<p>ಲಾಹೋರ್ (ಪಿಟಿಐ): ಶಾಲಾ ಪ್ರಶ್ನೆ ಪತ್ರಿಕೆಯಲ್ಲಿ ಧರ್ಮ ನಿಂದನೆಯ ಅಂಶಗಳಿವೆ ಎಂಬ ಕಾರಣಕ್ಕೆ ವಿವಿಧ ಧಾರ್ಮಿಕ ಗುಂಪುಗಳ ಕಾರ್ಯಕರ್ತರು ರೊಚ್ಚಿಗೆದ್ದು ಬಾಲಕಿಯರ, ಶಾಲೆಯೊಂದಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಗುರುವಾರ ಲಾಹೋರ್ನಲ್ಲಿ ನಡೆದಿದೆ.<br /> <br /> ಐತಿಹಾಸಿಕ ದಾತಾ ದರ್ಬಾರ್ ಕಟ್ಟಡದ ಬಳಿಯ ಕರೀಂ ಪಾರ್ಕ್ ಹತ್ತಿರ ಇರುವ ಫಾರೂಕಿ ಬಾಲಕಿಯರ ಪ್ರೌಢಶಾಲೆ ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾಗಿದೆ. <br /> <br /> ಖಾಸಗಿ ಶಾಲಾಮಂಡಳಿ ಸಿದ್ಧಪಡಿಸಿದ್ದ ಪ್ರಶ್ನೆ ಪತ್ರಿಕೆಯಲ್ಲಿ ಪ್ರವಾದಿ ಮಹಮ್ಮದ್ ಅವರನ್ನು ನಿಂದಿಸುವ ಅಂಶಗಳಿವೆ ಎಂಬ ಸುದ್ದಿ ಹರಡುತ್ತಿದ್ದಂತೆ, ಮಕ್ಕಳ ಪೋಷಕರು, ಜಮಾತ್-ಉದ್-ದವಾ ಮತ್ತು ಇಸ್ಲಾಮಿ ಜಮೈತ್ ತಲ್ಬಾ, ಜಮಾತ್-ಇ-ಇಸ್ಲಾಮಿ ಸೇರಿದಂತೆ ಹಲವು ಧಾರ್ಮಿಕ ಮತ್ತು ವಿದ್ಯಾರ್ಥಿ ಗುಂಪುಗಳು ಶಾಲೆಯನ್ನು ಸುತ್ತುವರಿದವು ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ಪೊಲೀಸರನ್ನು ಲೆಕ್ಕಿಸದೇ ಶಾಲೆಯೊಳಗೆ ಪ್ರವೇಶಿದ ಪ್ರತಿಭಟನಾಕಾರರು ಶಾಲೆಯ ಮೂರು ಮಹಡಿಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು.<br /> <br /> ಶಾಲಾ ವಾಹನಗಳನ್ನು ಜಖಂಗೊಳಿಸಿದರು. ಧರ್ಮನಿಂದನೆ ಎಸಗಿರುವ ಶಾಲೆಯ ಮಾಲೀಕ ಅಸಿಮ್ ಫಾರೂಕಿ ಮತ್ತು ಶಿಕ್ಷಕಿ ಅರೀಫಾ ಅವರನ್ನು ತಮ್ಮ ವಶಕ್ಕೆ ನೀಡಬೇಕೆಂದು ಆಗ್ರಹಿಸಿದರು ಎಂದು ಪ್ರತ್ಯಕ್ಷ ಸಾಕ್ಷಿಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲಾಹೋರ್ (ಪಿಟಿಐ): ಶಾಲಾ ಪ್ರಶ್ನೆ ಪತ್ರಿಕೆಯಲ್ಲಿ ಧರ್ಮ ನಿಂದನೆಯ ಅಂಶಗಳಿವೆ ಎಂಬ ಕಾರಣಕ್ಕೆ ವಿವಿಧ ಧಾರ್ಮಿಕ ಗುಂಪುಗಳ ಕಾರ್ಯಕರ್ತರು ರೊಚ್ಚಿಗೆದ್ದು ಬಾಲಕಿಯರ, ಶಾಲೆಯೊಂದಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಗುರುವಾರ ಲಾಹೋರ್ನಲ್ಲಿ ನಡೆದಿದೆ.<br /> <br /> ಐತಿಹಾಸಿಕ ದಾತಾ ದರ್ಬಾರ್ ಕಟ್ಟಡದ ಬಳಿಯ ಕರೀಂ ಪಾರ್ಕ್ ಹತ್ತಿರ ಇರುವ ಫಾರೂಕಿ ಬಾಲಕಿಯರ ಪ್ರೌಢಶಾಲೆ ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾಗಿದೆ. <br /> <br /> ಖಾಸಗಿ ಶಾಲಾಮಂಡಳಿ ಸಿದ್ಧಪಡಿಸಿದ್ದ ಪ್ರಶ್ನೆ ಪತ್ರಿಕೆಯಲ್ಲಿ ಪ್ರವಾದಿ ಮಹಮ್ಮದ್ ಅವರನ್ನು ನಿಂದಿಸುವ ಅಂಶಗಳಿವೆ ಎಂಬ ಸುದ್ದಿ ಹರಡುತ್ತಿದ್ದಂತೆ, ಮಕ್ಕಳ ಪೋಷಕರು, ಜಮಾತ್-ಉದ್-ದವಾ ಮತ್ತು ಇಸ್ಲಾಮಿ ಜಮೈತ್ ತಲ್ಬಾ, ಜಮಾತ್-ಇ-ಇಸ್ಲಾಮಿ ಸೇರಿದಂತೆ ಹಲವು ಧಾರ್ಮಿಕ ಮತ್ತು ವಿದ್ಯಾರ್ಥಿ ಗುಂಪುಗಳು ಶಾಲೆಯನ್ನು ಸುತ್ತುವರಿದವು ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ಪೊಲೀಸರನ್ನು ಲೆಕ್ಕಿಸದೇ ಶಾಲೆಯೊಳಗೆ ಪ್ರವೇಶಿದ ಪ್ರತಿಭಟನಾಕಾರರು ಶಾಲೆಯ ಮೂರು ಮಹಡಿಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು.<br /> <br /> ಶಾಲಾ ವಾಹನಗಳನ್ನು ಜಖಂಗೊಳಿಸಿದರು. ಧರ್ಮನಿಂದನೆ ಎಸಗಿರುವ ಶಾಲೆಯ ಮಾಲೀಕ ಅಸಿಮ್ ಫಾರೂಕಿ ಮತ್ತು ಶಿಕ್ಷಕಿ ಅರೀಫಾ ಅವರನ್ನು ತಮ್ಮ ವಶಕ್ಕೆ ನೀಡಬೇಕೆಂದು ಆಗ್ರಹಿಸಿದರು ಎಂದು ಪ್ರತ್ಯಕ್ಷ ಸಾಕ್ಷಿಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>