್ನು ಹೊರಗಡೆಯಿಂದ ಬರಲಾಗಿದೆ. ಹಾಗಾದರೆ ನಮ್ಮ ಆಸ್ಪತ್ರೆಗಳು ಅಷ್ಟೊಂದು ಕೆಟ್ಟು ಹೋಗಿವೆಯೇ? ಇಂತಹ ದೂರುಗಳ ಬಗ್ಗೆ ಕ್ರಮ ಕೈಗೊಳ್ಳುವುದು ಕಷ್ಟವಲ್ಲ; ಆದರೆ, ನೀವು ಮನುಷ್ಯರಂತೆ ಯೋಚಿಸಿ, ಕನಿಷ್ಠ ಮಾನವೀಯತೆಯಿಂದ ನೋಡಿ' ಎಂದು ಎಚ್ಚರಿಕೆ ನೀಡಿದರು.<br /> <br /> ಭದ್ರಾವತಿ ಕಡದಕಟ್ಟೆಯಲ್ಲಿ ಅರ್ಧ ಬಿದ್ದು ಹೋದ ಆಸ್ಪತ್ರೆ ಗೋಡೆಗೆ ಕಳೆದ ಐದು ವರ್ಷಗಳಿಂದ ಬಣ್ಣ ಹೊಡೆಯುವ ಹೆಸರಿನಲ್ಲಿ ಬಿಲ್ಲು ಮಾಡಲಾಗುತ್ತಿದ್ದು, ಅದನ್ನು ಗಮನಿಸಿ ಈ ಬಾರಿ ತಡೆ ಹಿಡಿದಿದ್ದೇನೆ. ಕನಿಷ್ಠ ಈ ಸಣ್ಣ ಸೂಕ್ಷ್ಮವೂ ನಿಮಗಿಲ್ಲವೇ? ಎಂದು ಸಂಬಂಧಪಟ್ಟ ಮೇಲ್ವಿಚಾರಕರನ್ನು ತರಾಟೆ ತೆಗೆದುಕೊಂಡರು.<br /> <br /> ಶಿರಾಳಕೊಪ್ಪದಲ್ಲಿ ವೈದ್ಯರು ಆಸ್ಪತ್ರೆ ಸಮೀಪವೇ ತಮ್ಮ ಸ್ವಂತ ಕ್ಲಿನಿಕ್ ಆರಂಭಿಸಿದ್ದಾರೆ. 24 ಗಂಟೆಗಳೂ ಅಲ್ಲಿ ಕೆಲಸ ಮಾಡುವ ಅವರು ಕನಿಷ್ಠ ದಿನಕ್ಕೆ ನಾಲ್ಕು ಗಂಟೆಯಾದರೂ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವುದು ಬೇಡವೇ? ಡೆಂಗೆ ಜ್ವರ ಇರುವಂತಹ ಸಮಯದಲ್ಲೂ ಈ ರೀತಿ ವರ್ತಿಸಿದರೆ ಸರ್ಕಾರಿ ವ್ಯವಸ್ಥೆ ಇರುವುದು ಯಾರಿಗಾಗಿ? ಎಂದು ಪ್ರಶ್ನಿಸಿದರು.<br /> <br /> 108 ಆ್ಯಂಬುಲೆನ್ಸ್ ಸಿಬ್ಬಂದಿ, ರೋಗಿಗಳಿಂದ ಬಲವಂತವಾಗಿ ಹಣ ಕೇಳುತ್ತಾರೆಂಬ ದೂರು ಗಳಿವೆ. ಈ ಬಗ್ಗೆ ಸಿಬ್ಬಂದಿ ಜತೆ ಮಾತನಾಡಿ, ಅವರ ಸಮಸ್ಯೆಗಳನ್ನು ಆಲಿಸಿ ವರದಿ ನೀಡುವಂತೆ ಸಂಬಂಧಪಟ್ಟ ತಾಲ್ಲೂಕು ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.<br /> <br /> ಆರೋಗ್ಯ ಇಲಾಖೆ `ಸಕಾಲ' ಯೋಜನೆ ಜಾರಿಯಲ್ಲಿ ಕನಿಷ್ಠಮಟ್ಟದ ಪ್ರಗತಿ ತೋರಿಸಿದೆ. ಈ ಬಗ್ಗೆ ಇಲಾಖಾ ಕಾರ್ಯದರ್ಶಿಗಳು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಮಾಹಿತಿ ಹಕ್ಕು ಅಡಿ ಮಾಹಿತಿ ಕೇಳಿದ ಸಾರ್ವಜನಿಕರನ್ನು ವೈರಿಗಳಂತೆ ಕಾಣಬೇಡಿ.<br /> <br /> ಮಾಹಿತಿ ನೀಡಲು ಸಾಧ್ಯವಾಗದಿದ್ದರೆ ಸಂಕ್ಷಿಪ್ತವಾಗಿ ಪ್ರಶ್ನೆಗಳನ್ನು ಕೇಳಿ ಎಂದು ಅವರಿಗೆ ಸಲಹೆ ಮಾಡಿ. ಅದಕ್ಕೆ ಸಾಕಷ್ಟು ಕಾಲಾವಕಾಶ ಇರುತ್ತದೆ. ಯಾವುದೇ ಕಾರಣಕ್ಕೂ ಮಾಹಿತಿ ನೀಡಲು ಸಾಧ್ಯವೇ ಇಲ್ಲ ಎಂಬ ಮಾತುಗಳನ್ನು ಆಡಬೇಡಿ ಎಂದರು.<br /> <br /> ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಘುನಂದನ್, ಜಿಲ್ಲಾ ಎಚ್ಐವಿ ಮತ್ತು ಏಡ್ಸ್ ನಿಯಂತ್ರಣ ಘಟಕ ಅಧಿಕಾರಿ ಡಾ.ದಿನಕರ್, ಜಿಲ್ಲಾ ಕುಷ್ಠ ರೋಗ ನಿಯಂತ್ರಣಾ ಧಿಕಾರಿ ಡಾ.ರಾಥೋಡ್, ಎನ್ಆರ್ಎಂ ಅಧಿಕಾರಿ ಡಾ.ಮಧು ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವಮೊಗ್ಗ: `ರೋಗಿಗಳು ಸೇವಕರಲ್ಲ; ನೀವು ರಾಜರಲ್ಲ. ಕನಿಷ್ಠ ಅವರನ್ನು ಮನುಷ್ಯರಂತೆ ಉಪಚರಿಸಿ' -ಇದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಣ್ಣರೆಡ್ಡಿ, ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲ್ವಿಚಾರರಿಗೆ ಮಾಸಿಕ ಸಭೆಯಲ್ಲಿ ನೀಡಿದ ಸಲಹೆ.<br /> <br /> ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮೇಲ್ವಿ ಚಾರಕರನ್ನು ಅವರು ತರಾಟೆ ತೆಗೆದುಕೊಂಡರು.<br /> <br /> `ಆಸ್ಪತ್ರೆಗೆ ಬರುವ ರೋಗಿಗಳನ್ನು ಕೆಲವು ಕಡೆ ಭಿಕ್ಷುಕರಂತೆ ನೋಡಲಾಗುತ್ತಿದೆ. ಹಾಗಾದರೆ, ಅವರು ಆಸ್ಪತ್ರೆಗೆ ಬರುವುದು ಬೇಡವೇ? ಶಿರಾಳಕೊಪ್ಪದಲ್ಲಿ ಮಹಿಳೆಯೊಬ್ಬರು ಓಲೆ ಮಾರಿ ತಮ್ಮ ಮಕ್ಕಳಿಗೆ ಜ್ವರಕ್ಕೆ ಔಷಧ ಕೊಡಿಸಿದ ಬಗ್ಗೆ ಹೇಳಿಕೊಂಡರು. ಈ ಆಸ್ಪತ್ರೆಯಲ್ಲಿ ಔಷಧ ದಾಸ್ತಾನು ಇದೆ. ಆದರೂ ಔಷಧವನ್ನು ಹೊರಗಡೆಯಿಂದ ಬರಲಾಗಿದೆ. ಹಾಗಾದರೆ ನಮ್ಮ ಆಸ್ಪತ್ರೆಗಳು ಅಷ್ಟೊಂದು ಕೆಟ್ಟು ಹೋಗಿವೆಯೇ? ಇಂತಹ ದೂರುಗಳ ಬಗ್ಗೆ ಕ್ರಮ ಕೈಗೊಳ್ಳುವುದು ಕಷ್ಟವಲ್ಲ; ಆದರೆ, ನೀವು ಮನುಷ್ಯರಂತೆ ಯೋಚಿಸಿ, ಕನಿಷ್ಠ ಮಾನವೀಯತೆಯಿಂದ ನೋಡಿ' ಎಂದು ಎಚ್ಚರಿಕೆ ನೀಡಿದರು.<br /> <br /> ಭದ್ರಾವತಿ ಕಡದಕಟ್ಟೆಯಲ್ಲಿ ಅರ್ಧ ಬಿದ್ದು ಹೋದ ಆಸ್ಪತ್ರೆ ಗೋಡೆಗೆ ಕಳೆದ ಐದು ವರ್ಷಗಳಿಂದ ಬಣ್ಣ ಹೊಡೆಯುವ ಹೆಸರಿನಲ್ಲಿ ಬಿಲ್ಲು ಮಾಡಲಾಗುತ್ತಿದ್ದು, ಅದನ್ನು ಗಮನಿಸಿ ಈ ಬಾರಿ ತಡೆ ಹಿಡಿದಿದ್ದೇನೆ. ಕನಿಷ್ಠ ಈ ಸಣ್ಣ ಸೂಕ್ಷ್ಮವೂ ನಿಮಗಿಲ್ಲವೇ? ಎಂದು ಸಂಬಂಧಪಟ್ಟ ಮೇಲ್ವಿಚಾರಕರನ್ನು ತರಾಟೆ ತೆಗೆದುಕೊಂಡರು.<br /> <br /> ಶಿರಾಳಕೊಪ್ಪದಲ್ಲಿ ವೈದ್ಯರು ಆಸ್ಪತ್ರೆ ಸಮೀಪವೇ ತಮ್ಮ ಸ್ವಂತ ಕ್ಲಿನಿಕ್ ಆರಂಭಿಸಿದ್ದಾರೆ. 24 ಗಂಟೆಗಳೂ ಅಲ್ಲಿ ಕೆಲಸ ಮಾಡುವ ಅವರು ಕನಿಷ್ಠ ದಿನಕ್ಕೆ ನಾಲ್ಕು ಗಂಟೆಯಾದರೂ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವುದು ಬೇಡವೇ? ಡೆಂಗೆ ಜ್ವರ ಇರುವಂತಹ ಸಮಯದಲ್ಲೂ ಈ ರೀತಿ ವರ್ತಿಸಿದರೆ ಸರ್ಕಾರಿ ವ್ಯವಸ್ಥೆ ಇರುವುದು ಯಾರಿಗಾಗಿ? ಎಂದು ಪ್ರಶ್ನಿಸಿದರು.<br /> <br /> 108 ಆ್ಯಂಬುಲೆನ್ಸ್ ಸಿಬ್ಬಂದಿ, ರೋಗಿಗಳಿಂದ ಬಲವಂತವಾಗಿ ಹಣ ಕೇಳುತ್ತಾರೆಂಬ ದೂರು ಗಳಿವೆ. ಈ ಬಗ್ಗೆ ಸಿಬ್ಬಂದಿ ಜತೆ ಮಾತನಾಡಿ, ಅವರ ಸಮಸ್ಯೆಗಳನ್ನು ಆಲಿಸಿ ವರದಿ ನೀಡುವಂತೆ ಸಂಬಂಧಪಟ್ಟ ತಾಲ್ಲೂಕು ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.<br /> <br /> ಆರೋಗ್ಯ ಇಲಾಖೆ `ಸಕಾಲ' ಯೋಜನೆ ಜಾರಿಯಲ್ಲಿ ಕನಿಷ್ಠಮಟ್ಟದ ಪ್ರಗತಿ ತೋರಿಸಿದೆ. ಈ ಬಗ್ಗೆ ಇಲಾಖಾ ಕಾರ್ಯದರ್ಶಿಗಳು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಮಾಹಿತಿ ಹಕ್ಕು ಅಡಿ ಮಾಹಿತಿ ಕೇಳಿದ ಸಾರ್ವಜನಿಕರನ್ನು ವೈರಿಗಳಂತೆ ಕಾಣಬೇಡಿ.<br /> <br /> ಮಾಹಿತಿ ನೀಡಲು ಸಾಧ್ಯವಾಗದಿದ್ದರೆ ಸಂಕ್ಷಿಪ್ತವಾಗಿ ಪ್ರಶ್ನೆಗಳನ್ನು ಕೇಳಿ ಎಂದು ಅವರಿಗೆ ಸಲಹೆ ಮಾಡಿ. ಅದಕ್ಕೆ ಸಾಕಷ್ಟು ಕಾಲಾವಕಾಶ ಇರುತ್ತದೆ. ಯಾವುದೇ ಕಾರಣಕ್ಕೂ ಮಾಹಿತಿ ನೀಡಲು ಸಾಧ್ಯವೇ ಇಲ್ಲ ಎಂಬ ಮಾತುಗಳನ್ನು ಆಡಬೇಡಿ ಎಂದರು.<br /> <br /> ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಘುನಂದನ್, ಜಿಲ್ಲಾ ಎಚ್ಐವಿ ಮತ್ತು ಏಡ್ಸ್ ನಿಯಂತ್ರಣ ಘಟಕ ಅಧಿಕಾರಿ ಡಾ.ದಿನಕರ್, ಜಿಲ್ಲಾ ಕುಷ್ಠ ರೋಗ ನಿಯಂತ್ರಣಾ ಧಿಕಾರಿ ಡಾ.ರಾಥೋಡ್, ಎನ್ಆರ್ಎಂ ಅಧಿಕಾರಿ ಡಾ.ಮಧು ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>