<p><strong>ಶಿವಮೊಗ್ಗ: </strong>ಲಂಕೇಶ್ ತಮ್ಮ ಕೃತಿಗಳಲ್ಲಿ ಸಾರ್ವಕಾಲಿಕ ಮಹತ್ವದ ವಿಷಯಗಳನ್ನು ಚರ್ಚೆ ಮಾಡಿದ್ದರಿಂದ ಅವರು ಸಾರ್ವಕಾಲಿಕ ಕೃತಿಕಾರನಾಗಿ ಕಾಣಿಸಿಕೊಂಡಿದ್ದಾರೆ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.<br /> <br /> ನಗರದ ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗ ರಂಗಾಯಣ ಹಮ್ಮಿಕೊಂಡಿರುವ ಮೂರು ದಿನಗಳ `ಪಿ. ಲಂಕೇಶ್ ನಾಟಕೋತ್ಸವ~ದ ಉದ್ಘಾಟನಾ ಸಮಾರಂಭದಲ್ಲಿ ಮಂಗಳವಾರ ಅವರು ಮಾತನಾಡಿದರು.<br /> ಅವರ `ಗುಣಮುಖ~, `ಸಂಕ್ರಾಂತಿ~, `ಕಲ್ಲು ಕರಗುವ ಸಮಯ~ ನಾಟಕಗಳು ಇಂದಿನ ಸಮಾಜಕ್ಕೆ ಹೆಚ್ಚು ಪ್ರಸ್ತುತವಾಗಿವೆ ಎಂದು ವಿಶ್ಲೇಷಿಸಿದರು.<br /> <br /> ಈ ಜಿಲ್ಲೆಯ ಮಣ್ಣಿನ ಗುಣ ವಿಶಿಷ್ಟವಾದದ್ದು, ಹಲವು ಪ್ರಬುದ್ಧ ಹೋರಾಟಗಾರರನ್ನು, ದಾರ್ಶನಿಕರನ್ನು ನೀಡಿದ ಈ ನೆಲದಲ್ಲಿ ಲಂಕೇಶ್ ಕೂಡ ತಮ್ಮ ಅಸ್ತಿತ್ವವನ್ನು ಕಂಡುಕೊಂಡು ಹೋರಾಟದ ಮೂಲಕ ಸಾಂಸ್ಕೃತಿಕ ಚೌಕಟ್ಟನ್ನು ತಂದುಕೊಟ್ಟರು ಎಂದು ಸ್ಮರಿಸಿದರು.<br /> <br /> ಕುವೆಂಪು ಕನ್ನಡ ಸಾಹಿತ್ಯದ ಮಟ್ಟಿಗೆ ಹೊಸ ಕೊಡುಗೆ ನೀಡಿದರೆ, ಲಂಕೇಶ್ ಅದೇ ಮಾದರಿಯಲ್ಲಿ ಕನ್ನಡಕ್ಕೆ ಹೊಸ ಪರಂಪರೆ ಹುಟ್ಟು ಹಾಕಿದರು. ತಮ್ಮ ಸೈದ್ಧಾಂತಿಕ, ಸಾಂಸ್ಕೃತಿಕ ನಿಲುವುಗಳಿಂದ ಎಲ್ಲರಿಗಿಂತ ವಿಭಿನ್ನವಾಗಿ ನಿಂತರು ಎಂದರು.<br /> <br /> ನಾಟಕೋತ್ಸವ ಉದ್ಘಾಟಿಸಿದ ಪತ್ರಕರ್ತೆ ಗೌರಿ ಲಂಕೇಶ್ ಮಾತನಾಡಿ, ಇಂದು ನಡೆಯುತ್ತಿರುವ ಮರ್ಯಾದಾ ಹತ್ಯೆಗಳನ್ನು ಲಂಕೇಶ್ ಆ ಕಾಲದಲ್ಲೇ ಗುರುತಿಸಿದ್ದರು. `ಸಂಕ್ರಾಂತಿ~, `ಕಲ್ಲು ಕರಗುವ ಸಮಯ~ ನಾಟಕಗಳು ಸಮಾಜದಲ್ಲಿ ಹೊಸ ಅರಿವು ಮೂಡಿಸಲು ಸಹಾಯಕವಾಗಲಿವೆ ಎಂದರು.<br /> <br /> ರಂಗಾಯಣ ನಿರ್ದೇಶಕ ಹೊ.ನ. ಸತ್ಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ವಂದಿಸಿದರು. ಕಾರ್ಯಕ್ರಮದ ನಂತರ ಶಿವಮೊಗ್ಗದ `ನಮ್ ಟೀಮ್!?~ ತಂಡ ನಟರಾಜ್ ಹೊನ್ನವಳ್ಳಿ ನಿರ್ದೇಶನದಲ್ಲಿ `ಗುಣಮುಖ~ ನಾಟಕ ಪ್ರದರ್ಶಿಸಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ಲಂಕೇಶ್ ತಮ್ಮ ಕೃತಿಗಳಲ್ಲಿ ಸಾರ್ವಕಾಲಿಕ ಮಹತ್ವದ ವಿಷಯಗಳನ್ನು ಚರ್ಚೆ ಮಾಡಿದ್ದರಿಂದ ಅವರು ಸಾರ್ವಕಾಲಿಕ ಕೃತಿಕಾರನಾಗಿ ಕಾಣಿಸಿಕೊಂಡಿದ್ದಾರೆ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.<br /> <br /> ನಗರದ ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗ ರಂಗಾಯಣ ಹಮ್ಮಿಕೊಂಡಿರುವ ಮೂರು ದಿನಗಳ `ಪಿ. ಲಂಕೇಶ್ ನಾಟಕೋತ್ಸವ~ದ ಉದ್ಘಾಟನಾ ಸಮಾರಂಭದಲ್ಲಿ ಮಂಗಳವಾರ ಅವರು ಮಾತನಾಡಿದರು.<br /> ಅವರ `ಗುಣಮುಖ~, `ಸಂಕ್ರಾಂತಿ~, `ಕಲ್ಲು ಕರಗುವ ಸಮಯ~ ನಾಟಕಗಳು ಇಂದಿನ ಸಮಾಜಕ್ಕೆ ಹೆಚ್ಚು ಪ್ರಸ್ತುತವಾಗಿವೆ ಎಂದು ವಿಶ್ಲೇಷಿಸಿದರು.<br /> <br /> ಈ ಜಿಲ್ಲೆಯ ಮಣ್ಣಿನ ಗುಣ ವಿಶಿಷ್ಟವಾದದ್ದು, ಹಲವು ಪ್ರಬುದ್ಧ ಹೋರಾಟಗಾರರನ್ನು, ದಾರ್ಶನಿಕರನ್ನು ನೀಡಿದ ಈ ನೆಲದಲ್ಲಿ ಲಂಕೇಶ್ ಕೂಡ ತಮ್ಮ ಅಸ್ತಿತ್ವವನ್ನು ಕಂಡುಕೊಂಡು ಹೋರಾಟದ ಮೂಲಕ ಸಾಂಸ್ಕೃತಿಕ ಚೌಕಟ್ಟನ್ನು ತಂದುಕೊಟ್ಟರು ಎಂದು ಸ್ಮರಿಸಿದರು.<br /> <br /> ಕುವೆಂಪು ಕನ್ನಡ ಸಾಹಿತ್ಯದ ಮಟ್ಟಿಗೆ ಹೊಸ ಕೊಡುಗೆ ನೀಡಿದರೆ, ಲಂಕೇಶ್ ಅದೇ ಮಾದರಿಯಲ್ಲಿ ಕನ್ನಡಕ್ಕೆ ಹೊಸ ಪರಂಪರೆ ಹುಟ್ಟು ಹಾಕಿದರು. ತಮ್ಮ ಸೈದ್ಧಾಂತಿಕ, ಸಾಂಸ್ಕೃತಿಕ ನಿಲುವುಗಳಿಂದ ಎಲ್ಲರಿಗಿಂತ ವಿಭಿನ್ನವಾಗಿ ನಿಂತರು ಎಂದರು.<br /> <br /> ನಾಟಕೋತ್ಸವ ಉದ್ಘಾಟಿಸಿದ ಪತ್ರಕರ್ತೆ ಗೌರಿ ಲಂಕೇಶ್ ಮಾತನಾಡಿ, ಇಂದು ನಡೆಯುತ್ತಿರುವ ಮರ್ಯಾದಾ ಹತ್ಯೆಗಳನ್ನು ಲಂಕೇಶ್ ಆ ಕಾಲದಲ್ಲೇ ಗುರುತಿಸಿದ್ದರು. `ಸಂಕ್ರಾಂತಿ~, `ಕಲ್ಲು ಕರಗುವ ಸಮಯ~ ನಾಟಕಗಳು ಸಮಾಜದಲ್ಲಿ ಹೊಸ ಅರಿವು ಮೂಡಿಸಲು ಸಹಾಯಕವಾಗಲಿವೆ ಎಂದರು.<br /> <br /> ರಂಗಾಯಣ ನಿರ್ದೇಶಕ ಹೊ.ನ. ಸತ್ಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ವಂದಿಸಿದರು. ಕಾರ್ಯಕ್ರಮದ ನಂತರ ಶಿವಮೊಗ್ಗದ `ನಮ್ ಟೀಮ್!?~ ತಂಡ ನಟರಾಜ್ ಹೊನ್ನವಳ್ಳಿ ನಿರ್ದೇಶನದಲ್ಲಿ `ಗುಣಮುಖ~ ನಾಟಕ ಪ್ರದರ್ಶಿಸಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>