<p>ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಪ್ರಮುಖ ಲಯವಾದ್ಯಗಾರರಲ್ಲಿ ಇಂದು ಮೊದಲಿಗೇ ಕೇಳಿ ಬರುವ ಹೆಸರು ಪಂಡಿತ್ ರವೀಂದ್ರ ಯಾವಗಲ್. ಸಾಥ್ ನೀಡಲು ಗಾಯಕರು, ವಾದ್ಯಗಾರರ ಮೊದಲ ಆಯ್ಕೆಯೇ ರವೀಂದ್ರ ಯಾವಗಲ್.<br /> <br /> ಹಾಗೆ ನೋಡಿದರೆ ರವೀಂದ್ರ ಅವರಿಗೆ ಸಂಗೀತ ಆಕಸ್ಮಿಕವಾಗಿ ಬಂದುದೇನಲ್ಲ. ತಬಲಾ ವಾದಕ ರಾಮಚಂದ್ರ ಯಾವಗಲ್ ಅವರ ಮಗನಾಗಿ (ಜನನ 1959) ಹುಟ್ಟಿನಿಂದಲೇ ಸಂಗೀತ ಸಂಸ್ಕಾರ ಪಡೆದುಕೊಂಡ ರವೀಂದ್ರರಿಗೆ, 4 ವರ್ಷದ ಮಗುವಾಗಿದ್ದಾಗಲೇ ಸಂಗೀತ ಪಾಠ ಪ್ರಾರಂಭವಾಯಿತು. ಮುಂದೆ ಪಂಡಿತ್ ಶೇಷಗಿರಿ ಹಾನಗಲ್ ಅವರ ಶಿಷ್ಯರಾಗಿ ದಶಕಗಳ ಕಠಿಣ ಶಿಕ್ಷಣದಿಂದ ರವೀಂದ್ರ ಯಾವಗಲ್ ಅವರ ತಬಲಾ ವಾದನ ಪ್ರೌಢವಾಗಿ ರೂಪುಗೊಂಡಿತು.<br /> <br /> ಜೊತೆಗೆ ಪಂಡಿತ್ ಲಾಲ್ಜಿ ಗೋಖಲೆ ಅವರಿಂದಲೂ ಮಾರ್ಗದರ್ಶನ ದೊರಕಿತು. ಇವರು ಉಸ್ತಾದ್ ಅಹ್ಮದ್ ಜಾನ್ ತಿರಕ್ವ ಅವರ ಶಿಷ್ಯರು. ಅಲ್ಲದೆ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನೂ (ಖೈರಾಘರ್ ವಿಶ್ವವಿದ್ಯಾಲಯ) ಗಳಿಸಿ ತಮ್ಮ ಕಲಿಕೆಯನ್ನು ಬಲಗೊಳಿಸಿಕೊಂಡರು.<br /> <br /> ರವೀಂದ್ರ ಯಾವಗಲ್ ಅವರು ಬಾಲ ಪ್ರತಿಭೆ. ಪಕ್ಕವಾದ್ಯಗಾರ ಹಾಗೂ ತನಿ ವಾದಕರಾಗಿ ಗುರ್ತಿಸಿಕೊಂಡವರು. ಕೇವಲ 10 ವರ್ಷದ ಬಾಲಕನಾಗಿದ್ದಾಗಲೇ ತನಿವಾದನ ಮಾಡಿದ ಧೀಮಂತ ಕಲಾವಿದ. ಕುಂದಗೋಳದ ಸವಾಯಿ ಗಂಧರ್ವ ಸಂಗೀತೋತ್ಸವದಲ್ಲಿ ಆರಂಭವಾದ ಅವರ ಈ ನಾದಯಾತ್ರೆ ಅವಿರತವಾಗಿ ಮುಂದುವರಿದಿದೆ. <br /> <br /> ಗಂಗೂಬಾಯಿಯಿಂದ ಗೋಪಾಲಕೃಷ್ಣ ಅವರವರೆಗೆ, ಮಲ್ಲಿಕಾರ್ಜುನ ಮನ್ಸೂರ್ ಅವರಿಂದ ಮಾಲಿನಿ ರಾಜೂರ್ಕರ್ವರೆಗೆ, ಭೀಮಸೇನ ಜೋಶಿಯಿಂದ ಬೇಗಂ ಪರ್ವೀನ್ ಸುಲ್ತಾನರವರೆಗೆ, ರಾಮರಾವ್ ನಾಯಕರಿಂದ ರಾಜೀವ ತಾರಾನಾಥ್ರವರೆಗೆ ಯಾವಗಲ್ ಅವರ ತಬಲಾ ಸಾಥಿ ಮೊಳಗಿದೆ. ಅವರ ತಬಲಾ ತನಿ ಬೆಂಗಳೂರಲ್ಲದೆ ಮುಂಬಯಿ, ಹೈದರಾಬಾದ್, ಔರಂಗಾಬಾದ್ - ಮುಂತಾದೆಡೆ ಸಹ ವಿಜೃಂಭಿಸಿದೆ.<br /> <br /> ಗಾಯಕರನ್ನು ನೆರಳಿನಂತೆ ಅನುಸರಿಸುತ್ತಾ, ರವೀಂದ್ರರು ಕಛೇರಿಯ ಕಾವನ್ನು ವರ್ಧಿಸುತ್ತಾ, ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಯಾಗುತ್ತಾರೆ. ಅಷ್ಟೇ ಅಲ್ಲ, ಅವರ ತಬಲಾ ಪ್ರಧಾನ ಕಲಾವಿದರಿಗೆ ಎಂದೂ ಸ್ಫೂರ್ತಿದಾಯಕ. ಜುಗಲ್ಬಂದಿಗಳಲ್ಲಿ ಉಮಯಾಳಪುರಂ ಶಿವರಾಮನ್, ಗುರುವಾಯೂರು ದೊರೆ, ತಂಜಾವೂರು ಉಪೇಂದ್ರನ್, ಬಾಲಮುರಳಿ ಕೃಷ್ಣ - ಮುಂತಾದ ದಿಗ್ಗಜರೊಂದಿಗೆ ನಡೆಸಿರುವ ವಾದನ ಒಂದು ಅವಿಸ್ಮರಣೀಯ ನಾದಾನುಭವ ಕೊಟ್ಟಿದೆ. <br /> <br /> ರವೀಂದ್ರ ಯಾವಗಲ್ರ ಕೈಚಳಕ ಅಮೆರಿಕ, ಫ್ರಾನ್ಸ್, ಈಜಿಪ್ಟ್ - ಮುಂತಾದ ದೇಶಗಳ ಸಂಗೀತ ಅಭಿಮಾನಿಗಳನ್ನೂ ಸಂತೋಷಗೊಳಿಸಿದೆ. ಬೆಂಗಳೂರು ಬಾನುಲಿ ನಿಲಯದ ಕಲಾವಿದರಾಗಿ ಅನೇಕ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ರವೀಂದ್ರ ಯಾವಗಲ್ ಅವರು ಇಂದು ‘ಟಾಪ್ ರ್ಯಾಂಕಿಂಗ್ ’ ಕಲಾವಿದರಾಗಿರುವರಲ್ಲದೆ ಆಕಾಶವಾಣಿ ಸಂಗೀತ ಸಮ್ಮೇಳನ, ರಾಷ್ಟ್ರೀಯ ಸಂಗೀತ ಸಮ್ಮೇಳನಗಳಲ್ಲೂ ಪಾಲ್ಗೊಂಡಿದ್ದಾರೆ.<br /> <br /> ದಕ್ಷ ಬೋಧಕರೂ ಆಗಿರುವ ಅವರ ಅನೇಕ ಶಿಷ್ಯರು ಇಂದು ವೇದಿಕೆಯ ಮೇಲೆ ಬೆಳಗುತ್ತಿದ್ದಾರೆ. ಅಕಾಡೆಮಿ ಹಾಗೂ ಪಠ್ಯ ಪುಸ್ತಕ ಸಮಿತಿಗಳಲ್ಲೂ ಸೇವೆ ಸಲ್ಲಿಸಿರುವ ಶ್ರೀಯುತರಿಗೆ ರಾಜ್ಯೋತ್ಸವ ಪ್ರಶಸ್ತಿಯಲ್ಲದೆ ಅನೇಕ ಸಂಸ್ಥೆಗಳು ಬಿರುದು ನೀಡಿ ಸನ್ಮಾನಿಸಿವೆ. ಇದಲ್ಲದೆ ಈ ವರ್ಷ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿಯೂ ಅವರಿಗೆ ಸಲ್ಲುತ್ತಿರುವುದು - ಇನ್ನೊಂದು ವಿಶೇಷ.<br /> <br /> <strong>ನಾದಾರ್ಪಣ ಕಾರ್ಯಕ್ರಮ</strong><br /> ರವೀಂದ್ರ ಯಾವಗಲ್ ಅವರಿಗೆ ಗುರುವಂದನೆ ಕಾರ್ಯಕ್ರಮ ಏರ್ಪಡಿಲಾಗಿದೆ. ಮುಖ್ಯ ಅತಿಥಿಗಳು– ರಾಜೀವ್ ತಾರಾನಾಥ್, ಲಲಿತಾ ಜೆ ರಾವ್, ಉಪಸ್ಥಿತಿ– ಸ್ವಾತ್ಮರಮಾನಂದಜೀ. ಸ್ಥಳ: ಜೆ.ಎಸ್.ಎಸ್. ಸಭಾಂಗಣ, ಜಯನಗರ 8ನೇ ಬ್ಲಾಕ್. ಭಾನುವಾರ ಸಂಜೆ 5. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಪ್ರಮುಖ ಲಯವಾದ್ಯಗಾರರಲ್ಲಿ ಇಂದು ಮೊದಲಿಗೇ ಕೇಳಿ ಬರುವ ಹೆಸರು ಪಂಡಿತ್ ರವೀಂದ್ರ ಯಾವಗಲ್. ಸಾಥ್ ನೀಡಲು ಗಾಯಕರು, ವಾದ್ಯಗಾರರ ಮೊದಲ ಆಯ್ಕೆಯೇ ರವೀಂದ್ರ ಯಾವಗಲ್.<br /> <br /> ಹಾಗೆ ನೋಡಿದರೆ ರವೀಂದ್ರ ಅವರಿಗೆ ಸಂಗೀತ ಆಕಸ್ಮಿಕವಾಗಿ ಬಂದುದೇನಲ್ಲ. ತಬಲಾ ವಾದಕ ರಾಮಚಂದ್ರ ಯಾವಗಲ್ ಅವರ ಮಗನಾಗಿ (ಜನನ 1959) ಹುಟ್ಟಿನಿಂದಲೇ ಸಂಗೀತ ಸಂಸ್ಕಾರ ಪಡೆದುಕೊಂಡ ರವೀಂದ್ರರಿಗೆ, 4 ವರ್ಷದ ಮಗುವಾಗಿದ್ದಾಗಲೇ ಸಂಗೀತ ಪಾಠ ಪ್ರಾರಂಭವಾಯಿತು. ಮುಂದೆ ಪಂಡಿತ್ ಶೇಷಗಿರಿ ಹಾನಗಲ್ ಅವರ ಶಿಷ್ಯರಾಗಿ ದಶಕಗಳ ಕಠಿಣ ಶಿಕ್ಷಣದಿಂದ ರವೀಂದ್ರ ಯಾವಗಲ್ ಅವರ ತಬಲಾ ವಾದನ ಪ್ರೌಢವಾಗಿ ರೂಪುಗೊಂಡಿತು.<br /> <br /> ಜೊತೆಗೆ ಪಂಡಿತ್ ಲಾಲ್ಜಿ ಗೋಖಲೆ ಅವರಿಂದಲೂ ಮಾರ್ಗದರ್ಶನ ದೊರಕಿತು. ಇವರು ಉಸ್ತಾದ್ ಅಹ್ಮದ್ ಜಾನ್ ತಿರಕ್ವ ಅವರ ಶಿಷ್ಯರು. ಅಲ್ಲದೆ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನೂ (ಖೈರಾಘರ್ ವಿಶ್ವವಿದ್ಯಾಲಯ) ಗಳಿಸಿ ತಮ್ಮ ಕಲಿಕೆಯನ್ನು ಬಲಗೊಳಿಸಿಕೊಂಡರು.<br /> <br /> ರವೀಂದ್ರ ಯಾವಗಲ್ ಅವರು ಬಾಲ ಪ್ರತಿಭೆ. ಪಕ್ಕವಾದ್ಯಗಾರ ಹಾಗೂ ತನಿ ವಾದಕರಾಗಿ ಗುರ್ತಿಸಿಕೊಂಡವರು. ಕೇವಲ 10 ವರ್ಷದ ಬಾಲಕನಾಗಿದ್ದಾಗಲೇ ತನಿವಾದನ ಮಾಡಿದ ಧೀಮಂತ ಕಲಾವಿದ. ಕುಂದಗೋಳದ ಸವಾಯಿ ಗಂಧರ್ವ ಸಂಗೀತೋತ್ಸವದಲ್ಲಿ ಆರಂಭವಾದ ಅವರ ಈ ನಾದಯಾತ್ರೆ ಅವಿರತವಾಗಿ ಮುಂದುವರಿದಿದೆ. <br /> <br /> ಗಂಗೂಬಾಯಿಯಿಂದ ಗೋಪಾಲಕೃಷ್ಣ ಅವರವರೆಗೆ, ಮಲ್ಲಿಕಾರ್ಜುನ ಮನ್ಸೂರ್ ಅವರಿಂದ ಮಾಲಿನಿ ರಾಜೂರ್ಕರ್ವರೆಗೆ, ಭೀಮಸೇನ ಜೋಶಿಯಿಂದ ಬೇಗಂ ಪರ್ವೀನ್ ಸುಲ್ತಾನರವರೆಗೆ, ರಾಮರಾವ್ ನಾಯಕರಿಂದ ರಾಜೀವ ತಾರಾನಾಥ್ರವರೆಗೆ ಯಾವಗಲ್ ಅವರ ತಬಲಾ ಸಾಥಿ ಮೊಳಗಿದೆ. ಅವರ ತಬಲಾ ತನಿ ಬೆಂಗಳೂರಲ್ಲದೆ ಮುಂಬಯಿ, ಹೈದರಾಬಾದ್, ಔರಂಗಾಬಾದ್ - ಮುಂತಾದೆಡೆ ಸಹ ವಿಜೃಂಭಿಸಿದೆ.<br /> <br /> ಗಾಯಕರನ್ನು ನೆರಳಿನಂತೆ ಅನುಸರಿಸುತ್ತಾ, ರವೀಂದ್ರರು ಕಛೇರಿಯ ಕಾವನ್ನು ವರ್ಧಿಸುತ್ತಾ, ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಯಾಗುತ್ತಾರೆ. ಅಷ್ಟೇ ಅಲ್ಲ, ಅವರ ತಬಲಾ ಪ್ರಧಾನ ಕಲಾವಿದರಿಗೆ ಎಂದೂ ಸ್ಫೂರ್ತಿದಾಯಕ. ಜುಗಲ್ಬಂದಿಗಳಲ್ಲಿ ಉಮಯಾಳಪುರಂ ಶಿವರಾಮನ್, ಗುರುವಾಯೂರು ದೊರೆ, ತಂಜಾವೂರು ಉಪೇಂದ್ರನ್, ಬಾಲಮುರಳಿ ಕೃಷ್ಣ - ಮುಂತಾದ ದಿಗ್ಗಜರೊಂದಿಗೆ ನಡೆಸಿರುವ ವಾದನ ಒಂದು ಅವಿಸ್ಮರಣೀಯ ನಾದಾನುಭವ ಕೊಟ್ಟಿದೆ. <br /> <br /> ರವೀಂದ್ರ ಯಾವಗಲ್ರ ಕೈಚಳಕ ಅಮೆರಿಕ, ಫ್ರಾನ್ಸ್, ಈಜಿಪ್ಟ್ - ಮುಂತಾದ ದೇಶಗಳ ಸಂಗೀತ ಅಭಿಮಾನಿಗಳನ್ನೂ ಸಂತೋಷಗೊಳಿಸಿದೆ. ಬೆಂಗಳೂರು ಬಾನುಲಿ ನಿಲಯದ ಕಲಾವಿದರಾಗಿ ಅನೇಕ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ರವೀಂದ್ರ ಯಾವಗಲ್ ಅವರು ಇಂದು ‘ಟಾಪ್ ರ್ಯಾಂಕಿಂಗ್ ’ ಕಲಾವಿದರಾಗಿರುವರಲ್ಲದೆ ಆಕಾಶವಾಣಿ ಸಂಗೀತ ಸಮ್ಮೇಳನ, ರಾಷ್ಟ್ರೀಯ ಸಂಗೀತ ಸಮ್ಮೇಳನಗಳಲ್ಲೂ ಪಾಲ್ಗೊಂಡಿದ್ದಾರೆ.<br /> <br /> ದಕ್ಷ ಬೋಧಕರೂ ಆಗಿರುವ ಅವರ ಅನೇಕ ಶಿಷ್ಯರು ಇಂದು ವೇದಿಕೆಯ ಮೇಲೆ ಬೆಳಗುತ್ತಿದ್ದಾರೆ. ಅಕಾಡೆಮಿ ಹಾಗೂ ಪಠ್ಯ ಪುಸ್ತಕ ಸಮಿತಿಗಳಲ್ಲೂ ಸೇವೆ ಸಲ್ಲಿಸಿರುವ ಶ್ರೀಯುತರಿಗೆ ರಾಜ್ಯೋತ್ಸವ ಪ್ರಶಸ್ತಿಯಲ್ಲದೆ ಅನೇಕ ಸಂಸ್ಥೆಗಳು ಬಿರುದು ನೀಡಿ ಸನ್ಮಾನಿಸಿವೆ. ಇದಲ್ಲದೆ ಈ ವರ್ಷ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿಯೂ ಅವರಿಗೆ ಸಲ್ಲುತ್ತಿರುವುದು - ಇನ್ನೊಂದು ವಿಶೇಷ.<br /> <br /> <strong>ನಾದಾರ್ಪಣ ಕಾರ್ಯಕ್ರಮ</strong><br /> ರವೀಂದ್ರ ಯಾವಗಲ್ ಅವರಿಗೆ ಗುರುವಂದನೆ ಕಾರ್ಯಕ್ರಮ ಏರ್ಪಡಿಲಾಗಿದೆ. ಮುಖ್ಯ ಅತಿಥಿಗಳು– ರಾಜೀವ್ ತಾರಾನಾಥ್, ಲಲಿತಾ ಜೆ ರಾವ್, ಉಪಸ್ಥಿತಿ– ಸ್ವಾತ್ಮರಮಾನಂದಜೀ. ಸ್ಥಳ: ಜೆ.ಎಸ್.ಎಸ್. ಸಭಾಂಗಣ, ಜಯನಗರ 8ನೇ ಬ್ಲಾಕ್. ಭಾನುವಾರ ಸಂಜೆ 5. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>