<p><strong>ಮುಂಬೈ (ಪಿಟಿಐ): </strong>ಎಲ್ಲ ಸಂಚಿತ ಹೂಡಿಕೆ ಯೋಜನೆಗಳನ್ನು (ಸಿಐಎಸ್) ತಕ್ಷಣವೇ ರದ್ದುಗೊಳಿಸುವಂತೆ ಮತ್ತು ಹೂಡಿಕೆದಾರರಿಂದ ಸಂಗ್ರಹಿಸಿದ ರೂ 1 ಸಾವಿರ ಕೋಟಿಗಿಂತ ಹೆಚ್ಚಿನ ಮೊತ್ತವನ್ನು 3 ತಿಂಗಳ ಒಳಗೆ ಮರು ಪಾವತಿಸುವಂತೆ ರಿಯಲ್ ಎಸ್ಟೇಟ್ ಕಂಪೆನಿ ಅಲ್ಕೆಮಿಸ್ಟ್ ಇನ್ಫ್ರಾಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಶನಿವಾರ ಸೂಚನೆ ನೀಡಿದೆ.<br /> <br /> ಹೂಡಿಕೆದಾರರ ಹಣವನ್ನು ಮರು ಪಾವತಿಸುವವರೆಗೆ ಕಂಪೆನಿ ಮತ್ತು ಅದರ ಐವರು ನಿರ್ದೇಶಕರನ್ನು ಷೇರುಪೇಟೆ ವಹಿವಾಟಿನಿಂದ ಅಮಾನತು ಮಾಡಲಾಗಿದೆ.<br /> <br /> ಅಲ್ಕೆಮಿಸ್ಟ್ ಇನ್ಫ್ರಾ ಹೂಡಿಕೆದಾರರ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಎದುರಿಸುತ್ತಿದೆ. ಹಣ ಮರು ಪಾವತಿಸದಿದ್ದರೆ ಕಂಪೆನಿಯ ವಿರುದ್ಧ ಮೋಸ, ವಂಚನೆ, ಮತ್ತು ವಿಶ್ವಾಸದ್ರೋಹ ಪ್ರಕರಣ ದಾಖಲಿಸಿಕೊಳ್ಳುವುದಾಗಿ `ಸೆಬಿ' ಎಚ್ಚರಿಕೆ ನೀಡಿದೆ.<br /> <br /> ಸಂಸದ ಕೆ.ಡಿ. ಸಿಂಗ್ ಒಡೆತನದ ಅಲ್ಕೆಮಿಸ್ಟ್ ಸಮೂಹ, ಆಹಾರ, ಪಾನೀಯ, ಐಟಿ, ಮಾಧ್ಯಮ, ವಿಮಾನಯಾನ, ಆತಿಥ್ಯ, ಶಿಕ್ಷಣ, ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸಿದೆ. ಕಂಪೆನಿ `ಸಿಐಎಸ್' ಯೋಜನೆಯಡಿ ಭೂಮಿ ಖರೀದಿಗಾಗಿ ಹೂಡಿಕೆದಾರರಿಂದ ಹಣ ಸಂಗ್ರಹಿಸುತ್ತಿತ್ತು. ಮತ್ತು ಇದಕ್ಕೆ ಶೇ 75ರಷ್ಟು ಅಭಿವೃದ್ಧಿ ಶುಲ್ಕ ವಿಧಿಸುತ್ತಿತ್ತು ಎಂದು `ಸೆಬಿ' ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ): </strong>ಎಲ್ಲ ಸಂಚಿತ ಹೂಡಿಕೆ ಯೋಜನೆಗಳನ್ನು (ಸಿಐಎಸ್) ತಕ್ಷಣವೇ ರದ್ದುಗೊಳಿಸುವಂತೆ ಮತ್ತು ಹೂಡಿಕೆದಾರರಿಂದ ಸಂಗ್ರಹಿಸಿದ ರೂ 1 ಸಾವಿರ ಕೋಟಿಗಿಂತ ಹೆಚ್ಚಿನ ಮೊತ್ತವನ್ನು 3 ತಿಂಗಳ ಒಳಗೆ ಮರು ಪಾವತಿಸುವಂತೆ ರಿಯಲ್ ಎಸ್ಟೇಟ್ ಕಂಪೆನಿ ಅಲ್ಕೆಮಿಸ್ಟ್ ಇನ್ಫ್ರಾಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಶನಿವಾರ ಸೂಚನೆ ನೀಡಿದೆ.<br /> <br /> ಹೂಡಿಕೆದಾರರ ಹಣವನ್ನು ಮರು ಪಾವತಿಸುವವರೆಗೆ ಕಂಪೆನಿ ಮತ್ತು ಅದರ ಐವರು ನಿರ್ದೇಶಕರನ್ನು ಷೇರುಪೇಟೆ ವಹಿವಾಟಿನಿಂದ ಅಮಾನತು ಮಾಡಲಾಗಿದೆ.<br /> <br /> ಅಲ್ಕೆಮಿಸ್ಟ್ ಇನ್ಫ್ರಾ ಹೂಡಿಕೆದಾರರ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಎದುರಿಸುತ್ತಿದೆ. ಹಣ ಮರು ಪಾವತಿಸದಿದ್ದರೆ ಕಂಪೆನಿಯ ವಿರುದ್ಧ ಮೋಸ, ವಂಚನೆ, ಮತ್ತು ವಿಶ್ವಾಸದ್ರೋಹ ಪ್ರಕರಣ ದಾಖಲಿಸಿಕೊಳ್ಳುವುದಾಗಿ `ಸೆಬಿ' ಎಚ್ಚರಿಕೆ ನೀಡಿದೆ.<br /> <br /> ಸಂಸದ ಕೆ.ಡಿ. ಸಿಂಗ್ ಒಡೆತನದ ಅಲ್ಕೆಮಿಸ್ಟ್ ಸಮೂಹ, ಆಹಾರ, ಪಾನೀಯ, ಐಟಿ, ಮಾಧ್ಯಮ, ವಿಮಾನಯಾನ, ಆತಿಥ್ಯ, ಶಿಕ್ಷಣ, ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸಿದೆ. ಕಂಪೆನಿ `ಸಿಐಎಸ್' ಯೋಜನೆಯಡಿ ಭೂಮಿ ಖರೀದಿಗಾಗಿ ಹೂಡಿಕೆದಾರರಿಂದ ಹಣ ಸಂಗ್ರಹಿಸುತ್ತಿತ್ತು. ಮತ್ತು ಇದಕ್ಕೆ ಶೇ 75ರಷ್ಟು ಅಭಿವೃದ್ಧಿ ಶುಲ್ಕ ವಿಧಿಸುತ್ತಿತ್ತು ಎಂದು `ಸೆಬಿ' ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>