<p><strong>ನಾಗಮಂಗಲ: </strong>ತಾಲ್ಲೂಕಿನ ಚಿಣ್ಯ ಗ್ರಾಮದ ಬಿ.ಸಿ.ಎಂ ಹಾಸ್ಟೆಲ್ ಬಳಿ ಲಾರಿ ಮತ್ತು ಬೈಕ್ ನಡುವೆ ಗುರುವಾರ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ.<br /> <br /> ಮೃತಪಟ್ಟವರನ್ನು ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿ ನಿವಾಸಿ ಬೋರೇಗೌಡ ಅವರ ಪುತ್ರಿಯರಾದ ಲಕ್ಷ್ಮಮ್ಮ (30), ಭವ್ಯ (24) ಹಾಗೂ ತಮ್ಮಣ್ಣ ಅವರ ಮಗ ಶಶಿಕುಮಾರ (22) ಎಂದು ಗುರುತಿಸಲಾಗಿದೆ. ಬೋರೇಗೌಡ ಹಾಗೂ ತಮ್ಮಣ್ಣ ಅಣ್ಣ ತಮ್ಮಂದಿರು ಎಂದು ತಿಳಿದು ಬಂದಿದೆ. <br /> <br /> ಪಾರಾದ ಪುಟ್ಟ ಬಾಲೆ: ಭವ್ಯ ಅವರ 3 ವರ್ಷದ ಮಗಳು ಜಾಹ್ನವಿ ಕೂಡ ಬೈಕ್ನಲ್ಲಿದ್ದು ಈಕೆಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾಳೆ. ಈಕೆಯನ್ನು ಚಿಣ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಭವ್ಯ 6 ತಿಂಗಳ ಗರ್ಭಿಣಿ ಎಂಬುದಾಗಿ ಕೂಡ ಬಂಧುಗಳು ತಿಳಿಸಿದ್ದಾರೆ. <br /> <br /> ಲಕ್ಷ್ಮಮ್ಮ ಅವರನ್ನು ಹೊನ್ನಮಡು ಗ್ರಾಮದ ಮಲ್ಲೇಗೌಡನಿಗೆ ವಿವಾಹ ಮಾಡಿಕೊಡಲಾಗಿತ್ತು. ಭವ್ಯ ಅವರನ್ನು ನಾಗಮಂಗಲ ತಾಲ್ಲೂಕು ದೇವಲಾಪುರ ಹೋಬಳಿಯ ಕೆರೆಹಟ್ಣ ಗ್ರಾಮದ ಜವರಾಯಿ ಎಂಬುವವರಿಗೆ ವಿವಾಹ ಮಾಡಿಕೊಡಲಾಗಿತ್ತು. ಲಕ್ಷ್ಮಮ್ಮನ ನಾದಿನಿಯ ಗಂಡ ಕಳೆದೆರಡು ದಿನಗಳ ಹಿಂದೆ ಕನಗೇನಹಳ್ಳಿಯಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ನಾದಿನಿಯನ್ನು ಮಾತನಾಡಿಸಿಕೊಂಡು ಹೊನ್ನಮಡು ಗ್ರಾಮಕ್ಕೆ ಮರಳುವ ವೇಳೆ ದುರ್ಘಟನೆ ಸಂಭವಿಸಿದೆ. <br /> <br /> ಲಾರಿ ಚಾಲಕ ಚನ್ನಿಗರಾಯಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಮಂಗಲ: </strong>ತಾಲ್ಲೂಕಿನ ಚಿಣ್ಯ ಗ್ರಾಮದ ಬಿ.ಸಿ.ಎಂ ಹಾಸ್ಟೆಲ್ ಬಳಿ ಲಾರಿ ಮತ್ತು ಬೈಕ್ ನಡುವೆ ಗುರುವಾರ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ.<br /> <br /> ಮೃತಪಟ್ಟವರನ್ನು ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿ ನಿವಾಸಿ ಬೋರೇಗೌಡ ಅವರ ಪುತ್ರಿಯರಾದ ಲಕ್ಷ್ಮಮ್ಮ (30), ಭವ್ಯ (24) ಹಾಗೂ ತಮ್ಮಣ್ಣ ಅವರ ಮಗ ಶಶಿಕುಮಾರ (22) ಎಂದು ಗುರುತಿಸಲಾಗಿದೆ. ಬೋರೇಗೌಡ ಹಾಗೂ ತಮ್ಮಣ್ಣ ಅಣ್ಣ ತಮ್ಮಂದಿರು ಎಂದು ತಿಳಿದು ಬಂದಿದೆ. <br /> <br /> ಪಾರಾದ ಪುಟ್ಟ ಬಾಲೆ: ಭವ್ಯ ಅವರ 3 ವರ್ಷದ ಮಗಳು ಜಾಹ್ನವಿ ಕೂಡ ಬೈಕ್ನಲ್ಲಿದ್ದು ಈಕೆಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾಳೆ. ಈಕೆಯನ್ನು ಚಿಣ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಭವ್ಯ 6 ತಿಂಗಳ ಗರ್ಭಿಣಿ ಎಂಬುದಾಗಿ ಕೂಡ ಬಂಧುಗಳು ತಿಳಿಸಿದ್ದಾರೆ. <br /> <br /> ಲಕ್ಷ್ಮಮ್ಮ ಅವರನ್ನು ಹೊನ್ನಮಡು ಗ್ರಾಮದ ಮಲ್ಲೇಗೌಡನಿಗೆ ವಿವಾಹ ಮಾಡಿಕೊಡಲಾಗಿತ್ತು. ಭವ್ಯ ಅವರನ್ನು ನಾಗಮಂಗಲ ತಾಲ್ಲೂಕು ದೇವಲಾಪುರ ಹೋಬಳಿಯ ಕೆರೆಹಟ್ಣ ಗ್ರಾಮದ ಜವರಾಯಿ ಎಂಬುವವರಿಗೆ ವಿವಾಹ ಮಾಡಿಕೊಡಲಾಗಿತ್ತು. ಲಕ್ಷ್ಮಮ್ಮನ ನಾದಿನಿಯ ಗಂಡ ಕಳೆದೆರಡು ದಿನಗಳ ಹಿಂದೆ ಕನಗೇನಹಳ್ಳಿಯಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ನಾದಿನಿಯನ್ನು ಮಾತನಾಡಿಸಿಕೊಂಡು ಹೊನ್ನಮಡು ಗ್ರಾಮಕ್ಕೆ ಮರಳುವ ವೇಳೆ ದುರ್ಘಟನೆ ಸಂಭವಿಸಿದೆ. <br /> <br /> ಲಾರಿ ಚಾಲಕ ಚನ್ನಿಗರಾಯಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>