<p><strong>ಬೆಂಗಳೂರು:</strong> ವಾಣಿಜ್ಯ ಮಳಿಗೆಯೊಂದರ ಪರವಾನಗಿ ನವೀಕರಿಸಲು ರೂ20 ಸಾವಿರ ಲಂಚ ಪಡೆಯುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಬಸವನಗುಡಿ ವಲಯದ ಹಿರಿಯ ಆರೋಗ್ಯ ನಿರೀಕ್ಷಕ ಶಿವಣ್ಣ ಅವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.<br /> <br /> ಹನುಮಂತನಗರದ ಎನ್.ಸಿ.ವಿಜಯಕುಮಾರ್ ಅವರು ಅದೇ ಪ್ರದೇಶದಲ್ಲಿ ತಮ್ಮ ಅಣ್ಣನ ಮಗ ಮಂಜುನಾಥ್ ಅವರು ಹೊಂದಿರುವ `ದೀಪಾ ಎಂಜಿನಿಯರಿಂಗ್ ವರ್ಕ್ಸ್'ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ಮಳಿಗೆಯ ಪರವಾನಗಿ ಅವಧಿ ಕಳೆದ ಫೆಬ್ರುವರಿಯಲ್ಲಿ ಅಂತ್ಯವಾಗಿತ್ತು. ಪರವಾನಗಿ ನವೀಕರಣ ಮಾಡಿಸುವ ಸಂಬಂಧ ವಿಜಯಕುಮಾರ್ ಕೆಲ ದಿನಗಳ ಹಿಂದೆ ಶಿವಣ್ಣ ಅವರನ್ನು ಭೇಟಿ ಮಾಡಿದ್ದರು.<br /> <br /> ಪರವಾನಗಿ ನವೀಕರಣಕ್ಕೆ ರೂ 25 ಸಾವಿರ ಲಂಚ ನೀಡುವಂತೆ ಆರೋಪಿ ಒತ್ತಾಯಿಸಿದ್ದರು. ನಂತರ ಚೌಕಾಸಿ ಮಾಡಿದಾಗ ರೂ 20 ಸಾವಿರ ನೀಡಿದಲ್ಲಿ, ಪರವಾನಗಿ ನವೀಕರಿಸುವ ಭರವಸೆ ನೀಡಿದ್ದರು. ಈ ಕುರಿತು ವಿಜಯಕುಮಾರ್ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.<br /> <br /> ಬಸವನಗುಡಿಯ ದ್ವಾರಕಾ ಹೋಟೆಲ್ ಬಳಿ ಮಂಗಳವಾರ ಹಣ ತರುವಂತೆ ಆರೋಪಿಯು ಅರ್ಜಿದಾರರಿಗೆ ಸೂಚಿಸಿದ್ದರು. ಅದರಂತೆ ವಿಜಯಕುಮಾರ್ ಅವರು ಅಲ್ಲಿಗೆ ಹೋಗಿ ಹಣ ನೀಡಿದರು. ತಕ್ಷಣ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಶಿವಣ್ಣ ಅವರನ್ನು ಬಂಧಿಸಿದ್ದಾರೆ.<br /> <br /> ಪ್ರಾಥಮಿಕ ತನಿಖೆ ಪೂರ್ಣಗೊಳಿಸಿ ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವಾಣಿಜ್ಯ ಮಳಿಗೆಯೊಂದರ ಪರವಾನಗಿ ನವೀಕರಿಸಲು ರೂ20 ಸಾವಿರ ಲಂಚ ಪಡೆಯುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಬಸವನಗುಡಿ ವಲಯದ ಹಿರಿಯ ಆರೋಗ್ಯ ನಿರೀಕ್ಷಕ ಶಿವಣ್ಣ ಅವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.<br /> <br /> ಹನುಮಂತನಗರದ ಎನ್.ಸಿ.ವಿಜಯಕುಮಾರ್ ಅವರು ಅದೇ ಪ್ರದೇಶದಲ್ಲಿ ತಮ್ಮ ಅಣ್ಣನ ಮಗ ಮಂಜುನಾಥ್ ಅವರು ಹೊಂದಿರುವ `ದೀಪಾ ಎಂಜಿನಿಯರಿಂಗ್ ವರ್ಕ್ಸ್'ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ಮಳಿಗೆಯ ಪರವಾನಗಿ ಅವಧಿ ಕಳೆದ ಫೆಬ್ರುವರಿಯಲ್ಲಿ ಅಂತ್ಯವಾಗಿತ್ತು. ಪರವಾನಗಿ ನವೀಕರಣ ಮಾಡಿಸುವ ಸಂಬಂಧ ವಿಜಯಕುಮಾರ್ ಕೆಲ ದಿನಗಳ ಹಿಂದೆ ಶಿವಣ್ಣ ಅವರನ್ನು ಭೇಟಿ ಮಾಡಿದ್ದರು.<br /> <br /> ಪರವಾನಗಿ ನವೀಕರಣಕ್ಕೆ ರೂ 25 ಸಾವಿರ ಲಂಚ ನೀಡುವಂತೆ ಆರೋಪಿ ಒತ್ತಾಯಿಸಿದ್ದರು. ನಂತರ ಚೌಕಾಸಿ ಮಾಡಿದಾಗ ರೂ 20 ಸಾವಿರ ನೀಡಿದಲ್ಲಿ, ಪರವಾನಗಿ ನವೀಕರಿಸುವ ಭರವಸೆ ನೀಡಿದ್ದರು. ಈ ಕುರಿತು ವಿಜಯಕುಮಾರ್ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.<br /> <br /> ಬಸವನಗುಡಿಯ ದ್ವಾರಕಾ ಹೋಟೆಲ್ ಬಳಿ ಮಂಗಳವಾರ ಹಣ ತರುವಂತೆ ಆರೋಪಿಯು ಅರ್ಜಿದಾರರಿಗೆ ಸೂಚಿಸಿದ್ದರು. ಅದರಂತೆ ವಿಜಯಕುಮಾರ್ ಅವರು ಅಲ್ಲಿಗೆ ಹೋಗಿ ಹಣ ನೀಡಿದರು. ತಕ್ಷಣ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಶಿವಣ್ಣ ಅವರನ್ನು ಬಂಧಿಸಿದ್ದಾರೆ.<br /> <br /> ಪ್ರಾಥಮಿಕ ತನಿಖೆ ಪೂರ್ಣಗೊಳಿಸಿ ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>