<p><strong>ಹೊಳಲ್ಕೆರೆ:</strong> ತಾಲ್ಲೂಕಿನ ಲೋಕದೊಳಲಿನ ದೊಡ್ಡಹೊಟ್ಟೆ ರಂಗನಾಥಸ್ವಾಮಿ ಬೆಟ್ಟದಲ್ಲಿ ಶನಿವಾರ ಕುಡಿಯುವ ನೀರಿನ ಸೌಲಭ್ಯವನ್ನು ಮೈಸೂರಿನ ಎಂಜಿನಿಯರ್ ಹಾಗೂ ರಂಗನಾಥ ಸ್ವಾಮಿ ಭಕ್ತರಾದ ಬಿ.ಎಸ್. ರಂಗಸ್ವಾಮಿ ಉದ್ಘಾಟಿಸಿದರು.</p>.<p>ಇಲ್ಲಿನ ಬೆಟ್ಟದಲ್ಲಿರುವ ದೇವರ ದರ್ಶನಕ್ಕಾಗಿ ಪ್ರತಿ ಶನಿವಾರ ಮತ್ತು ಭಾನುವಾರ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಬರುತ್ತಾರೆ. ಎರಡು ದಿನಗಳವರೆಗೆ ಇಲ್ಲಿಯೇ ಇದ್ದು, ಅಡುಗೆ ಮಾಡಿಕೊಂಡು ದೇವರಿಗೆ ನೈವೇದ್ಯೆ ಮತ್ತು ಪೂಜೆಗಳನ್ನು ಮುಗಿಸಿ ಹೋಗುತ್ತಾರೆ. ಆದರೆ, ಭಕ್ತರಿಗೆ ಕುಡಿಯಲು ಮತ್ತು ಬಳಸಲು ನೀರಿನ ಸೌಲಭ್ಯ ಇರಲಿಲ್ಲ. ಬೆಟ್ಟದ ಮೇಲಿರುವ ದೇವರ ಪೂಜೆಗೆ ಕೆಳಗಿರುವ ಹೊಂಡದಿಂದ ನೀರು ಹೊತ್ತು ಹೋಗುವ ಪರಿಸ್ಥಿತಿ ಇತ್ತು. ಇದನ್ನು ಮನಗಂಡು ನನ್ನ ಸ್ವಂತ ಖರ್ಚಿನಲ್ಲಿ ಬೋರ್ವೆಲ್ ಕೊರೆಸಿ, ಮೋಟಾರ್ ಮತ್ತು ಪೈಪ್ಲೈನ್ ಅಳವಡಿಸಿದ್ದೇನೆ ಎಂದು ರಂಗಸ್ವಾಮಿ ಹೇಳಿದರು.</p>.<p>ದೇವಾಲಯದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಎಲ್.ಆರ್. ವೀರಭದ್ರಪ್ಪ, ಸೌಮ್ಯಾ ರಂಗಸ್ವಾಮಿ, ರಂಗನಾಯಕಿ ಡಾ.ಲಕ್ಷ್ಮೀ ನಾರಾಯಣಪ್ಪ, ದೇವಾಲಯ ಸಮಿತಿಯ ಅಧ್ಯಕ್ಷ ಸದಾಶಿವಪ್ಪ, ಚಂದ್ರಶೇಖರಪ್ಪ, ಲೋಕೇಶ್, ರಂಗನಾಥ, ಡಿ. ರಮೇಶ್, ಮೃತ್ಯುಂಜಯಪ್ಪ, ಟಿ. ಮಂಜುನಾಥ, ತಿಮ್ಮೇಶ್, ಚರಣರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳಲ್ಕೆರೆ:</strong> ತಾಲ್ಲೂಕಿನ ಲೋಕದೊಳಲಿನ ದೊಡ್ಡಹೊಟ್ಟೆ ರಂಗನಾಥಸ್ವಾಮಿ ಬೆಟ್ಟದಲ್ಲಿ ಶನಿವಾರ ಕುಡಿಯುವ ನೀರಿನ ಸೌಲಭ್ಯವನ್ನು ಮೈಸೂರಿನ ಎಂಜಿನಿಯರ್ ಹಾಗೂ ರಂಗನಾಥ ಸ್ವಾಮಿ ಭಕ್ತರಾದ ಬಿ.ಎಸ್. ರಂಗಸ್ವಾಮಿ ಉದ್ಘಾಟಿಸಿದರು.</p>.<p>ಇಲ್ಲಿನ ಬೆಟ್ಟದಲ್ಲಿರುವ ದೇವರ ದರ್ಶನಕ್ಕಾಗಿ ಪ್ರತಿ ಶನಿವಾರ ಮತ್ತು ಭಾನುವಾರ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಬರುತ್ತಾರೆ. ಎರಡು ದಿನಗಳವರೆಗೆ ಇಲ್ಲಿಯೇ ಇದ್ದು, ಅಡುಗೆ ಮಾಡಿಕೊಂಡು ದೇವರಿಗೆ ನೈವೇದ್ಯೆ ಮತ್ತು ಪೂಜೆಗಳನ್ನು ಮುಗಿಸಿ ಹೋಗುತ್ತಾರೆ. ಆದರೆ, ಭಕ್ತರಿಗೆ ಕುಡಿಯಲು ಮತ್ತು ಬಳಸಲು ನೀರಿನ ಸೌಲಭ್ಯ ಇರಲಿಲ್ಲ. ಬೆಟ್ಟದ ಮೇಲಿರುವ ದೇವರ ಪೂಜೆಗೆ ಕೆಳಗಿರುವ ಹೊಂಡದಿಂದ ನೀರು ಹೊತ್ತು ಹೋಗುವ ಪರಿಸ್ಥಿತಿ ಇತ್ತು. ಇದನ್ನು ಮನಗಂಡು ನನ್ನ ಸ್ವಂತ ಖರ್ಚಿನಲ್ಲಿ ಬೋರ್ವೆಲ್ ಕೊರೆಸಿ, ಮೋಟಾರ್ ಮತ್ತು ಪೈಪ್ಲೈನ್ ಅಳವಡಿಸಿದ್ದೇನೆ ಎಂದು ರಂಗಸ್ವಾಮಿ ಹೇಳಿದರು.</p>.<p>ದೇವಾಲಯದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಎಲ್.ಆರ್. ವೀರಭದ್ರಪ್ಪ, ಸೌಮ್ಯಾ ರಂಗಸ್ವಾಮಿ, ರಂಗನಾಯಕಿ ಡಾ.ಲಕ್ಷ್ಮೀ ನಾರಾಯಣಪ್ಪ, ದೇವಾಲಯ ಸಮಿತಿಯ ಅಧ್ಯಕ್ಷ ಸದಾಶಿವಪ್ಪ, ಚಂದ್ರಶೇಖರಪ್ಪ, ಲೋಕೇಶ್, ರಂಗನಾಥ, ಡಿ. ರಮೇಶ್, ಮೃತ್ಯುಂಜಯಪ್ಪ, ಟಿ. ಮಂಜುನಾಥ, ತಿಮ್ಮೇಶ್, ಚರಣರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>