<p>ರಾಮನಗರ: ಕನಕಪುರ ತ್ಲ್ಲಾಲೂಕಿನ ಬಿ.ಎಸ್.ದೊಡ್ಡಿ ಗ್ರಾಮದ ಹೊನ್ನೇಗೌಡರ ಮಗ ಜಗದೀಶ್ ಎಂಬುವರ ಮೇಲೆ ಅವರ ಪತ್ನಿ ಡಿ.ಸುಧಾ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.<br /> <br /> `2011ರ ನವೆಂಬರ್ 13ರಂದು ಜಗದೀಶ್ ಮತ್ತು ನನ್ನ ವಿವಾಹ ದೊಡ್ಡಾಲಹಳ್ಳಿಯಲ್ಲಿನ ಎಸ್.ಎಂ. ಕೃಷ್ಣ ಸಮುದಾಯ ಭವನದಲ್ಲಿ ನಡೆದಿದೆ. 2 ತಿಂಗಳು ಪತಿ ಜತೆ ಅನ್ಯೋನ್ಯವಾಗಿದ್ದೆ. ಆ ನಂತರ ತಂದೆ ಮನೆಯಿಂದ ವರದಕ್ಷಿಣೆ ತರುವಂತೆ ಜಗದೀಶ್ ನನ್ನ ಮೇಲೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ~ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.<br /> <br /> ಎರಡು ತಿಂಗಳಾದರೂ ಮನೆಗೆ ಬಾರದ ಪತಿಗೆ ಫೋನ್ ಮಾಡಿ ಕೇಳಿದ್ದಕ್ಕೆ, ಆತ ಐದು ಲಕ್ಷ ರೂಪಾಯಿ ಹಣ ತೆಗೆದು ಕೊಂಡು ಬಾ ಎಂದು ಹೇಳಿದ್ದಾರೆ. ಹಾಗಾಗಿ ಪತಿ ವಿರುದ್ಧ ಕ್ರಮ ಜರುಗಿಸುವಂತೆ ಸುಧಾ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. <br /> <br /> ವಂಚನೆ: ಮಾಗಡಿ ತಾಲ್ಲೂಕಿನ ಕುದೂರು ಗ್ರಾಮದಲ್ಲಿ ಸ್ಥಾಪಿಸಲಾಗಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ಉಸ್ತುವಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಟಿ.ಜಿ.ವೇಣು ಎಂಬಾತ ಘಟಕದ 30,700 ರೂಪಾಯಿ ದುರುಪಯೋಗ ಪಡಿಸಿಕೊಂಡಿದ್ದಾನೆಂದು ಘಟಕದ ನಿರ್ಮಾಪಕ ಕಂಪೆನಿಯ ಪ್ರತಿನಿಧಿ ಅನಂತ್ ಕುದೂರು ಪೊಲೀಸ್ಠಾಣೆಯಲ್ಲಿ ಬುಧವಾರ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಮನಗರ: ಕನಕಪುರ ತ್ಲ್ಲಾಲೂಕಿನ ಬಿ.ಎಸ್.ದೊಡ್ಡಿ ಗ್ರಾಮದ ಹೊನ್ನೇಗೌಡರ ಮಗ ಜಗದೀಶ್ ಎಂಬುವರ ಮೇಲೆ ಅವರ ಪತ್ನಿ ಡಿ.ಸುಧಾ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.<br /> <br /> `2011ರ ನವೆಂಬರ್ 13ರಂದು ಜಗದೀಶ್ ಮತ್ತು ನನ್ನ ವಿವಾಹ ದೊಡ್ಡಾಲಹಳ್ಳಿಯಲ್ಲಿನ ಎಸ್.ಎಂ. ಕೃಷ್ಣ ಸಮುದಾಯ ಭವನದಲ್ಲಿ ನಡೆದಿದೆ. 2 ತಿಂಗಳು ಪತಿ ಜತೆ ಅನ್ಯೋನ್ಯವಾಗಿದ್ದೆ. ಆ ನಂತರ ತಂದೆ ಮನೆಯಿಂದ ವರದಕ್ಷಿಣೆ ತರುವಂತೆ ಜಗದೀಶ್ ನನ್ನ ಮೇಲೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ~ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.<br /> <br /> ಎರಡು ತಿಂಗಳಾದರೂ ಮನೆಗೆ ಬಾರದ ಪತಿಗೆ ಫೋನ್ ಮಾಡಿ ಕೇಳಿದ್ದಕ್ಕೆ, ಆತ ಐದು ಲಕ್ಷ ರೂಪಾಯಿ ಹಣ ತೆಗೆದು ಕೊಂಡು ಬಾ ಎಂದು ಹೇಳಿದ್ದಾರೆ. ಹಾಗಾಗಿ ಪತಿ ವಿರುದ್ಧ ಕ್ರಮ ಜರುಗಿಸುವಂತೆ ಸುಧಾ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. <br /> <br /> ವಂಚನೆ: ಮಾಗಡಿ ತಾಲ್ಲೂಕಿನ ಕುದೂರು ಗ್ರಾಮದಲ್ಲಿ ಸ್ಥಾಪಿಸಲಾಗಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ಉಸ್ತುವಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಟಿ.ಜಿ.ವೇಣು ಎಂಬಾತ ಘಟಕದ 30,700 ರೂಪಾಯಿ ದುರುಪಯೋಗ ಪಡಿಸಿಕೊಂಡಿದ್ದಾನೆಂದು ಘಟಕದ ನಿರ್ಮಾಪಕ ಕಂಪೆನಿಯ ಪ್ರತಿನಿಧಿ ಅನಂತ್ ಕುದೂರು ಪೊಲೀಸ್ಠಾಣೆಯಲ್ಲಿ ಬುಧವಾರ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>